ದಾಸರಪದ (ದ)
ದಾರಿಯ ತೋರೋ
ದಾರಿಯ ತೋರೋ ಗೋಪಾಲ ಪ
ವಾರಿಜನಾಭ ವೈಕುಂಠಲೋಲ ಅ.ಪ
ಸಿಕ್ಕದೆ ಭವಕಾಡಿನೊಳಗೆ
ಲೆಕ್ಕವಿಲ್ಲದ ಜಂತುಗಳಿಗೆ
ದಿಕ್ಕೊಬ್ಬರಿಲ್ಲವೋ ಎನಗೆ
ಕಕ್ಕಸವ ಕಳೆದು ನಿನ್ನಯ ಪಾದಗಳಿಗೆ ೧
ಗಜರಕ್ಷಕನು ನೀನೆಂದು
ಅಜರು ದ್ರಾದಿಗಳಂದು
ನಿಜವಾಗಿ ಪೇಳಿದರೆಂದು
ಸುಜನರೋಡೆಯನೆ ಕೇಳಿದೆ ನಾನಿಂದು ೨
ವರದ ಶ್ರೀ ಹಯವದನ ಬಾರೈ
ಕರೆದೆನ್ನ ದಾರಿಯ ತೋರೈ
ಪರಮ ಭಕ್ತರೋಳಿನ್ನಾರೈ
ಪರಮಪುರುಷ ನೀನಲ್ಲದೆ ಗತಿಯಾರೈ ೩
ದಯವಿರಲಿ ದಯವಿರಲಿ
ದಯವಿರಲಿ ದಯವಿರಲಿ ದಾಮೋದರ ಪ
ಸಯವಾಗಿ ಬಿಡದೆನ್ನ ಸಾಕುವ ಶ್ರೀ ಕೃಷ್ಣ ಅ.ಪ
ಹೋಗಿ ಬರುವೆನಯ್ಯ ಹೋದ ಹಾಂಗೆಲ್ಲ
ಸಾಗುವವನಲ್ಲನಾ ನಿನ್ನ ಬಿಟ್ಟು
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೇ ನಿಲ್ಲುವುದು
ಹ್ಯಾಂಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ೧
ಇದ್ದಲ್ಲೇ ಎನ್ನನುದ್ದರಿಪ ಶಕ್ತಿ ಅ
ಸಾದ್ಯ ನಿನಗೆಂದು ನಾ ಬಂದವನಲ್ಲ
ನದ್ಯಾದಿ ಕ್ಷೇತ್ರಮೂರ್ತಿಗಳಲಿ ನಿಜ ಜ್ಞಾನ
ವೃದ್ದ ಜನರ ಹುಡುಕಿ ನಿನ್ನ ತಿಳಿಯಲು ಬಂದೆ ೨
ಸತತ ಇದ್ದಲ್ಲೇ ಎನ್ನ ಸಲಹೊ ಅವರೊಳಗಾಗಿ
ಅತಿಶಯವು ಉಂಟು ವಿಭೂತಿಯಲ್ಲಿ
ಗತಿಯು ಸಾಧನಕೆ ಅಭಿವ್ಯಕ್ತಿ ಸಂದರ್ಶನದಿ
ಸ್ಮೃತಿಗೆ ವಿಶೇಷ ಮಾರುತಿರಮಣ ನಿನ್ನ ೩
ನೋಡಿದೆನೆ ನಾ ನಿನ್ನ ನೋಡದೆ ಎಂದೆಂದು
ಪಾಡಿದೆನೆ ಆರಾರು ಪಾಡದೆಂದು
ಮಾಡಿದೆನೆ ಅರ್ಚನೆಯ ಮೀಸಲಾದುದು ಒಂದು
ಮೂಢಮತಿಯಲಿ ಮುಂದೆನಿಂದೆ ಕೈಮುಗಿದು ೪
ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ
ದಿಂದ ನಿನ್ನ ಬಳಿಗೆ ಇಂದರೇಶ
ಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆ
ಬಂಧನ ಬಡಿವ ಭಕುತಿಯು ಜ್ಞಾನ ನೀಡುವುದು ೫
ಬಿನ್ನಪವ ಕೇಳು ಸ್ವಾಮಿ ಎನ್ನಗೊಬ್ಬನೇ ಅಲ್ಲ
ಎನ್ನ ಹೊಂದಿ ನಡೆವ ವೈಷ್ಣವರನ
ಇನ್ನವರಿಗೆ ಬಾಹೋ ದುಷ್ಕರ್ವಗಳ ಕೆಡಿಸಿ
ಘನಗತಿಗೈದಿಸುವ ಭಕುತಿ ಕೊಡು ಕರುಣದಿ ೬
ರಾಜರಾಜೇಶ್ವರ ರಾಜೀವದಳನಯನ
ಮೂಜಗದೋಡೆಯ ಮುಕುಂದಾನಂದ
ಈ ಜೀವಕೀ ದೇಹ ಬಂದದುಕು ಎನಗತಿ ನಿ
ವ್ಯಾರ್ಜದಿ ಸುರಗಂಗೆ ಸ್ನಾನವನು ಮಾಡಿಸೊ ೭
ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರು
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊ
ಚಿನುಮಯ ಮೂರುತಿ ಗೋಪಾಲವಿಠಲ
ಘನಕರುಣೆ ಮಧ್ವ ಮುನಿಮನಮಂದಿರನಿವಾಸಿ ೮
ದಾಸ ದಾಸರ ಮನೆಯ ದಾಸಾನುದಾಸ
ದಾಸ ದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ ।।ಪ॥
ಕಾಳುದಾಸರ ಮನೆಯ ಆಳು ದಾಸ ನಾನಯ್ಯ
ಕೀಳುದಾಸನು ನಾನು ಕಿರಿಯ ದಾಸ
ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ
ಆಳಿನ ಆಳಿನ ಆಳಿನಡಿದಾಸ ನಾನು ೧
ಪಂಕಜನಾಭನ ಮನೆಯ ಮಂಕುದಾಸನಯ್ಯ
ಕೊಂಕುದಾಸನು ನಾನು ಕುರುಡು ದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ
ಬಂಕದ ಬಾಗಿಲ ಕಾಯ್ವ ಬಡದಾಸ ನಾನು ೨
ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುನ್ನಿದಾಸ
ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ
ನೆಲೆಮುಕ್ತಿ ಪಾಲಿಸೊ ಆದಿಕೇಶವರಾಯ ೩
ದಾಸನ ಮಾಡಿಕೊ ಎನ್ನ ಇಷ್ಟು
ದಾಸನ ಮಾಡಿಕೊ ಎನ್ನ ಇಷ್ಟು ।।ಪ॥
ಘಾಸಿ ಮಾಡುವರೇನೋ ಕರುಣಾಸಂಪನ್ನ ।।ಅ.ಪ.॥
ದುರುಳ ಬುದ್ದಿಗಳೆಲ್ಲಾ ಬಿಡಿಸೋ ನಿನ್ನ
ಕರುಣ ಕವಚವೆನ್ನ ಹರಣಕ್ಕೆ ತೊಡಿಸೋ
ಚರಣ ಸೇವೆ ಎನಗೆ ಕೊಡಿಸೋ
ಅಭಯಕರ ಪುಷ್ಪ ಎನ್ನ ಶಿರದೊಳು ಮುಡಿಸೋ ೧
ದೃಢಭಕ್ತಿ ನಿನ್ನಲ್ಲಿ ಬೇಡಿ ದೇವ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೆಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ ೨
ಮೊರೆ ಹೊಕ್ಕವರ ಕಾಯ್ವ ಬಿರುದು ನೀ
ಮರೆಯದೆ ರಕ್ಷಣೆ ಮಾಡೆನ್ನ ಪೊರೆದು
ದುರಿತ ರಾಶಿಗಳೆಲ್ಲ ತರಿದು ಸ್ವಾಮೀ
ಪುರಂದರವಿಠಲ ಕರುಣದಿ ಕರೆದು ೩
ದಾಸರೆಂದರೆ ಪುರಂದರ ದಾಸರಯ್ಯ
ದಾಸರೆಂದರೆ ಪುರಂದರ ದಾಸರಯ್ಯ ।।ಪ॥
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ ।।ಅ.ಪ॥
ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಹೊಕ್ಕು
ದಾಸನೆಂದು ತುಳಸಿಮಾಲೆ ಧರಿಸಿ
ಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ
ಕಾಸುಗಳಿಸುವ ಪುರುಷನವ ದಾಸನೆ ೧
ಡಂಭಕದಿ ಹರಿಸ್ಮರಣೆ ಮಾಡಿ ಜನರ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವಪಿತನ ಆಗಮಗಳರಿಯದೆ
ತಂಬೂರಿ ಮೀಟಲವ ಹರಿದಾಸನೆ ೨
ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನ ಪ್ರೀ -
ತಿಯಲಿ ತಾನೊಂದು ಕೊಡದ ಲೋಭಿ
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು
ಗಾಯನವ ಮಾಡಲವ ದಾಸನೇನಯ್ಯ ೩
ಪಾಠಕನ ತೆರದಲಿ ಪದಗಳನೆ ತಾ ಬೊಗಳಿ
ಕೂಟಜನರ ಮನವ ಸಂತೋಷ ಪಡಿಸಿ
ಗೂಟನಾಮಗಳಿಟ್ಟುಕೊಂಡ್ಹಿರಿಯ ತಾನೆನುತ
ತೂಟಕವ ಮಾಡಲವ ದಾಸನೇನಯ್ಯ ೪
ನೀತಿಯೆಲ್ಲವನರಿತು ನಿಗಮ ವೇದ್ಯನ ನಿತ್ಯ
ವಾತಸುತನಲ್ಲಿಹನ ವರ್ಣಿಸುತಲಿ
ಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವ
ಪೂತಾತ್ಮ ಪುರಂದರ ದಾಸರಿವರಯ್ಯ ೫
ದಾಸೋಹಂ ತವ ದಾಸೋಹಂ
ದಾಸೋಹಂ ತವ ದಾಸೋಹಂ
ವಾಸುದೇವ ವಿಗತಾಘಸಂಘ ತವ ।।ಪ॥
ಜೀವಾಂತರ್ಗತ ಜೀವನಿಯಾಮಕ
ಜೀವವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪ ರಾ
