ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮುಂಡಿಗೆಗಳು

 

 

 

1) ಇಂದು ನೀ ಕರೆದು ತಾರೆ

ಇಂದು ನೀ ಕರೆದು ತಾರೆ

ಇಂದು ನೀ ಕರೆದು ತಾರೆ | ಬಾರದೆ ಶ್ರೀ ಗೋ -

ವಿಂದ ತಾ ಮುನಿದಿಹರೆ | ವಿರಹ ಬೇಗೆಯಲಿ 

ಬೆಂದು ಸೈರಿಸಲಾರೆ || ಸಖಿಯೆ ನೀನು

ತಂದು ತೋರೆ |||| ಪ ||

 

ನೊಂದರೂ ಮನದಂದ ಕೊಡುವನು

ನಂದನಂದನನೆಂದು ಸೈರಿಸಿ 

ಎಂದಿಗಗಲಿರಲಾರೆ ಕರೆತಂ

ದೊಂದುಗೂಡಿಸೆ ಮಂದಗಮನೆ || ಅ.ಪ ||

 

ಕಾಲಿಲ್ಲದೆಲೆ ಆಡುತ್ತ | ವೇದ ತಂದಿತ್ತ

ಕಾಲಿಲ್ಲದವನ ಪೊತ್ತ | ಅಮೃತ ತಂದಿತ್ತ

ಕಾಲತೂಗಿ ನೋಡುತ್ತ | ಗಜ  à²‰à²¨à³à²®à²¤à³à²¤ ||

ಕಾಲಿನಿಂದಲಿ ಕೊಲುವ ರೂಪದಿ 

ಕಾಲಿನಲಿ ರಿಪುವನ್ನು ಸೀಳಿದ

ಕಾಲಿನಲಿ ತಾನಳೆದ ಮೇದಿನಿ

ಕಾಲಿನಲಿ ತಾ ನಡೆದ ಭಾರ್ಗವ 

ಕಾಲಿನಲಿ ವನವಾಸ ಪೋದನ 

ಕಾಲಿನಲಿ ಕಾಳಿಯನ ತುಳಿದನ 

ಕಾಲಿನಲಿ ತ್ರಿಪುರರನು ಗೆಲಿದನ 

ಕಾಲಿಗೆರಗುವೆ ತೇಜಿ ರೂಢನ  || || 1 ||

 

ಎವೆಯಿಕ್ಕದೆ ನೋಡಿದ | ತಲೆಯ ತಗ್ಗಿಸಿ

ಕವಲುದಾಡೆಯೊಳಾಡಿದ | ಕಂಬದಿ ಮೂಡಿ

ತವಕದಿಂದಲಿ ಬೇಡಿದ | ಭೂಭುಜರ ಕಾಡಿದ ||

ಶಿವನ ಬಿಲ್ಲನು ಮುರಿದ ದೇವಕಿ 

ಕುವರ ನಗ್ನದಿ ಹಯವನೇರಿದ 

ವಿವಿಧ ವಾಧರ್ಿಯೊಳಾಡಿ ಗಿರಿಧರ

ಸವಿದು ಬೇರನು ಬಾಲಗೊಲಿದನು 

ಅವನಿ ಬೇಡುತ ಕೊಡಲಿ ಪಿಡಿದನ

ಸವರಿ ದಶಶಿರ ಬೆಣ್ಣೆ ಕದ್ದನ

ಯುವತಿಯರ ವ್ರತಗೆಡಿಸಿ ಕುದುರೆಯ

ಹವಣುಗತಿಯಲಿ ಏರಿದಾತನ || || 2 ||

 

ವರ ಮತ್ಸ್ಯ ನಗಧರನ | ಸೂಕರ ಸಿಂಹನ

ತಿರುಕ ತಾಯ್ತರಿದವನ | ವರವಿತ್ತು ಶಬರಿಗೆ

ತುರುಗಾಯ್ದ ನಿವರ್ಾಣನ | ಅಶ್ವಾರೂಢನ ||

ಚರಿಸಿ ಹೊರೆಯನು ಹೊತ್ತ ಕ್ರೂರನ

ಉರವ ಸೀಳಿದ ವಿಪ್ರ ನೃಪರರಿ

ಧರಣಿಜೆಯ ವರಕೃಷ್ಣ ಗಗನದಿ 

ಪುರವ ದಹಿಸಿದ ತೇಜಿರೂಢನ

ಮೆರೆವ ಜಲಜ ಕೂರ್ಮ ವರಹ 

ನರಹರಿ ದ್ವಿಜ ಕೊರಳ ಕೊಯ್ದನ

ಧರಣಿಸುತೆ ವರಶೌರಿ ಬುದ್ಧನ

ತುರಗವೇರಿದ ಆದಿಕೇಶವ || || 3 ||

 

2)ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನು 

 

ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನು

ನೀನೆ ವಿಚಾರಿಸಿ ಇಬ್ಬರ ನ್ಯಾಯವ || ಪ ||

 

ಮಗಳಿಗೆ ಮಗನಾದ ಮಗಳಿಗಳಿಯನಾದ 

ಮಗಳ ಗಂಡಗೆ ಭಾವ ಮಾವನಾದುದ ಕೇಳಿ

ನಾನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ|| 1 ||

 

ವೈರಿಗೆ ವೈರಿಯಾದ ವೈರಿಗೆ ಸುತನಾದ

ವೈರಿಗಂಡಗೆ ತನ್ನ ಮಗಳ ಕೊಟ್ಟುದ ಕೇಳಿ 

ನಾನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ || 2 ||

 

ಆನೆ ಬಿದ್ದರ ತನ್ನ ಗ್ಯಾನದಿಂದೇಳುವುದು 

ಏನುಮಾಡಿದರು ಅದರ ಭಾವ ಹಿಂಗದು 

ಜ್ಞಾನವಂತ ಕಾಗಿನೆಲೆಯಾದಿ ಕೇಶವನೆ || 3 ||

 

 

3)ಎಂದೆಂದು ಇಂಥ ಚೋದ್ಯವ ಕಂಡಿದ್ದಿಲ್ಲವೋ

 

