ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಆಸೆ - ಆತುರ

picture

ಜೇನುತುಪ್ಪ ಜಾಡಿಗಳಲ್ಲಿ ಇಡುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ.ಒಂದು ಮನೆಯಲ್ಲಿ ಒಮ್ಮೆ ಜಾಡಿ ಅಕಸ್ಮಾತ್ ಜಾರಿ ಬಿದ್ದು ಜೇನುತುಪ್ಪ ನಿಧಾನವಾಗಿ ನೆಲಕ್ಕೆ ಹರಿಯಿತು.ಮನೆಯಲ್ಲಿದ್ದ ನೊಣಗಳು ಅದರ ವಾಸನೆಗೆ ಹಿಂಡು ಹಿಂಡಾಗಿ ಹಾರಿಬಂದು ಅದರ ಮೇಲೆ ಕುಳಿತು ಸವಿಯಲು ಆರಂಭಿಸಿದವು.ಅವುಗಳ ಕಾಲು ಜೇನಿನತುಪ್ಪದಲ್ಲಿ ಒದ್ದೆಯಾಗಿ ಮುಳುಗಲು, ರೆಕ್ಕೆಗಳೂ ಸಹ ಜೇನಿಗೆ ಅಂಟಿ ನೊಣಗಳು ಹಾರದಂತೆ ಆಯಿತು.ಆಗಾಗಲೆ ಅವುಗಳಿಗೆ ತಮ್ಮ ತಪ್ಪು ಅರಿವಾಗಿತ್ತು ಆದರೆ ಏನು ಮಾಡುವುದು ಬಹಳ ತಡವೂ ಆಗಿತ್ತು. ಜೇನುತುಪ್ಪ ತಿನ್ನುವ ಆಸೆಯಿಂದ ಆತುರ ಪಟ್ಟಿದ್ದು ಪ್ರಾಣಕ್ಕೆ ಆಪತ್ತಾಯಿತು. ನೀತಿ:ಅಸೆಯೇ ಅವನತಿಗೆ ಕಾರಣ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023