ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಪಾಲು(ಹಾಸ್ಯ)

picture

ತಿಮ್ಮ ಗುಂಡ ಇಬ್ಬರೂ ಆಪ್ತ ಸ್ನೇಹಿತರು.ಎನಾದರೂ ವ್ಯಾಪಾರ ಮಾಡುವ ಯೋಜನೆ ಮಾಡಿ ಇಬ್ಬರೂ ಸೇರಿ ಒಂದು ಎಮ್ಮೆ ಕೊಂಡರು. ಚತುರ ತಿಮ್ಮ ಗುಂಡನ ದಡ್ದತನವನ್ನು ದುರುಪಯೋಗ ಪಡಿಸಿಕೊಂಡು"ಗುಂಡಾ, ಇಬ್ಬರೂ ಈ ಎಮ್ಮೆಯನ್ನು ಚೆನ್ನಾಗಿ ನೋಡಿಕೊಳ್ಳೋಣ.ಎಲ್ಲರಿಗೂ ತಲೆ ಮುಖ್ಯ ಅಲ್ಲವೇ ಅದಕ್ಕೆ ಎಮ್ಮೆಯ ಮುಂದಿನ ಭಾಗ ನಿನ್ನದು ಹಿಂದಿನ ಭಾಗ ನನ್ನ ಜವಾಬ್ದಾರಿ" ಎಂದು ಹೇಳಿದ. ಸರಿ ಸ್ವಲ್ಪ ಹೊತ್ತಿನ ಬಳಿಕ ಎಮ್ಮೆ ಅರಚಿಕೊಳ್ಳಲು ಶುರುಮಾಡಿತು.ತಿಮ್ಮ ಗುಂಡನಿಗೆ "ಗುಂಡಾ ನಿನ್ನ ಭಾಗ ಕೂಗ್ತಾ ಇದೆ ಹಸಿವೆ ಆಗಿದೆ ಅನ್ನಿಸುತ್ತೆ,ಹುಲ್ಲು ತಂದು ಹಾಕು’ಎಂದ. ಗುಂಡ ಹುಲ್ಲಿನ ಹೊರೆ ಕೊಂಡು ತಂದು ಮೆಯಲು ಹಾಕಿದ.ಸಂಜೆಗೆ ಹಾಲು ಕರೆಯುವ ಸಮಯ ಬಂದಾಗ ಗುಂಡ ಒಂದು ಪಾತ್ರೆ ಹಿಡಿದು"ತಿಮ್ಮಾ ನನ್ನ ಪಾಲಿನ ಹಾಲು?"ಎಂದಾಗ ತಿಮ್ಮ "ನನ್ನ ಭಾಗದ ಎಮ್ಮೆಯ ಪಾಲು ನನ್ನದು,ನಿನ್ನದು ತಲೆಯ ಭಾಗ ನಿನಗೆ ಹಾಲು ಇಲ್ಲ" ಎಂದು ಜಂಭದಿಂದ ನುಡಿದ.ದಾರಿ ಕಾಣದೆ ಗುಂಡ ತೆಪ್ಪಗೆ ಹೊರಟ.ಮರುದಿನ ಹಾಲು ಕರೆಯುವ ಸಮಯಕ್ಕೆ ಸರಿಯಾಗಿ ಒಂದು ಕಟ್ಟಿಗೆ ತೆಗೆದುಕೊಂಡು ಎಮ್ಮೆಯ ತಲೆಗೆ ಬಲವಾಗಿ ಹೊಡೆದ.ಎಮ್ಮೆ ತನ್ನ ಹಿಂದೆ ಹಾಲು ಕರೆಯುತ್ತಿದ್ದ ತಿಮ್ಮನನ್ನು ಬಲವಾಗಿ ಜಾಡಿಸಿತು.ಆತನಿಗೆ ಪೆಟ್ಟು ಬಿತ್ತು.ಕೋಪದಿಂದ ಗುಂಡನನ್ನು ಏಕೆ ಹಾಗೆ ಮಾಡಿದೆ ಎಂದು ಕೇಳಲು"ಅದು ನನ್ನ ಭಾಗ ನಿನಗೆ ಕೇಳುವ ಅಧಿಕಾರವಿಲ್ಲ"ಎಂದ.ತಿಮ್ಮನಿಗೆ ತನ್ನ ತಪ್ಪಿನ ಅರಿವಾಯಿತು.ಒಪ್ಪಿಕೊಂಡು ಮುಂದೆ ಹಾಲನ್ನೂ ಭಾಗ ಮಾಡಿಕೊಂಡರು.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023