ಎಂದೆಂದು ಇಂಥ ಚೋದ್ಯವ ಕಂಡಿದ್ದಿಲ್ಲವೋ|| ಪ ||

 

ಅಂಗಡಿ ಬೀದಿಯೊಳೊಂದು ಆಕಳ ಕರು ನುಂಗಿತು

ಲಂಘಿಸಿದ ಹುಲಿಯ ಕಂಡ ನರಿಯು ನುಂಗಿತು|| 1 ||

 

ಹುತ್ತದೊಳಾಡುವ ಸರ್ಪ ಮತ್ತಗಜವ ನುಂಗಿತು

ಉತ್ತರ ದಿಶೆಯೊಳು ಬೆಳದಿಂಗಳಾಯಿತಮ್ಮ|| 2 ||

 

ಯೋಗಮಾಗರ್ಿ ಕಾಗಿನೆಲೆಯಾದಿಕೇಶವರಾಯ 

ಭಾಗವತರ ಬೆಡಗಿದು ಬೆಳದಿಂಗಳಾಯಿತಮ್ಮ|| 3 ||

 

4)ಏನೆ ಮನವಿತ್ತೆ ಲಲಿತಾಂಗಿ

 

ಏನೆ ಮನವಿತ್ತೆ ಲಲಿತಾಂಗಿ | ಅಸ

ಮಾನ ಗೋವಳ ಕುಲವಿಲ್ಲದವನೊಳು || ಪ ||

 

ಮಗಗೆ ಮೈದುನನಾದ ಮಗಳಿಗೆ ಪತಿಯಾದ 

ಮಗಳಿಗಳಿಯನಾದ ಅಳಿಯಗಳಿಯನಾದ|| 1 ||

 

ಮಗಳ ಮಗಗೆ ಮೈದುನನಾಗಿ ಮಾವನ

ಜಗವರಿಯಲು ಕೊಂದ ಕುಲಗೇಡಿ ಗೋವಳ || 2 ||

 

ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ

ಚಿತ್ತ ಒಲಿದು ಚಿನ್ನ ಆದಿಕೇಶವನೊಳು || || 3 ||

 

5)ಓಹೋ ಎನ ಜೀವ ಮೈಯೆಲ್ಲ ನವಗಾಯ

 

ಓಹೋ ಎನ ಜೀವ ಮೈಯೆಲ್ಲ ನವಗಾಯ

ಗಾಯ ಕಟ್ಟುವರಿಲ್ಲ ಗಾಳಿಹಾಕುವರಿಲ್ಲ || ಪ ||

 

ಮಾಡಿಲ್ಲ ಮಳಿಯಿಲ್ಲ ಮರದ ಮ್ಯಾಲೆ ನೀರ ಕಂಡೆ

ಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ|| 1 ||

 

ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲ

ಹೊತ್ತುಕೊಂಡು ತಿರುಗಿದೆ ರೊಕ್ಕದ ಪ್ರಾಣಿಯನ್ನು || 2 ||

 

ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣ

ಒಡನೆ ಕರೆದಾರ ಕರಿತೈತಿ ರಂಜಣಿಕಿ ಹಾಲಣ್ಣ|| 3 ||

 

ಮೂರು ಮೊಳದಾ ಬಳ್ಳಿಗೆ ಆರು ಮೊಳದಾ ಕಾಯಣ್ಣ

ಆರು ಹತ್ತರ ಮೊಳದ ಕಾಯಿ ಕೊಯ್ವ ಕುಡುಗೋಲಣ್ಣ|| 4 ||

 

ಊರಮುಂದೆ ಹಿರಣ್ಯಕನ ಕೊರಳ ಕೊಯ್ವದ ಕಂಡೆ

ಕೊರಳ ಕೊಯ್ವುದ ಕಂಡೆ ರಕುತವ ಕಾಣಲಿಲ್ಲ|| 5 ||

 

ಕಾಗಿನೆಲೆಯ ಕನಕದಾಸ ಹೇಳಿದಂಥ ಮುಂಡಿಗೆಯ 

ಮಿಗೆ ಒಳಹೊರಗೆಲ್ಲ ಬಲ್ಲ ಬಾಡದಾದಿ ಕೇಶವರಾಯ || 6 || 

 

6)ಕಾವನಯ್ಯನ ಕಳುಹು ರಮಣಿ

 

ಕಾವನಯ್ಯನ ಕಳುಹು ರಮಣಿ|| ಅ ||

ಕೋವಿದರು ಪಡೆದ ಬಡದಾದಿ ಕೇಶವನ || ಅ.ಪ. ||

 

ಚಂದ್ರವಂಶದ ರಾಯನನುಜಸಖನಾದವನ

ಚಂದ್ರವೈರಿಯ ಮೇಲೆ ಪವಡಿಸಿದನ

ಚಂದ್ರಮನ ಸೋದರಿಯ ಕೈಯ ಪಿಡಿದಂಥವನ

ಚಂದ್ರದಾಮನ ಮನೆಗೆ ಕಳುಹೆ ಕಮಲಾಕ್ಷಿ|| 1 ||

 

ಕಮಲನಾಭನ ಕಮಲಸಖಕೋಟಿತೇಜನ

ಕಮಲಕೋರಕದಿ ಜನಿಸಿದನಯ್ಯನ 

ಕಮಲವನು ಕರದಲ್ಲಿ ಪಿಡಿದಿಹನ ಬೇಗದಲಿ 

ಕಮಲವದದನನ ಮನೆಗೆ ಕಳುಹೆ ಕಮಲಾಕ್ಷಿ|| 2 ||

 

ಬಾಲತನದಲಿ ಬಹಳ ಅಸುರರನು ಸೀಳಿದನ

ಲೀಲೆಯಿಂದಲಿ ಭಕ್ತರನು ಸಲಹುತಿಹನ 

ನೀಲಮೇಘಶ್ಯಾಮ ಭಾಗ್ಯಪುರದಲಿ ನಿಂದ 

ಶ್ರೀಲತಾಂಗಿಯ ರಮಣ ಆದಿಕೇಶವನ|| 3 ||

 

