ಸುಳಾದಿ (ಕ)
ಕೃಷ್ಣ ಗೋದಾವರೀ ನಂದಿನೀ ನಳಿನೀ ಹೇಮಾವತೀ
ಕೃಷ್ಣ ಗೋದಾವರೀ ನಂದಿನೀ ನಳಿನೀ ಹೇಮಾವತೀ |
ಹರಿದ್ವತೀ ಕಾವೇರೀ ಕಪಿಲಾ ಸಿಂಧು ಸರಯು |
ನೇತ್ರಾವತೀ ಕುಮದ್ವತೀ ಭಾಗೀರಥೀ ಭೋಗವತೀ |
ಜಾಹ್ನವೀ ಜಯಮಂಗಲಿ ತ್ರಿಜಗತ್ಪಾವನೀ ವಿಷ್ಣು |
ಪಾದೋದ್ಭವೇ ದೇವಿ ಕೃಷ್ಣವೇಣಿ ಅಘನಾಶಿನೀ |
ಗಂಗಾ ಯಮುನಾ ತ್ರಿವೇಣೀ ದಕ್ಷಿಣ ಪಿನಾಕಿನೀ |
ನರ್ಮದಾ ಸಾವಿತ್ರೀ ಗಾಯತ್ರೀ ಸರಸ್ವತೀ ಸೀತಾ |
ಮಾಲತೀ ಪಂಚಗಂಗೀ ವಾರಾಹೀ ವೈಷ್ಣವೀ ಸುಜ್ಯೋತಿ |
ಶಿವಗಂಗಾ ಪಂಚಗಂಗೀ ತ್ರಿಪದಗಾಮಿನೀ ಬ್ರಹ್ಮಪುತ್ರಾ |
ತುಂಗಭದ್ರಾ ಭೀಮರಥೀ ಗೋಮತೀ ಶರಾವತೀ |
ಸ್ವಾಮಿ ಪುಷ್ಕರಿಣೀ ವರಾಹ ಪುಷ್ಕರಿಣೀ ಪಾಂಡುತೀರ್ಥ |
ಪಾಪನಾಶಿನೀ ಆಕಾಶಗಂಗಾ ಧವಳಗಂಗಾ ಶಾಲ್ಮಲೀ |
ನಾರಾಯಣತೀರ್ಥ ಕೌಮೋದಕೀ ಕಪಿಲತೀರ್ಥ |
ಅಲಕನಂದ ವರದಾ ಪಶ್ಚಿಮವಾಹಿನೀ ಸಿಂಧು |
ನದಿ ಶೋಣನದಿ ಚಂದ್ರಭಾಗಾ |
ಅರ್ಕಾವತೀ ಸುವರ್ಣ |
ಮುಖರೀ ಗೋಗರ್ಭ ಶಿಂಶಾ ಕಾಗಿನೀ ಮಂದಾಕಿನೀ |
ಪ್ರಾತಃಕಾಲೇ ಪಠೇನ್ನಿತ್ಯಂ ದುಃಖದಾರಿದ್ರನಾಶನಂ |
ಸ್ಮರಾಮಿ ನಿತ್ಯಮ್ ಭವದುಃಖದೂರಾ |
ಶ್ರೀ ಕಮಲನಾಥ ವಿಠ್ಠಲೋ ವಿಜಯತೇ ಶುಭಂ |
ಕೃಪಾಳೊ ಗುರುವರ ಶ್ರೀ ಪವಮಾನ
ಕೃಪಾಳೊ ಗುರುವರ ಶ್ರೀ ಪವಮಾನ |
ಭಾರತಿ ಭಾವಹಾರಿ ಸ್ಮರಹರನುತ |
ದೀನಜನಮಂದಾರ |
ಕಾವಕರುಣಿ ಜೀವವರೇಣ್ಯ |
ದಿವಿಜವೃಂದವಿನುತ ಜಯಶೀಲಾ |
ಪಾವನಾತ್ಮಕ ಪಾಹಿಪಾಹಿ |
ಭಾವಿವಿಧಿ ದುರಿತೌಘಹಾರಿ |
ಆದಿಪುರದಿ ಮೆರೆವ ನಾಥ |
ಸದಯ ಭಕ್ತಜನಕೆ ಶುಭದಾತ |
ಕುಧರಾದಿ ಸುಜಾತ ಭ್ರಾತ |
ಸದಯ ಧರ್ಮಾನುಜಾತ |
ಪ್ರೇಮಶರಧಿ ವಾನರೇಶ |
ಅಮಿತಸತ್ತ್ವಮತಿ ಮಹಿಮ ಯತಿರಾಜ |
ರೋಮರೋಮ ವ್ಯೋಮಕೇಶ |
ಶ್ಯಾಮಸುಂದರ ಮೋಹದ ದಾಸ |
