ಸುಳಾದಿ (ಅ)
||ಜತೆ||
ಅದ್ವೈತ ಮತಾರಣ್ಯ ದಾವಾ ವ್ಯಾಸ ಶಿಷ್ಯ |
ಮಧ್ವಮುನಿ ವಿಜಯ ವಿಠಲನ ನಿಜದಾಸಾ ||
||ಮಟ್ಟತಾಳ||
ಅದ್ರಿಕುವರಿಲೋಲ ಕ್ಷುದ್ರದಿತಿಜಕಾಲ | ನಿದ್ರ ರಹಿತ ಖ್ಯಾತ ಭದ್ರ ಭಕುತಿದಾತ |
ಅದ್ರಿ ರಜತವಾಸ ಕದ್ರಿ ವೇಯಾ ಭೂಷಾ | ಭದ್ರ ಮೂರ್ತ್ಯಾಭಿನವ ಪ್ರಾಣೇಶ
ವಿಠಲನ | ಅದ್ರಿ ಭಕುತಿಯ ನೀಡು ಮಾದ್ರಿಜಾಗ್ರಜ ಗುರುವೇ ||
||ಜತೆ||
ಅಜನಾಮಭಿನವ ಪ್ರಾಣೇಶ ವಿಠಲನ |
ನಿಜ ದಾಸ ನೆಂದೆನಿಸು ಸುಜನ ಪೋಷಕಳೆ ||
||ಆದಿತಾಳ||
ಅಘಹರನಿಚ್ಛೆಯ ಬಗೆಯನು ಅರಿಯುತ | ಭೃಗುಪದ ಘಾತದ ನೆವದಿ ಅಗಲಿ
ಬಂದು | ಜಗದೊಳು ಕೊಲ್ಹಾಪುರದಲಿ ನೆಲೆಸಿದೆ | ನಗ ಪನ್ನಗನೊಳು
ಮೃಗನರನಿರುತಿರೆ | ಗಗನೇಶರಾಜನ ಮಗಳಾಗಿ ಜನಿಸಿದೆ | ನಿಗಮಾವತಿ
ಪದ್ಮಾವತಿ ಪರಿಣಯ | ನಗಧರ ಮದುವೆಯ ವಿಭವದಿ ಮಾಡಿಸಿ |
ಯುಗ ಎರಡೊಳಗಿತ್ತ ನುಡಿ ಪೂರೈಸಿದೆ | ಅಗಣಿತ ಮಹಿಮಳೆ ವಿಹಗವ ರೂಢಳೆ |
ಜಗಪತಿ ಅಭಿನವ ಪ್ರಾಣೇಶ ವಿಠ್ಠಲನ | ಹಗಲಿರುಳು ಸ್ಮರಿಪ ಭಾಗ್ಯವ
ನೀಡು ತಾಯೆ ||
||ಮಟ್ಟತಾಳ||
ಅಸುಪತಿ ಶ್ರೀಮಧ್ವಕಸವರ ಪೀಠಸ್ಥ | ವಸುಧೇಂದ್ರರ ಕರ ಬಿಸಜೋದ್ಭವನೀತ |
ವಸುಧಿಜಾಪತಿ ಪಾದನಿಶ ಧೇನಿಸುವಾತ | ಶ್ವಸನ ಮತದ ಯಶವ ದಶದಿಶ
ಪಸರಿಸಿದ ಅಸಮ ಮಹಿಮ ಗುರುವೆ ನತಜನ ಸುರತರುವೆ | ಋಷಭಾಭಿನವ
ಪ್ರಾಣೇಶವಿಠಲ ನಾಮಾ | ರಸನೇಂದ್ರಿಯದಲ್ಲಿ ಹಸನಾಗಿ ನಿಲ್ಲಿಸೋ ||
||ಅಟ್ಟತಾಳ||
ಅಜ ಸತ್ಯ ಲೋಕಾಧಿಪತ್ಯವನ್ನು ಮಾಡಿ ದಿಗ್ವಿಜಯ ಮಾಡಲು ಪುರಕೆ | ನಿಜ
ಸುಜ್ಞಾನ ಪೂರ್ಣಪ್ರಜ್ಞರೆಂಬೊ ಮುನಿಯು | ಅಜನ ಪದಕೆ ಬಂದು ಅಖಿಳರ
ನಾಳಿದಾ | ನಿಜ ವಾಯು ಹನುಮ ಭೀಮ ಮಧ್ವನೆನಿಸಿದ | ವಿಜಯ ಸಾರಥಿ ಪಾದ