 

7) ಕೇಶವ ಎನ್ನಿರೋ ಕ್ಲೇಶನಾಶನನ

 à²•ೇಶವ ಎನ್ನಿರೋ ಕ್ಲೇಶನಾಶನನ | ನನ್ನ

ಆಸೆಪಟ್ಟವರಿಗೆ ಅಧಿಕ ಫಲವೀವನ|| ಪ ||

 

ಸತಿಯ ತಮ್ಮನ ಸುತ ಸೋದರನಾದನ

ಮತಿವಂತ ಮಾವನ ಮಗಳ ತಂದಾತನ

ಮತ ಪಿಡಿದ ಮಾತೆಯ ಮೊಮ್ಮಗನ ಕೊಂದನ

ಕ್ಷಿತಿಯುತನಾಗಿ ಕರಿಯ ಕಾಯ್ದಾತನ|| 1 ||

 

ದಶಮುಖನಸಿಯ ಪೆಸರ ಭಕ್ತಗೊಲಿದನ

ಅಸದಳರೆನಿಪ ರನ್ನೆರೊಡಗೂಡಿದಾತನ

ಕುಸುಮಕೋದಂಡ ಗಂಡರ ಗಂಡನಾದನ

ಎಸೆವ ಬಾಣಕೆ ತನ್ನ ಎದೆಯಾಂತು ನಿಂತನ|| 2 ||

 

ದಾಸರ ಹೃದಯದೊಳಗೆ ನೆಲೆಸಿಪ್ಪನ

ದೇಶವರಿಕೆಯಲ್ಲಿ ನಯನವುಂಟಾದನ

ಮೋಸದಿಂ ಮುಂದಲೆ ತುಳಿದು ಭಂಗಿಸಿದನ

ದೇಶಾಧಿಪತಿ ಕಾಗಿನೆಲೆಯಾದಿ ಕೇಶವನ || 3 ||

 

8)ಕೆಂಪುಮೂಗಿನ ಪಕ್ಷಿ 

 

ಕೆಂಪುಮೂಗಿನ ಪಕ್ಷಿ ತಂಪಿನೊಳಿರುವುದು

ನೆಂಪು ಬಲ್ಲವರು ಪೇಳಿ|| 1 ||

 

ಹಂಪೆಯ ವಿರೂಪಾಕ್ಷಲಿಂಗನಲ್ಲಿ 

ಝಂಪಿಯನಾಡುತಿದೆ || || ಅ.ಪ. ||

 

ಆರುತಲೆಯು ಹದಿನಾರು ಕಣ್ಗಳುಂಟು

ಮೂರು ಮೂರು ನಾಲಗೆ

ಬೇರೆ ಹನ್ನೆರಡು ಕಣ್ಣು ಕಿವಿಗಳುಂಟು

ಸೇರಿತು ತೆಂಕಲಾಗೆ|| 1 ||

 

ಬಲೆಯ ಬೀಸಿದರು ಸಿಕ್ಕದು ಆ ಮೃಗ

ಜಲದೊಳು ತಾ ನಿಲ್ಲದು 

ನೆಲನ ಮೇಲಿರುವುದು ನಿಂತರೆ ಸಾವುದು

ಕುಲದೊಳಗಾಡುತಿದೆ|| 2 ||

 

ಸಕಲ ಕಲೆಯ ಬಲ್ಲ ಸೀತಳ ಮಲ್ಲಿಗೆ 

ಬೇರೆಬೇರೆನಬಹುದು

ಚೆನ್ನಕೇಶವನಲ್ಲಿ ಕೃಪೆಯುಂಟಾದರೆ 

ಅಲ್ಲುಂಟು ಇಲ್ಲಿಲ್ಲವೆ|| || 3 ||

 

9)ನಾಮ ಮುಂದೋ ಸ್ವಾಮಿ 

 

 à²¨à²¾à²® ಮುಂದೋ ಸ್ವಾಮಿ ವಿಭೂತಿ ಮುಂದೋ || ಅ ||

 

ಭೂಮಿ ಆಕಾಶ ಪೊತ್ತೋ ಆಕಾಶ ಭೂಮಿಯ ಪೊತ್ತೋ

ಭೂಮಿಯ ಮುಂದೋ ಆಕಾಶ ಮುಂದೋ ಸ್ವಾಮಿ|| 1 ||

 

ತತ್ತಿ ಹಕ್ಕಿಯ ಪೊತ್ತೋ ಹಕ್ಕಿ ತತ್ತಿಯ ಪೊತ್ತೋ

ತತ್ತಿಯು ಮುಂದೋ ಹಕ್ಕಿಯು ಮುಂದೋ ಸ್ವಾಮಿ || 2 ||

 

ಬೀಜ ವೃಕ್ಷವ ಪೊತ್ತೋ ವೃಕ್ಷ ಬೀಜವ ಪೊತ್ತೋ

ಬೀಜವು ಮುಂದೋ ವೃಕ್ಷವು ಮುಂದೋ ಸ್ವಾಮಿ || 3 ||

 

ಗಂಡ ಹೆಂಡಿರ ಪೊತ್ತೋ ಹೆಂಡಿರು ಗಂಡನ ಪೊತ್ತೋ

ಗಂಡನು ಮುಂದೋ ಹೆಂಡಿರು ಮುಂದೋ ಸ್ವಾಮಿ|| 4 ||

 

ಕನಕನು ಹೇಳಿದ ಬೆಡಗಿದು ಕಂಡವರೆಲ್ಲರು

ಮನದಲಿ ಚಿಂತಿಸಿ ಮಥಿಸಿ ನವನೀತ ಕಾಣಿರೋ || 5 ||

 

10) ನಾರಾಯಣ ಎನ್ನಿ ನಾರದವರದನ

 

ನಾರಾಯಣ ಎನ್ನಿ ನಾರದವರದನ

ನಾರಾಯಣ ಎನ್ನಿರೋ || ವೇದ

ಪಾರಾಯಣನಾಗಿ ಕರಿದು ಕಾಯ್ವಾತನ

ನಾರಾಯಣ ಎನ್ನಿರೋ || ಪ ||

 