ಜೀವಭವಜನಕ ಜೀವೇಶ್ವರ ತವ ೧
ಕಾಲಾಹ್ವಯ ಮಹ ಕಾಲನಿಯಾಮಕ
ಕಾಲಾತೀತ ತ್ರಿಕಾಲಜ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲಮೂರ್ತಿ ತವ ೨
ಕರ್ಮ ಕರ್ಮಕೃತ ಕರ್ಮಕೃತಾಗಮ
ಕರ್ಮಫಲಪ್ರದ ಕರ್ಮಜಿತ
ಕರ್ಮಬಂಧ ಮಹಕರ್ಮವಿಮೋಚಕ
ಕರ್ಮನಿಗ್ರಹ ವಿಕರ್ಮನಾಶ ತವ ೩
ಧರ್ಮಯೂಪ ಮಹಧರ್ಮ ವಿವರ್ಧನ
ಧರ್ಮವಿದುತ್ತಮ ಧರ್ಮನಿಧೇ
ಧರ್ಮಸೂಕ್ಷ್ಮ ಮಹಧರ್ಮ ಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಮಿತ್ರ ತವ ೪
ಮಂತ್ರ ಯಂತ್ರಮಯ ಮಂತ್ರಬೀಜ ಮಹ
ಮಂತ್ರರಾಜ ಗುರು ಮಂತ್ರಧೃತ
ಮಂತ್ರಮೇಯ ಮಹಮಂತ್ರಗಮ್ಯ ವರ
ಮಂತ್ರದೇವ ಜಗನ್ನಾಥವಿಠಲ ತವ ೫
ದೂರು ಮಾಡುವರೇನೆ
ದೂರು ಮಾಡುವರೇನೆ ರಂಗಯ್ಯನ
ದೂರು ಮಾಡುವರೇನೆ ।।ಪ॥
ದೂರು ಮಾಡುವರೇನೆ ಚೋರನೆಂದಿವನನು
ಮೂರುಲೋಕಕೆ ಮುದ್ದು ತೋರೋ ರಂಗಯ್ಯನ ।।ಅ.ಪ॥
ನಂದಗೋಕುಲದಲಿ ಮಂದೆ ಗೋವುಗಳ
ಮುಂದೆ ಕೊಳಲನೂದಿ ಚಂದದಿ ಬರುವನ ೧
ಗೊಲ್ಲರ ಮನೆಗಳ ಕಳ್ಳತನದಿ ಪೊಕ್ಕು
ಗುಲ್ಲು ಮಾಡುತಲವರ ಗಲ್ಲ ಕಚ್ಚುವನೆಂದು ೨
ಕಾಮದಿಂದಲಿ ನಿನ್ನ ಕಳವಳತನಕಾಗಿ
ಶ್ಯಾಮಸುಂದರ ಶ್ರೀ ಪುರಂದರ ವಿಠಲನ ೩
ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವರ ದೇವ ಶಿಖಾಮಣಿ ಬಂದನೊ ।।ಪ।।
ಉರಗಶಯನ ಬಂದ ಗರುಡಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದನೊ ೧
ಮಂದರೋದ್ದರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೊ ೨
ನಕ್ರಹರನು ಬಂದ ಚಕ್ರಧರನು ಬಂದ
ಅಕ್ರುರಗೊಲಿದ ತ್ರಿವಿಕ್ರಮ ಬಂದನೊ ೩
ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯ ಫಲದ ಶ್ರೀ ಲಕ್ಷ್ಮೀ ರಮಣ ಬಂದನೋ ೪
ನಿಗಮ ಗೋಚರ ಬಂದ ನಿತ್ಯ ತೃಪ್ತನು ಬಂದ
ನಗೆಮುಖ ಪುರಂದರ ವಿಠಲ ಬಂದನೋ ೫
ದೇವಿ ನಮ್ಮ ದ್ಯಾವರು
ದೇವಿ ನಮ್ಮ ದ್ಯಾವರು ಬಂದರು ಬನ್ನಿರೆ ।।ಪ॥
ಕೆಂಗಣ್ಣ ಮೀನನಾಗಿ ನಮ್ಮ ರಂಗ
ಗುಂಗಾಡಿ ಸೋಮನ ಕೊಂದಾನ್ಯಾ
ಗುಂಗಾಡಿ ಸೋಮನ ಕೊಂದು ವೇದವನು
ಬಂಗರದೊಡಲನಿಗಿತ್ತಾನ್ಯಾ ೧
ದೊಡ್ಡ ಮಡುವಿನೊಳು ನಮ್ಮ ರಂಗ
ಗುಡ್ಡವ ಹೊತ್ತುಕೊಂಡು ನಿಂತಾನ್ಯಾ
ಗುಡ್ಡವ ಹೊತ್ತುಕೊಂಡು ನಿಂತು ಸುರರನು
ದೊಡ್ಡವರನು ಮಾಡ್ಯಾನ್ಯಾ ೨
ಚೆನ್ನಕಾಡಿನ ಹಂದಿಯಾಗಿ ನಮ್ಮ ರಂಗ
ಚಿನ್ನದಕಣ್ಣನ ಕೊಂದಾನ್ಯಾ
ಚಿನ್ನದಕಣ್ಣನ ಕೊಂದು ಭೂಮಿಯ
ವನ್ನಜಸಂಭವಗಿತ್ತಾನ್ಯಾ ೩
ಸಿಟ್ಟಿಂದ ಸಿಂಹನಾಗಿ ನಮ್ಮ ರಂಗ
ಹೊಟ್ಟೆಯ ಕರುಳ ಬಗೆದಾನ್ಯಾ
ಹೊಟ್ಟೆಯ ಕರುಳ ಹಾರವ ಮಾಡಿ
ಪುಟ್ಟಿಗೆ ವರವ ಕೊಟ್ಟಾನ್ಯಾ ೪
ಹುಡುಗ ಹಾರುವನಾಗಿ ನಮ್ಮ ರಂಗ
ಬೆಡಗಿಲಿ ಮುಗಿಲಿಗೆ ಬೆಳೆದಾನ್ಯಾ
ಬೆಡಗಿಲಿ ಮುಗಿಲಿಗೆ ಬೆಳೆದು ಬಲಿಯನು
ಅಡಿಯಿಂದ ಪಾತಾಳಕೊತ್ತಾನ್ಯಾ ೫
ತಾಯ ಮಾತನು ಕೇಳಿ ಸಾವಿರ ತೋಳಿನ
ಆವಿನ ಕಳ್ಳನ ಕೊಂದಾನ್ಯಾ
ಆವಿನ ಕಳ್ಳನ ಕೊಂದು ಭೂಮಿಯ
ಅವನಿಯ ಸುರರಿಗಿತ್ತಾನ್ಯಾ ೬
ಪಿಂಗಳ ಕಣ್ಣಿನ ಕೊಂಗಗಳನು ಕೂಡಿ
ಛಂಗನೆ ಲಂಕೆಗೆ ಪೋದಾನ್ಯಾ
ಛಂಗನೆ ಲಂಕೆಗೆ ಪೋಗಿ ನಮ್ಮ ರಂಗ
ಹೆಂಗಸು ಕಳ್ಳನ ಕೊಂದಾನ್ಯಾ ೭
ಕರಿಯ ಹೊಳೆಯಲಿ ತುರುಗಳ ಕಾಯುತ
ಉರಗನ ಮಡುವ ಧುಮುಕ್ಯಾನ್ಯಾ
ಉರಗನ ಹೆಡೆಮೇಲೆ ಹಾರ್ಹಾರಿ ಕುಣಿವಾಗ
ವರವ ನಾರಿಯರಿಗೆ ಕೊಟ್ಟಾನ್ಯಾ ೮
ಕಂಡ ಕಂಡಲ್ಲಿ ಕುಂಡೆಯ ಬಿಟುಗೊಂಡು
ಭಂಡತನದಲಿ ನಿಂತಾನ್ಯಾ
ಭಂಡತನದಲಿ ನಿಂತು ತ್ರಿಪುರರ
ಹೆಂಡಿರನೆಲ್ಲ ಕೆಡಿಸ್ಯಾನ್ಯಾ ೯
ಚೆಲ್ವ ಹೆಂಡತಿಯ ಕುದುರೆಯ ಮಾಡಿ
ಒಳ್ಳೆಯ ರಾವುತನಾದಾನ್ಯಾ
ಒಳ್ಳೆಯ ರಾವುತನಾಗಿ ಮ್ಲೇಚ್ಚರ
ಡೊಳ್ಳು ಹೊಟ್ಟೆಯ ಮೇಲೆ ಒದ್ದಾನ್ಯಾ ೧೦
ಡೊಳ್ಳಿನ ಮೇಲ್ ಕೈಯ ಭರಮಪ್ಪ ಹಾಕ್ಯಾನು
ತಾಳವ ಶಿವನಪ್ಪ ತಟ್ಟಾನ್ಯಾ
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ ಕನಕಪ್ಪ ಕುಣಿದಾನ್ಯಾ ೧೧
ಧನ್ಯನಾದೆ ವಿಠಲನ ಕಂಡು
ಧನ್ಯನಾದೆ ವಿಠಲನ ಕಂಡು ।।ಪ॥
ಧನ್ಯನಾದೆ ಕಾಮಪಿತನ ಲಾ-
ವಣ್ಯ ಮೂರುತಿಯ ಕಣ್ಣಲಿ ಕಂಡು ।।ಅ ಪ॥
ದೇವವರೇಣ್ಯ ಸದಾ ವಿನೋದಿ ವೃಂ-
ದಾವನ ಸಂಚಾರ ಗೋಪನ ಕಂಡು ೧
ಮಂಗಳಾಂಗ ಕಾಳಿಂಗಮರ್ದನ ಮಾ
ತಂಗವರದ ವರ ರಂಗನ ಕಂಡು ೨
ಹಾಟಕಾಂಬರ ಕಿರೀಟಿಸಾರಥಿ
ತಾಟಕಾರಿ ವೈರಾಟನ ಕಂಡು ೩
ಚಿಂತಿತ ಫಲದ ಕ್ರುತಾಂತನಾತ್ಮ ಜಾ
ದ್ಯಂತರಹಿತ ನಿಶ್ಚಿಂತನ ಕಂಡು ೪
ಮಾತುಳಾಂತಕ ವಿಧಾತಪಿತ ಜಗ
ನ್ನಾಥವಿಠಲ ವಿಖ್ಯಾತನ ಕಂಡು ೫
ಧರ್ಮವೇ ಜಯವೆಂಬ ದಿವ್ಯ ಮಂತ್ರ
ಧರ್ಮವೇ ಜಯವೆಂಬ ದಿವ್ಯ ಮಂತ್ರ ।।ಪ।।
ಮರ್ಮವನರಿತು ಮಾಡಲು ಬೇಕು ತಂತ್ರ ।।ಅ ಪ ।।
ವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಹುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು
ಮೋಸ ಮಾಡುವನ ಹೆಸರ ಮಗನಿಗಿಡಬೇಕು ೧
ದಯವಾಗೋ ದಯವಾಗೋ
ದಯವಾಗೋ ದಯವಾಗೋ||ಪ||
ಹಯಮುಖ ಭಯ ಕೃದ್ಭಯನಾಶನ ಹರಿ ||೧||
ದ್ರೌಪದಿ ಮೊರೆ ಕೇಳ್ಯಾಪದ್ಭಾಂಧವ| ನೀ ಪೊರೆದಯ್ ರಮಾಪತಿ ನಿರುತ ||೧||
ಖರಮುರ ನರಕಾದ್ಯರ ಸಂಹರಿಸಿದೆ| ಪರಮಪುರುಷ ಸಂಹರಭವಹರನೆ ||೨||
ಶತ್ರುತಾಪಕ ಜಗತ್ರಯ ವ್ಯಾಪ್ತ ಪ| ವಿತ್ರ ಪಾಣಿ ಸರ್ವತ್ರದಿ ಎಮಗೆ||೩||
ಎಷ್ಟೆಂದುಸುರಲಿ ದುಷ್ಟಜನರು ಬಲು| ಕಷ್ಟ ಬಡಿಪ ಬಗೆ ಜಿಷ್ಣು ಸಾರಥಿಯೆ ||೪||
ಗೋಭೂಸುರರಿಗೆ ಭೂಭಜರ ಭಯ ಪ|ರಾಭವಗೈಪುದು ಶ್ರೀ ಭೂರಮಣನೆ ||೫||
ಅಪ್ರಮೇಯ ನೀ ಕ್ಷಿಪ್ರದಿ ಒಲಿದು ಜ| ಯಪ್ರದನಾಗು ಸುಪ್ರಹ್ಲಾದವರದನೆ ||೬||
ಯಾತಕೆ ಎಮ್ಮನು ಭೀತಿಗೊಳಿಪೆ ಪುರು | ಹೂತವಿನುತ ಜಗನ್ನಾಥವಿಠ್ಠಲಾ ||೭||
ದಡ ಸೇರಿಸು ಭವದ ಕಡಲಿನ