ರಜದ ಮಹಾತ್ಮೆಯಿಂದ | ಗಜವೈರಿ ಭಂಜನ ವಿಜಯ ವಿಠಲನ್ನ ಭಜನೆಯ
ಗೈಯುತ ಬಹುಕಾಲದಿ | ಋಜುಗಣ ಪಂಕ್ತಿಯೊಳಗೆ ಕುಳಿತಾ | ನಿಜ ನಿರ್ಮಲ
ಸುಜ್ಞಾನ ಧ್ಯಾನದಿಂದ ಜ್ಞಾನ ಪಕ್ವಾದ ಮನವುಳ್ಳ | ಸುಜನ ಶಿರೋಮಣಿ
ವಾದಿರಾಜನು ತಾ | ನಿಜವಾಗಿ ಬೊಮ್ಮಾಂಡ ಪುರಾಣ ಸಾಧಕದಿಂದ | ಅಜಪದಕೆ
ಸಲ್ವನು ಲೇಶ ಸಂಶಯ ಬೇಡಿ | ನಿಜ ನಿಜ ನಿಜವೆಂದು ನಿತ್ಯದಿ ಕೊಂಡಾಡಿ ||
||ಮಟ್ಟತಾಳ||
ಅರಿದರಾಂಕುಶ ಶಕ್ತಿ ಪರಶು ನೇಗಿಲು ಖಡ್ಗ | ಸರಸಿಜ ಗದೆ ಮುದ್ಗರ ಚಾಪ
ಮಾರ್ಗಣ | ವರ ಅಭಯ ಮುಸಲ ಪರಿ ಪರಿ ಆಯುಧವ | ಧರಿಸಿ ಮೆರೆವ
ಲಕುಮಿ ಸರಸಿಜ ಭವ ರುದ್ರ | ಸರುವ ದೇವತೆಗಳ ಕರುಣಾಪಾಂಗದಲ್ಲಿ |
ನಿರೀಕ್ಷಿಸಿ ಅವರವರ ಸ್ವರೂಪ ಸುಖವ ಕೊಡುವ | ಸಿರಿ ಭೂಮಿ ದುರ್ಗೆ
ಸರವೋತ್ತಮ ನಮ್ಮ ವಿಜಯ ವಿಠಲನಂಘ್ರಿ | ಪರಮ ಭಕುತಿಯಿಂದ ಸ್ಮರಿಸುವ
ಜಗಜ್ಜನನಿ ||
||ಅಟ್ಟತಾಳ||
ಅನುಭವವಾದ ಮಾತನು ಪೇಳುವೆನು ಕೇಳಿ | ಮನಸ್ಸಿನ ಕೌಟಿಲ್ಯವನ್ನು
ಬಿಟ್ಟಾದರದಿಂದಾ | ಗುಣವಂತ ಗುರುದಯವನು ಪಡಿಯದೆ ಕೆಟ್ಟಾ | ಮನುಜ
ಜನ್ಮದಕ್ಕಿಂತ ಕತ್ತೆಯಾದರೆ ಲೇಸು | ಗುಣ ಪೂರ್ಣಗುರು ಬಾದರಾಯಣ ವಿಠಲ |
ಆತನ ಕಡೆ ನೋಡಾ ಆಕಡೆ ಸುಳಿದಾಡ ||
||ಆದಿತಾಳ||
ಅಸುರರ ಪುಣ್ಯವನ್ನು ಭಕುತರಿಗಿತ್ತವರ | ಅಸಮೀಚೀನ ಕರ್ಮ ದನುಜರಿ
ಗುಣಿಸುವಿ | ಈಶನೆ ಗತಿಯೆಂದು ನೆರೆನಂಬಿದವರಿಗೆ | ಸುಸಮೀಚೀನವಾದ
ಮೋದಗಳೀವಿ ನಿತ್ಯ | ವಸುಧಿಯ ಭಾರವನ್ನು ಧರಿಸಿ ತ್ರಿಕೋಟಿಯ |
ಸುಶರೀರಗಳಿಂದ ಬಹಿರಾವರಣದಲ್ಲಿ ವಾಸವಾಗಿ | ಸಕಲ ಭೂತ ಹೃತ್ಕಮಲದಲಿ
ನಿಂದು | ಬಿಸಜಜಾಂಡವನ್ನು ಪೊರೆವ ಕರುಣಿ ನೀನು | ಅಸಮನೆನಿಪ ಗುರು
ವಿಜಯ ವಿಠ್ಠಲರೇಯ | ವಶನಾಗುವನು ನಿನ್ನ ಕರುಣದಿ ಆವಕಾಲ ||