ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮದರ್ಸ್ ಡೇ

picture

ತಾಯಿಗೆ ಅವಳ ಮಮತೆ, ಮಹತ್ವಕ್ಕೆ ಗೌರವ ಸೂಚಿಸುವ ದಿನವೆಂದು ಮಗನೊಬ್ಬ ನೂರಾರು ಮೈಲು ದೂರದಲ್ಲಿದ್ದ ಅಮ್ಮನಿಗೆ ಹೂವಿನಗುಚ್ಚವನ್ನು ಪಾರ್ಸಲ್ ಮಾಡಲೆಂದು ಹೂವಿನ ಅಂಗಡಿಗೆ ತನ್ನ ಹೊಸ ಕಾರಿನಲ್ಲಿ ಬಂದ.
ಅಲ್ಲೊಬ್ಬ ಪುಟ್ಟ ನಿರ್ಗತಿಕ ಬಾಲಕಿ ಈ ಮಗನಿಗೆ ಕೈಚಾಚಿ ಒಂದು ಡಾಲರ್ ಗಾಗಿ ಭಿಕ್ಷೆ ಬೇಡಿದಳು,ಕಾರಣವೇನೆಂದು ಕೇಳಲು ಆಕೆ ತನ್ನ ತಾಯಿಗೆ ಒಂದು ಹೂ ಕೊಂಡು ಕೊಡಬೇಕು ಎಂದಳು.ಒಂದೇ ಡಾಲರ್ ಸಾಕೆ? ಎಂದುಕೊಳ್ಳುತ್ತಾ ಅನುಮಾನದಿಂದ ಡಾಲರನ್ನು ಕೊಡದೆ ಮಗನು ಒಂದು ಹೂವನ್ನೇ ಕೊಡಿಸಿದ.ಆ ಬಾಲಕಿ "ದಯಮಾಡಿ ಸ್ವಲ್ಪ ದೂರ ಡ್ರಾಪ್ ಮಾಡ್ತೀರಾ ಎರಡುಮೈಲಿ ನಡೆದು ಹೋಗಬೇಕು ಅಮ್ಮನಿಗೆ ಹೂ ಕೊಡಲು"ಎಂದಳು.ಸರಿ ಬಂದ ಕೆಲಸ ತಾಯಿಗೆ ಹೂ ಪಾರ್ಸೆಲ್ ಮಾಡಿದ್ದಾಗಿದೆ ವಾಪಸ್ಸಾಗುವ ದಾರಿಯಕಡೆಯೇ ಕೈತೋರಿಸುತ್ತಿದ್ದಾಳೆ "ಸರಿ ನಡಿ ಡ್ರಾಪ್ ಮಾಡ್ತೀನಿ" ಕಾರಿನಲ್ಲಿ ಎರಡುಮೈಲಿ ತಲುಪಲು ಹೆಚ್ಚು ಸಮಯವಾಗಲಿಲ್ಲ"ಹಾ ಇಲ್ಲೇ ಇಲ್ಲೇ" ಎಂದು ತಡೆದು, ಕಾರ್ ನಿಂತ ತಕ್ಷಣವೇ ಬಾಗಿಲು ತೆರೆದು ಒಡಿದಳು,...ಎಲ್ಲಿಗೆ ?... ಪ್ರಶಾಂತ ಸ್ಥಳದಲ್ಲಿ ಶಾಂತವಾಗಿ ಮಲಗಿದ್ದ ತಾಯಿಯ ಸಮಾಧಿಯ ಕಡೆಗೆ!,ಮಗನಿಗೆ ಮೈ ಛುಳ್ ಎಂದಿತು,ಥಟ್ಟನೆ ಕಾರನ್ನು ಅಂಗಡಿಯ ಕಡೆ ಓಡಿಸಿ,ತಾನು ಮಾಡಿದ್ದ ಪಾರ್ಸೆಲ್ ರದ್ದುಮಾಡಿ,ಒಂದು ಹೂಗುಚ್ಚವನ್ನು ಕೊಂಡು ತಾನೇ ಖುದ್ದಾಗಿ ಅಮ್ಮನನ್ನು ಕಾಣಲು ಹೊರಟ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023