ಶಿವನೊಳು ಕೂಡಿಯೆ ಶಿವವರ್ಣನಾದನ

ಶಿವನ ತುರುಬಿನೊಳು ಶಿವನ ಕಟ್ಟಿಸಿದನ ||

ಶಿವನ ಹರಿಯನು ಮಾಡಿ ಸೊಸೆಯನು ತಂದನ

ಶಿವದರುಶನವಾಗಿ ಶಿವನುತಾನಾದನ|| 1 ||

 

ಗರುಡವಾಹನನಾಗಿ ಗಜವನು ಪೊರೆದನ 

ಗರುಡನ ಗಿರಿಯೊಳು ಕಡಲ ತಂದಾತನ ||

ಗರುಡನ ಮಾತೆಯಣ್ಣನ ಮುಖಪಡೆದನ

ಗರುಡ ಗಂಧರ್ವಪುರದಿ ಮೆರೆದಾತನ || 2 ||

 

ಸ್ವರ್ಣವಾಹನನಾಗಿ ಕರ್ಣಕುಂಡಲಧರನ

ಸ್ವರ್ಣಪಂಕದೊಳು ಶಿವನಪ್ಪಿಕೊಂಡನ ||

ಸ್ವರ್ಣಖಚಿತವಾದ ರಥದೊಳು ಪೊಕ್ಕನ

ನಿರ್ಣಯವಿದು ಕಾಗಿನೆಲೆಯಾದಿಕೇಶವನ|| 3 ||

 

11 ) ಪರಮಪುರುಷ ನೀನೆಲ್ಲಿಕಾಯಿ

 

ಪರಮಪುರುಷ ನೀನೆಲ್ಲಿಕಾಯಿ|| ಪ ||

ಸರಸಿಯೊಳಗೆ ಕೂಗಿರೆ ಕಾಯಿ |||| ಅ.ಪ.||

 

ಹಿರಿದು ಮಾಡಿದ ಪಾಪ ನುಗ್ಗೇಕಾಯಿ

ಹರಿ ನಿನ್ನ ಧ್ಯಾನ ಬಾಳೇಕಾಯಿ

ಸರುವ ಜೀವರಿಗುಣಿಸಿಯುಂಬದನೆಕಾಯಿ 

ಅರಿಷಡ್ವರ್ಗಗಳೊದಗಿಲಿಕಾಯಿ|| 1 ||

 

ಕ್ರೂರವ್ಯಾಧಿಗಳೆಲ್ಲ ಹೀರೇಕಾಯಿ

ಘೋರದುಷ್ಕೃತಗಳು ಸೋರೇಕಾಯಿ ||

ಭಾರತದ ಕಥೆ ಕರ್ಣ ತುಪ್ಪಿರೆಕಾಯಿ

ವಾರಿಜಾಕ್ಷನೆ ಗತಿಯೆಂದಿಪ್ಪಿರೆಕಾಯಿ|| 2 ||

 

ಮುರಹರ ನಿನ್ನವರು ಅವರೆಕಾಯಿ

ಗುರುಕರುಣಾಮೃತ ಉಣಿಸೆಕಾಯಿ

ವರಭಕ್ತವತ್ಸಲನೆಂಬ ಹೆಸರುಕಾಯಿ

ಸಿರಿಯಾದಿಕೇಶವನಾಮಮೆಣಿಸೆಕಾಯಿ || 3 ||

 

12) ಬಯಲಬಾವಿನೀರಿಗ್ಹೊಂಟಾಳೊಬ್ಬ

 

ಬಯಲಬಾವಿನೀರಿಗ್ಹೊಂಟಾಳೊಬ್ಬ ಬಾಲಿ

ಹರಿಯೋ ಹೊಳಿನೀರಿಗ್ಹೊಂಟಾಳೊಬ್ಬ ಬಾಲಿ || ಅ ||

 

ಕಾಲಿಟ್ಟು ಮೊಗಿಬ್ಯಾಡ ಕೈಯಿಟ್ಟು ಹೊರಬ್ಯಾಡ

ನೀರಿಲ್ಲದೆ ಮನಿಗಿ ಬರಬ್ಯಾಡ || 1 ||

 

ಸತ್ತದ್ದು ತರಬ್ಯಾಡ ಜೀವದ್ದು ಕೊಲಬ್ಯಾಡ

ಬಾಡಿಲ್ಲದೆ ಮನಿಗಿ ಬರಬ್ಯಾಡ|| 2 ||

 

ಕಾಗಿನೆಲಿ ಕನಕದಾಸ ಹಾಕಿದ ಮುಂಡಿಗಿ

ಬಲ್ಲಂಥ ಒಡೆಯರು ಒಡೆದು ಹೇಳಿರಣ್ಣ || 3 ||

 

 

13) ಬಲ್ಲವರು ಪೇಳಿರೈ

 

ಬಲ್ಲವರು ಪೇಳಿರೈ ಭಾವದುಭಯಾರ್ಥ|| ಪ ||

ಎಲ್ಲಜನರಿಗೆ ಸುಸಮ್ಮತವಾದುದೀ  à²¨à²¾à²® || ಅ.ಪ. ||

 

ಚಿತ್ತನಕ್ಷತ್ರದಲಿ ಪುಟ್ಟಿದಾತನ ಸೊಸೆ

ಮೃತ್ಯುವೆಂದೆಣಿಸಿ ಹೊರಡಿಸಿದಾತನ

ಉತ್ತರಾಯಣದೇವನ ಮಗಳಿಗಳುಪಿದನ

ಹೊತ್ತು ಹೋಗದು ಎನಗೆ ತೋರೆ ನಳಿನಾಕ್ಷಿ || 1 ||

 

