ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಪಂಡಿತ

picture

ಪಂಡಿತನೊಬ್ಬ ನದಿ ದಾಟಿ ಪಕ್ಕದ ಊರಿಗೆ ಪ್ರಯಾಣ ಮಾಡಲು ಹೊರಟಿದ್ದ. ದೋಣಿಯಲ್ಲಿ ಸಾಗುತ್ತಿರಲು ಕಾಲ ಕಳೆಯಲು ಅಂಬಿಗನನ್ನು ಮಾತನಾಡಿಸುತ್ತಿದ್ದ. ಹಾಗೇ ಮಾತಿಗೆ ಮಾತು ಬೆಳೆದು ಪಂಡಿತ ಆ ಅಂಬಿಗನನ್ನು ಕುರಿತು"ನಿನಗೆ ವ್ಯಾಕರಣ ಬರುತ್ತದೋ"ಎಂದು ಜಂಭದಿಂದ ಕೇಳಿದ.ಅದಕ್ಕುತ್ತರವಾಗಿ ಅಂಬಿಗ‘ಇಲ್ಲಾ ಸ್ವಾಮಿ’ಎಂದ. ಪಂಡಿತ ಮತ್ತೆ ಜಂಭದಿಂದ ನಕ್ಕು "ಹಾದಿದ್ದರೆ ನಿನ್ನ ಅರ್ಧ ಜನ್ಮ ಹಾಳು" ಅಂದ. ಸ್ವಲ್ಪ ಹೊತ್ತಿನ ಬಳಿಕ ಅಂಬಿಗ ಕೇಳಿದ"ಸ್ವಾಮಿ ನಿಮಗೆ ಈಜು ಬರುತ್ತೋ?" ಅದಕ್ಕೆ ಪಂಡಿತ "ಇಲ್ಲ"ಎಂದ."ಹಾಗಿದ್ದಲ್ಲಿ ನಿಮ್ಮ ಪೂರ್ತಿ ಜನ್ಮವೇ ನೀರುಪಾಲು, ಈಗ ದೋಣಿಯಲ್ಲಿ ಬಿರುಕು ಬಿಟ್ಟಿದೆ, ನೀರು ನುಗ್ಗುತ್ತಿದೆ!"ಎಂದ. ಕಡೆಗೆ ಅಂಬಿಗನೇ ಹಾಗೂ ಹೀಗೂ ಮುಳುಗುತ್ತಿದ್ದ ಪಂಡಿತನನ್ನು ದಡ ಸೇರಿಸಿ ಪ್ರಾಣ ಉಳಿಸಿದ.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023