ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕನಸಿನ ಲೋಕ (ಹಾಸ್ಯ)

picture

ಶಾಲೆಯ ಮೇಷ್ಟ್ರು ದಿನಾ ಮಧ್ಯಾಹ್ನದ ವೇಳೆ ಊಟದ ಬಳಿಗ ಸ್ವಲ್ಪಕಾಲ ಮಕ್ಕಳ ಎದಿರಿನಲ್ಲೇ ನಿದ್ದೆ ಮಾಡುತ್ತಿದ್ದರು.ಮಕ್ಕಳು ಕೇಳಿದರೆ "ನಾನು ಹಿಂದಿನ ಕಾಲದ ಮಹಾರ್ಷಿಗಳನ್ನು ಭೇಟಿ ಮಾಡಲು ಕನಸಿನ ಲೋಕಕ್ಕೆ ಹೋಗಿದ್ದೆ"ಎನ್ನುತ್ತಿದ್ದರು.ಒಂದು ದಿನ ಸುಡುವ ಬಿಸಿಲಿನ ಧಗೆಗೆ ಸುಸ್ತಾಗಿದ್ದ ಮಕ್ಕಳು ಹಾಗೇ ಕೂತಲ್ಲೇ ನಿದ್ದೆ ಮಾಡುತ್ತಿದ್ದರು ಇದನ್ನು ಕಂಡ ಮೇಷ್ಟ್ರು "ಮಕ್ಕಳೇ ಏನು ಮಾಡುತ್ತಿದ್ದೀರಿ"ಎಂದು ರೇಗಿದರು.ಅದಕ್ಕೆ ಮಕ್ಕಳು"ನವೂ ಹಿಂದಿನ ಕಾಲದ ಋಷಿಗಳನ್ನು ಕಾಣಲು ಕನಸಿನ ಲೋಕಕ್ಕೆ ಹೋಗಿದ್ದೆವು" ಅದಕ್ಕೆ ಮೇಷ್ಟ್ರು"ಏನಂದ್ರು ಋಷಿಗಳು?" ತಕ್ಷಣ ಗುರುಗಳಂತೇ ಸಮಯಸ್ಪೂರ್ತಿ ಯಿಂದ ಮಕ್ಕಳು "ಇಲ್ಲಿ ದಿನಾ ಮಧ್ಯಾಹ್ನ ನಮ್ಮ ಮೇಷ್ಟ್ರು ಬರ್ತಾರಾ ಅಂದ್ವಿ,ಅದಕ್ಕೆ ಇಲ್ಲಿ ಯಾರೂ ಬಂದಿಲ್ಲವಲ್ಲಾ ಅಂದ್ರು" ಹುಡುಗರ ಜಾಣ್ಮೆ ಗುರುಗಳ ತಲೆ ತಗ್ಗಿಸುವ ಹಾಗಾಯಿತು.


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023