ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಭೂತ!(ಹಾಸ್ಯ)

picture

ತೆನ್ನಾಲಿ ರಾಮ ಕೃಷ್ಣನ ಬುದ್ಧಿವಂತಿಕೆ ,ಸಮಯಸ್ಪೂರ್ತಿ, ಜಾಣತನ, ಸಲಹೆ ಎಲ್ಲ ಜನರ ಮನೆ ಮಾತಾಗಿದ್ದ ಕಾಲವದು. ಆಗ ಒಬ್ಬ ಸಾಹುಕಾರನು ತನ್ನ ಕಷ್ಟವನ್ನು ಹೇಳಿಕೊಳ್ಳಲು ರಾಮಕೃಷ್ಣನ ಬಳಿಗೆ ಬಂದ. "ರಾಮ ಕೃಷ್ಣಾ, ನನಗೆ ದಿನಾ ರಾತ್ರಿ ಮಲಗಿದಾಗ ನನ್ನ ಮಂಚದಡಿ ಒಂದು ಭಯಂಕರ ಭೂತ ಮಲಗಿದಂತೆ ಕನಸು ಬರುತ್ತದೆ, ಇದರಿಂದ ನನಗೆ ತುಂಬಾ ಭಯವಾಗಿದೆ,ಆದರೆ ಬೆಳಿಗ್ಗೆ ಎದ್ದು ನೋಡಿದಾಗ ಅದು ಅಲ್ಲಿ ಇರುವುದಿಲ್ಲ, ಅದಕ್ಕೆ ಏನಾದರೂ ಒಂದು ಉಪಾಯ ಹೇಳು. ನಿನಗೆ ನೂರು ವರಹಗಳನ್ನು ಕೊಡುತ್ತೇನೆ" ಎಂದ. ಅದಕ್ಕೆ ರಾಮಕೃಷ್ಣ "ಮೊದಲು ನೂರು ವರಹ ಕೊಡಿ ಆನಂತರ ಉಪಾಯ ಹೇಳುವೆ" ಎಂದ. ಅದರಂತೆ ಆ ಶ್ರೀಮಂತ ಹಣದ ಚೀಲವನ್ನು ಅವನ ಕೈಗಿತ್ತ. ರಾಮ ಕೃಷ್ಣ ಮೊದಲೇ ಉಪಾಯ ಯೋಚಿಸಿಬಿಟ್ಟಿದ್ದ. ಹಣ ಕೈಗೆ ಸಿಕ್ಕಿದ ತಕ್ಷಣ ಹೇಳಿದ"ನೋಡಿ ಸ್ವಾಮಿ ನೀವು ಈ ದಿನವೇ ಮನೆಗೆ ಹೋಗಿ ನೀವು ಮಲಗುವ ಮಂಚದ ನಾಲ್ಕೂ ಕಾಲುಗಳನ್ನು ಕತ್ತರಿಸಿ, ನಂತರ ಆ ಭೂತಕ್ಕೆ ಈ ರಾತ್ರಿಯಿಂದ ನಿಮ್ಮ ಮಂಚದ ಕೆಳಗೆ ಜಾಗ ಇದ್ದರೆ ತಾನೆ!" ಎಂದು ಹೇಳಿ ಕಳಿಸಿದ. ಶ್ರೀಮಂತ ಅದರಂತೆಯೇ ಮಂಚದ ಕಾಲುಗಳನ್ನು ಕತ್ತರಿಸಿ ನೆಮ್ಮದಿಯಿಂದ ಮಲಗಿದ. ಆತನ ಭ್ರಮೆಯೂ ದೂರವಾಯಿತು.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023