ಬೆಕ್ಕು ಬಾವುಲಿ

ಮರದಿಂದ ಮರಕ್ಕೆಹಾರುತ್ತಾ ಬಾವುಲಿಯೊಂದು ನೆಲಕ್ಕೆ ಬಿದ್ದಿತು.ಹಸಿದ ಬೆಕ್ಕೊಂದು ಹತ್ತಿರದಲ್ಲೇ ಅವಿತು ಕುಳಿತಿತ್ತು.ನೆಲಕ್ಕೆ ಬಿದ್ದ ಬಾವುಲಿಯನ್ನು ಕಂಡಿತು. ಬೆಕ್ಕು ತಕ್ಷಣ ಅದರ ಮೇಲೆರಗಿತು,ಭಯಗೊಂಡ ಬಾವುಲಿ "ನನ್ನನ್ನು ಕೊಲ್ಲಬೇಡ" ಎಂದು ಬೇಡಿಕೊಂಡಿತು.ಆಗ ಬೆಕ್ಕು"ಪಕ್ಷಿಗಳು ನಮ್ಮ ಆಜನ್ಮ ಶತ್ರುಗಳು ಅವನ್ನು ನಾವೆಂದೂ ಜೀವಸಹಿತ ಬಿಡೆವು"ಎಂದಿತು.ತಕ್ಷಣ ಬಾವುಲಿ "ನಾವು ಇಲಿಗಳ ಜಾತಿಗೆ ಸೇರಿದವರು, ಪಕ್ಷಿಯಲ್ಲ" ಎಂದಿತು.ಬೆಕ್ಕು ಬಾವುಲಿಯನ್ನು ಕೊಲ್ಲದೆ ಹಾಗೇ ಬಿಟ್ಟಿತು.ಸ್ವಲ್ಪ ದಿನಗಳ ಬಳಿಕ ಮತ್ತೊಮ್ಮೆ ಆ ಬಾವುಲಿ ಹಾರಾಡುತ್ತಿರಲು ನೆಲಕ್ಕೆ ಬಿದ್ದಿತು ಆದರೆ ಈ ಬಾರಿ ಬೇರೊಂದು ಬೆಕ್ಕು ಅದನ್ನು ಹಿಡಿಯಿತು.ಬಾವುಲಿ ಮತ್ತದೇ ರೀತಿ ಪ್ರಾಣಭಿಕ್ಷೆ ಬೇಡಿತು.ಬೆಕ್ಕು ತಾನು ಇಲಿಗಳನ್ನು ಮಾತ್ರ ತಿನ್ನುವುದು ಎಂದಿತು. ಕೂಡಲೇ ಬಾವುಲಿ ಆದರೆ ನಾನು ಇಲಿಯಲ್ಲ..... ನಾನು ಪಕ್ಷಿ ಜಾತಿಗೆ ಸೇರಿದವ" ಎಂದಿತು.ಅದನ್ನು ನಂಬಿದ ಬೆಕ್ಕು ಬಾವುಲಿಯನ್ನು ಕೊಲ್ಲದೇ ಹಾಗೇ ಬಿಟ್ಟಿತು.
ಸಮಯಕ್ಕೆ ತಕ್ಕ ಉತ್ತರ ಪ್ರಾಣವನ್ನು ಉಳಿಸಿತು