||ಧೃವ ತಾಳ||
ಕರಿರಾಜ ಕಂಧರ ರಜತಾದ್ರಿ ಮಂದಿರ | ಉರಗ ಕಟಿ ಬಂಧನ ಮೂಷಿಕಶ್ಯಂದನ
ಗಿರಿರಾಜ ಸುತೆ ಪಾರ್ವತಿ ತನುಮೃದ್ಭವ | ಕರ ಚತುಷ್ಟಯ ದಶನ ಮೋದಕ
ಪಾಶಾಂಕುಶ | ಧರ ಕುಂಕುಮಾಂಬರ ಲಂಬೋದರ | ಶೂರ್ಪಕರ್ಣನೆ
ಮಂಗಳಾಂಗ ಭಸ್ಮಾಂಗನೆ | ಧರಿಪ ಭಂಜನ ಖಳ ಪೂರ್ವ ದೇವತೆಗಳ |
ಹರಿ ವಿಶ್ವ ಅಭಿನವ ಪ್ರಾಣೇಶ ವಿಠಲನ | ಚರಣ ವಾರಿಜ ಭೃಂಗ
ನತದಯಾಪಾಂಗ ||
||ಧೃವತಾಳ ||
ಕಾಮಿತಪ್ರದ ರಘು | ರಾಮ ಚಂದ್ರನ ಪಾದ | ತಾಮರಸಾಳಿ ಶಿಖಿ ಸೋಮಾರ್ಕ
ನಯನನೆ | ಭೀಮ ವಿಕ್ರಮ ಸುತ್ರಾಮಾದಿ ಸುರವಂದ್ಯ | ವ್ಯೋಮ ಕೇಶನೆ ಭವ
ವಾಮ ದೇವ | ಭೂಮಿಜ ವೈರಿ ಸಖ ಭೂಮಿರಥನೆ ನಿನ್ನ | ನಾಮ
ಸುಧೆಯನುಣಿಸು ಕಾಮಾರಿಯೆ | ರಾಮ ನಾಮಾಭಿನವ ಪ್ರಾಣೇಶನ ವಿಠಲನ |
ಯಾಮ ಯಾಮಕೆ ಭಜಿಸಲಾ ಮನ ಪ್ರೇರಿಸು ||
||ಆದಿತಾಳ||
ಕಲಿಯುಗ ಸದ್ಧರ್ಮಖಿಲವಾಗಿ ಸಜ್ಜನರು | ತೊಳಲುತ ಬಳಲುತ ಹಲಬು
ತಲಿರುತಿರೆ | ಇಳೆಯೊಳಗುದಿಸಿದೆ ಮುದಮುನಿ ಎನಿಸಿದೆ | ಕಲುಷ
ಮತಗಳನೆಲ್ಲಾ ನೆಲಸಮ ಮಾಡಿದೆ | ಚಲುಗ್ರಂಥ ವಿರಚಿಸಿ ಚಲು
ಪಂಥ ತೋರಿದೆ | ಜಲಧಿ ತಟದಿ ಉಡುಪಿಯ ಸುಕ್ಷೇತ್ರದಿ | ನೆಲಸಿದ
ಸ್ಥಾಪಿಸಿ ಯದುವರ ಕೃಷ್ಣನ | ಚಲುವಭಿನವ ಪ್ರಾಣೇಶ ವಿಠಲನ |
ಪಲ್ಲವ ಪದಾರ್ಚಿಸಿದ ಅಲವ ಬೋಧಾರ್ಯ ||
||ಝಂಪೆತಾಳ||
ಕಲಿ ಸಂಕರನ ಪುಟ್ಟು ಕುಂಬಳಕಾಯಿ ಗುರುತು | ಕಲಿಯುಗದೊಳಗೆ ಸೋಹಂ
ಎಂದು ತಿರುಗಿ | ಸಲೆ ಸುಮಾರ್ಗವ ಬಿಡಿಸಿ ಮೋಹಕ ಶಾಸ್ತ್ರವನು | ಇಳಿಯೊಳಗೆ
ಸರ್ವ ಮಿಥ್ಯಾವ ತುಂಬಿದ | ಕುಲವೆಲ್ಲ ಜಾತಿ ಸಂಕರವಾಗಿ ಸ್ವಧರ್ಮ | ವಳಿದು
ಸುರರಿಗೆ ಹವಿಸ್ಸು ಇಲ್ಲದಿರಲು | ಜಲಜ ಸಂಭವಗೆ ಸುಮನಸರು ಮೊರೆ
ಇಡಲಾಗಿ | ಲಲಿತದಿಂದಲಿ ಹರಿಗೆ ಬಿನ್ನೈಸಲು | ಸುಲಭ ಮಹಾ ಸಿರಿ