ದಡ ಸೇರಿಸು ಭವದ ಕಡಲಿನ|| ದಡ ಸೇರಿಸು ಹರಿಯೆ||
ಕಡೆ ಮೊದಲಿಲ್ಲದ ಕ್ಲೇಶದ ವಾರಿಯ|| ಕಡು ಕಾಂಕ್ಷದ ಬಲುತೆರೆಯ||ಪ||
ಸಾಧು ಸಮಾಗಮ ಸಚ್ಛಾಸ್ತ ಶ್ರವ |ಣಾದಿಗಳಿಲ್ಲದೆ ಕೆಡುವೆ |
ಮೇದಿನಿಯೊಳು ಮೂಢಾತ್ಮನು ನಾ ಶ್ರೀ | ಪಾದವ ಹೊಂದಿಸು ಹರಿಯೆ ||೧||
ಸಾಸಿರ ನಾಮದಿ ತುಲಸೀ ಕುಸುಮವ | ಶ್ರೀಶನಿಗರ್ಪಿಸಲಿಲ್ಲ | ಹೇಸದೆ
ಬಾರದುದನ್ನೆ ಬಯಸುತ | ವಾಸುದೇವ ಕೆಟ್ಟೆನಲ್ಲ ||೨||
ಮನ ವಶವಾಗದು ತನು ಮಡಿಯಾಗದು | ಕನಸಲಿ ಧರ್ಮವನರಿಯೆ |
ಒಣಮಾತಲಿ ದಿನ ಹೋದವು ಪರಗತಿ | ಗನುಕೂಲಲ್ಲದು ದೊರೆಯೆ ||೩||
ದುರ್ವ್ಯಸನಕೆ ಬೇಸರೆನೆಂದಿಗೆ ಘನ | ಗರ್ವಿಲಿ ವರ್ತಿಪೆನಲ್ಲ | ಪರ್ವತ
ನೆಗಹುವ ನುಡಿಯನ್ನಾಡುವೆ | ನಿರ್ವಾಹ ಕಡ್ಡಿಯೊಳಿಲ್ಲ ||೪||
ನನ್ನ ಗುಣದ ನಂಬಿಕೆನನಗಿಲ್ಲ | ನಿನ್ನಯ ನಾಮವೆ ಗತಿಯು |
ಇನ್ನಾದರು ಕಡೆಗಣ್ಣಲೆ ನೋಡು ಪ್ರ |ಸನ್ವೆಂಕಟ ಸಿರಿಪತಿಯೆ ||೫||
ದಯಮಾಡು ದಯಮಾಡು ಶ್ರೀನಿವಾಸ ಭವ
ದಯಮಾಡು ದಯಮಾಡು ಶ್ರೀನಿವಾಸ ಭವ | ನಿವಾರಣ ಭಜಕ ಭಕ್ತರಘನಾಶ ||ಪ||
ನೇಮವೆನ್ನಲಿಲ್ಲ ನಾಮದರಿಕೆಯಿಲ್ಲ | ನಾ ಮಹಾಪಾಪಿಯು ಸ್ವಾಮಿ ನೀನೊಲಿದು ಗಡ ||೧||
ಸದ್ಧರ್ಮ ಸರಕಿಲ್ಲ ಶುದ್ಧ ಬುದ್ಧಿಯಿಲ್ಲ | ಉದ್ಧರಿಸೆನ್ನನಿರುದ್ಧ ಹರಿ ಕರುಣಿ ||೨||
ಸತ್ಕುಲಹೊಂದೇನು ಸತ್ಕರ್ಮ ಮಾರ್ಗಿಲ್ಲ | ಭಕ್ತರಕ್ಷಕ ಪಾಪಮುಕ್ತ ದೇವರ ದೇವ ||೩||
ಅವಗುಣದೆಣಿಕೆಯ ವಿವರ ನೋಡದೆ ಅಯ್ಯ | ಜವನ ಬಲೆಯನು ತಪ್ಪಿಸುವ ಸರೀಸೃಪ ಶಯ್ಯ ||೪||
ಅಜಾಮಿಳ ವ್ಯಾಧ ಆ ಗಜ ಅಹಲ್ಯೋದ್ಧರ | ನಿಜ ಪ್ರಸನ್ವೆಂಕಟೇಶ ಸುಜನ ಪರಿಪೋಷ ||೫||
ದಯಮಾಡೆ ದಯಮಾಡೆ
ದಯಮಾಡೆ ದಯಮಾಡೆ |
ಹಯಮುಖನಿಗೆ ಅತಿ ಪ್ರಿಯ ಕಮಲಾಲಯೆ ||ಪ||
ಹೊಲಬುಗಾಣೆ ಭವ ಜಲಧಿಯೊಳಗೆ ತ್ಪರ |
ಸಲಹು ನಿನ್ನ ಕರಜಲಜದಿ ಪಿಡಿದು ||೧||
ನಳಿನ ಭವಾದ್ಯರ ಸಲಹುವಿ ಈಪ್ಸಿತ |
ಫಲವಿತ್ತು ಕರುಣದಲಿ ಮಹಲಕುಮಿ ||೨||
ಕ್ಷೋಣಿ ಭಣಗು ನಾನೋರ್ವನು ನಿನ್ನಯ |
ಧ್ಯಾನವೆ ಪಾಲಿಸು ಮಾಣದೆ ಜವದಿಮ್ ||೩||
ಶರಣು ಪೊಕ್ಕವರ ಜರಿದರೆ ನನ್ನಯ |
ಬಿರುದಿಗೆ ಬಾಹದೆ ಕೊರತೆಯು ಜಾನಕಿ ||೪||
ಜ್ಞಾನಗಮ್ಯ ಗುರುಪ್ರಾಣೇಶ ವಿಠಲನ |
ಮಾನಿನಿ ಎನ್ನನು ಹೀನತೆ ಎಣಿಸದೆ ||೫||
ದಯಮಾಡೊ ದಯಮಾಡೊ
ದಯಮಾಡೊ ದಯಮಾಡೊ |
ಪಯಸಾಗರದೊಡೆಯನೆ ಶ್ರೀಕೃಷ್ಣಾ ||ಪ||
ಬನ್ನಬಿಡಿಸುವರ್ಭಕನ ದುರಿತವ |
ಘನ್ನ ಮಹಿಮ ನೀಜವದಿಂ ತರದು ||೧||
ನೀ ಪೊರೆಯದೆ ಜರಿದರೆ ಕಾಯ್ವರನಾ |
ಈ ಪೊಡವಿಯೊಳೆಲ್ಲಿಲಿ ಕಾಣೇ ||೨||
ಶೇಷಗಿರಿ ನಿಲಯ ಬಿನ್ನಪ ಲಾಲಿಸೋ |
ಶ್ರೀಶ ಪ್ರಾಣೇಶ ವಿಠಲ ದಯಾಳೋ ||೩||
ದಯದಿ ಪಾಲಿಸೋ ಜಯತೀರಥ
ದಯದಿ ಪಾಲಿಸೋ ಜಯತೀರಥ ರಾಯಾ |ಅಕ್ಷೋಭ್ಯರ ತನಯಾ ||ಪ||
ಅತ್ಯಂತ ಹರುಷದಿ ಎತ್ತಾಗಿರುತಿರಲೂ ಶ್ರೀ | ಆನಂದ ತೀರಥರೂ ನಿತ್ಯ ಪಠಿಸುವೋ ಪುಸ್ತಕ ಹೊರುತಿರಲೂ
ಗುರುರಾಯರು ಪೇಳಿದ ತತ್ವಗ್ರಂಥವನೆ ಕಿವಿಯಲಿ ಕೇಳುತಲೀ | ತಲೆಯನು ತೂಗುತಲೀ
ಮತ್ತೆ ಪುಟ್ಟಿದ್ಯೋ ಮಂಗಳವೇಡೆಯಲೀ | ಅತಿ ಮತಿವಂತರಲೀ ||೧||
ದೇಶಪಾಂಡೆರಾ ಕೂಸಾಗಿ ಜನಿಸೀ | ಘನ ರಾವುತನೆನಿಸೀ ದೇಶ ದೇಶದೋಳ್ ಸೈನ್ಯವನೇ ಚರಿಸೀ |
ಹಣವನ್ನೇ ಗಳಿಸೀ ವಸುಕಿಯೆಂಬೋ ಗುರುತನೆ ತಪ್ಪಿಸೀ | ನದಿಗೇ ನೀರಡಿಸೀ
ಶ್ರೀಶನಾಜ್ಞೆಯೊಳಿವರನೆ ಕರೆತರಿಸೀ | ಶಿಖೆ ಸೂತ್ರವ ತೆಗೆಸೀ ||೨||
ಹಿಂಡು ಹಿಂಡು ಜನ ಅಂಡಲಿಯುತ ಬದೂ | ಅಕ್ಷೋಭ್ಯ ತೀರಥರಾ ಕಂಡು ಭೇಟಿಯಾ ಮಾಡುತಲೇ ನಿಂದೂ
ಧೋಂಡೋ ರಘುನಾಥನ ಹೆಂಡತಿ ಗಂಡನ ಕೂಡಿಸಬೇಕೆಂದೂ | ಸುಮ್ಮನೆ ಕರೆತಂದೂ
ಪ್ರಚಂಡ ಸರ್ಪನಾ ರೂಪವ ತಾಳ್ದಂದೂ ಭಯವ ಪಟ್ಟರಂದೂ ||೩||
ಮಧ್ವ ಶಾಸ್ತ್ರಗಳನುದ್ಧರಿಸುತಲದನಾ | ಟೀಕೆಯನೇ ಮಾಡೀ ವಿದ್ವಜ್ಜನರಿಗೆ ತಿದ್ದಿಯೆ ಪೇಳುತಲೀ |
ನಾನಾ ಬಗೆಯಿಂದಲಿ ಪದ್ಧತಿ ತಿಳಿಸಿದ ಗುರುರಾಯರು ನೀವು | ಯತಿವರ ಸುರಧೇನು
ಅದ್ವೈತರ ಗುರು ವಿದ್ಯಾರಣ್ಯರ | ಗೆದ್ದ ಸಿಂಹ ನೀನೂ ||೪||
ಆಷಾಢ ಬಹುಳ ಪಂಚಮಿಯೂ ಬರುತಾ ಕಳೆಬರವನೆ ಬಿಡುತಾ ವ್ಯಾಸ ವಿಠ್ಠಲನ ಪಾದದಲೇ ನಿರುತಾ | ಮಳಖೇಡದೊಳು ವಾಸಿಪನೆಂಬೋ ಬಲು ಪ್ರಖ್ಯಾತಾ | ನಿಜಗುಣ ಗಣನೀತಾ ಬ್ಯಾಸರದಲೆ ಕೊಂಡಾಡಿದರೆ
ನಿತ್ಯಾ ಇಷ್ಟಾರ್ಥವನಿತ್ತಾ ||೫||
ದಯಾಪೂರ್ಣ ಗುಣನಿಧಿಯೆ ದೀನರಕ್ಷಕನೆಂದು
ದಯಾಪೂರ್ಣ ಗುಣನಿಧಿಯೆ ದೀನರಕ್ಷಕನೆಂದು ಭಯದಿಂದ ನಂಬಿದೆನೋ ರಂಗ |
ಕೈವಿಡಿದು ಕಾಯದಿಹುದು ನಿನಗುಚಿತವೆ ಭಯರಹಿತ | ಗೋವಿಂದ ರಂಗ ||ಪ||
ಇಳೆಸೃಷ್ಟಿಗಾಧಾರನೆಂಬ ಬಿರುದುಳ್ಳಡೆ ಜಗನ್ಮಯನೆ ಚಿನ್ಮಯರೂಪ ರಂಗ | ಪ್ರಿಯರಿಂದ
ಭಜಿಸುವರ ಭಕ್ತವತ್ಸಲ ಏಕೋದೇವ | ನೀನಾದ್ಯಯ ರಂಗ ||೧||
ಸುಜನಮಂದಾರ ಸರಸಿಜಭವಪಿತ ನಿನ್ನ ಪ್ರಜೆಗಳು ಪೊಗಳುತ್ತಿಹರೆ ರಂಗ |
ನಿಜವಾಗಿ ನೆನೆವರ ಹೃದಯಹೃತ್ಕ್ಮಲ ಮನಸಿಜ ಜನಕ | ಮುರಹರನೆ ರಂಗ ||೨||
ಸುಜನರೊಳಗೆನ್ನ ಕುಹಕವ ಮಾಡದೆ ನಿನ್ನ ಭಜಕರೆಂದಿರಲಾಗಿ ರಂಗ |
ಗಜರಾಜವರದ ಗಂಗಾಜನಕ ಸಲಹೆನ್ನ | ಭುಜಗೇಂದ್ರಶಯನ ಶ್ರೀರಂಗ ||೩||
ಧಾತ್ರಿಗಾಧಾರ ಅನಾಥರಕ್ಷಕನೆ ದಯವ್ಯಾತಕೆನ್ನೊಳಿಲ್ಲ ರಂಗ | ವಿಹಿತವೆ ನಿನಗೆ
ನಡುನೀರೊಳಗೆ ಕೈಬಿಡುವುದು ಶ್ರೀಕಾಂತ | ಕಡೆಹಾಯಿಸೊ ರಂಗ ||೪||
ನೋಡ ಶ್ರೀ ಹರಿಯೆ ನೀನಲ್ಲದನ್ಯತ್ರ ದಾತ್ರರಿಲ್ಲವೊ ರಂಗ |
ನೀ ಪರಂಜ್ಯೋತಿಮೂರುತಿಯೆಂದು ನಂಬಿದೆನು ಅಪಾರ ಮಹಿಮ ಶ್ರೀರಂಗ||೫||
ದಣಿಯ ನೋಡಿದೆನೋ
ದಣಿಯ ನೋಡಿದೆನೋ ವೆಂಕಟನ ಮನ ದಣಿಯ ನೋಡಿದೆ ಶಿಖಾಮಣಿ ತಿರುಮಲನ||ಪ||
ಚರಣದಂದುಗೆ ಗೆಜ್ಜೆಯವನ | ಪೀತಾಂ | ಬರ ಉಡಿಗೆ ಒಡ್ಯಾಣವಿಟ್ಟಿಹನ
ಮೆರೆಯುವ ಮಾಣಿಕ್ಯದವನ | ಚೆನ್ನ| ಸರ ಹಾರ ಪದಕ ಕೌಸ್ತುಭ ಧರಿಸಿದನ ||೧||
