ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅತಿಥಿ ಸತ್ಕಾರ (ಹಾಸ್ಯ)

picture

ಬಡವ ರಾಮಯ್ಯ ತನ್ನ ಹೆಂಡತಿಯೊಂದಿಗೆ ಜೀವನ ಸಾಗಿಸುತ್ತಿದ್ದ.ಆತನಿಗೆ ಅತಿಥಿ ಎಂದರೆ ದೇವರ ಸಮಾನ. ಆತನ ಮನೆಗೆ ಬಂದವರಿಗೆ ಊಟ ಉಪಚಾರಕ್ಕೆ ಎಂದಿಗೂ ಮೋಸವಿರಲಿಲ್ಲ. ಇದನ್ನು ಅರಿತ ಕೆಲವು ನಂಟರು ಮತ್ತೆ ಮತ್ತೆ ಆತನ ಮನೆಗೆ ಊಟಕ್ಕೆ ಬರತೊಡಗಿದರು.ಆತನ ಹೆಂಡತಿಗೆ ಅಡುಗೆ ಮಾಡಿಹಾಕಿ ರೋಸಿ ಹೋಗಿತ್ತು.ಒಂದು ದಿನ ಮತ್ತದೇ ನಂಟರು ಮನೆಗೆ ಬಂದರು.ಆ ದಿನ ರಾಮಯ್ಯ ಮನೆಯಲ್ಲಿರಲಿಲ್ಲ.ಅವರ ಮನೆಯಲ್ಲಿ ಒಂದು ದೊಡ್ದ ಒರಳು ಮತ್ತು ಒನಕೆ ಇತ್ತು.ಅದಕ್ಕೆ ಹೂವು,ಅರಿಶಿನ ಕುಂಕುಮ ಅಲಂಕಾರ ಮಾಡಲಾಗಿತ್ತು.ಅವರು "ಇದೇನಿದು?" ಎಂದರು.ಅದಕ್ಕೆ ರಾಮಯ್ಯನ ಹೆಂಡತಿ "ನಮ್ಮೆಜಮಾನರು ಈಗ ಒನಕೆ ವ್ರತ ಮಾಡುತ್ತಿದ್ದಾರೆ,ಮನೆಗೆ ಬಂದವರಿಗೆ ಊಟದ ನಂತರ ಎರಡೆರೆಡು ಲಾತ ಕೊಡುತ್ತಾರೆ"ಎಂದಳು. ಕೂಡಲೇ ಎಲ್ಲಾ ನಂಟರು ಓಡತೊಡಗಿದರು.ಅದೇವೇಳೆಗೆ ಮನೆಗೆ ಬಂದ ರಾಮಯ್ಯ ನಂಟರು ಓಡುತ್ತಿರುವುದನ್ನು ಕಂಡು ಏಕೆಂದು ಹೆಂಡತಿಯನ್ನು ಕೇಳಿದನು.ಅದಕ್ಕೆ ಆತನ ಹೆಂಡತಿ"ಅವರಿಗೆ ಈ ಒನಕೆ ಬೇಕಂತೆ,ಕೊಡಲ್ಲ ಎಂದದಕ್ಕೆ ಓಡಿ ಹೋಗ್ತಿದ್ದಾರೆ"ಎಂದಳು.ರಾಮಯ್ಯ ಒನಕೆ ಹಿಡಿದು ಅವರ ಹಿಂದೆ ತಾನೂ ಓಡಿದ. ನಂಟರು"ಅಯ್ಯೋ ರಾಮಯ್ಯ ಒನಕೆ ಹಿಡಿದು ಬರ್ತಿದ್ದಾನೆ ಓಡಿ, ಜೋರಾಗಿ ಓಡಿ"ಎಂದು ರಾಮಯ್ಯನ ಕಣ್ಣು ತಪ್ಪಿಸಿ ದೂರ ಸಾಗಿದರು.ಮತ್ತೆ ಆತನ ಮನೆಯಕಡೆ ತಲೆ ಹಾಕುವ ಸಾಹಸ ಮಾಡಲಿಲ್ಲ.

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025