ಅತ್ತ ಅಣ್ಣನ ಅಗ್ರಜನ ಕೈಯ್ಯಿಂದ 

ಬತ್ತಲೆಗನ ಕರೆಸಿ ಒಲಿಸಿಕೊಂಡನ ||

ಉತ್ತ ಹೊಲದಿ ವೈದರ್ಭನಹನ ತಂಗೆಯ ಕೊಂಡು

ಮುತ್ತೈದೆ ಮಾಡಿ ಮೊಮ್ಮಗನ ಪಡೆದವನ|| 2 ||

 

ಉರಿಯ ಆಸರ ಕಳೆಯೆ ನೆರವನಿತ್ತಾತನ

ಧರೆಯೊಳಗೆ ಮೂವರನು ಗೆಲಿದು ||

ಭೂರಿವಾತರ್ೆಯ ಪಡೆದ ಆ ಮಹಾಮಹಿಮನ

ತೋರೆನಗೆ ಕಾಗಿನೆಲೆಯಾದಿಕೇಶವನ || 3 ||

 

14) ಬಲ್ಲವರು ಪೇಳಿರೈ ಲೋಕದೀ ಹದನು

 

ಬಲ್ಲವರು ಪೇಳಿರೈ ಲೋಕದೀ ಹದನು |

ಪುಲ್ಲಶರನನು ರಂಗ ಪೆತ್ತ ಮಹಿಮೆಯನು || ಪ ||

 

ಗರಿಯುಂಟು ನೋಡಿದರೆ ಪಕ್ಷಿಕುಲ ತಾನಲ್ಲ

ಧರೆಯ ಬೆನ್ನಲಿ ಪೊತ್ತು ಮಡಗಿಕೊಂಡಿಹುದು

ಬರಿಗಾಲ ಭಾರದಲಿ ನಡೆಯಲೊಲ್ಲದು ಮುಂದೆ 

ಎರಡು ಮೆಯ್ಯೊಂದಾಗಿ ಕೂಡಿಸಿಕೊಂಡಿಹುದು || 1 ||

 

ಇಳೆಯಲ್ಲಿ ಒಂದುಪದ ಗಗನದಲಿ ಒಂದುಪದ 

ಕುಲವೈರಿಗಳ ಕೊಂದು ನಲಿದಾಡುತಿಹುದು ||

ಹೊಲದೊಳಗೆ ಜೋಡಗಲಿ ತಿರುಗಾಡುತಿಹುದು ಅದು

ಕಳದೋಳೇಕಂಬುಗಳ ಹರಡಿಕೊಂಡಿಹುದು|| 2 ||

 

ಜನಿಸಿದಾ ಬಳಿಯಲ್ಲಿ ತಾ ಲಜ್ಜೆ ತೊರೆದಿಹುದು 

ಕುಣಿದಾಡುತಿದೆ ಹರಿಯ ತಲೆ ತುರಗವೇರಿ ||

ಕನಕನೊಡೆಯನು ಕಾಗಿನೆಲೆಯಾದಿಕೇಶವನ

ಜನಕೆ ನಿತ್ಯವನು ಪ್ರಸಾದವನು ಕೊಡುತಿಹುದು || 3 ||

 

16) ಬಲ್ಲವರು ಪೇಳಿರೈ ಬಹುವಿಧದ ಚತುರತೆಯ 

 

ಬಲ್ಲವರು ಪೇಳಿರೈ ಬಹುವಿಧದ ಚತುರತೆಯ

ಎಲ್ಲರಿಗು ಸಮ್ಮತವು ಏಕಾಂತವಲ್ಲ || ಪ ||

 

ಕಂಕಣಕೆ ಮೊದಲೇನು ಕಾಮರ್ುಗಿಲ ಕಡೆಯೇನು

ಶಂಕರನ ಹೆಮ್ಮಗನ ಮುಖದ ಸಿರಿಯೇನು ||

ಪಂಕಜಕೆ ಕುರುಹೇನು ಪಾಥರ್ಿವರ ತಪವೇನು 

ಅಂಕಿತಕೆ ಗುರುತೇನು ಅಜನ ಗುಣವೇನು || 1 ||

 

ಕಲಿಗಳಿಗೆ ಕಣ್ಣೇನು ಕಾವನಿರುಹುಗಳೇನು

ಲಲನೆಯೆ ಒಲಿಸುವ ಲೀಲೆ ಮತ್ತೇನು ||

ನೆಲೆಕ ಸಾಕ್ಷಿಗಳೇನು ನ್ಯಾಯದಾ ಪರಿಯೇನು

ಬಲವ ನಿಲಿಸುವುದೇನು ಭಾಗ್ಯವಿದು ಏನು || 2 ||

 

ಸತ್ಯಕ್ಕೆ ಕುರುಹೇನು ಪೃಥ್ವಿಗೆ ಕಡೆಯೇನು 

ಚಿತ್ತವನು ಸೆಳೆದೊಯ್ವ ಕಪಟತನವೇನು ||

ಮತ್ರ್ಯದೊಳು ಕಾಗಿನೆಲೆಯಾದಿಕೇಶವನಂಘ್ರಿ 

ಅತರ್ಿಯಿಂದಲಿ ಕೂಡಿದುದಕೆ ಫಲವೇನು || 3 ||

 

17) ಬಾ ರಂಗ ಎನ್ನ ಮನಕೆ 

 

ಬಾ ರಂಗ ಎನ್ನ ಮನಕೆ | ಭಾವಜನಯ್ಯ 

ಬಾ ರಂಗ ಎನ್ನ ಮನಕೆ|| ಪ ||

 

ಭಾವಮೈದುನ ಬಾರೊ ಮಾವಬೀಗನ ಅನುಜ

ಮಾವನ ಮಡದಿಯ ಮಗಳ ತಂಗಿಯ ಗಂಡ || 1 ||

 

ಅತ್ತೆ ಮೈದುನ ಬಾರೊ ಅತ್ತೆಯ ಮಗಳ ಗಂಡ

ಅತ್ತಿಗೆ ಮೇಲ್ ಅತ್ತಿಗೆ ಮಗಳ ಗಂಡ|| 2 ||

 