ಕೊರಳೊಳು ವೈಜಯಂತಿ ಇಹನ | ಕಿರು| ಬೆರಳ ಮುದ್ರಿಕೆ ಭುಜಕೀರ್ತಿಲೊಪ್ಪುವನ |
ಅರಳುಕಂಗಳ ನೋಟದವನ | ಸುಳಿ | ಗುರುಳು ನೊಸಲು ಪಟ್ಟಿ ನಾಮ ಹಚ್ಚಿಹನ ||೨||
ಶಂಖ ಚಕ್ರವ ಪಿಡಿದಿಹನ | ಕೈ | ಕಂಕಣ ತೋಳ್ಬಂದಿ ಬಾಪುರಿಯವನ |
ಶಂಖನೂದುವ ಸರ್ವೋತ್ತಮನ |ಭೂವೈ |ಕುಂಠವಿದೆಂದು ಹಸ್ತದಿ ತೋರಿಸುವನ ||೩||
ಕೇಸಕ್ಕಿ ಅನ್ನ ಉಂಬುವನ| ಬಡ್ಡಿ | ಕಾಸು ಬಿಡದ ಹಾಗೆ ಕೂಡಿ
ಹಾಕುವನ| ಘೋಷಾನಾದಕ್ಕೆ ಒಲಿದಿಹನ| ಮೈಯೊಳ್| ಸೂಸುವ ಗಂಧ ಕಸ್ತೂರಿ ಲೇಪಿತನ ||೪||
ನೀಟಾದ ವಲ್ಲಿ ಹೊದ್ದಿಹನ| ಹೊರ |ಬೇಟೆಯಾಡಿ ಅಂದದಿಂದ ಬರುವನ| ನೋಟದಿ
ಬಂದು ನಿಂತಿಹನ| ಈ| ಸೃಷ್ಟಿಗೊಡೆಯ ಪುರಂದರವಿಠಲನ ||೫||
ದಯೆಮಾಡಿ ಸಲಹಯ್ಯ
ದಯೆಮಾಡಿ ಸಲಹಯ್ಯ ಭಯನಿವಾರಣನೆ ಹಯವದನ ನಾ ನಿನ್ನ ಚರಣ ನಂಬಿದೆ ಕೃಷ್ಣ ||ಪ||
ಕ್ಷಣಕ್ಷಣಕೆ ನಾ ಮಾಡಿದಂಥ ಪಾಪಗಳೆಲ್ಲ | ಎಣಿಸಲಳವಲ್ಲಷ್ಟು ಇಷ್ಟು ಎಂದು ||
ಫಣಿಶಾಯಿ ಅವಗುಣವ ನೋಡದೇ ಚರಣ ಸ್ಮ-|ರಣೆಯ ಮಾಡುವಂಥ ಭಕುತಿಯನಿತ್ತು ||೧||
ಕಂಡಕಂಡ ಕಡೆಗೆ ಪೋಪ ಚಂಚಲ ಮನಸು | ಲಂಡತನದಲಿ ಬಹಳ ಭ್ರಷ್ಟ ನಾನು|
ಭಂಡಾಟದವನೆಂದು ಬಹಿರಂಗಕೆಳೆಯದೇ | ಕೊಂಡಾಡುವಂಥ ಭಕುತಿಯನಿತ್ತು ಸಲಹಯ್ಯ ||೨||
ಜಾತಿಧರ್ಮವ ಬಿಟ್ಟು ಅಜಮಿಳನು ಇರುತಿರಲು | ಪ್ರೀತಿಯಿಂದಲಿ ಮುಕುತಿಕೊಡಲಿಲ್ಲವೇ|
ಖ್ಯಾತಿಯನು ಕೇಳಿ ಮೊರೆಹೊಕ್ಕೆ ದಯಾನಿಧಿಯೆ ಬೆ| ನ್ನಾತು ಕಾಯಯ್ಯ ಶ್ರೀಪುರಂದರವಿಠಲ||೩||
ದಯ ಮಾಡೊ ದಯ ಮಾಡೊ
ದಯ ಮಾಡೊ ದಯ ಮಾಡೊ ರಂಗ | ದಯ ಮಾಡೊ ನಿನ್ನ ದಾಸನು ನಾನೆಂದು ||ಪ||
ಹಲವು ಕಾಲದಿ ನಿನ್ನ ಹಂಬಲ ಎನಗೆ |
ಒಲಿದು ಪಾಲಿಸಬೇಕು ವಾರಿಜನಾಭ |ದಯ||೧||
ಇಹಪರ ಗತಿ ನೀನೆ ಇಂದಿರಾರಮಣ
ಸಹಾಯ ನಿನ್ನದೆ ಸರ್ವದಾ ತೋರಿ ಕರುಣ |ದಯ||೨||
ಕರಿರಾಜವರದನೆ ಕಾಮಿತಫಲದ |
ಪುರಂದರವಿಠಲನೆ ಹರಿ ಸಾರ್ವಭೌಮ |ದಯ||೩||
ದಯವಿರಲಿ ವ್ಯಾಸ ದಯವಿರಲಿ
ದಯವಿರಲಿ ವ್ಯಾಸ ದಯವಿರಲಿ | ಕೈವಲ್ಯಪತಿ ನಮಗೆ ಕರುಣೆ ಮಾಡೊ ಪೂರ್ಣ ||ಪ||
ಚಲ್ವರಾಯರ ಮನೆಯ ಕುಲದೈವ ವ್ಯಾಸನು | ಬಲರಾಮ ಪಾದವ ತೊಳೆದನು ಪೂರ್ಣ |
ಬಲರಾಮ ಪಾದ ತೊಳೆದು ಪ್ರಾರ್ಥಿಸಿದನು |ಹಲವು ಪದಾರ್ಥ ಕೈಕೊಳ್ಳೊ ಪೂರ್ಣ||೧||
ತಂದೆ ವ್ಯಾಸ ಮುನಿಗೆ ಗಂಧ ಅಕ್ಷತೆ ಪುಷ್ಪ | ಚಂದದ ತುಳಸಿಜಲದಿಂದ ಪೂರ್ಣ |
ಚಂದದ ತುಳಸಿಜಲದಿಂದ ಬಲರಾಮನು | ಗೋವಿಂದಗರ್ಪಿಸಿದ ಹರುಷದಿ ಪೂರ್ಣ ||೨||
ಸತ್ಯವತಿಯ ಮಗನ ಮುತ್ತು ರತ್ನದ ವಸ್ತು | ಲಕ್ಷ ಸೂರ್ಯರ ಬೆಳಕಿಲೆ ಪೂರ್ಣ |
ಲಕ್ಷ ಸೂರ್ಯರ ಬೆಳಕಿಲೆ ಉಚಿತವ | ಅರ್ಥಿಲೆ ರಾಮೇಶ ಕೈಕೊಳ್ಳೊ ಪೂರ್ಣ ||೩||
ದಯಮಾಡೊ ರಂಗ ದಯಮಾಡೊ
ದಯಮಾಡೊ ರಂಗ ದಯ ಮಾಡೊ | ಕೈವಲ್ಯಪತಿ ನಮಗೆ ಕರುಣೆ ಮಾಡೊ ಕೃಷ್ಣ ||ಪ||
ಕುಂತಿ ದೇವಿಯರು ತಂದ ಅನಂತ ಪದಾರ್ಥವ | ಶಾಂತ ಮೂರುತಿಯೆ ಕೈಕೊಳ್ಳೊ ಕೃಷ್ಣ |
ಶಾಂತ ಮೂರುತಿಯ ಕೈಕೊಳ್ಳೊ ಎನುತಲಿ | ಕಾಂತೆ ಸುಭದ್ರಾ ನುಡಿದಳು ||೧||
ಶ್ರೀದೇವಿಯರಸನ ಪಾದವ ತೊಳೆದರು |ಕ್ಯ್ಯಾದಿಗೆ ಗಂಧ ತುಳಸಿ |
ಕ್ಯಾದಿಗೆ ಗಂಧ ತುಳಸಿ ಅಕ್ಷತೆಯಿಂದ | ವೇದಗೋಚರನ ಉಪಚರಿಸಿ ||೨||
ಸುರರಿಗಭಯವಿತ್ತು ಕರದಿ ವೀಳ್ಯವಕೊಟ್ಟು | ವರಪೋಗಿ | ಫಲವ ನಡುವಿಟ್ಟು |
ವರ ಪೋಗಿ ಫಲವ ನಡುವಿಟ್ಟು ರಾಮೇಶಗೆ | ಕರವ ಜೋಡಿಸುತ ಐವರು ||೩||
ದಯಮಾಡೋ ದಯಾಸಾಗರ
ದಯಮಾಡೋ ದಯಾಸಾಗರ ||ಪ||
ಕರುಣಾ ಕಟಾಕ್ಷನೆ ವರಪೀನ ವಕ್ಷನೆ |ಪರಮ ಪುರುಷ ಪವನಾತ್ಮನೇ |
ಪರಮ ಪುರುಷ ಪವನಾತ್ಮನೇ ||೧||
ಅಂಬುಜನಾಭನೆ ಕಂಬು ಕಂದರನೆ | ಸಂಭ್ರಮದಿ ಕಾಯೊ ದೇವನೆ |
ಸಂಭ್ರಮದಿ ಕಾಯೊ ದೇವನೆ ||೨||
ಜ್ಞಾನಿಗಳರಸನೆ ಪ್ರಾಣನಾಥವಿಠಲನೆ | ಮಾನದಿಂದ ಕಾಯೋ ದೇವನೆ |
ಮಾನದಿಂದ ಕಾಯೋ ದೇವನೆ||೩||
ದಯಮಾಡೊ ದಯಮಾಡೊ ಗುರು
ದಯಮಾಡೊ ದಯಮಾಡೊ ಗುರು ಶ್ರೀನಿವಾಸಾ ||ಪ||
ವಿ| ನಯದಿಂದ ಬೇಡುವೆ ಚಿರಸಹವಾಸಾ ||ಅ ಪ||
ಭಾಸುರಚರಿತ ನಿರ್ಲಿಪ್ತಾತಿಗೋಪ್ತ | ದಾಸವಿಜಯಾರ್ಯೇಣ ಸ್ವಪ್ನದಿ
ಪ್ರಾಪ್ತ| ಶ್ರೀಶವೆಂಕಟೇಶಾಂಕಿತ ಜ್ಞೇಯತೃಪ್ತಾ | ಕ್ಲೇಶವ್ಯಾಮೋಹತಾಮಿಶ್ರ ಅಬ್ದಾಪ್ತ ||೧||
ಲೌಕಿಕಕಾಸಾರನೀರೇಜಪತ್ರಾ | ನೇಕಸುಗುಣ ಧ್ಯಾತವ್ಯಚಾರಿತ್ರ | ಟೀಕಾಕೃತ್ಪ್ರಭು ನಿರಂತರ
ಕೃಪಾಪಾತ್ರ | ತೋಕ ನಾ ನಿನಗೆ ಕವಿಕಾಮಿನಿಭರ್ತಾ ||೨||
ಎಷ್ಟು ಕರುಣಾಮಯ ಉರಗಾದ್ರಿವಾಸ | ವಿಠಲೋಪಾಸಕ ತನ್ನ ದಿವ್ಯಹೃತ್ಸಾರಸಾ ಧಿಷ್ಠಾತ ಸ್ವಯಂವ್ಯಕ್ತ
ತಂದೆವೆಂಕಟೇಶಾ | ವಿಠ್ಠಲಾಂಕಿತವಿತ್ತು ಕೊಟ್ಟಾ ಸಂದೇಶ ||೩||
ದಯ ಬೀರೋ ದಯಾ ನಿಧೆ ದಯ
ದಯ ಬೀರೋ | ದಯಾ ನಿಧೆ | ದಯ ಬೀರೋ ||ಪ||
ದಯ ಬೀರೆ ದುರ್ಭವ | ಭಯ ಪರಿಹರ ನಿರ್ |
ಭಯನಾಮಕ ಹರಿ | ಹಯಮುಖ ಕೃಷ್ಣಯ್ಯ ||ಅ||
ಪಾಪಿ ನಾನಹುದೋ | ಹೇ ಪಾವನ ಮೂರ್ತೇ |
ನೀ ಪೋಷಿಸದಿರೆ | ಕಾಪಾಡೋರ್ಯಾರೋ ||೧||
ದಿನದಿನಕನೇಕ | ಲಂಕಾರ ಭೂಷಿತ |
ದಿನಮಣಿ ಅಮಿತಾಭ | ಘನ ಮಹಿಮನೆ ಕೃಷ್ಣ ||೨||
ಕಡುಗೋಲು ನೇಣನು | ಪಿಡಿದು ಭಕ್ತೀ ಎಂಬ|
ಮುಡುಪ ಕೊಳ್ಳುವ ಗುರು | ಗೋವಿಂದ ವಿಠಲಯ್ಯ ||೩||
ದತ್ತ ಮುನೀಂದ್ರನೆ ಅಕ್ಷೋಭ್ಯ ಮುನಿಪಾ
ದಕ್ಷ ಮುನೀಂದ್ರನೆ ಅಕ್ಷೋಭ್ಯ ಮುನಿಪಾ |
ದೀಕ್ಷೆಯನೀಯೋ ಹರಿಧ್ಯಾನದಲಿ ||ಪ||
ಚತುರರಾದ ಆನಂದತೀರ್ಥರ |
ಚತುರ ಶಿಷ್ಯನಾಗಿ ಮೆರೆದವನೆ |
ಚತುರ ಮತಿಯನು ನೀಡೆಂದು ಬೇಡುವೆ |
ಚತುರ ಮೊಗದವನ ಪಡೆದವನ ಪ್ರಿಯ ||೧||
ವರಭಾಷ್ಯ ಮೊದಲಾದ ಉದ್ಗ್ರಂಥಗಳನ್ನೆಲ್ಲಾ |
ಗುರುಮುಖದಿ ಕಲಿತು ನೀ ಕೀರ್ತಿಯನು ಪಡೆದೆ |
ವರ ಕಾಗಿನೀ ತೀರದಿ ಧಾಮವನು ಮಾಡುತಲಿ |
ಸ್ಥಿರವಾಗಿ ನಿಂತು ನೀ ಭಕುತರನು ಪೊರೆವೆ ||೨||
