ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಜಂಭದ ಕತ್ತೆ

picture

ಪ್ರತಿಮೆಗಳನ್ನು ಮಾಡುವ ಶಿಲ್ಪಿಯೊಬ್ಬ ತನ್ನ ಕುಶಲದಿಂದ ಎಂದಿನಂತೆ ಒಂದು ಸುಂದರ ಪ್ರತಿಮೆಯನ್ನು ಕೆತ್ತಿ ಒಂದು ಕತ್ತೆಯಮೇಲೆ ಸಾಗಿಸುತ್ತಿದ್ದ.ಹಾದಿಯಲ್ಲಿ ಹೋಗುವಾಗ ಅದನ್ನು ಕಂಡವರೆಲ್ಲಾ ಒಂದು ಕ್ಷಣ ನಿಂತು ಅದಕ್ಕೆ ನಮಸ್ಕರಿಸಿ ಮುಂದೆ ಹೋಗುತ್ತಿದ್ದರು.ಆದರೆ ಅದನ್ನು ಹೊತ್ತು ಸಾಗುತ್ತಿದ್ದ ಕತ್ತೆಯು ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಎಂದು ತಿಳಿದು ಜಂಭ ಪಟ್ಟಿತು,ಸ್ವಲ್ಪ ಹೊತ್ತಿನ ಬಳಿಕ ಜನರೆಲ್ಲಾ ಕಿಕ್ಕಿರಿದು ನೋಡುತ್ತಿರಲು ಇದ್ದಕ್ಕಿದ್ದಹಾಗೇ ಮುಂದೆ ಸಾಗದೇ ಒಂದು ಕಡೆ ಕಲ್ಲಿನ ಹಾಗೆ ನಿಂತಿತು.ಶಿಲ್ಪಿ ಎಷ್ಟು ಜಗ್ಗಿದರೂ ಕದಲಲಿಲ್ಲ ಕತ್ತೆ, ಸರಿ ಮುಂದೇನೂ ಮಾಡಲು ತೋಚದೆ ಶಿಲ್ಪಿ ಆ ಶಿಲೆಯನ್ನೇ ಇತ್ತಿಕೊಂಡು ಮುಂದೆ ಸಾಗಿದ.ಕತ್ತೆ ಜಂಭದಿಂದ ತನ್ನ ಕತ್ತನು ಎತ್ತಿ ಸುತ್ತಲೂ ನೋಡಿತು,ಯಾರೂ ಕಾಣುತ್ತಿಲ್ಲ ಎಲ್ಲರೂ ಆ ಶಿಲ್ಪಿ ಹೊತ್ತು ಸಾಗುತ್ತಿದ್ದ ಪ್ರತಿಮೆಯನ್ನೇ ಹಿಂಬಾಲಿಸುತ್ತಿದ್ದರು.ಕತ್ತೆಗೆ ತನ್ನ ತಪ್ಪು ಅರಿವಾಯಿತು,ಓಡಿ ಹೋಗಿ ಗುಂಪನ್ನು ಸೇರಿತು.ಮತ್ತೆ ಶಿಲೆಯನ್ನು ತನ್ನ ಬೆನ್ನಿಗೇರಿಸಿ ಮುಂದೆ ಸಾಗಿತು.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023