ಅಂಬುಧಿಶಯನನೆ ಬಾರೊ ಆದಿಮೂರುತಿ ರಂಗ 

ಕಂಬವೊಡೆದು ಬಂದ ಆದಿಕೇಶವರಾಯ || 3 ||

 

18) ಬಿತ್ತಾಕ ಹೋದಲ್ಲಿ 

ಬಿತ್ತಾಕ ಹೋದಲ್ಲಿ ಬಿಡದೆ ಮಳೆಹೊಡೆದು || ಅ ||

 

ಜತ್ತಿಗಿ ತೊಯ್ದು ಮಿಣಿತೊಯ್ದು

ಜತ್ತಿಗಿ ತೊಯ್ದು ಮಿಣಿತೊಯ್ದು ಉಡಿಯಾಗ 

ಬಿತ್ತಬೀಜ ತೊಯ್ದು ಮೊಳಕೆವೊಡೆದೊ || 1 ||

 

ಬಿತ್ತಲಿಲ್ಲ ಬೆಳೆಯಲಿಲ್ಲ ಮೊಳದುದ್ದ ತೆನೆಹಾಯ್ದೊ

ಮೆತ್ತಗೆ ಬಂದ ಮೇಯಾಕ

ಮೆತ್ತಗೆ ಬಂದ ಮೇಯಾಕ ಗಿಣಿರಾಮ

ಹತ್ತಿರ ನಿಂತ ಬೆರಗಾಗಿ || 2 ||

 

ಕಾಗಿನೆಲೆ ಕನಕಪ್ಪ ಹಾಕಿದ ಮುಂಡಿಗೆ

ತೂಗುತ್ತ ಒಡಚದಿದ್ದರೆ ಓ ಗೆಣೆಯ 

ಆದಿಕೇಶವನ ಪದದಾಣೆ || 3 ||

 

19) ಬೀಜ ಮೂರನು ಬಿತ್ತಿ 

 

ಬೀಜ ಮೂರನು ಬಿತ್ತಿ ಸಾಜಬೀಜವ ತೋರಿ

ರಾಜನಿಗೆ ಪಾಲೊಂದು ರಾಜ್ಯಕ್ಕೆ ಎರಡು || ಪ ||

 

ಬೀಜ ಕದರಿಕೆ ಕಾಲು ಬೀಜ ಬಿಳಿದಕೆ ಮೋರೆ

ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು 

ರಂಜಕದ ಭೇರಿಗೆ ರಾಗ ಮೂವತ್ತೆರಡು

ಕುಂಜರದ ಗಮನೆ ಕೋವಿದನ ಅರಸಿ || 1 ||

 

ಐದುಮಾತಿನ ಮೇಲೆ ವೈದಿಕರೆಂಬವರು 

ಐದುದೀವಿಗೆ ಗಾಳಿ ಬೀಸಲೆಂದು

ಬೂದಿಹಾರಿದ ಮಣ್ಣಮೇಲೆ ಮುದ್ದೆಯ ಕಲಸಿ

ಆದ ಲೋಲರು ಪೇಳಿ ಈ ಸೊಬಗುಬೆಡಗ|| 2 ||

 

ಎರಡು ನಂದಿಯ ಹೊಡಿ ಗರುಡಹೊಲವನು ಉತ್ತು

ಹರಗಿ ಮುಚ್ಚಿದ ಕೋಲನರಿದನೆಂದು 

ಹರಿಯ ದಾಸರ ಕನಕ ಹಾಕಿದೀ ಮುಂಡಿಗೆಯ

ಸಿರಿಯಾದಿ ಕೇಶವನ ಪದದಾಣೆ ಪೇಳಿ|| 3 ||

 

 

20) ಮರ ನುಂಗುವ ಪಕ್ಷಿ 

 

ಮರ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ | ಇದರ 

ಕುರುಹ ಪೇಳಿ ಕುಳಿತಿದ್ದ ಜನರು || ಪ ||

 

ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ

ಗಂಟಲು ಮೂರುಂಟು ಮೂಗಿಲ್ಲವು 

ಕುಂಟಮನುಜರಂತೆ ಕುಳಿತಿಹುದು ಮನೆಯೊಳಗೆ 

ಎಂಟುಹತ್ತರ ಅನ್ನವನು ಭಕ್ಷಿಸುವುದು|| 1 ||

 

ನುಡಿಯುತ್ತಲುಂಬುದು ನಡುನೆತ್ತಿಯಲಿ ಬಾಯಿ 

ಕಡುನಾದದ ಗಾನ ಮಾಡುತ್ತಲಿಹುದು 

ಅಡವಿಯೊಳು ಹುಟ್ಟುವುದು ಅಗಲಿ ಎರಡಾಗುವುದು 

ಬಡತನವು ಬಂದಾಗ ಬಹಳ ರಕ್ಷಿಪುದು || 3 ||

 

ಕಂಜಲೋಚನೆಯರ ಕರದಿ ನಲಿದಾಡುವುದು 

ಎಂಜಲ ತಿನಿಸುವುದು ಮೂರು ಜಗಕೆ 

ರಂಜಿಸುವ ಮಣಿಯ ಸಿಂಹಾಸನದ ಮೇಲಿಪ್ಪ 

ಕುಂಜರವರದಾದಿಕೇಶವನೆ ಬಲ್ಲ || 4 ||

 

21 ) ಮರೆಯದೆ ನೆನೆ ಚಿನ್ಮಯನ

 

ಹರಿನಾರಾಯಣ ಅಚ್ಯುತನ || ಪ ||

 

ಮಗಳ ತಾನೆ ಮದುವೆಯಾದನ

ಮಗಳ ಮಗನ ಮೊಮ್ಮಗನ

ಮಗಳ ಗಂಡನ ಮೇಲೆ ಮಲಗಿದ ಜಾಣನ 

ಮಗಳ ಮಾವನಿಗೆ ಮೈದುನನ|| 1 ||

 