ಜಯತೀರ್ಥ ಮುನಿ ವಂದ್ಯ ಜಯವ ನೀಡೆಲೊ ನಮಗೆ |
ನಯ ವಿನಯದಿಂದಲಿ ಬೇಡುವೆನು ಯತಿಯೇ |
ಜಯರಮಣ ನಮ್ಮ ಗುರುಶಾಮಸುಂದರಗೆ |
ಭಯ ಭಕುತಿಯಿಂದಲಿ ಪೂಜಿಸಿದ ಯತಿಯೇ ||೩||
ದತ್ತ ದತ್ತೆನ್ನೆಲು ಹತ್ತಿ ತಾಂ ಬಾಹನು
ದತ್ತ ದತ್ತೆನ್ನಲು ಹತ್ತಿ ತಾಂ ಬಾಹನು | ಚಿತ್ತದೊಳಾಗುವಾ ಮತ್ತ ಶಾಶ್ವತನು |
ದತ್ತ ಉಳ್ಳವನ ಹತ್ತಿಲೇ ಈಹನು | ವೃತ್ತಿ ಒಂದಾದರೆ ಹಸ್ತಗುಡುವನು ||೧||
ಎತ್ತ ನೋಡಿದರೆ ಮೊತ್ತನಾಗಿಹ ತಾಂ | ಉತ್ತಮೊತ್ತಮತಾನೆತ್ತುತಾ ಈತಾ |
ಅತ್ತಲಿತ್ತಾಗದೆ ಹತ್ತಿಲೆ ಸೂಸುತ | ಮುತ್ತಿನಂತಿಹ್ವನು ನೆಲಿಲೆ ಭಾಸುತಾ ||೨||
ದತ್ತನೆಂದೆನ್ನಲು ಕತ್ತಲೆಣ್ಯೋಗುದು | ಮೃತ್ಯು ಅಂಜುತಲಿ ಭೃತ್ಯನಾಗಿಹುದು |
ದತ್ತನಿಂದಧಿಕ ಮತ್ತು ತಾಂ ಒಂದು | ಉತ್ತಮರಿಗೆ ತಾ ಸತ್ಯ ಭಾಸುದು ||೩||
ಒತ್ತಿ ಉನ್ನನಿಯಾವಸ್ಥಿ ಯೊಳಾಡುವುದು | ಸ್ವಸ್ತಮನಾದರೆ ವಸ್ತು ಕೈಗೂಡದು |
ಬಿತ್ತಿ ಮನ ಗುರುಭಕ್ತಿ ಮಾಡುವದು | ದತ್ತ ತನ್ನೊಳು ತಾನೆವೆ ಭಾಸುವದು ||೪||
ದತ್ತ ದತ್ತೆಂದು ತಾ ಅರ್ತ ಮಹಿಪತಿಯ | ಬೆರ್ತ ನೋಡಿದ ಮನವು ಸುಮೂರ್ತಿಯು |
ಮರ್ತದೊಳಿದುವೆ ಸುಖವಿಶ್ರಾಂತಿಯು | ಮರ್ತುಹೋಗುವದು ಮಾಯದ ಬ್ರಾಂತಿಯು ||೫||
ದತ್ತ ನಮ್ಮನಿ ದೈವ ಚಿತ್ತಮನದೊಳಗಿಹ್ಯ
ದತ್ತ ನಮ್ಮನಿ ದೈವ ಚಿತ್ತಮನದೊಳಗಿಹ್ಯ |
ಎತ್ತ ಹೋದರು ನಮ್ಮ ಹತ್ತಿಲಿಹನೊ ||೧||
ಸುತ್ತ ಸೂಸುತಲಿಹ್ಯ ನಿತ್ಯ ನಿಜ ಘನವಾಗಿ |
ಹೃತ್ಕಮಲದೊಳು ತಾಂ ಮುತ್ತಿನಂತೆ ||೨||
ಗುತ್ತಳಿದು ಒಳಗ ತಾಂ ಪುಥ್ಥಳಿಯು ಹೊಳೆವ ಪರಿ |
ಮೊತ್ತವಾಗಿಹ್ಯ ಪೂರ್ಣ ನೆತ್ತಿಯೊಳಗ ||೩||
ದತ್ತವುಳ್ಳವನಿಗೆ ಹತ್ತಿಸಂಗಡ ಬಾಹ |
ವಿತ್ತ ಒಡಿವ್ಯಾಗೆ ತಾಂ ಕರ್ತುನಮ್ಮ ||೪||
ದತ್ತಗಿಂದಧಿಕ ಮತ್ತೊಂದು ದೈವವು ಕಾಣೆ |
ಪೃಥ್ವಿಯೊಳು ಮಹಿಪತಿವಸ್ತು ಒಂದೆ ||೫||
ದಾಸರೆಂದರೆ ಪುರಂದರದಾಸರಯ್ಯ
ದಾಸರೆಂದರೆ ಪುರಂದರದಾಸರಯ್ಯ ||ಪ||
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ ||ಅ ಪ||
ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು | ದಾಸನೆಂದು ತುಲಸಿ ಮಾಲೆ ಧರಿಸಿ |
ಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ | ಕಾಸುಗಳಿಸುವ ಪುರುಷನವ ಹರಿ ದಾಸನೇ ||೧||
ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆ | ಸಂಭ್ರಮದಿ ತಾನುಂಬ ಊಟ ಬಯಸಿ |
ಅಂಬುಜೋದ್ಭವ ಪಿತನ ಆಗಮಗಳರಿಯದಲೆ | ತಂಬೂರಿ ಮೀಟಲವ ಹರಿದಾಸನೇ ||೨||
ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನ | ಪ್ರೀಯದಲಿ ತಾನೊಂದು ಕೊಡದ ಲೋಭಿ |
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು | ಗಾಯನವ ಮಾಡಲವ ಹರಿದಾಸನೇ ||೩||
ಪಾಠಕನ ತೆರದಲ್ಲಿ ಪದಗಳನೆ ತಾ ಬೊಗಳಿ | ಕೂಟ ಜನರ ಮನವ ಸಂತೋಷಪಡಿಸಿ |
ಗೂಟ ನಾಮಗಳಿಟ್ಟುಕೊಂಡಿರಿಯ ತಾನೆನುತ | ತೂಟಕವ ಮಾಡಲವ ಹರಿದಾಸನೇ ||೪||
ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ | ವಾತಸುತನಲ್ಲಿಹನ ವರ್ಣಿಸುತಲಿ | ಗೀತ
ನರ್ತನದಿಂದ ಕೃಷ್ಣನ್ನ ಪೂಜಿಸುವ ಪೂತಾತ್ಮ ಪುರಂದರ ದಾಸರಿವರಯ್ಯ ||೫||
ದಾರಿಯ ತೋರೋ ಗೋಪಾಲ
ದಾರಿಯ ತೋರೋ ಗೋಪಾಲ ||ಪ||
ವಾರಿಜನಾಭ ವೈಕುಂಠಲೋಲ ||ಅ.ಪ||
ಸಿಕ್ಕಿದೆ ಭವಪಾಶದೊಳಗೆ | ಲೆಕ್ಕವಿಲ್ಲದ ಜಂತುಗಳಿಗೆ |
ದಿಕ್ಕೊಬ್ಬರಿಲ್ಲವೊ ಎನಗೆ | ಕಕ್ಕಸವ ಕಳೆದು ನಿನ್ನಯ ಪಾದಗಳಿಗೆ ||೧||
ಗಜರಕ್ಷಕನು ನೀನೆಂದು | ಅಜರುದ್ರಾದಿಗಳಂದು | ನಿಜವಾಗಿ
ಪೇಳಿದರೆಂದು | ಸುಜನರೊಡೆಯನು ಕೇಳಿದೆ ನಾನಿಂದು ||೨||
ವರದ ಶ್ರೀಹಯವದನ ಬಾರೈ | ಕರೆದೆನ್ನ ದಾರಿಯ ತೋರೈ |
ಪರಮ ಭಕ್ತರೊಳಿನ್ನಾರೈ | ಪರಮಪುರುಷ ನೀನಲ್ಲದೆ ಗತಿಯಾರೈ ||೩||
ದಾನವಿಲ್ಲ ಧರ್ಮವಿಲ್ಲ ಜ್ಞಾನವಿಲ್ಲ
ದಾನವಿಲ್ಲ ಧರ್ಮವಿಲ್ಲ ಜ್ಞಾನವಿಲ್ಲ | ಏನು ಹೇಳಿದರೇನು ವಿಷಯ ಮೆಚ್ಚಿದವಗೆ ||ಪ||
ಕಂಡಕಂಡವರ ಅನ್ನಕೆ ಸಿಲುಕಿ ಅನುಗಾಲ | ಭಂಡತನದಲಿ ಕಾಲವ ಕಳೆಯುತ |
ತಂಡ ತಂಡದಿ ಬಾಹ ಔತಣಕೆ ಮೈಯುಬ್ಬಿ | ಉಂಡು ಎನಗಿಂದಧಿಕ ಯೋಗ್ಯನಿಲ್ಲವೆಂದು ||೧||
ಪರ್ವಕಾಲ ಪಿತೃದಿವ್ಯ ಗುರುಗಳ ಪುಣ್ಯದಿನ | ಸರ್ವಕರ್ಮವ ತ್ಯಜಿಸಿ ಅತಿಥಿಗೀಯದೆ |
ಪರರ ಅನ್ನವ ಬಿಡದೆ ಉತ್ಸಾಹದಲಿ ಪೋಗಿ | ನಲಿನಲಿದುಂಡು ಸ್ತೋತ್ರವ ಮಾಡಿ ದಿನಕಳೆವೆ ||೨||
ಅನ್ಯರೊಡವೆಯು ತನಗೆ ಬಂದರೆ ಸಂತೋಷ | ತನ್ನೊಡವೆ ಒಬ್ಬರಿಗೆ ಕೊಡಲು ಕ್ಲೇಶ |
ಉನ್ಮತ್ತನಾಗಿ ಉದರ ಪೊರೆವ ಈ ದೋಷ | ಮನ್ನಿಸಿ ದಯಮಾಡಿ ಸಲಹೋ ಹಯವದನ ||೩||
ದಾಸದಾಸರ ಮನೆಯ ದಾಸಿಯರ
ದಾಸದಾಸರ ಮನೆಯ ದಾಸಿಯರ ಮಗ ನಾನು ||ಪ||
ಸಾಸಿರನಾಮದೊಡೆಯ ರಂಗಯ್ಯನ ಮನೆಯ ||ಅ||
ಶಂಕುದಾಸರ ಮನೆಯ ಮಂಕುದಾಸನು ನಾನು |
ಮಂಕುದಾಸನು ನಾನು ಮರುಳು ದಾಸ |
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ |
ಬಿಂಕದಿ ಬಾಗಿಲ ಕಾಯ್ವ ಬಡದಾಸ ನಾನಯ್ಯ ||೧||
ಕಾಳಿದಾಸರ ಮನೆಯ ಕೀಳುದಾಸ ನಾನಯ್ಯ |
ಆಳುದಾಸನು ನಾನು ಮೂಳದಾಸ |
ಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯ |
ಆಳಿನಾಳಿನ ದಾಸನಡಿದಾಸ ನಾನಯ್ಯ ||೨||
ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ |
ಕುಲವಿಲ್ಲದ ದಾಸ ಕುರುಬ ದಾಸ |
ಛಲದಿ ನಿನ್ನ ಭಜಿಸುವವರ ಮನೆಯ ಮಾದಿಗ ದಾಸ|
ಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ ||೩||
