ಸುಳಾದಿ (ಒ)
||ಧೃವತಾಳ||
ಒಂದು ದಿವಸ ನಾರಂದ ಮುನೀಶ್ವರ ನಂದಗೋಪನ ಕಂದ ಇಂದಿರಾರಮಣನ |
ಸಂದರುಶನ ಮಾಡಿ ಬಂದ ಹರಿ ವರ್ಷ | ವೆಂದೆಂಬೊ ಖಂಡ
ದೊಳಾನಂದಗಾಯನದಿಂದ | ನಿಂದು ನರ ಮೃಗಗೆ ವಂದಿಸಿ ತೆರಳುತಿರೆ | ಅಂದು
ಪ್ರಹ್ಲಾದನು ದ್ವಂದ್ವ ಪಾದಕ್ಕೆರಗಿ | ಇಂದು ದ್ವಾರಕಾಪುರದಿಂದ ಪೊರಟು ನಡೆ |
ತಂದ ವಾರ್ತೆ ಎನಗೊಂದುಸುರಲಿಲ್ಲ ದೀನ | ಬಂಧು ಎನಿಸಿಕೊಂಬ ವೃಂದಾರಕ
ಮುನಿ | ಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕ | ಬಿಂದುಗಳುದುರಿಸುತ ನಂದ
ನಂದನ ಚರಿತೆ ಒಂದೊಂದು ಪೇಳಲದರಿಂದ ಮೈಮರೆದು ಹೋ | ಎಂದು ಶಿರವ
ದೂಗಿ ಮುನಿಗೆ ಎರಗಿ | ಕಂಧರ ಬಾಗಿ ನಾನೆಂದಿಗೆ ಕೃಷ್ಣನ | ವಂದಿಸುವೆ ನೆನಲು
ಮಂದಹಾಸದಿಂದ | ಮಂದರೋದ್ಧರ ವಿಜಯ ವಿಠಲ ಯಶೋದೆ | ಕಂದನ
ಲೀಲೆಯಾನಂದ ಪೇಳೆನೆ ಮುನಿ | ಅಂದು ವಿವರಿಸಿದ ಅಂದವಾಗಿ ನಲಿದು ||