ತಂದೆಗೆ ತಾನೆ ತಂದೆಯಾದವನ 

ತಂದೆಗೆ ತಾಯಿಯ ತಂದವನ 

ತಂದೆಗೆ ಪೂರ್ವದಿ ತಾ ಪುಟ್ಟಿರುವನ

ತಂದೆಗೆ ತಂದೆಗೆ ತಂದೆಯಹನ || 2 ||

 

ರಾಮನ ಸಮರೋದ್ದಾಮನ ಸುಗುಣಾಭಿ

ರಾಮನ ಸಿತಾನಾಯಕನ 

ಕಾಮನ ಪೆತ್ತನ ಕಮಲದಳಾಕ್ಷನ

ಪ್ರೇಮದಿ ನೆಲೆಯಾದಿಕೇಶವನ || 3 ||

 

22)  à²®à³à²¤à³à²¤à³à²—ಳಾ ಹಣ್ಣು ಕಾಯಾದ

 

ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು

ಮತ್ತೊಂದು ಚೋದ್ಯ ಕೇಳಿ

ಚಿತ್ರದ ಹೂವಿನ ಹವಳ ಕಾಯಾಗುವ 

ಅರ್ಥವ ತಿಳಿದು ಪೇಳಿ || 1 ||

 

ಸುಟ್ಟ ಬೀಜವ ಬಿತ್ತಿ ಬೆಳೆಯಬಾರದ ಕಾಯಿ 

ಬೆಟ್ಟದಿ ಸಾರವನು 

ತೊಟ್ಟು ಇಲ್ಲದ ಹಣ್ಣು ಮುಟ್ಟಿ ಕೊಯ್ವನು ಒಬ್ಬ 

ಹುಟ್ಟುಬಂಜೆಯ ಮಗನು || 2 ||

 

ಒಣಗಿದ್ದ ಮರನೇರಿ ಹಣ್ಣುಕಾಯನು ಮಗನು 

ದಣಿಯದೆ ಮೆದ್ದಿಳಿದ 

ರಣದಲ್ಲಿ ತಲೆಹೊಯ್ದು ರುಂಡವು ಬೀಳಲು 

ಹೆಣನೆದ್ದು ಕುಣಿದಾಡಿತು|| 3 ||

 

ಕಣ್ಣಿಲ್ಲದಾತನು ಕಮಡು ಪಿಡಿದ ಮೃಗ

ಕೈಯಿಲ್ಲದಾತನೆಚ್ಚ

ಮಣ್ಣಲಿ ಹೊರಳುವ ಕಾಲಿಲ್ಲದಾತನು

ಗಣ್ಯವಿಲ್ಲದೆ ಪಿಡಿದ|| 4 ||

 

ಎಲ್ಲರೂ ಕೇಳಿರಿ ಕನಕ ಪೇಳಿದ ಮಾತ 

ಸೊಲ್ಲನು ಗ್ರಹಿಸಿಕೊಳ್ಳಿ 

ಬೆಳ್ಳಿಕಣ್ಣಿನವರು ತಿಳಿಯಲಾರದ ಮಾತ 

ಬಲ್ಲಾದಿಕೇಶವನು || 5 ||

 

23) ಮೂವವರೇರಿದ ಬಂಡಿ 

ಮೂವವರೇರಿದ ಬಂಡಿ ಹೊರೆನೆನ್ನದು 

ದೇವಕೀನಂದನನು ತಾನೊಬ್ಬ ಬಲ್ಲ || ಪ ||

 

ಆಡಿ ಪೊತ್ತವನೊಬ್ಬ ನೊಡಿ ತಿರುಗಿದನೊಬ್ಬ

ಓಡಾಡಿದವನೊಬ್ಬ ಈ ಮೂವರು

ಆಡಿದಗೆ ಕಿವಿಯಿಲ್ಲ ನೋಡಿದನ ಮಗ ಪಾಪಿ

ಓಡಾಡಿದವನೊಬ್ಬ ಓಡನಯ್ಯ|| 1 ||

 

ಮಾಯಕಾರನು ಒಬ್ಬ ಕಾಯ ಬಡಲಿಗನೊಬ್ಬ 

ಕಾಯಗಿರಿ ಪೊತ್ತೊಬ್ಬ ಈ ಮೂವರು 

ಮಾಯಕಾರಗೆ ರೂಪ ಕಾಯಬಡಲಿಗ ಚೆಲ್ವ

ಕಾಯಗಿರಿ ಪೊತ್ತವನು ಕಡುಧಮರ್ಿಯು|| 2 ||

 

ಹರಿಯು ಮಾವನ ಕೊಂದ ಹರಿಗಳಿಯ ತಾನೆಂದ

ಹರಿಯು ತನ್ನೊಳಗೆ ತಾ ಹರಿಯೊಳಗೆ ಇಪ್ಪ 

ಹರಿಯ ರೂಪವ ತಾಳಿ ಇರುಳು ದೈತ್ಯನ ಕೊಂದ

ಸಿರಿಧರನು ಕಾಗಿನೆಲೆಯಾದಿಕೇಶವರಾಯ  || 3 || 

 

24) ಮಂಗಳಾರತಿಯ ಪಾಡಿರೆ

 

ಮಂಗಳಾರತಿಯ ಪಾಡಿರೆ | ಮಾನಿನಿಯರು

ಮಂಗಳಾರತಿಯ ಪಾಡಿರೆ|| ಪ ||

 

ಅಂಧಕನನುಜನ ಕಂದನ ತಂದೆಯ 

ಕೊಂದನ ಶಿರದಲಿ ನಿಂದವನ |

ಚಂದದಿ ಪಡೆದನ ನಂದನೆಯಳ ನಲ-

ವಿಂದ ಧರಿಸಿದ ಮುಕುಂದಗೆ || 1 ||

 

ರಥವನಡರಿ ಸುರಪಥವನು ಸುರುಪತವನು ತಿರುಗುವನ

ಸುತನಿಗೆ ಶಾಪವನಿತ್ತವನ |

ಖತಿಯನು ತಡೆದನ ಸತಿಯ ಜನನಿಸುತನ

ಸತಿಯರನಾಳಿದ ಚತುರನಿಗೆ || 2 ||

 