ದಾನಧರ್ಮವ ಮಾಡಿ ಸುಖಿಯಾಗು ಮನವೆ
ದಾನಧರ್ಮವ ಮಾಡಿ ಸುಖಿಯಾಗು ಮನವೆ ||ಪ||
ಹೀನವೃತ್ತಿಯಲಿ ನೀ ಕೆಡಬೇಡ ಮನವೆ ||ಅ||
ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿಯು ಚೌಡಿ | ಅಕ್ಕರಿಯಿಂದಲಿ ಪೂಜೆ ಮಾಡಲೇಕೆ |
ಕಿಕ್ಕಿರಿದು ಯಮನ ದೂತರೆಳೆದೊಯ್ವಾಗ | ಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ ||೧||
ಸಂಭ್ರಮದಲೊಂದ್ ಹೊತ್ತು ನೇಮದಲಿದ್ದು | ತಂಬಿಟ್ಟಿನಾ ದೀಪ ಹೊರಲೇತಕೆ |
ಕೊಂಬು ಹೋತು ಕುರಿ ಕೋಣನಾ ಬಲಿಗೊಂಬ | ಡೊಂಬಿ ದೈವಗಳ ಭಜಿಸದಿರು ಮನವೆ||೨||
ಚಿಗುರೆಲೆ ಬೇವಿನಸೊಪ್ಪು ನಾರಸೀರೆ | ಬಗೆಬಗೆಯಿಂದ ಶೃಂಗಾರ ಮಾಡಿ | ನೆಗೆನೆಗೆದು
ಆಡಲು ಕುಣಿಯಲು ನಿನಗಿನ್ನು | ಮಿಗಿಲಾದ ಮುಕುತಿಯುಂಟೇ ಹುಚ್ಚು ಮನವೆ ||೩||
ದಾನಧರ್ಮ ಪರೋಪಕಾರವ ಮಾಡು | ದೀನನಾಗಿ ನೀ ಕೆಡಬೇಡವೊ | ಜ್ಞಾನವಿಲ್ಲದೆ
ಹೀನ ದೈವವ ಭಜಿಸಲು | ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ ||೪||
ನರ ಲೋಕದಿ ಯಮನ ಬಾಧೆಯ ಕಳೆಯಲು | ವರಪುಣ್ಯ ಕಥೆಗಳ ಕೇಳುತಲಿ |
ಸಿರಿಯಾದಿಕೇಶವರಾಯನ ನೆರೆ ನಂಬಿ | ಸ್ಥಿರವಾದ ಪದವಿಯ ಪಡೆ ಹುಚ್ಚು ಮನವೆ ||೫||
ದಾಸ ದಾಸ ದಾಸರ ದಾಸ್ಯವ
ದಾಸ ದಾಸ ದಾಸರ ದಾಸ್ಯವ ಕೊಡೊ ದೋಷ ರಾಶಿಯಳಿದು ||ಪ||
ಶ್ರೀಶಾ ಧೀಶ ಸರ್ವೇಶ ಸುರೇಶ್ವರ | ಭಸುರ ಗುಣಗಣ ಭವ್ಯ ಶರೀರ ||ಅ||
ಚಿತ್ತ ನಿನ್ನ ಪದ ಸೇವೆಯೊಳಿರಲಿ- ಚಿಂತೆ ಇತರ ಬಿಡಲಿ | ಅಂತರಂಗದಲ್ಲಾನಂದಿಸಲಿ- ಅಹಂಕೃತಿಯನ್ನೆ ಬಿಡಲಿ |
ಸಂತತ ನಿನ್ನ ಪದ ಪಂಕಜ ಭಕ್ತರ- ಪಂಥವ ಪಾಲಿಸೊ ಪರಮ ಪುರುಷ ಹರಿ ||೧||
ಅರಿಷಡ್ವರ್ಗಗಳಟವಿಯ ಖಂಡಿಸು- ಆನಂದದಲಿರಿಸು | ದುರುಳರ ಸಂಗವ ದೂರ ಮಾಡಿಸು- ದುರ್ಮತಿಯನೆ
ಬಿಡಿಸು | ಸರಸ ಸಂಭ್ರಮ ಸನ್ನುತ ಭಕುತರೋಳ್- ನಿರುತವು ನಿಲ್ಲಿಸೋ ನೀರಜಾಕ್ಷ ಹರಿ ||೨||
ತ್ರಿಜಗನ್ಮೋಹನಾಕಾರ ತ್ರಿ-ಗುಣಾತೀತ ತೀರ್ಥಪಾದ | ಭಜಕರ ಪಾವನ ಭವನುತ ಚರಣ-
ಋಜಗಣನುತಾಭರಣ | ವಿಜಯವಿಠ್ಠಲಾಧೀಶ ವಿಶ್ವೇಶ್ವರ ಕುಜನ ವಿದಾರಣ ಕೋವಿದನುತ ಹರಿ ||೩||
ದಾಸೋತ್ತಮ ನೀನೇ
ದಾಸೋತ್ತಮ ನೀನೇ ಶ್ರೀ ವೈಕುಂಠ | ದಾಸೋತ್ತಮ ನೀನೆ ||ಪ||
ಮಕ್ಕಳುಗಳಿಗೆ ಮೊಮ್ಮಕ್ಕಳುಗಳಿಗೆ ದೇ | ವಕ್ಕಳಿಗೆ ಮನುಮುನಿಗಳಿಗೆ |
ಸಿಕ್ಕದ ಪರಬೊಮ್ಮನ ಕೂಸುಮಾಡಿ ತಂದಿಕ್ಕಿ ತೊಡೆಯಮ್ಯಾಲೆ ಆಡಿಸಿ ಮುದ್ದಿಸುತಿಹ ||೧||
ವೇದ ಶಾಸ್ತ್ರಾದಿಗಳಿಗೆ ಮೈಯದೋರದ | ನಾದಿ ಪುರುಷನ ನೀನೊಲಿಸಿಕೊಂಡೆ |
ಈ ಧರೆಯವರ ಪಾವನ ಮಾಡಲೋಸುಗ | ಸಾಧು ಸಜ್ಜನ ಅಪರೋಕ್ಷ ಜ್ಞಾನಿಯಾದೆ ||೨||
ಹರಿಸರ್ವೋತ್ತಮ ಹಯವದನ ಮೂರುತಿ ವೇಲಾ | ಪುರದರಸಗೆ ಪ್ರತಿಬಿಂಬನಾದ |
ವರ ವೈಕುಂಠ ದಾಸೋತ್ತಮ ಎನಗೆ ಹರಿಯ |ತೋರಿಸಿ ಪರಮ ಧನ್ಯನಮಾಡಿದೆ ||೩||
ದಾಸನಾಗೋ ಪ್ರಾಣಿ
ದಾಸನಾಗೋ ಪ್ರಾಣಿ ಬರಿದೆ | ಈಶನ ನೀ ಕಾಣಿ ||ಪ||
ದಾಸನಾಗು ರಮೇಶನ ಪಾದ | ಹೇಸಿಮನಸಿನ ಕ್ಲೇಶನ ನೀಗಿ ||ಅ ಪ ||
ಸಮ್ಮು ಬಿಟ್ಟುಬಿಡೋ ಈಶತ್ವ | ಸುಮ್ಮನಲ್ಲ ನೋಡೋ |
ಸುಮ್ಮತೇಳಬೇಡೋ ಮಹವಾಕ್ಯ | ಮರ್ಮಶೋಧ ಮಾಡೋ | ಹಮ್ಮು ಅಹಂಕಾರ ದೂಡಿ
ನಿರ್ಮಲಮತಿಗೂಡಿ | ಒಮ್ಮನದಿಂ ಪರಬ್ರಹ್ಮನ ಪಾಡಿ ||೧||
ಶಂಕೆಯ ನೀಡ್ಯಾಡೋ ಚಿತ್ತದ ಕ| ಲಂಕ ದೂರ ಮಾಡೊ |
ಓಂಕಾರರ್ಥ ಮಾಡೋ ಬ್ರಹ್ಮದ | ಅಂಕಿತಿಟ್ಟು ಪಾಡೋ |
ಕಿಂಕರನಾಗದೆ ಶಂಕರ ನಿನಗೆಲ್ಲಿ | ಮಂಕುತನವ ಬಿಟ್ಟು ಸಂಕರುಷಣನ ||೨||
ಹಾಳು ವಾಸನೆ ತೂರಿ ನಿಜವಾದ | ಶೀಲ ಜನರ ಸೇರಿ |
ಮೂಲತತ್ತ್ವದಾರಿ ಅನುಭವ | ಕೀಲಿ ತಿಳಿದು ಭೇರಿ |
ತಾಳನಿಕ್ಕುತ ಮಮಶೀಲ ಶ್ರೀರಾಮನ | ಮೇಲೆಂದು ನಂಬಿ ಭವಮಾಲೆ ಗೆಲಿದು ನಿಜ ||೩||
ದಾಸರಾಯ ಪುರಂದರದಾಸರಾಯ
ದಾಸರಾಯ ಪುರಂದರದಾಸರಾಯ ||ಪ||
ದಾಸರಾಯ ಪ್ರತಿವಾಸರದಲಿ ಶ್ರೀನಿ ವಾಸನ್ನ ತೋರೋ ದಯಾಸಾಂದ್ರ ||ಅ||
ವರದನಾಯಕ ಭೂಸುರನ ಮಡದಿ ಬ | ಸಿರಲಿ ಜನಿಸಿ ಬಂದು ಮೆರೆದೆ ಧರಣಿಯೊಳು ||೧||
ಕುಲಿಶಧರಾಹ್ವಯ ಪೊಳಲೊಳು ಮಡದಿ ಮ | ಕ್ಕಳಕೂಡಿ ಸುಖದಿ ಕೆಲ ಕಾಲದಲಿದ್ಯೊ ||೨||
ವ್ಯಾಸರಾಯರಲಿ ಭಾಸುರ ಮಂತ್ರೋಪ | ದೇಶವ ಕೊಂಡು ರಮೇಶನ ಒಲಿಸಿದ್ಯೊ ||೩||
ಮನೆ ಧನ ಧಾನ್ಯ ವಾಹನ ವಸ್ತುಗಳನೆಲ್ಲ | ತೃಣಕೆ ಬಗೆದು ಕೃಷ್ಣಾರ್ಪಣವೆಂದರೆ ಬುಧರಿಗೆ ||೪||
ಪ್ರಾಕೃತ ಭಾಷೆಯೊಳ್ ನೀ ಕೃತಿ ಪೇಳಿ ಅ | ಪ್ರಾಕೃತ ಹರಿಯಿಂದ ಸ್ವೀಕೃತ ನೀನಾದ್ಯೊ ||೫||
ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ | ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ ||೬||
ಪಾತಕ ವನಧಿ ಸೋತನೆನಿಪ ಜಗ |ನ್ನಾಥ ವಿಠ್ಠಲನ ಸುಪ್ರೀತಿಯಿಂದೊಲಿಸಿದೆ ||೭|
ದಾಸೋಹಂ ತವ ದಾಸಹೋಂ
ದಾಸೋಹಂ ತವ ದಾಸೋಹಂ ||ಪ||
ವಾಸುದೇವ ವಿಗತಾಘಸಂಘ ತವ ||ಅ ಪ ||
ಜೀವಾಂತರ್ಗತ ಜೀವ ನಿಯಾಮಕ | ಜೀವ ವಿಲಕ್ಷಣ ಜೀವನದ | ಜೀವಾಧಾರಕ ಜೀವರೂಪಿ
ರಾ | ಜೀವ ಭವಜನಕ ಜೀವೇಸ್ವರ ತವ ||೧||
ಕರ್ಮಕರ್ಮಕೃತ ಕರ್ಮಕೃತಾಗಮ ಕರ್ಮಫಲಪ್ರದ ಕರ್ಮಜಿತ |
ಕರ್ಮಬಂಧ ಮಹಕರ್ಮ ವಿಮೋಚಕ | ಕರ್ಮನಿಗ್ರಹ ಕರ್ಮಸಾಕ್ಷಿ ತವ ||೨||
ಕಾಲಾಹ್ವಯ ಮಹಕಾಲ ನಿಯಾಮಕ | ಕಾಲಾತೀತ ತ್ರಿಕಾಲಜ್ಞ |
ಕಾಲಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೩||
ಧರ್ಮಯೂಪ ಮಹಧರ್ಮವಿವರ್ಧನ| ಧರ್ಮವಿಧೋತ್ತಮ ಧರ್ಮನಿಧೇ|
ಧರ್ಮಸೂಕ್ಷ್ಮ ಮಹಧರ್ಮ ಸಂರಕ್ಷಕ | ಧರ್ಮಸಾಕ್ಷಿ ಯಮಧರ್ಮಪುತ್ರ ತವ ||೪||
ಮಂತ್ರಯಂತ್ರ ಮಯ ಮಂತ್ರ ಬೀಜ ಮಹ | ಮಂತ್ರರಾಜಗುರು ಮಂತ್ರ ಜಿತ |