ವಿಜಯ ವಿಠ್ಠಲನು | ಒಲಿದು ಜಯಾತನುಜಗೆ ಕರೆದು ನೇಮಿಸಿದಾ ||
ಮಹಾಲಕ್ಷ್ಮಿ ಸ್ತೋತ್ರ
ಕ್ಷೀರವಾರಿಧಿ ಸುತೆ ನಾರಾಯಣನ ದಯಿತೆ | ಈರೇಳು ಲೋಕ ಮಾತೆ
ಗತಿ ಪ್ರದಾತೆ | ಶ್ರೀ ರಮಾ ಶ್ರೀಶಾಂತಿ ಕೃತಿ ಜಯಾ ಮಾಯಾ ಲಕ್ಷ್ಮೀ |
ಶ್ರೀರಜ ಶ್ರೀಸೀತೆ ಸುರವಿನುತೆ | ಮೂರು ರೂಪಗಳಿಂದ ಮೂರು ಜೀವಿಗಳಿಗೆ |
ಮೂರು ಗತಿಯನ್ನೀವ ಶ್ರೀ ಭೂ ದುರ್ಗಾ | ನೀರಜ ಅಭಿನವ ಪ್ರಾಣೇಶ ವಿಠ್ಠಲನ |
ಚಾರು ಚರಣಾಬ್ಜಾಳಿ ನಾರಿಕುಲ ಮೌಳಿ ||
||ಅಟ್ಟತಾಳ||
ಕನಕ ಸಹೋದರಿ ಭೀಷ್ಮಕ ಕುವರಿಯೆ | ದನುಜನ ಅಣ್ಣನ ಛಲಿಸಿದ ಮಣಿಯಾದೆ |
ಮನುಜನ ವಂಚಿಸಿ ಮುರಹರನೈದಿದೆ | ಧನು ಕೊಂಡು ಶಕ್ರನರನೊಳು ಕಾದಿದೆ |
ದನುಜ ಯುಗದಿ ಮಹಾರಾಷ್ಟ್ರದಿ ನೆಲೆಸಿದೆ | ವನಜಾಕ್ಷ ಅಭಿನವ ಪ್ರಾಣೇಶ
ವಿಠ್ಠಲನ ಗುಣ ರೂಪ ಕ್ರಿಯೆಗಳ ತುತಿಸಿ ಹಿಗ್ಗುವ ದೇವಿ ||
||ಜತೆ||
ಕರೆಸಿದೀ ಕವಿ ಎಂದು ಹರಿದಾಸನೆಂತೆಂದು |
ಖರೆಯೆನಿಸು ಅಭಿನವ ಪ್ರಾಣೇಶವಿಠಲ ||
||ಮಟ್ಟತಾಳ||
ಕೋಲಜಕೂಲದ ಆಲಯವಾಸರಿಂ | ದೇಳನೆ ಯತಿ ಎನಿಸಿ ಕಾಲರಾಮರಾಜ್ಯ |
ಪಾಲಿಸಿ ವಿಭವದಲಿ ಮೂಲರಾಮ ಚರಣ | ಊಳಿಗವನು ಗೈದ ಶೀಲ
ಸುಗುಣಮಣಿಯೇ | ಕಲಾಭಿನವ ಪ್ರಾಣೇಶವಿಠಲ ಪಾದ | ಕೀಲಾಲಜ ಮಧುಪ
ಲಾಲಿಸು ಬಿನ್ನಪ ||
||ಮಟ್ಟತಾಳ||
ಕರ್ನಾಟಕದಲ್ಲಿ ಧರಿಸುರವಂಶದಲಿ | ಗಿರಿರಾಜನ ವರದಿ ವೈಣಿಕ ಮನೆತನದಿ |
ಧರೆಯೊಳುದಿಸಿ ಬೆಳೆದ ಶರಧಿಜ ಸಿತನಂತೆ | ಸರ್ವ ಮೂಲ ಗ್ರಹಿಸಿ ಪಂಡಿತ
ವರನೆನಿಸಿ | ಗುರುವರ ಸುಧಿಯೀಂದ್ರ ಕರ ಕಮಲಗಳಿಂದ | ತುರ್ಯಾಶ್ರಮ ವಹಿಸಿ
ರಾಘವೇಂದ್ರರೆನಿಸಿ | ಹರಿಮತ ಶರನಿಧಿಗೆ ರಾಕಾಬ್ಜನು ಎನಿಸಿ | ದುರುಳ
ಮತೇಂಧನಕೆ ಸುರಮುಖ ನೆನಿಸಿ | ಮೆರೆದನು ಶತಕಾಲ ಧರೆಯೊಳು ವಿಭವದಲಿ |
