ಆಳು

ಹಿಂದೊಮ್ಮೆ ಆಫ್ರಿಕಾ ದೇಶದಲ್ಲಿ ಕಮೇರಾ ಎಂಬ ರಾಜ ದರ್ಪದಿಂದ ಆಳುತ್ತಿದ್ದ.ಆತನನ್ನು ಕಂಡರೆ ಪ್ರಜೆಗಳು ಹೆದರಿ ನಡುಗುತ್ತಿದ್ದರು.ಸಭೆಯಲ್ಲಿ ಎಲ್ಲರನ್ನೂ ಕರೆಸಿ "ಈ ನಾಡಿಗೆ ನಾನೇ ರಾಜ,ಎಲ್ಲರೂ ನನ್ನ ಆಳುಗಳು" ಎಂದು ಗರ್ವದಿಂದ ಘೋಶಿಸಿದ.ಅದೇ ವೇಳೆಗೆ ಒಬ್ಬ ಮುದುಕ ಅಲ್ಲಿಗೆ ಬಂದು"ಸಾಧ್ಯವಿಲ್ಲ, ಎಲ್ಲರೂ ಈ ಭೂಮಿಯಲ್ಲಿ ಆಳುಗಳೇ"ಎಂದ.ಅದನ್ನು ಕೇಳಿ ಕುಪಿತನಾದ ರಾಜ ಆತನನ್ನು ಹತ್ತಿರಕ್ಕೆ ಕರೆದು "ಎಷ್ಟು ಧೈರ್ಯ ನಿನಗೆ ಈ ಮಾತನ್ನು ಹೇಳಲು,ಯಾರುನೀನು?"ಎಂದು ಕೇಳಿದ.ಅದಕ್ಕೆ ಮುದುಕ "ಅಯ್ಯಾ ದೊರೆ,ಕುಡಿಯಲು ನೀರಿಲ್ಲದೆ ಬಳಲುತ್ತಿರುವ ಪಕ್ಕದ ಊರಿಂದ ಬಂದವನು ನಾನು,ಒಂದು ಬಾವಿಯನ್ನು ತೋಡಿಸಿಕೊಡಿ ಎಂದು ಬೇಡಲು ಬಂದಿರುವೆ"ಎಂದ."ಓಹೋ ಹಾಗಾದರೆ ನೀನೊಬ್ಬ ಭಿಕ್ಷುಕ!ನನ್ನನ್ನೂ ಆಳು ಎಂದ ನಿನಗದೆಷ್ಟು ಸೊಕ್ಕು"ಎಂದು ಗದರಿದ.ಅದಕ್ಕೆ ಮುದುಕ ಶಾಂತಿಯಿಂದ ಉತ್ತರಿಸಿದ "ದೊರೆ ಬೇಕಿದ್ದರೆ ಸಾಯಂಕಾಲದ ಓಳಗೆ ಸಾಬೀತು ಮಾಡಿ ತೋರಿಸುತ್ತೇನೆ" ಎಂದ."ಸರಿ ನಿನ್ನ ಮಾತು ನಿಜವಾದರೆ ಬಾವಿಯನ್ನು ತೋಡಿಸಿ ಕೊಡುತ್ತೇನೆ"ಎಂದ.ತಕ್ಷಣ ಮುದುಕ ನಮ್ರತೆಯಿಂದ ತಲೆ ತಗ್ಗಿಸಿ ಕೈಯಲ್ಲಿದ್ದ ಊರುಗೋಲನ್ನು ರಾಜನಿಗೆ ಹಿಡಿಯಲು ಹೇಳಿ ಆತನ ಪಾದ ಸ್ಪರ್ಷ್ಸಿಸಿ ನಮಸ್ಕರಿಸಿದ,ನಂತರ ತನ್ನ ಕೋಲನ್ನು ವಾಪಸ್ ಕೇಳಿ ಪಡೆದ."ಇನ್ನು ಇದಕ್ಕಿಂತಾ ಮತ್ತೇನು ಪುರಾವೆ ಬೇಕು ಪ್ರಭು?" ಎಂದ ಮುದುಕ."ಪುರಾವೆ?" ರಾಜ ಕಣ್ಣರಳಿಸಿ ಕೇಳಿದ.ನಾನು ಕೋಲನ್ನು ಹಿಡಿಯಲು ಹೇಳಿದಾಗ ನೀವು ಹಿಡಿದಿರಲಿಲ್ಲವೇ? ಮತ್ತೆ ಕೊಡಿ ಎಂದಾಗ ಕೊಡಲಿಲ್ಲವೇ? ನಾನು ಹೇಳಿದ್ದನು ನೀವು ಮಾಡಿದಿರಿ"ಎಂದ.ರಾಜನ ಮುಖ ಮುದುಡಿತು.ಮುದುಕನ ಊರಿನಲ್ಲಿ ಒಂದಲ್ಲ ಎರಡು ಬಾವಿ ತೋಡಿಸಿಕೊಟ್ಟ.ರಾಜನ ಅಟ್ಟಹಾಸವೂ ಅಡಗಿತು.