ಉಗಾಭೋಗ (ಯ)
ಯದುಕೃಷ್ಣ ಯಾದವ ಕೃಷ್ಣ ಎಂದವರಿಗೆ
ಯದುಕೃಷ್ಣ ಯಾದವ ಕೃಷ್ಣ ಎಂದವರಿಗೆ ಅಂತ್ಯಕಾಲದಲಿ |
ಮೊದಲಿನ ಶಬ್ಧ ಕೇಳಿದ ಮಾತ್ರದಿಂದ ಮುದದಿ ಮುಕ್ತಿಯನಿತ್ತಂತೆ |
ಸದಾ ಭಕುತಿಯ ತನ್ನ ಪಾದದಲ್ಲಿ ಕೊಟ್ಟು |
ಎರಡನೆಯ ನಾಮ ಕೇಳಿದ್ದಕ್ಕೆ ಏನ ಕೊಡಲೆಂದು ನಾಚಿ |
ನಮ್ರ ಸದಯ ಶ್ರಿ ಪುರಂದರ ವಿಠಲ ಸ್ವಾಮಿ |ಮುದದಿ ನಾಮ ಸ್ಮರಣೆಯ ಕೊಟ್ಟು ಕಾಯ್ದ
ಯಶೋಧೆ ಕೋಪಿಸಿಕೊಂಡು
ಯಶೋಧೆ ಕೋಪಿಸಿಕೊಂಡು, ಎದವುತ ಮುಗ್ಗುತ, | ಕೋಲುಕೊಂಡು ಕೊಲ್ಲಹೊಡಿಯಬೇಕೆಂದು |
ಕೋಲು ಕೊಂಡುಬಂದಳು ನಿನ್ನ ಬಳಿಗೆ, ನೀನೆಲ್ಲಿ ಪೊಕ್ಕೆಯೋ,| ಪೇಳೊ ಪುರಂದರ ವಿಠಲ
ಯಂ ಬ್ರಹ್ಮ ವೇದಾಹಂ ಬ್ರಹ್ಮದೇವ
"ಯಂ ಬ್ರಹ್ಮ ವೇದಾಹಂ ಬ್ರಹ್ಮದೇವ" | ಶ್ರೂತಿಶಬ್ಧಬ್ರಹ್ಮವೆಂಬ ವೇದ ಭೋದಿಸಿತಾಗಿ |
ಇಂಥ ಮನುಜರಿಗೆಲ್ಲ ಸದ್ಭಾವವ ಪೇಳ್ವ | ಹೊಂದಿ ಬದುಕು ಹಯವದನನ ಚರಣವ |
ಹೊಂದಿ ಬದುಕೋ ಜೀವ ಹರಿಯ ನಾನೆನ್ನಬ್ಯಾಡ
ಯನಗೆ ನಾನೇ ಸರಿ
ಯನಗೆ ನಾನೇ ಸರಿ ನೊನಗೆನೀನೆ ಹರಿ |ಎನಗಾಣೆ ನೀರ್ವರ್ಗೆ ವನಜನಯನ|
ಧರೆಯನಳುವ ಸಿರಿಯರಸ ನೀನು|ಈ ಧರೆಯೊಳು ನಿರ್ಭಾಗ್ಯರೆರೆಯ ನಾನು|
ಪರಮೇಷ್ಠಿಯನ್ನು ಪಡೆದ ಪರಮ ನೀನು | ಬಲು ದುರಿತಂಗಳಪ್ಪಿದ ದುರುಳನು ನಾನು|
ಪುಣ್ಯವಂತರ ಹೃದಯ ಗಣ್ಯ ನೀನು |ಕೃತಪುಣ್ಯ ಹೀನರಿಗಗ್ರಗಣ್ಯ ನಾನು|
ಪತಿತ ಪಾವನ ನೀನು ಪತಿತ ನಾನು|ಸದ್ಗತಿದಾತ ನೀನು ನಿರ್ಗತಿಕ ನಾನು|
ವರವ್ಯಾಘ್ರಿಗಿರಿಯ ವರದ ವಿಠಲನು ನೀನು | ನಿಜ ಶರಣರ ಚರಣ ಧೋಳೀಪಟಲ ನಾನು ||
ಯಥಾದೇವೋ ತಥಾ ಗುರೌ
ಯಥಾದೇವೋ ತಥಾ ಗುರೌ | ಶ್ರುತಿ ಹೇಳಿದ ಸನ್ಮತಲಿರ್ಯೋ ||ಧ್ರುವ||
ವೃಥಾ ಅಭಾವ ನೀ ಹಿಡುವರೆ |ಸತ್ಸಂಗದಲಿ ನೋಡಿನ್ನಾರೆ | ಚಿತ್ಸುಖ ಹೊಳೆವರು ಕಣ್ಣಾರೆ||೧||
ಮುಗಿಲಲಿ ಮತ್ತೆ ಮುಗಿಲುಂಟು | ಹಗಲಿಗೆ ಹಗಲಾಗುದುಂಟೆ |