ಮಂತ್ರಮೇಯ ಮಹಮಂತ್ರಗಮ್ಯ ಫಲ | ಮಂತ್ರಮೇಯ ಜಗನ್ನಾಥ ವಿಠಲ ತವ ||೫||
ದಾಸರಿಗುಂಟೆ ಭಯಶೋಕ ಹರಿ
ದಾಸರಿಗುಂಟೆ ಭಯಶೋಕ ಹರಿ || ದಾಸರಿಗುಂಟೆ ಭಯಶೋಕ ||ಪ||
ವಾಸುದೇವನ ಸದಾಸ್ಮರಿಸುವ ಹರಿ | ದಾಸರಿಗುಂಟೆ ಭಯಶೋಕ||ಅ.ಪ||
ಕಾಮಧೇನು ವರ ಕಲ್ಪವೃಕ್ಷ ಚಿಂತಾಮಣಿ ಕೈ ಸೇರಿದಕಿಂತ |
ನಾಮತ್ರಯದಿಂದಪ್ಪುದು ಸುಖವು ಸು | ಧಾಮನೆ ಸಾಕ್ಷಿದಕೆಂಬ ಹರಿ ||೧||
ರಾಮಚಂದ್ರ ಶಬರಿ ತಿಂದೆಂಜಲ | ಜಾಮಿಳ ಮಾಡ್ದ ಕುಕರ್ಮಗಳ | ಧೂಮಕೇತು
ತ ಭುಂಜಿಸುವಂದದಿ | ಮೇಧ್ಯಾ ಮೇಧ್ಯ ಕೈ ಗೊಂಬನೆಂಬ ಹರಿ ||೨||
ನೇಮ ಮಂತ್ರ ಜಪ ದೇಶಾರ್ಚನೆ ಸ | ಕಾಮುಕವಾಗಲು ತ್ಯಜಿಸುತಲಿ |
ಧೀಮಂತರಾಗತಿಪ್ರಿಯವಾಗಲು ಬಹು ತಾಮಸ ಕರ್ಮವ ಮಾಳ್ಪುದೆಂಬ ಹರಿ ||೩||
ಏನು ಮಾಡಿದಪರಾಧವ ಕ್ಷಮಿಸುವ | ಏನು ಕೊಟ್ಟುದನು ಕೈಗೊಂಬ |
ಏನು ಬೇಡಿದಿಷ್ಟಾರ್ಥವ ಕೊಡುವ ದ | ಯಾ ನಿಧಿ ಅನುಪಮನೆಂಬ ಹರಿ ||೪||
ಪ್ರಹ್ಲಾದವರದ ಪ್ರಕಟನಾಗದಲೆ | ಎಲ್ಲರೊಳಿಪ್ಪನು ಪ್ರತಿದಿನದಿ | ಬಲ್ಲಿದವರಿಗೆ
ಬಲ್ಲಿದ ಜಗನ್ನಾಥ | ವಿಠ್ಠಲ ವಿಶ್ವವ್ಯಾಪಕನೆಂಬ ಹರಿ ||೫||
ದಾಶರಥೇ ದಯಮಾಡು ನಿನ್ನ
ದಾಶರಥೇ ದಯಮಾಡು ನಿನ್ನ ದಾಸದಾಸನ ನೋಡು |
ದಾಸದಾಸನ ನೋಡು ಮುದ್ದು ದಾಶರಥೇ ದಯ ಮಾಡು ||ಪ||
ನೀರಜಾಕ್ಷ ನಿಜ ಮಾಯ ಮಮತೆ ಸಂಸಾರ ಶರಧಿಯೊಳು ಬಿದ್ದು |
ಪಾರುಗಾಣದೆ ಬರಿದೆ ಪೋಗುವಾ ತಾರಕ ಬ್ರಹ್ಮ ನೀನೆಂದೂ ||೧||
ತುಂಬಿದ ಭಂಡಿಗೆ ಮೊರ ಭಾರವೆ ಯೆನಗಿಂಬಿಲ್ಲವೆ ನಿನ್ನಲ್ಲಿ |
ನಂಬಿದ ವಿಶ್ವ ಕುಟುಂಬನೆ ಎನಗಾ ಇಂಗು | ಗೊಡದೆಯೆಲ್ಲರ್ಗಲ್ಲಿ ||೨||
ಇಂದಿರೇಶ ಮುಚುಕುಂದ ವರದ ಮುನಿ ವಂದ್ಯನೆ ದಶರಥ ಕಂದಾ|
ಚಂದದಿ ನಿನ್ನ ಪದದ್ವಂದ್ವಗಳನುದಿನ ವಂದಿಸುವೆನು | ಮುದದಿಂದಾ ||೩||
ದಾರೊ ನೀ ಚಿನ್ನ ದಾರೊ
ದಾರೊ ನೀ ಚಿನ್ನ ದಾರೊ | ಕಾರು ರಾತ್ರಿಯೊಳೆಮ್ಮಾಗಾರಕೆ ಬಂದೆ ||ಪ||
ಇಕ್ಕಿದ ಕದಗಳಿಕ್ಕ್ಯಾವೊ ನಿದ್ರೆ | ಉಕ್ಕೇರಿ ಕಣ್ಣು ಮುಚ್ಚ್ಯಾವೊ ನಮ್ಮ |
ತಕ್ಕೈಸಿ ಕೊಂಬುವೆ ನೀ ಕಳ್ಳ ಚಿಕ್ಕ | ಮಕ್ಕಳಾಟವಿದಲ್ಲೊ ಚೆಲುವ ||೧||
ಆಗ ಗೋಪಾಲನಂತಿದ್ದೆ ನೀ | ಬೇಗ ಚಟುಲರೂಪನಾದೆ ಮ |
ತ್ತೀಗೆಮ್ಮ ನಲ್ಲರಂತೈದೆ ಕೋಟಿ | ಪೂಗಣೇರ ಹೋಲುತೈದೆ ನೀ ಹೌದೆ ||೨||
ಸಪ್ಪಳಿಲ್ಲದೆ ಕೂಡು ಕಾಣೊ ಕೇಳಿ | ಬಪ್ಪರಿನ್ನಾರಾರು ಕಾಣೊ ಪ್ರಾಣ |
ಕಪ್ಪವ ನಿನಗಿತ್ತೆ ಇನ್ನು ಕಾಯೊ | ಶ್ರೀಪ್ರಸನ್ನ್ವೆಂಕಟ ಜಾಣ ಪ್ರವೀಣ ||೩||
ದಾಶರಥೇ ದಯಮಾಡೊ ನಿನ್ನ
ದಾಶರಥೇ ದಯಮಾಡೊ ನಿನ್ನ | ದಾಸರ ದಾಸನ ನೋಡೋ ||ಪ||
ನೀರಜಾಕ್ಷ ನಿಜಮಾಯಾ ಮಮತೆ ಸಂಸಾರಶರಧಿಯೊಳು ಬಿದ್ದು |
ಪಾರುಗಾಣದೆ ಪರಿದು ಪೋಗುವೆನು | ತಾರಕ ನೀನೆನಗಿದ್ದು ಹರಿ ಹರಿ ||೧||
ತುಂಬಿದ ಭಂಢಿಗೆ ಮೊರ ಭಾರವೆ ಎನಗಿಂಬಿಲ್ಲವೆ
ನಿನ್ನಲಿ | ನಂಬಿದ ಭಕ್ತರ ಸಲಹುವ ವಿಶ್ವಕುಟುಂಬಿ ಎನಿಸಿಕೊಳುವಲ್ಲಿ ಹರಿ ||೨||
ಬಲ್ಲಿದರೊಳು ಬಡವರಿಗಾಶ್ರಯ ನೀ | ಬಲ್ಲೆ ಮತ್ತೆ ಎನಗೀಗ |
ಎಲ್ಲಿದ್ದರು ಶ್ರೀದವಿಠಲ ಬಿಡ | ದಲ್ಲೂ ನಿನ್ನ ದಯ ಬೇಗ ||೩||
ದಾಸವರ್ಯ ಪೋಷಿಸೆನ್ನನು
ದಾಸವರ್ಯ ಪೋಷಿಸೆನ್ನನು ಪ್ರಾರ್ಥಿಸುವೆ ಶೇಷ | ದಾಸವರ್ಯ ಘೋಷಿಸೆನ್ನನು ||ಪ||
ಘೋಷಿಸೆನ್ನ ಮನದಿ ಬಹದೋಷಗಳನು | ತರಿದು ಇಂದಿರೇಶನಂಘ್ರಿಧ್ಯಾನವ ಪ್ರತಿವಾಸರದಲಿ
ಒದಗುವಂತೆ ||ಅ||
ದೇಶ ದೇಶಗಳಲಿ ಭಜಿಪ ದಾಸ ಜನರ ಮನವ ಅಭಿಲಾಷೆಗಳನು
ಸಲಿಸುತಲಿ ಸುರೇಶನಂತೆ ಮೆರೆದ ಶೇಷ ||೧||
ಮಂದನಾದರು ನಿಮ್ಮಯ ಪದದ್ವಂದ್ವ |
ಭಜಿಸೆ ಜಗದಿ ಪ್ರಾಜ್ಞನೆಂದು ಕರೆಸುವನು ಯೆನುತ ನಾವಂದಿಸುವೆ | ಸುಜ್ಞಾನವಿತ್ತು ||೨||
ಕರುಣಶರಧೇ ನಿಮ್ಮ ನಾಮ ಸ್ಮರಣೆ |
ಮಾತ್ರದಿ ಭೂತ ಪ್ರೇತಗಳಿರದೆ ಪೋಪವು ಶರಣು ಜನರ ದುರಿತ | ಘನಕೆ ಮರುತರೆನಿಪ ||೩||
ಈ ಮಹಿಯೊಳಗಾದಿ ಶಿಲೆಯ ಸ್ವಾಮಿಯ | ಪದದಿಂದೆ ತ್ರಿಪಥ |
ಗಾಮಿನಿಯಳ ತೋರಿ ಸ್ವಜನ ಕಾಮಿತವ ಪೂರೈಸಿದಂಥ ||೪||
ಸೇರಿದ ಪರಿವಾರಕೆ ಸುರ ಭೂರಹವೆಂದೆನಿಸುವಂಥಾ|
ಪರಾ ಮಹಿಮ ‘ಕಾರ್ಪರ ಸಿರಿನಾರಸಿಂಹ’ ನ | ನೊಲಿಸಿದಂಥ ||೫||
ದಾಸರ ನರಸಿಂಹ
ದಾಸರ ನರಸಿಂಹ | ಶ್ರೀಹರಿ | ದಾಸರ ನರಸಿಂಹ ||ಪ||
ಯೋಗಾ ನರಸಿಂಹ ಕರಿಗಿರಿ | ಭೋಗಾ ನರಸಿಂಹ |
ಆಗಲೆ ಸುರಿಯುವ ಮಳೆಯನು ನಿಲ್ಲಿಸಿ |
ಬೇಗನೆ ಕೈಕೊಂಡ ಉತ್ಸವ ನರಸಿಂಹ ||೧||
ಶಾಂತಾ ನರಸಿಂಹ | ಪ್ರಹ್ಲಾ | ದಾಂತರ ನರಸಿಂಹ |
ನಿಂತು ಹೆಜ್ಜೆಹೆಜ್ಜೆಗೆ ಆರತಿ ಕೊಂಡು |
ಸಂತಸಪಡಿಸಿದ ಗುರುಗಳ ನರಸಿಂಹ ||೨||
ಕಾಮಿತ ನರಸಿಂಹ |ಪರಮ ಪ್ರೇಮದ ನರಸಿಂಹ |
ಸ್ವಾಮಿ ತಂದೆ ಮುದ್ದು ಮೋಹನದಾಸರ |
ಧಾಮದಿ ನೆಲಸಿಹ ಸ್ವಾಮಿ ಶ್ರೀ ನರಸಿಂಹ ||೩||
ಭಕ್ತರ ನರಸಿಂಹ | ಭವಭಯ | ಒತ್ತುವ ನರಸಿಂಹ |
ಭಕ್ತಿ ಭಾವದಿಂದ ಭಜನೆಯ ಮಾಳ್ಪರ |
ಮುಕ್ತಿ ಮಾರ್ಗ ತೋರಿ ಸಲಹುವ ನರಸಿಂಹ ||೪||
ಸುಲಭ ನರಸಿಂಹ | ನೀ ಬಹು | ದುರ್ಲಭ ನರಸಿಂಹ |
ಒಲಿಯುವ ಗೋಪಾಲಕೃಷ್ಣ ಹರಿ |
ನೆಲಸಿ ಹೃದಯ ಮಂದಿರದಲಿ ನರಸಿಂಹ ||೫||
ದಾವಗಿಲ್ಲ ಖೂನ ತನ್ನೊಳಗ
ದಾವಗಿಲ್ಲ ಖೂನ ತನ್ನೊಳಗ |
ಅವಗೆಲ್ಲಿಯ ಜ್ಞಾನ ಜಗದೊಳಗ | ತಿಳಿದುಕೊಳ್ಳದವ ||ಅ ಪ ||
ಆತ್ಮವಿಚಾರ | ಕಳೆದು ಕೊಂಡವನೆ ಹಿತ ಅಪಾರ | ಒಳಗದಾಂವ ನೋಡ ನಿರಂತರ |
ಹೊಳಿಯದವಗ ಎಂದು ವಸ್ತುದಾಧಾರಾ ||೧||
ದಾವಗಿಲ್ಲ ಖೂನ ಗುರುಮುಖ | ಅವನೆ
ತಾಳಿ ಬಾಹ್ವ ಜನ್ಮ ಅನೇಕ | ಭಾವಿಸದು ದಾವಗಿನ್ನ ವಿವೇಕ | ಅವಗೆಲಿಹದು ನೋಡಿ ಸ್ವಸುಖ ||೨||
ಖೂನ ತನ್ನ ತಿಳಿವದು ತ್ವರಿತ | ಅನುಭವಕಿದೆ ತಾಮ ಸನ್ಮತ | ದೀನ ಮಹಿಪತಿಗೆ ಸ್ವಹಿತ |
ಭಾನು ಕೋಟಿ ತೇಜನಾದ ಉದಿತ ||೩||
ದಾನವನ ಕೊಂದದ್ದಲ್ಲ
