ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗಡ್ಡ

picture

ಒಂದೂರಿನಲ್ಲಿ ಸಲೀಮ್ ಖಾನ್ ಎನ್ನುವ ಮುದುಕ ಇದ್ದ.ಇಳಿ ವಯಸ್ಸಿನಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ತಲೆ ಕೂದಲಿನಲ್ಲಿ ದುರ್ವಾಸನೆ ಬರುವಂತೆ ಎದೆ ಮಟ್ಟದವರೆಗೂ ಗಡ್ಡಬಿಟ್ಟಿದ್ದ ಸಲೀಮನ ಬಳಿ ವಾಸನೆ ಸ್ವಲ್ಪ ಹೆಚ್ಚಾಗಿಯೇ ಇತ್ತು.ಆತನ ಮನೆಯವರಿಗೂ ಅದು ತಿಳಿದಿತ್ತು. ತಿಳಿಸುವುದು ಕಷ್ಟಕರವಾದ ಕೆಲಸವಾಗಿತ್ತು.
ಒಂದುದಿನ ಆತ ಮಲಗುವ ಮುನ್ನ ಆತನ ಮೊಮ್ಮಗ ಅವನ ಬಳಿ ಬಂದು "ತಾತಾ ನೀವು ಮಲಗುವಾಗ ನಿಮ್ಮ ಗಡ್ಡ ಹೊದಿಗೆಯ ಮೇಲಿರುತ್ತದೋ ಅಥವಾ ಒಳಗಿರುತ್ತದೋ?"ಎಂದ.ಮುದುಕ ಮೊಮ್ಮಗನಿಗೆ ಜಾಣ್ಮೆಯಿಂದ ಎನೋ ಒಂದು ಉತ್ತರ ಕೊಟ್ಟು ಕಳಿಸಿದ. ಆದರೆ ಆದಿನ ಮಲಗುವಾಗ ಸಲೀಮನಿಗೆ ಏಕೋ ಗಡ್ಡದ ಕಡೆ ಗಮನ ಹರಿಯಿತು,ಹೊದಿಗೆಯ ಮೇಲಿದ್ದ ಗಡ್ಡವನ್ನು ಒಳಕ್ಕೆ ತುರುಕಿ ಮಲಗಿದ,ಆದರೂ ಸಮಾಧಾನವಾಗಲಿಲ್ಲ ಏನೋ ಕಸಿವಿಸಿ ಮತ್ತೆ ಹೊರಗೆ ತೆಗೆದ,ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಒಳಗೆ ಹೀಗೇ ರಾತ್ರಿಯಿಡೀ ಒದ್ದಾಟ ನಿದ್ರೆ ಬಾರದಾಗಿ ತಲೆಕೆಟ್ಟು ಮೇಲೆದ್ದು ನುಣ್ಣಗೆ ಗಡ್ಡ ಬೋಳಿಸಿ ನೆಮ್ಮದಿಯಿಂದ ಮಲಗಿದ.ಬೆಳಿಗ್ಗೆ ಮನೆಯವರೆಲ್ಲರಿಗೂ ಒಂದುಕಡೆ ಆಶ್ಚರ್ಯ ಮತ್ತೊಂದು ಕಡೆ ಸಂತೋಷ.


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023