ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಧರ್ಮ

picture

ಋಷಿಯೊಬ್ಬನೆ ತಪಸ್ಸಿಗೆ ಕುಳಿತಿರಲು ಪಕ್ಷಿಯೊಂದು ಅವನ ತಲೆಯ ಮೇಲೆ ಗಲೀಜು ಮಾಡಿತು,ಕೋಪದಿಂದ ಆ ಪಕ್ಷಿಗೆ ಶಪಿಸಿ ಕೇವಲ ನೋಟದಿಂದಲೇ ಅದನ್ನು ಭಸ್ಮ ಮಾಡಿದ.ಆದಿನ ದೂರ ಪ್ರಯಾಣ ಹೊರಟಿದ್ದ ಋಷಿಯು ಕಮಂಡಲದಲ್ಲಿ ನೀರು ಮತ್ತು ಸ್ವಲ್ಪ ಆಹಾರ ಭಿಕ್ಷೆಗಾಗಿ ಒಂದು ಮನೆಯ ಮುಂದೆ ಬಂದು ನಿಂತು "ಭವತಿ ಭಿಕ್ಷಾಂದೇಹಿ"ಎಂದು ಕೂಗಿದ.ಆ ಮನೆಯಾಕೆ ಬಹಳ ತಡಮಾಡಿ ಹೊರಗೆ ಬಂದಳು,ಕುಪಿತ ಋಷಿಯನ್ನು ಕುರಿತು"ಋಷಿವರ್ಯಾ ಸ್ವಲ್ಪ ತಾಳು ನನ್ನನು ಪಕ್ಷಿಯಂತೆ ಸುಡಬೇಡ, ಈ ಮನೆಯ ಗೃಹಿಣಿಯಾದ ನಾನು ಮೊದಲು ನನ್ನ ಮನೆವರ ಕೆಲಸ ಮಾಡುವುದು ನನ್ನ ಧರ್ಮ" ಎಂದಳು,,ಋಷಿಗೆ ತನ್ನ ತಪ್ಪಿನರಿವಾಯಿತು.ಧರ್ಮವನ್ನು ತಾನೂ ಪಾಲಿಸಬೇಕೆಂದು ಆಕೆಯನ್ನು "ನಾನೂ ಧರ್ಮದ ಪಾಠವನ್ನು ಕಲಿಯಬೇಕಿದೆ"ಎಂದ ಅದಕ್ಕವಳು ಧರ್ಮವ್ಯಾದನನ್ನು ಕಾಣಲು ಸೂಚಿಸಿದಳು.ಧರ್ಮವ್ಯಾದ ಮಾಂಸದ ವ್ಯಾಪಾರಿ,ಋಷಿ ಆತನ ಬಳಿ ಹೋಗಲು ಆತ ತನ್ನೆಲ್ಲಾ ಗಿರಾಕಿ ಹೋಗುವವರೆಗೂ ಕಾಯಿಸಿದ,ನಂತರ ತನ್ನ ತಂದೆ ತಾಯಿಯರನ್ನು ವಿಚಾರಿಸಿ ನಂತರ ಋಷಿಯನ್ನು ಬಂದ ವಿಚಾರವಾಗಿ ಕೇಳಿದ,ಅಷ್ಟರಲ್ಲಿ ಋಷಿಗೆ ಸಾಕಷ್ಟು ಅರಿವುಮೂಡಿತ್ತು.ಆ ಕೂಡಲೇ ಅಲ್ಲಿಂದ ಹೊರಟು ಅಗಲಿದ್ದ ತನ್ನ ತಾಯಿತಂದೆಯರನ್ನು ಕಂಡು ಕ್ಷಮೆ ಯಾಚಿಸಿ,ಆಶೀರ್ವಾದ ಪಡೆದು ಧರ್ಮ ಪಾಲಿಸಿದ.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023