ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಜನಸೇವೆ

picture

ಪಟ್ಟಣವಾಸಿ ಯುವಕನೊಬ್ಬ ಹಳ್ಳಿಯ ಕಡೆ ಪ್ರಯಾಣ ಮಾಡುತ್ತಿದ್ದ.ಅಲ್ಲಿ ಒಂದು ಬಾವಿಯಿಂದ ಗಾಲಿಯ ಏತದ ಮೂಲಕ ನೀರು ಗದ್ದೆಗೆ ಹರಿದು ಬರುವುದು ಕಂಡಿತು.ಆತನಿಗೆ ಆಶ್ಚರ್ಯ "ಅರೆ ಇದೇನಿದು ಬಾವಿಯಿಂದ ತಾನೇ ತಾನಾಗಿ ನೀರು ಬರುತ್ತಿದೆ?" ಎಂದು ಅಲ್ಲಿದ್ದ ಒಬ್ಬ ರೈತನನ್ನು ಕೇಳಿದ. ಅದಕ್ಕೆ ಉತ್ತರವಾಗಿ ಆ ರೈತ "ಅರೆರೆ ತಾನಾಗೇ ಎಲ್ಲಾದ್ರೂ ನೀರು ಬರುತ್ತಾ? ಒಳಗೆ ನಿಮ್ಮಪ್ಪ ಇದ್ದಾರೆ! ಅವರೇ ನಮಗೆಲ್ಲಾ ನೀರು ತುಂಬಿ ತುಂಬಿ ಮೆಲಕ್ಕೆ ಕಳಿಸ್ತಾ ಇರೋದು" ಎಂದ. ಯುವಕ "ಅಯ್ಯಾ ನನ್ನ ತಂದೆ ಸತ್ತು ಹತ್ತು ವರ್ಷವಾಯ್ತು, ಅದು ಹೇಗೆ ಸಾಧ್ಯ?"ಎಂದು ಹೇಳಿದ.ರೈತ ಅಷ್ಟಕ್ಕೇ ನಿಲ್ಲಿಸಲಿಲ್ಲ "ಮಗೂ ನಿನ್ನ ತಂದೆಯನ್ನು ದೇವರು ಮತ್ತೆ ಈ ಭೂಮಿಗೆ ನಮ್ಮ ಸೇವೆ ಮಾಡಲು ಕಳಿಸಿದ್ದಾರೆ ,,, ಜನಸೇವೆ ಹೂ! ಜನಸೇವೆ" ಎಂದು ನಕ್ಕ.ಆ ಯುವಕ ರೈತನ ಮಾತನ್ನು ನಂಬಿದ "ಹೌದಾ? ಪಾಪ ನನ್ನ ತಂದೆ ಎಷ್ಟು ಕಷ್ಟ ಪಡ್ತಿದ್ದರೋ ಒಳಗೆ?"ಎಂದು ಕನಿಕರಿಸಿದ.ರೈತ ಇದೇ ಸಮಯ ನೋಡಿ "ನೋಡು ಮಗೂ ನಿನ್ನ ತಂದೆಗೆ ಬಟ್ಟೆ ಇಲ್ಲ,ನಿನ್ನ ಚೆಂದರ ಅಂಗಿ ಕೊಡು ಆತನಿಗೆ ಚಳಿ ಆಗುವುದು ತಪ್ಪಿಸಬಹುದು" ಎಂದು ಆತನ ಅಂಗಿಯನ್ನೂ ಕಿತ್ತುಕೊಂಡ.ಆಗ ಯುವಕ ಸ್ವಲ್ಪ ಯೋಚಿಸಿ,ಜಾಣತನದಿ ನುಡಿದ"ನನ್ನ ತಂದೆಯನ್ನು ಕರೆದುಕೊಂಡು ಹೋಗಬೇಕು ಕಳಿಸಿಕೊಡುವಿರಾ?"ಎಂದ.ಅದಕ್ಕೆ ಊರಿನ ರೈತರೆಲ್ಲಾ ನಕ್ಕು"ನಿನ್ನ ತಂದೆಯಿಂದಲೇ ನಮಗೆ ವ್ಯವಸಾಯಕ್ಕೆ ನೀರು ಸಿಗುತ್ತಿದೆ,ಅವರಿಂದಲೇ ನಮಗೆ ಈಗ ಬೆಳೆ ಬೆಳೆಯಲು ಆಗ್ತೀರೋದು, ಮೇಲಾಗಿ ಅವರು ಈಗ ನಿನಗೆ ಕಾಣುವುದಿಲ್ಲ"ಎಂದರು."ಹಾಗಿದ್ದರೆ ಕಾನೂನಿನ ಪ್ರಕಾರ ನಿಮ್ಮ ಬೆಳೆಯಲ್ಲಿ ನನಗೆ ಅರ್ಧ ಪಾಲು ಕೊಡಿ,ನನ್ನ ಅಪ್ಪನೇ ನಿಮಗೆಲ್ಲಾ ನೀರು ತುಂಬಿ ಹಾಕ್ತಿರೋದು ತಾನೆ? ಆತನಿಗೆ ನ್ಯಾಯವಾಗಿ ನಿಮ್ಮ ಲಾಭದಲ್ಲಿ ಅರ್ಧ ಸಿಗಬೇಕು, ಆ ಅಪ್ಪನ ಆಸ್ತಿ ಪಾಲು ನನಗೆ ಸೇರಬೇಕು" ಎಂದ.ಗೇಲಿ ಮಾಡುತ್ತಿದ್ದ ರೈತರೆಲ್ಲಾ ಕಕ್ಕಾಬಿಕ್ಕಿಯಾಗಿ ಮುಖ ನೋಡಿಕೊಂಡರು.ಸುಳ್ಳು ಹೇಳಿದ್ದು ಅವರಿಗೆ ಫಜೀತಿಗೆ ಬಂದಿತ್ತು.ಕ್ಷಮೆ ಯಾಚಿಸಿ ನಾಲ್ಕು ಮೂಟೆ ಧವಸ ಧಾನ್ಯ ಕೊಟ್ಟು ಕಳಿಸಿದರು,ಅಂಗಿಯನ್ನೂ ವಾಪಸ್ ಕೊಟ್ಟರು.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023