ಮೊಲಗಳ ಸಾಮ್ರಾಜ್ಯ
ಕಾಡಿನ ಬದಿಯಲ್ಲೇ ಗುಡ್ಡಗಾಡಿನಲ್ಲಿ ಮೊಲಗಳು ಗುಂಪು ಗುಂಪಾಗಿ ವಾಸಿಸುತ್ತಿದ್ದವು. ನರಿ, ಚಿರತೆ, ತೋಳಗಳು ಆ ಗುಂಪಿನ ಮೇಲೆರಗಿ ದಿನಾ ಒಂದೆರಡು ಮೊಲಗಳ ಸಂಖ್ಯೆ ಕಡಿಮೆ ಆಗತೊಡಗಿದವು.ಕಾಡಿನ ಆ ಕ್ರೂರ ಪ್ರಾಣಿಗಳ ಆಕ್ರಮಣಕ್ಕೆ ಭಯದಿಂದ ಹೆದರಿದ ಮೊಲಗಳು ತಮಗಿನ್ನು ಉಳಿಗಾಲವಿಲ್ಲವೆಂದು ನಿರ್ಧರಿಸಿ ಒಮ್ಮೆಲೇ ಎಲ್ಲಾ ಮೊಲಗಳು ನೀರಿನಲ್ಲಿ ಧುಮುಕಿ ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದವು. ಹಾಗೆ ಪ್ರಾಣ ಕಳೆದುಕೊಳ್ಳಲು ಮನಸ್ಸು ಮಾಡಿ ಒಂದು ನೀರಿನ ಕೊಳದ ಬಳಿಗೆ ನಡೆದವು.ಆ ಮೊಲಗಳು ನೀರಿನ ಹತ್ತಿರಕ್ಕೆ ಬರುತ್ತಿದ್ದಂತೆಯೇ ಅಲ್ಲೇ ದಡದಲ್ಲಿ ಕುಳಿತಿದ್ದ ಕಪ್ಪೆಗಳು ದಡದಡನೆ ನೀರಿಗೆ ಧುಮುಕಿದವು.ಇದನ್ನು ಕಂಡ ಮೊಲಗಳು "ಅರೆ ನಾವೇ ಹೆದರಿದ್ದೇವೆ ಅಂದುಕೊಂಡಿದ್ದೆವು,ಇಲ್ಲಿ ನಮಗಿಂತಲೂ ಭಯದಿಂದಿರುವವರು ಇದ್ದಾರೆ, ನಮಗಿನ್ನೂ ಬದುಕಲು ಭರವಸೆ ಇದೆ"ಎಂದು ತಮ್ಮ ಬಿಲಗಳಿಗೆ ತೆರಳಿದವು
ನೀತಿ: ನಾವು ಇನ್ನೊಬ್ಬರಿಗೆ ಹೆದರುವಂತೆ,ಆ ಇನ್ನೊಬ್ಬರೂ ಮತ್ತೊಬ್ಬರಿಗೆ ಹೆದರುತ್ತಾರೆ