ಹರಿಯ ಮಗನ ಶಿರತರಿದನ ತಂದೆಯ

ಹಿರಿಯ ಮಗನ ತಮ್ಮನ ಪಿತನ

ಭರದಿ ಭುಜಿಸಿದನ ಶಿರದಲಿ ನಟಿಸಿದ 

ವರಕಾಗಿನೆಲೆಯಾದಿಕೇಶವಗೆ || 3 ||

 

25) ಮಂದರಧರಪಾವನ 

 

ಮಂದರಧರಪಾವನ ಇಂದಿರಾರಮಣನ 

ಗೋವಿಂದ ಎನ್ನಿರೋ || ಪ || 

 

ನಂದನಕಂದ ಮುಕುಂದಾಬ್ಧಿಶಯನ

ಗೋವಿಂದ ಎನ್ನಿರೋ || ಅ.ಪ. ||

 

ಗರಳಕಂಧರಸಖನನುಜನ ಕೊಂದನ | ಗೋವಿಂದ ಎನ್ನಿರೋ ||

ಸುರಮುನಿಯನುಜನ ಪಾದವ ಪಿಡಿದನ | ಗೋವಿಂದ ಎನ್ನಿರೋ ||

ಪರಮವೈಷ್ಣವರ ಕೈಲಿ ದಾನಪಿಡಿದನ | ಗೋವಿಂದ ಎನ್ನಿರೋ ||

ಉರಗನ ಮಗಳ ಗಂಡಗೆ ಪ್ರಾಣವಿತ್ತನ | ಗೋವಿಂದ ಎನ್ನಿರೋ|| 1 ||

 

ಸತಿರುಕ್ಮಿಣಿಯ ರಾಧೆಯ ಚುಂಬಿಸಿದಾತನ | ಗೋವಿಂದ ಎನ್ನಿರೋ ||

ಅತಿಶಯದಿಂದಲಿ ಸತಿರೂಪತಾಳ್ದನ | ಗೋವಿಂದ ಎನ್ನಿರೋ ||

ಪಿತನ ಮಾತನು ಶಿರದೊಳಗಾಂತು ನಡೆದನ | ಗೋವಿಂದ ಎನ್ನಿರೋ ||

ಮತಿವಂತನಾಗಿ ಮಾತೆಯ ಶಿರತರಿದನ | ಗೋವಿಂದ ಎನ್ನಿರೋ || 2 ||

 

ಕರೆತರಿಸಿದ ಮಾವನನು ಕೊಂದಾತನ | ಗೋವಿಂದ ಎನ್ನಿರೋ ||

ಧರೆಯನೊಯ್ದಸುರನ ಕಾಯವ ಕಳೆದನ | ಗೋವಿಂದ ಎನ್ನಿರೋ ||

ಈರೇಳುಭುವನವ ಉದರದೊಳಿಟ್ಟನ | ಗೋವಿಂದ ಎನ್ನಿರೋ ||

ಮಾರಜನಕ ಕಾಗಿನೆಲೆಯಾದಿಕೇಶವನ | ಗೋವಿಂದ ಎನ್ನಿರೋ |||| 3 ||

 

26) ಲಟಪಟ ನಾ ಸಟೆಯಾಡುವನಲ್ಲ 

 

ಲಟಪಟ ನಾ ಸಟೆಯಾಡುವನಲ್ಲ

ವಿಠಲನ  à²¨à²¾à²® ಮರೆತುಪೋದೆನಲ್ಲ || ಪ ||

 

ಶೇಷಗಿರಿಯ ಮೇಲೆ ಸವುತೆಯ ಬಿತ್ತ 

ದೇವಗಿರಿಯ ಮೇಲೆ ಅವತಾರವಿತ್ತ 

ಹಾಳೂರಿನೊಳಗೊಬ್ಬ ಕುಂಬಾರ ಸತ್ತ 

ಗೋಕರ್ಣದೊಳಗೊಬ್ಬ ಪರದೇಶಿ ಅತ್ತ|| 1 ||

 

ಆ ಸಮಯದಿ ಮೂರು ರಾಯರ ಕಂಡೆ 

ಕುಪ್ಪಸತೊಟ್ಟ ಕೋಳಿಯ ಕಂಡೆ

ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ

ನರೆಸೂಳೆ ಗೆಯ್ವುದ ಕಣ್ಣಾರೆ ಕಂಡೆ || 2 ||

 

ನುಸಿಯೊಂದು ರೊಟ್ಟಿಯ ಸುಡುವುದ ಕಂಡೆ

ಆಡೊಂದು ಮದ್ದಳೆ ಬಡಿವುದ ಕಂಡೆ 

ಕಪ್ಪೆ ತತ್ತೈ ಎಂದು ಕುಣಿವುದ ಕಂಡೆ 

ಬಡದಾದಿಕೇಶವನ ಕಣ್ಣಾರೆ ಕಂಡೆ || 3 ||

 

 27) ವನಜಾಕ್ಷಿಯರ ಮನದಿಷ್ಟಾರ್ಥವೀವನ

 

ವನಜಾಕ್ಷಿಯರ ಮನದಿಷ್ಟಾರ್ಥವೀವನ ಶ್ರೀ ಕೃಷ್ಣ ಎನ್ನಿರೋ 

ಮನುಮುನಿಜನರನು ಅನುದಿನ ಪೊರೆವನ ಶ್ರೀ ಕೃಷ್ಣ ಎನ್ನಿರೋ|| ಪ ||

 

ಪಣ್ಣಕೊಯ್ದನನುಜಗೆ ಸಹಾಯನಾದನ 

ಸಣ್ಣಸೀರೆಯ ನಲ್ವೆಣ್ಣುರೂಪಾದನ

ಅಣ್ಣನ ವೈರಿಯ ಮಗನ ಕೊಂದಾತನ 

ಬಣ್ಣಿಸಲರಿಯೆ ನಾನಿವನ ಮಹಿಮೆಯ || 1 ||

 

ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ 

ಹೆತ್ತವಳಿರೆ ತಾಯ ಬೇರೆ ಪಡೆದಾà²


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025