ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕ್ರೂರ ಪ್ರಾಣಿ

picture

ಕಾಡಿನಲ್ಲೊಂದು ಸುಂದರವಾದ ಮರ.ಕಾಡು ಪ್ರಾಣಿಗಳೆಲ್ಲಾ ಒಮ್ಮೊಮ್ಮೆ ಬಂದು ಆ ಮರದಡಿ ವಿಶ್ರಮಿಸಿ ಹೋಗುತ್ತಿದ್ದವು.ಹಾಗೇ ಅದೇ ಮರದಡಿಯಲ್ಲೇ ಮಲ-ಮೂತ್ರ ವಿಸರ್ಜನೆಯನ್ನೂ ಮಾಡಿ ಹೋಗುತ್ತಿದ್ದವು.ಅದರಿಂದ ಆ ಮರಕ್ಕೆ ಬೇಸರವಾಗಿತ್ತು.ಒಂದು ದಿನ `ನನ್ನ ಬಳಿ ಯಾವ ಪ್ರಾಣಿಗಳು ಬಾರದಂತೆ ಮಾಡುತ್ತೇನೆ,ನನ್ನ ಈ ಉದ್ದನೆಯ ಟೊಂಗೆಯಿಂದ ಬೀಸಿ ಆ ಪ್ರಾಣಿಗಳನ್ನು ಓಡಿಸುತ್ತೇನೆ'ಎಂದು ತನ್ನ ಪಕ್ಕದ ಮರಗಳಿಗೆ ಹೇಳಿತು.ಅವು ಹಾಗೆ ಮಾಡಬೇಡ ಎಂದು ಎಷ್ಟು ಬೇಡಿದರೂ ಈ ಮರ ಕೇಳಲಿಲ್ಲ .ಆ ದಿನದಿಂದ ವಿಶ್ರಾಂತಿಗೆ ಬಂದ ಎಲ್ಲ ಪ್ರಾಣಿಗಳಿಗೂ ತನ್ನ ಟೊಂಗೆಯಿಂದ ಬಲವಾಗಿ ಬೀಸಿ ಬಾರಿಸಿತು,ಪ್ರಾಣಿಗಳು ಹೆದರಿ ಓಡಿವವು.ಮುಂದೆ ಯಾವ ಪ್ರಾಣಿಗಳೂ ಹತ್ತಿರ ಸುಳಿಯಲಿಲ್ಲ. ಒಂದು ದಿನ ಮುಂಜಾನೆ ನಾಲ್ಕು ಜನ ಅಲ್ಲಿಗೆ ಬಂದರು. ಮರವು ಓ ಇವರೂ ಪ್ರಾಣಿಗಳಿಗೆ ಹೆದರಿ ಇಲ್ಲಿ ಬಂದಿರಬೇಕು,ವಿಶ್ರಾಂತಿ ಪಡೆಯಲಿ ಇಂದು ಸುಮ್ಮನೆ ನೋಡುತ್ತಿತ್ತು.ಆದರೆ ಬಂದವರು ಮರ ಕಡಿದು ಸಾಗಿಸುವವರು,ಅವರು ತಮ್ಮ ಕೆಲಸವನ್ನು ಮೊದಲು ಅದೇ ಮರದಿಂದಲೇ ಶುರು ಮಾಡಿಕೊಂಡರು.

ನೀತಿ 1:`ಕುರುಡು ಕಣ್ಣಿಗಿಂತ ಮೆಳ್ಳಗಣ್ಣೇ ವಾಸಿ" ಎನ್ನುವ ಗಾದೆಗೆ ಹೋಲುತ್ತದೆ.

ನೀತಿ 2: ಮನುಜನೇ ಎಲ್ಲರಿಗಿಂತ ಕ್ರೂರ ಪ್ರಾಣಿ


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023