ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮಹಾರಾಜ?(ಹಾಸ್ಯ)

picture

ತೆನ್ನಾಲಿ ರಾಮ ಕೃಷ್ಣ ಒಮ್ಮೆ ಬೀದಿಯಲ್ಲಿ ನಡೆದು ಹೋಗುವಾಗ ಬೇರೊಬ್ಬ ರಾಜ್ಯದ ವ್ಯಕ್ತಿಯೊಬ್ಬ ಅವನ ಎದುರಿಗೇ ನಡೆದು ಬರುತ್ತಿದ್ದ. ಅಕಸ್ಮಿಕವಾಗಿ ರಾಮಕೃಷ್ಣನ ಭುಜ ಆತನಿಗೆ ತಗುಲಿತು.ತಕ್ಷಣ ಕೋಪಗೊಂಡ ಆ ವ್ಯಕ್ತಿ ರಾಮಕೃಷ್ಣನನ್ನು ಶಪಿಸಲು ಶುರುಮಾಡಿದ "ಹೇ!! ನಿನಗೇನು ಕಣ್ಣು ಕಾಣುವುದಿಲ್ಲವೇ? ನಾನು ಯಾರೆಂದು ತಿಳಿದಿರುವೆ? ನಾನು ಒಬ್ಬ ರಾಜನ ಸಲಹೆಗಾರ"ಎಂದು ಜಂಭದಿಂದ ಕೂಗಿ ಹೇಳಿದ.ಅದಕ್ಕೆ ರಾಮಕೃಷ್ಣ "ಓಹೋ ಹಾಗೋ ನೀನು ಬರೀ ಸಲಹೆಗಾರನೋ...ಆದರೆ ನಾನು ಮಹಾರಾಜ ತಿಳಿಯಿತೋ"ಎಂದ. ಕೂಡಲೇ ಆ ವ್ಯಕ್ತಿ "ಹಾ! ಹಾಗಾ? ತಪ್ಪಾಯಿತು ಮಹಾಪ್ರಭು,ತಾವು ಯಾವ ರಾಜ್ಯಕ್ಕೆ ರಾಜರು?" ಎಂದ. ರಾಮಕೃಷ್ಣ ನಕ್ಕು"ನನಗೆ ನಾನೇ ಮಹಾರಾಜ, ನನ್ನ ಭಾವೋದ್ರೇಗಕ್ಕೆ, ನನ್ನ ನಡೆ ನುಡಿಗೆ ನಾನೇ ಅಧಿಪತಿ, ನೀನು ಈಗಷ್ಟೇ ತಾಳ್ಮೆ ಕಳೆದುಕೊಂಡಂತೆ ನಾನೆಂದೂ ನಡೆದಿಲ್ಲ, ನಡೆಯುವುದೂ ಇಲ್ಲ."ಎಂದ. ತಕ್ಷಣ ಆ ಸಲಹೆಗಾರನಿಗೆ ತನ್ನ ತಪ್ಪರಿವಾಗಿ ತಲೆಬಾಗಿ ಮುಂದೆ ಸಾಗಿದ.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023