ಜಗ ಇಹುದಕೆ ಜಗಮುಂಟೆ | ಹೀಗಾದ ಮ್ಯಾಲೆ ವಸ್ತು ಎರಡುಂಟೆ ||೨||
ಅನುಭವಕಿದರಿಟ್ಟು ಬಾಹುದು | ಖೂನ ಹೇಳವ್ಯಾವು ನೋಡು ವೇದ |
ದೀನ ಮಹಿಪತಿಗೆ ಬೋಧ | ಭಾನುಕೋಟಿತೇಜನೊಂದೇ ತಾನಾದ||೩||
ಯಾರು ಮುನಿದು
ಯಾರು ಮುನಿದು ನಮಗೇನುಮಾಡುವರಯ್ಯ | ಯಾರು ಒಲಿದು ನಮಗೇನು ಕೊಡುವರಯ್ಯ |
ಕೊಡಬೇಡ ನಮ್ಮ ಕುನ್ನಿಗೆ ಕಾಸನು | ಈಯಲು ಬೇಡ ನಮ್ಮ ಶಕುನಗೆ ತಳದಿಯ |
ಆನೆಯ ಮೇಲೆ ಪೋಪುಗೆ,ಶ್ವಾನ ಮುಟ್ಟಬಲ್ಲದೆ? ನಮಗೆ ಶ್ರೀ ಪುರಂದರ ವಿಠಲನೇ ಸಾಕು|
ಯಾತ್ರೆಯನು ಮಾಡಿಕೊಂಡು
ಯಾತ್ರೆಯನು ಮಾಡಿಕೊಂಡು ಹರ ಹಿರಿಯನಹನಾಗಿ | ಉಕುತಿ ಬಾಧಕವಾಯ್ತು ಹರಿಹರರೊಳೈಕ್ಯ |
ಚಿನ್ನ ನಿನ್ನ ಮತಕೆ ನೀನೆ ಶತ್ರುವಾದ್ಯಯ್ಯ ಜಾ| ತ್ಯುತ್ತರವ ಪೇಳೆ ಪರಾಜಯವು ಬಾರದಿಹುದೆ? |
ಮತ್ತೆ ನೆನೆಯೆ ಹಯವದನಗಿದು ಲೀಲೆಯಾದರೆ | ಸತ್ವ ಹೆಚ್ಚಿತು ಹರಿಸರ್ವೋತ್ತಮನೆಂಬ ಶ್ರುತಿಗೆ |
ಯಾಚಿಸುವನ ಜನ್ಮ
ಯಾಚಿಸುವನ ಜನ್ಮ ಯಾತಕ್ಕೆ ಬರುವುದು | ಯೋಚನೆ ಮಾಡಲಿಬೇಕು ತನ್ನೊಳಗೆ |
ವಾಚಾಲನಾಗಿ ಪೋಗಿ ಎಲ್ಲೆಲ್ಲಿ ತಿರುಗುತ |ಉಚ್ಚ ನೀಚವೆನದೆ ಸುತ್ತಿಸಿಕೊಳುತಾ |
ಆಚಾರವನು ಬಿಟ್ಟು ದಿನಾಂತರವೆನದೆ | ಚಾಚುವೆನು ಕರೆವ ಕೇವಲ ದೈನ್ಯದಿ |
ಚಾಚೂತಪ್ಪದಂತೆ ನುಡಿಯದಿದ್ದರೆ ನಾನಾ - | ಯೋಚನೆಗೊಳಗಾಗಿ ಕುದಿಯಾಬೇಕೋ |
ಛಿ ಛಿ ಒಬ್ಬರ ಬೇಡುವ ನಡತಿಕಿಂತಲಿ | ನಾ ಚರಿಸುಬಹುದು ಮಾರಿಗಳ ಕೂಡ |
ಕುಚೇಲಪಾಲ ಸಿರಿ ವಿಜಯ ವಿಠಲ ಎನಗೆ | ನಾಚಿಕೆಯಾಗಿದೆಯಯ್ಯಾ ಉದರಗೋಸುಗ |
ಯಾರ ಮುನಿಗಳಿಗೆ ಹಾರೈಸಿ
ಯಾರ ಮುನಿಗಳಿಗೆ ಹಾರೈಸಿ ಪೋದರೆ |
ಯಾರಿತ್ತ ಬ ಎನ್ನರೋ ನುಡಿಯರೊ|
ಎಂಟು ಗೇಣು ಶರೀರವ ಒಂಟಿಗೇಣು ಮಾಡಿಕೊಂಡು |
ಗಂಟಲಲ್ಲಿ ಶಿರ ಬಿಗಿದು ಪಪರ ಬೇಡುವ |
ಸಂಕಟ ಬಿಡಿಸುವದು ಸಿರಿ ವೇಕಟಪತಿ ವಿಠಲ |