ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕೊಡಲಿಗಳು

picture

ತಿಮ್ಮನ ಕಬ್ಬಿಣದ ಕೊಡಲಿ ಬಾವಿಗೆ ಬಿದ್ದಾಗ ದೇವರನ್ನು ಆತ ಪ್ರಾರ್ಥಿಸಿ ದೇವನು ಪ್ರತ್ಯಕ್ಷನಾಗಿ ಆತನಿಗೆ ಮೊದಲು ಚಿನ್ನದ ಕೊಡಲಿ, ನಂತರ ಬೆಳ್ಳಿಯ ಕೊಡಲಿ, ಆ ನಂತರ ಕಬ್ಬಿಣದ ಕೊಡಲಿ ತರಲು ತಿಮ್ಮ ತನ್ನ,ಕೊಡಲಿ ಯಾವುದೆಂದು ನಿಜ ನುಡಿಯಲು ದೇವನು ಎಲ್ಲಾ ಕೊಡಲಿಗಳನ್ನು ದಯಪಾಲಿಸಿದ ಕಥೆ ಎಲ್ಲರಿಗೂ ಗೊತ್ತೇ ಇದೆ. ಅದೇ ತಿಮ್ಮ ತನ್ನ ಹೆಂಡತಿಯೊಡನೆ ಅದೇ ಬಾವಿಯ ಬಳಿ ಕುಳಿತಿರಲು ಅವರಿಬ್ಬರ ನಡುವೆ ಮಾತು ಬೆಳೆದು ಜಗಳಕ್ಕಿಳಿದು ತಿಮ್ಮ ತನ್ನ ಹೆಂಡತಿಯನ್ನು ಅಕಸ್ಮಾತ್ ತಳ್ಳಿ ಆಕೆ ಬಾವಿಯಲ್ಲಿ ಬಿದ್ದಳು. ಆಗ ತಿಮ್ಮ ಗಾಬರಿಯಿಂದ ಅಯ್ಯೋ ದೇವರೇ ಎಂದು ಹಿಂದಿನಂತೆ ಮೊರೆಯಿಡಲು ಅದೇ ದೇವನು ಮತ್ತೆ ತಿಮ್ಮನ ಕರೆಗೆ ಓಗೊಟ್ಟು ಮರಳಿ ಬಂದನು.ತಿಮ್ಮ ನಡೆದುದ್ದೆಲ್ಲಾ ವಿವರಿಸಲು ದೇವನು ತಿಮ್ಮನಿಗೆ ಸ್ವಲ್ಪ ತಾಳೆಂದು ಹೇಳಿ ಬಾವಿಯೊಳಗೆ ಹೋಗಿ ಐಶ್ವರ್ಯ ರೈ ಳನ್ನು ಕರೆತಂದನು. ತಕ್ಷಣ ತಿಮ್ಮ "ಈಕೇನೇ ನನ್ನ ಹೆಂಡತಿ" ಎಂದು ಅವಸರದಿ ಹೇಳಿದ. ದೇವನು "ಎಲೈ ತಿಮ್ಮ ಈ ಸುಂದರಿಯನ್ನು ಕಂಡಕೂಡಲೇ ಈಕೆಯೇ ನನ್ನ ಹೆಂಡತಿ ಅನ್ನುತ್ತಿರುವೆಯಾ" ಎಂದನು.ಅದಕ್ಕೆ ತಿಮ್ಮ ಶಾಂತವಾಗಿ ಉತ್ತರವಿತ್ತ "ಸ್ವಾಮೀ ಈಕೆಯನ್ನು ನನ್ನಕೆಂಡತಿಯಲ್ಲ ಅಂದರೆ ನೀವು ಒಳಗೆ ಹೋಗಿ ಶ್ರೀದೇವಿಯನ್ನು ಕರೆತರುವಿರಿ,ನಂತರ ನನ್ನ ಹೆಂಡತಿಯನ್ನು ತಂದಾಗ ನಿಜವನ್ನು ಹೇಳಿದಾಗ ಮೂವರನ್ನೂ ನನಗೇ ಕೊಡುವೆ.ಒಬ್ಬಳ ಕಾಟವೇ ಸಾಕಾಗಿ ಹೋಗಿದೆ ಅದಕ್ಕೆ ಈ ಒಬ್ಬಳೇ ಸಾಕು ಸ್ವಾಮಿ"ಎನ್ನಬೇಕೇ!!!


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023