ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ನಂದಾ ದೀಪ

picture

ಪುಟ್ಟ ಎಣ್ಣೆಯ ದೀಪವೊಂದನ್ನು ರವಿ ಮುಳುಗುವ ಹೊತ್ತಿಗೆ ಮನೆಯ ಯಜಮನ ಅದರ ಹತ್ತಿಯ ಬತ್ತಿಗೆ ಕಡ್ಡಿಗೀರಿ ಸೋಕಿಸಲು ಆ ನಂದಾದೀಪವು ಆನಂದದಿಂದ ತನ್ನಲ್ಲೇ ಹೆಮ್ಮೆ ಪಟ್ಟಿತು. "ಆಹಾ !ಸಂಜೆ ಕಳೆದು ಕತ್ತಲು ಕವಿಯುವ ಹೊತ್ತಿಗೆ ನನ್ನದೇ ದರ್ಬಾರು ಸೂರ್ಯನಿಗಿಂತ ನಾನೇನು ಕಡಿಮೆ, ರಾತ್ರಿಯ ಹೊತ್ತೂ ಬೆಳಕು ಚೆಲ್ಲುವ ಹಿರಿಮೆ ನನ್ನದು" ಎಂದು ಜಂಭದಿಂದ ನುಡಿಯಿತು.ತಕ್ಷಣ ರಭಸವಾಗಿ ಬೀಸಿದ ಗಾಳಿಯ ಪ್ರಭಾವದಿಂದ ದೀಪ ಆರಿಹೋಯಿತು.ಕೂಡಲೇ ಯಜಮಾನ ಮತ್ತೊಮ್ಮೆ ಅದನ್ನು ಹೊತ್ತಿಸಿ ಗೋಡೆಯ ಬದಿಗೆ ಸರಿಸಿದನು.ಹಿಗ್ಗಿದ್ದ ದೀಪಕ್ಕೆ ಸ್ವಲ್ಪ ಬೇಸರವಾಯಿತು.ಆ ಕೂಡಲೇ "ಅರೆ! ನೀನೇನೂ ಕಡಿಮೆ ಇಲ್ಲಾ, ಆದರೆ ಸೂರ್ಯನಿಗೆ ಮತ್ತೆ ಮತ್ತೆ ಹೊತ್ತಿಸುವ ಗೋಜಿಲ್ಲವಲ್ಲಾ"ಎಂದು ಯಾರೋ ಹೇಳಿದಂತಾಯಿತು. ತನ್ನೊಳಗಿನ ಮನಸ್ಸೇ ಬುದ್ದಿ ಹೇಳಿದುದು ಅರಿವಾಗಿ ನಾಚಿಕೆಯಾಯಿತು.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023