ಸುಳಾದಿ (ಎ)
||ತ್ರಿವಿಡಿತಾಳ||
ಎರಡನೆ ಯುಗದಲ್ಲಿ ಖರಕ್ರವ್ಯಾದನು | ಕರಿಕರ್ಣನು ಘೋರ ತಪವಗೈದು |
ಸರಸಿಜ ಸಂಭವನೊಲಿಸಿ ಮೆಚ್ಚಿಸಿ ತಾನು | ವರವ ಯಾಚಿಪ ಸಮಯದಿಯವನ |
ಅರಿಯಾಳು ಮಾಡಿದೆ ಮತಿಭ್ರಂಶಗೈಸಿದೆ | ನಿರುತ ನಿದ್ರೆಯ ಬೇಡ್ವ ತೆರ ಮಾಡಿದೆ |
ಸುರ ಸಜ್ಜನರಿಗೆಲ್ಲಾ ಹರುಷವ ಬೀರಿದೆ | ಪರಮ ಸಮರ್ಥಳೆ ಶರಣು ಶರಣು |
ಸುರವಂದ್ಯಭಿನವ ಪ್ರಾಣೇಶವಿಠಲನ | ಚರಣ ವಾರಿಜ ಭೃಂಗೆ ದೀನ
ದಯಾಪಾಂಗೆ ||
||ಅಟ್ಟತಾಳ||
ಎರಡನೆ ಯುಗದಲ್ಲಿ ತರುಚರ ರೂಪದಿ | ಧರೆಯೊಳಗುದಿಸಿದೆ ರಾಮ
ಸೇವಕನಾದೆ | ಶರಧಿಯ ಲಂಘಿಸಿ ಬರಮ ಪುರವಪೊಕ್ಕು | ಧರಿಜ ದೇವಿಯ
ಕಂಡು ರಾಮಾಂಗುಲಿ ಇತ್ತು | ಹರಿ ಕುಶಲರುಹಿ ತಾ ಸಂತಸ ಬೀರಿದೆ | ಹರುಷ
ಮನವ ಕೀಳಿ ಕ್ರವ್ಯಾಧರ ಸೀಳಿ | ಅರಿಪುರ ದಹಿಸಿದ ಪರಮ ಸಮರ್ಥನೆ | ತರುಚರ
ಹನುಮನೆ ಚರಣಕೆ ವಂದನೆ | ಎರಡೊಂದು ಯುಗದಲ್ಲಿ ಕುರುಕುಲ ಸಂಜಾತ |
ಮುರಹರ ಕೃಷ್ಣನ ಚರಣ ಸೇವಕನೀತ | ದುರುಳ ದೈತ್ಯರ ದುಷ್ಟ ಕುರುಗಳನಳಿಸುತ |
ಧರಿಭಾರ ವಿಳುಹಿದೆ ಸುರಗಣ ಪೂಜ್ಯನೆ ಮುನಿಜನಗೇಯನೆ | ಮುರಹರ
ಅಭಿನವ ಪ್ರಾಣೇಶ ವಿಠಲನ | ಚರಣ ಸೇವಕ ಹನುಮ ಭೀಮ ಮಧ್ವಾರ್ಯ ||
ಆದಿತಾಳ
ಎತ್ತ ಪೋದರೇನು ಎತ್ತ ನಿಂತರೇನು
ಚಿತ್ತಬಂದಂತೆ ಚಿಗಿದಾಡಿದರೇನು
ಚಿತ್ತದಲಿ ಹರಿಯ ಕಾಂಬವ ಭಕುತರಿಗೆ
ಮತ್ತೆ ಇತ್ರ ಜನರವರಿಗೆ ಸರಿಯೆ
ಮತ್ತೆ ವ್ಯಾಘ್ರವ ನೋಡಿ ನರಿ ಸುಟ್ಟುಕೊಂಡಂತೆ
ಚಿತ್ತಕ್ಕೆ ಬಂದ ಪರಿಪರಿಗಣನೆಯೇನೊ
ಉತ್ತಮೋತ್ತಮ ನಮ್ಮ ಗೋಪಾಲವಿಠಲನ
ಚಿತ್ತಾನುಸಾರ ನಡೆದವರೆ ಧನ್ಯರೊ