ಹರಿ ರಘು ಅಭಿನವ ಪ್ರಾಣೇಶ ವಿಠಲನ ಚರಣದೂಳಿಗಕಾರ
ಗುರುಸಾರ್ವಭೌಮ||
||ಮಟ್ಟತಾಳ||
ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ | ಮೃಡನುತ ಗೋವಿಂದ
ಜಡದ ಹರಿವಾಣದಲ್ಲಿ | ಕಡಲಿ ಸಕ್ಕರೆ ಬೆರೆಸಿ ಲಡ್ಡುಗೆಯ ಮಾಡಿದ | ಸಡಗರದ
ಭಕ್ಷ್ಯ ಪಾಯಸ ಘೃತ ನೀಡೆ | ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು |
ಕಡುಗೋಲು ನೇಣು ಪಿಡಿದುಡುಪಿಂದ | ಉಡುರಾಜ ಮುಖ ನಮ್ಮ ವಿಜಯ
ವಿಠಲನು ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ||
||ಮಟ್ಟತಾಳ||
ಕರುಣಿಕ ಮನೆತನದಿ ಹರಸೂರಿನಲ್ಲಿ ಜನಿಸಿ | ಬರಮ ಧರ್ಮಕರ್ಮ
ನಿರುತಾಚರಿಸುತಲಿ | ಹರಿಗುರುಗಳ ಯಜನ ಹವನ ಸು ಬಲಿಹರಣ | ಧರಿಸುರ
ಸತ್ಕಾರನಿತ್ಯದಿ ಗೈಯುತಾ | ಹಿರಿಯ ಕವನಗಳ ಪದ್ಯ ಸುಳಾದಿಗಳ | ಮುರಹರ
ಚರಿತೆಗಳ ಪಾಡುತ ನರ್ತಿಸುತ | ವರ ತಂಬ್ರೂಹಿಯನು ನುಡಿಸುತ ಭಜಿಸುತ
ಗುರು ಸಮ್ಮಖದಲ್ಲಿ ಹರುಷದಿ ನಲಿಯುತ | ಶರಧರ ಅಭಿನವ ಪ್ರಾಣೇಶವಿಠಲನ
ಕರುಣದಿಂದರುತಿರ್ದಶ್ರೀರಾಮರಾಯ ||
||ತ್ರಿವಿಡಿತಾಳ||
ಕೋಸಿಗಿದಾಸರ ಗುರುಜಗನ್ನಾಥರ | ಆ ಶುಭಚರಣಾಬ್ಜಗಳ ಸೇವಿಸಿ |
ವಾಸುದೇವಾಂಕಿತ ಆನಂದ ವಿಠಲೆಂಬ | ಲೇಸಾಗಿ ಹರಿದಾಸಗುರುತು ಪಡೆದು
ಅಶುಕವನ ಸಕೀರ್ತನ ವಿಚಾರಿಸಿ | ಕೀಶ ಮರುತ ಮತ ಗುರುಗಳ ಭಜಿಸಿ |
ಮಾಸಲೇಶ ಅಭಿನವ ಪ್ರಾಣೇಶ ವಿಠಲನ | ದಾಸವರ್ಗದಿ ನಲಿವ ಆನಂದಾರ್ಯ ||
||ಅಟ್ಟತಾಳ||
ಕರಣಗಳಲಿ ಹರಿವ್ಯಾಪಕನೆಂತೆಂಬ | ಪರಿಯನ್ನು ತಿಳಿದಿಪ್ಪ ನರನುಡಿದ ವಾಕ್ಯ |
ಪರಮೇಷ್ಠಿ ಮೊದಲಾದ ಸುರರು ಸಹಿತನಾದ | ಸಿರಿಪತಿ ವಹಿಸುವನೆಂದು
