ಚೋರ ಬಾಲಕ

ಆಶ್ರಮವೊಂದರಲ್ಲಿ ಹತ್ತಾರು ವಿಧ್ಯಾರ್ಥಿಗಳು ಕಲಿಯುತ್ತಿದ್ದರು.ಅವರಲ್ಲಿ ಒಬ್ಬ ಹುಡುಗ ಬೇರೊಬ್ಬರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ.ಗುರುಗಳಿಗೆ ದೂರು ಕೊಟ್ಟರೂ ಅವರು ಸುಮ್ಮನೆ ಇದ್ದರು.ಒಂದು ದಿನ ಅವನ ಕಳ್ಳತನ ಮಿತಿಮೀರಿ ದೂರು ಕೊಟ್ಟರೂ ತಮ್ಮ ಗುರುಗಳೂ ಆತನಿಗೆ ಏನೂ ಕ್ರಮ ತೆಗೆದುಕೊಳ್ಳದಿರುವುದನ್ನು ಕಂಡು ಬೇರೆ ವಿದ್ಯಾರ್ಥಿಗಳೆಲ್ಲಾ ಆ ಶ್ರಮವನ್ನೇ ತ್ಯಜಿಸಿ ಹೋಗಲು ನಿರ್ಧರಿಸಿದರು.ಆಗ ಗುರುಗಳು ವಿಷಯ ತಿಳಿದು ಎಲ್ಲರನ್ನೂ ಕರೆದು"ಮಕ್ಕಳೇ ನೀವೆಲ್ಲಾ ಒಳ್ಳೆಯ ಮಕ್ಕಳು ಇಲ್ಲಿಂದ ಹೊರಟರೂ ನಿಮಗೆ ಬೇರೆ ಆಶ್ರಮ ಸೇರುವುದು ಕಷ್ಟವಿಲ್ಲ,ಆದರೆ ನಿಮ್ಮ ಸಹೋದರನಿಗೆ ಎಲ್ಲಿ ಆಶ್ರಯ ಸಿಗುತ್ತದೆ ಹೇಳಿ,ಅವನಿಗಿನ್ನೂ ತಪ್ಪು-ಸರಿಗಳ ಅರಿವೇ ಇಲ್ಲ,ನೀವೆಲ್ಲಾ ಹೋದರೂ ಆತನನ್ನು ಕೈಬಿಡುವಹಾಗಿಲ್ಲ ನಾನು" ಎಂದರು. ತುಂಟ ಹುಡುಗನ ಕಣ್ಣಿನಿಂದ ಕೆನ್ನೆಯ ಮೇಲೆ ನೀರು ಹರಿಯಿತು.ತನ್ನ ತಪ್ಪನ್ನರಿತು ಕ್ಷಮೆ ಯಾಚಿಸಿದ.