ಯಾರು ಹೆಚ್ಚು

ಒಂದು ಸಿಂಹ ಹಾಗು ಒಬ್ಬ ಮಾನವ ಸ್ನೇಹದಿಂದ ಬಾಳುತ್ತಿದ್ದರು.ಒಮ್ಮೆ ಇಬ್ಬರೂ ಕಾಡಿನ ಹಾದಿಯಲ್ಲಿ ನಡೆಯುತ್ತಿದ್ದರು.ಹಾಗೇ ಮಾತಿಗೆ ಮಾತು ಬೆಳೆದು ಒಬ್ಬರಿಗಿಂತ ಒಬ್ಬರು ತಮ್ಮ ಸಾಮರ್ಥ್ಯವನ್ನು ಕೊಚ್ಚಿಕೊಳ್ಳತೊಡಗಿದರು. ಹಾಗೆ ಸಾಗಿರಲು ಒಂದು ಕಲ್ಲಿನ ಶಿಲೆ ಕಂಡಿತು.ಅದು ಓರ್ವ ಮಾನವ ತನ್ನ ತೋಳ್ಬಲದಿಂದ ಸಿಂಹವನ್ನು ನೆಲಕ್ಕಪ್ಪಳಿಸಿ ಒಂದು ಕೈಯಿಂದ ಅದನ್ನು ಅದುಮಿ ಹಿಡಿದು ಮತ್ತೊಂದು ಕೈ ಮೇಲೆತ್ತಿ ಅದನ್ನು ಜಜ್ಜಿ ಹಾಕುವಂತೆ ಕೆತ್ತಲಾಗಿತ್ತು.ಅದನ್ನು ತೋರಿಸಿ ಮಾನವನು "ನೋಡಿದೆಯಾ ಸಿಂಹ ಮಾನವನ ಮುಂದೆ ಮೃಗರಾಜನೂ ಏನೂ ಇಲ್ಲ"ಎಂದ.ತಕ್ಷಣ ಸಿಂಹ ಅವನ ಮೇಲೆರಗಿ ಹಿಂಗಾಲುಗಳಿಂದ ಅವನನ್ನು ಹಿಡಿದು ಮುಂಗಾಲುಗಳಿಂದ ಸಿಗಿದು ಹಾಕುವ ಹಾಗೆ ಘರ್ಜಿಸಿ ನಿಂತಿತು." ಮಾನವ ಇದನ್ನು ಕೆತ್ತಿದವನು ಮಾನವ,ಸಿಂಹಕ್ಕೂ ಕೆತ್ತನೆ ಕೆಲಸ ತಿಳಿದಿದ್ದರೆ ಆ ಶಿಲೆ ಹೀಗಿರುತ್ತಿತ್ತು ಎಂದು ಹೇಳಿ ಏನೂ ಮಾಡದೆ ಮುಂದೆ ಸಾಗಿತು.
ಕಥೆ ಕೇಳಲು ಬಲು ಚೆನ್ನ..........ಆದರೆ ಮತ್ತೊಂದು ಹೇಳುವವರೆಗೂ ಅಷ್ಟೆ.