ಪೇಳುತಲಿರೆ | ಕರುಣ ಮುನಿಗಳಾದ ಸುರರಿತ್ತ ವರಗಳ | ಹರಿಸತ್ಯ
ಮಾಡುವನೆಂಬದಚ್ಚರವೇನೋ | ಶರಣನ್ನ ಮನೋರಥ ಪೂರ್ಣ ಮಾಡುವುದಕ್ಕೆ |
ಕೊರತೆ ನಿನಗಾವದು ಕೋಮಲಾಂಗಿಯೇ ನಿನ್ನ | ಚರಣದ್ವಂದ್ವಕೆ ನಮಿಸಿ
ಶೆರಗೊಡ್ಡಿ ಬೇಡುವೆ | ತ್ವರಿತದಿಂದಲಿ ಈ ವರವನ್ನೆ ಪಾಲಿಸು | ಸುರಪಕ್ಷಪಾಲ
ಗುರು ವಿಜಯ ವಿಠಲ ನಿಮ್ಮ | ಕರವಶವಾಗಿಪ್ಪ ಆವಾವ ಕಾಲದಲಿ ||
||ಅಟ್ಟತಾಳ||
ಕ್ರೋಧವೆಂಬ ಮಹಾಮಾದಿಗ ನನ್ನನ್ನು | ಬಾಧೆಬಡಿಸುತತಿ ಖೇದವ
ಕೊಡುವನು | ಸಾಧು ಜನರಕೂಡ ಕಾದಿಮತ್ಸರಿಸುವೆ | ಮೋದಮುನಿಯ
ಮತದ ಹಾದಿಯ ತೊರೆದೆನಯ್ಯ | ಬೀದಿಯೊಳ್ ಚರಿಸುತ್ತ ಬಳಲುತ್ತಿರುವೆನಯ್ಯ |
ಶ್ರೀದಾಭಿನವ ಪ್ರಾಣೇಶ ವಿಠಲರೇಯ | ಮೋದಮತಿಯನಿತ್ತು ಮೋದಬಡಿಸು
ಜೀಯಾ ||
||ಆದಿತಾಳ||
ಕಾಲಯುಕ್ತಾಬ್ಜದಿ ಆಶ್ವೀಜಸಿತದ್ವಿತಿ | ಕಾಲನ ಕರೆಯ ಆಲಿಸಿ ತವಕದಿ |
ನಾಲವತ್ತೆಂಟನೇ ವರುಷದಿ ಹರುಷದಿ | ಶ್ರೀಲಕುಮೀಶನ ಗುರುಪದ ಧೇನಿಸಿ |
ಕಾಲನ ಸ್ಮರಿಸುತ ಲಯವನು ಚಿಂತಿಸಿ | ಬಾಲಕ ಸತಿಸುತರೆಲ್ಲರ ತೊರೆಯುತ |
ಮಾಲ್ಮೇಲ್ಮಟ್ಟದ ಹರಿಶಕಟೇರುತ | ಪಾಲಕ ಅಭಿನವ ಪ್ರಾಣೇಶ ವಿಠಲನ ಮೇಲು
ಸಾಮೀಪ್ಯವನು ಪಡೆದ ಆನಂದ ||
||ಜತೆ||
ಕಾಮಾದಿಖಳರಿಂದ ಉಳಿಸಿ ರಕ್ಷಿಸು ದೇವ |
ರಾಮಾಭಿನವಪ್ರಾಣೇಶ ವಿಠಲ ಜೀಯ ||
||ಆದಿತಾಳ||
ಕಲಿಯುಗ ಸದ್ಧರ್ಮಖಿಲವಾಗಿ ಸಜ್ಜನರು | ತೊಳಲುತ ಬಳಲುತ ಹಲಬು
ತಲಿರುತಿರೆ | ಇಳೆಯೊಳಗುದಿಸಿದೆ ಮುದಮುನಿ ಎನಿಸಿದೆ | ಕಲುಷ
ಮತಗಳನೆಲ್ಲಾ ನೆಲಸಮ ಮಾಡಿದೆ | ಚಲುಗ್ರಂಥ ವಿರಚಿಸಿ ಚಲು
ಪಂಥ ತೋರಿದೆ | ಜಲಧಿ ತಟದಿ ಉಡುಪಿಯ ಸುಕ್ಷೇತ್ರದಿ | ನೆಲಸಿದ
ಸ್ಥಾಪಿಸಿ ಯದುವರ ಕೃಷ್ಣನ | ಚಲುವಭಿನವ ಪ್ರಾಣೇಶ ವಿಠಲನ |
ಪಲ್ಲವ ಪದಾರ್ಚಿಸಿದ ಅಲವ ಬೋಧಾರ್ಯ ||