ಮೃಗರಾಜ(ಹಾಸ್ಯ)

ಕಾಡಿನ ರಾಜನಾದ ಸಿಂಹವು ಆಗಿಂದಾಗ್ಗೆ ಸಭೆ ಸೇರಿ ಎಲ್ಲ ಪ್ರಾಣಿಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಹೆದರಿಸುತ್ತಾ ಕಾಲಕಳೆದಿತ್ತು.ಒಮ್ಮೆ ಆನೆಯ ಮಾತು ಕೇಳಿ ಕೆಲವು ಪ್ರಾಣಿಗಳು ಬೇರೆ ಪ್ರಾಂತ್ಯಕ್ಕೆ ಕಾಲಿಟ್ಟವು.ಇದನ್ನು ಕೇಳಿದ ಸಿಂಹವು ಕೋಪಗೊಂಡು ಮತ್ತೆ ಸಭೆ ಸೇರಿಸಿ ಒಂದೊಂದು ಪ್ರಾಣಿಯಮೇಲೂ ಎರಗಿ "ಯಾರು ಈ ಕಾಡಿಗೆ ರಾಜ?"ಎಂದು ಘರ್ಜಿಸಿತು,ಚೂಪಾದ ಉಗುರು,ಕೆರಳಿದ ಕೇಸರನನ್ನು ಕಂಡು ಬೆದರಿ ಎಲ್ಲವೂ"ನೀನೇ,ನೀನೇ"ಎಂದವು, ಸಿಂಹವು ಆನೆಯ ಮೇಲೂ ಎರಗಿತು,ಜೋರಾಗಿ ಘರ್ಜಿಸಿ "ಯಾರು ಈ ಕಾಡಿಗೆ ರಾಜ?"ಎಂದಿತು, ಆನೆ ಒಮ್ಮೆಲೇ ತನ್ನ ಸೊಂಡಿಲಿನಿಂದ ಸಿಂಹವನ್ನು ತನ್ನ ಹಣೆಯ ಮೇಲಿಂದ ಕಿತ್ತು ದೂರಕ್ಕೆ ಎಸೆಯಿತು,ಕಾಲು ಮುರಿದು ತಲೆ ತಿರುಗುತ್ತಿದ್ದರೂ ಸಿಂಹ "ನಿನಗೆ ಉತ್ತರ ಗೊತ್ತಿಲ್ಲದಿದ್ದರೆ ಕೋಪ ಮಾಡಿಕೊಳ್ಳಬೇಡ ಗಜರಾಜ"ಎಂದು ಗೊಣಗುತ್ತಾ ಗುಹೆ ಸೇರಿತು.