ದಾನವನ ಕೊಂದದ್ದಲ್ಲ ಕಾಣಿರೋ ||ಪ||
ಗಾನವಿನೋದಿ ನಮ್ಮ ತೊರವೆಯನರಸಿಂಹ ||ಅ||
ಅಚ್ಚ ಪುರುಷನೆಂಬ ಸ್ವಚ್ಛ ರತ್ನ ಒಡಲೊಳು |
ಬಿಚ್ಚಿ ನೋಡಿದರಿನ್ನೆಷ್ಟುಇದ್ದಾವೊ ಎಂದು ||೧||
ನೆಂಟತನವು ಬೆಳೆಯಬೇಕೆಂದು ಕರುಳ ಕೊರಳೊಳು |
ಗಂಟುಹಾಕಿಕೊಂಡನಲ್ಲದೆ ದೇಹಸಂಬಂಧದಿಂದ ||೨||
ತೊರವೆಯ ನರಸಿಂಹ ಪ್ರಹ್ಲಾದಪಾಲಕ|
ಉರಿಮೋರೆ ದೇವ ನಮ್ಮ ಪುರಂದರವಿಠಲ ||೩||
ದ್ವಾರಾಕಾಪುರದ ಚಂದ್ರಾನನೆಯರು
ದ್ವಾರಕಾಪುರದ ಚಂದ್ರಾನನೆಯರು |
ಸೂರ್ಯನ ಅನುದಿನವು ದೂರಿ ದೂಷಿಸುತಿಹರು ||ಪ||
ಹಗಲೆಲ್ಲ ಹರಿಯ ಅಹ್ನಿಕವು | ಜಗ ಮನೆ ವಾರ್ತೆಗಳೆಲ್ಲ ಕಳೆದು |
ಮಿಗೆ ಹರುಷದಿ ರಾತ್ರಿಯಲಿ ಹರಿಯೊಡನೆ | ನಗೆ ನುಡಿಯಿಂದ ದಣಿಯದಲೆ ಉದಿಸಿದನೆಂದು ||೧||
ವನಜನಾಭ ಸತ್ಕರ್ಮಂಗಳ ಹಗಲೆ ಪೂರಯಿಸಿ | ವನಿತೆಯರು ಶೃಂಗಾರಯುಕ್ತರಾಗಿ ||
ಮನಸಿಜಪಿತಗೆ ಶೃಂಗಾರ ಮಾಡಿ ಸಂಗೀತ | ವನು ಪಾಡುತಿರೆ ಅರುಣ ಉದಿಸಿದನೆಂದು ||೨||
ಕೋಳಿ ಕಾಗೆ ಖಗಕುಲವನೆಲ್ಲನು ಮುಂದೆ | ಊಳಿಗಕೆ ಭಟರ ಮಾಡಿಕೊಂಡು ಬಾಹ ||
ಏಳೈದು ಪೆಸರ ನಗರದವಗೆ ನಮ್ಮ | ಗೋಳು ತಾಗಲಿಯೆಂದು ಕೊಪದಿಮ್ದನವರತ ||೩||
ನಮ್ಮ ಪುರದಲಿಮಾತ್ರ ನಾಲ್ಕೆಂಟು ದಿನಕ್ಕೊಮ್ಮೆ ಹೆಮ್ಮೆಯಿಮ್ದುದಿಸಿದರೆ ಹಾನಿ ಬಹುದೇ ||
ನಮ್ಮ ಸ್ವಾಮಿಗೆ ಮೋದ ಮಾದುವುದೆಲ್ಲವನು | ತಮ್ಮ ಸ್ವಾಮಿಯಲ್ಲವೇ ತಮನೆಮ್ದು||೪||
ಈ ವಿಧಗಳಿಂದ ರವಿಯ ದೂರಿ ಹದಿನಾರು ಸಾವಿರಾದ ನೂರೆಂಟು ಸತಿಯರೆಲ್ಲ||
ದೇವರ ದೇವ ಶ್ರಿ ಪುರಂದರವಿಠಲನನ್ನ| ದೆವೆಶನೆಮ್ದು ತಿಲಿದನವರತ ಭಜಿಸುವರು ||೫||
ದೇವ ದೇವ ದೇವ ದಿವಿಜರೊಡಿಯನೆ
ದೇವ ದೇವ ದೇವ ದಿವಿಜರೊಡಿಯನೆ | ಭಾವ ಪೂರ್ವಕ ವಿಧದಿ ಭಜಿಸುವೆನು ನಾನು ||ಪ||
ನಂದಗೋಪಿಯ ಕಂದನಾದ ಸುಂದರಾಂಗನೆ |
ಸಿಂಧುಶಯನ ಮಂದರಧರ ಇಂದಿರೇಶನೆ |
ಕಂದ ಕೂಗಲು ಬಂದು ಕಾಯ್ದ ದ್ವಂದ್ವರೂಪನೆ |
ಎಂದು ನಿನ್ನ ಪೊಂದಿದವರನಂದ ಪೊರೆವನೆ ||೧||
ರನ್ನೆ ಸೀತೆಯನ್ನು ವೈದವನ್ನ ತರಿದನೆ |
ನಿನ್ನವರಿವರೆನ್ನುವವರನ್ನು ಕಾಯ್ವನೆ |
ಪನ್ನಗಶಯನನಾದ ಚೆನ್ನ ನೀವನೆ |
ಘನ್ನ ‘ಶ್ರೀ ಹೆನ್ನೆವಿಠಲ’ ನನ್ನ ಕಾರುಣಿ ||೨||
ದೇವನೀತ ಅವಧೂತ ಜೀವ ಜೀವ ಭಾವಭೋಕ್ತ
ದೇವನೀತ ಅವಧೂತ ಜೀವ ಜೀವ ಭಾವಭೋಕ್ತ |
ಕಾವ ದೈವ ಪ್ರಾಣನಾಥ ದೇವಾಧೀದೇವನೆ ಈತ ||೧||
ಶ್ರೀದೇವ ದೇವ ನಿರ್ವಿಕಲ್ಪ ನಿರಾಕಾರ ಸರ್ವಾತೀತ ಸರ್ವೇಶ್ವರ ||೨||
ಸಾಧುಜನರ ಹೃದಯ ಸದೋದಿತಾನಂದೋದಯ |
ಆದಿ ಅನಾದಿ ನಿಶ್ಚಯ ಇದೆ ಇದೆ ವಸ್ತುಮಯ ||೩||
ಪತಿತಪಾವನ ಪೂರ್ಣ ಅತಿಶಯಾನಂದಗುಣ |
ಭಕ್ತಜನರುದ್ಧರಣ ಸತತ ಸುಖನಿಧಾನ ||೪||
ಜ್ಞಾನಗಮ್ಯ ಗುಣಾತೀತ ಅನಾಥಬಂಧು ಗುರುನಾಥ |
ಭಾನುಕೋಟಿ ತೇಜನೀತ ದೀನಮಹೀಪತಿ ದಾತ ||೫||
ದ್ವೈತ ಅದ್ವೈತೆಂದು ಹೊಡದಾಡದಿರೊ ಪ್ರಾಣಿ
ದ್ವೈತ ಅದ್ವೈತೆಂದು ಹೊಡದಾಡದಿರೊ ಪ್ರಾಣಿ |
ಚೇತಿಸಿ ಬ್ಯಾರಿಹ ವಸ್ತುಗಾಣೆ ||ಪ||
ದ್ವೈತ ಎನಲಿಕ್ಕೆ ತಾಂ ಆದೆವೆ ಅದ್ವೈತ ಅ |
ದ್ವೈತ ಎನಲಿಕ್ಕೆ ಅದೆನೆ ತಾಂ ದ್ವೈತ ||೧||
ಹಿಂದು ಮುಂದಾಗಿ ಆಡಿಸುತಿಹ್ಯ ನಿಜಖೂನ |
ಎಂದಿಗಾದರು ತಿಳಿಯಗುಡದು ಪೂರ್ಣ ||೨||
ಅತಿಸೂಕ್ಷ್ಮ ತಿಳುವಾದರಲ್ಲೆ ಬಿದ್ದದ ಮಲಕು |
ನೇತಿ ನೇತೆಂದು ಸಾರುತಿದೆ ಶ್ರುತಿ ಇದಕೆ ತಿಳಿಕೊ ||೩||
ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ ಅ |
ದ್ವೈತನೆಂದವನೆ ತಾಮ ಪರಮ ಸ್ಮಾರ್ತನಲ್ಲ ||೪||
ಸ್ಮಾರ್ತ ವೈಷ್ಣವ ಮತ ಗುರು ಮಧ್ವಮುನಿಬಲ್ಲ |
ಅರ್ತು ಸ್ಥಾಪಿಸುವದು ಮನುಜಗಲ್ಲ ||೫||
ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ |
ದೋರುವರೆ ತರ್ಕಸ್ಯಾಡುವ ಸೊಲ್ಲ ||೬||
ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು | ಚಿತ್ತ
ಶುದ್ಧಾಗಿ ಮಹಿಪತಿಯ ಮುಟ್ಟು ||೭||
ದೊರೆನೀನೆ ಮಾಧವ
ದೊರೆನೀನೆ ಮಾಧವ | ಮೊರೆ ಹೊಕ್ಕೆನೋದೇವ ||ಪ||
ಕರಿರಾಜವರದನೇ | ಶರಣಾರ್ತಿಹರಣನೇ ||ಅ||
ಆರೊಂದುವ್ಯಸನದಿ | ಈರೊಂದು ತಾಪದಿ |
ಗಾರಾದೆ ಮೋಹದಿ |ಕಾರುಣ್ಯವಾರಿಧಿ ||೧||
ಅನುಮಾನವೇತಕೈ | ಎನಕಷ್ಟಬಿಡಿಸಲು |
ಅನುದಿನದಿ ಬೇಡಲು | ಮನಸೇಕೆ ಬಾರದು ||೨||
ಸುರವಂದ್ಯ ಚರಣನೆ | ಗುರುರಾಮ ವಿಠಲನೆ |
ಸರಿಯಾರೊ ನಿನಗೆಣೆ | ಪರಿಪಾಲಿಸೆನ್ನನೆ ||೩||
ದೋಷ ಬಪ್ಪದೆ ಇಪ್ಪದೆ ಪಾಮರನಿಗೆ
ದೋಷ ಬಪ್ಪದೆ ಇಪ್ಪದೆ ಪಾಮರನಿಗೆ ||ಪ||
ಜಲಜನಾಭನ ಮರೆತು ಜಲದಲ್ಲಿ ಮಿಂದು ಹೆ | ಬ್ಬುಲಿ ಬಣ್ಣದಂತೆ ನಾಮಗಳ ಧರಿಸಲೇನು ||೧||
ಸನಕಾದಿ ಮುನಿವಂದ್ಯ ಮನಸಿಜ ಜನಕಾ |ನಮ್ಮನನು ಕಾಯುತಿರೆ ಭೂಮಿಧನವೇ ಜೀವನನೆಂಬುವಗೆ ||೨||
ಶಿರಿಗೋವಿಂದ ವಿಠಲನ ಸಂಸ್ತುತಿಸುವ | ಹರಿದಾಸನ ತಿರಸ್ಕರಿಸುವ ದುರುಳಗೆ ||೩||
ದೌಡುಮಾಡಿದರು ಯಮನಾಳುಗಳು
ದೌಡುಮಾಡಿದರು ಯಮನಾಳುಗಳು | ಓಡಿ ಬಂದರು ಏಳೇಳೆನುತ|
ಏಳಲೆಳೆದರು| ಪಾಪಿಯ | ಬೀಳಲೆಳೆದರು ||ಪ||
ಭವಂತಿ ಮಾಳಿಗೆ ದೊಡ್ಡ ಪಡಸಾಲೆ| ಚಿಕ್ಕ ಮಕ್ಕಳು ದೊಡ್ಡ ಮಕ್ಕಳು| ||ಅ ಪ||
ಆದ ಮದುವೆಯು ಆಗದ ಮದುವೆಯು| ಒಂದೊಂದು ಸಾವಿರ ಸಾಲವ ಕೊಟ್ಟು|
ಬಡ್ಡಿ ಬಾಕಿ ಬರಲೇ ಇಲ್ಲ||
ಬಿಟ್ಟು ಹೇಗೆ ಬರಲೊ| ಮನ| ಕೆಟ್ಟು ಹೇಗೆ ಬರಲೊ ||೧||
ಚಿತ್ತದ ಮನೆಗಳು ಬೆಳ್ಳಿ ಕಂಬ| ಚಿನ್ನದ ಬೋದಿಗೆ ರತ್ನದ ಕೆಲಸ| ಉಪ್ಪರಿಗೆ ನೋಡಿ ಪ್ರೀತಿಯಾಗಿ
ನಾನಿರುವೋದು ಕಂಡು|
ಕರೆವೊರೇನೋ ಎನ್ನ| ಯಮನೆ| ಎಳೆವರೇನೊ ಎನ್ನ ||೨||
ನಿನ್ನೆ ಮೊನ್ನೆ ಒಬ್ಬಳು ಕನ್ಯೆ ಮದುವ್ಯಾದೆ| ಪೊನ್ನು ಬಂಗಾರ ಬೆಳ್ಳಿ ಬಹಳ| ಎನ್ನ ಮನೆಯಲಿ
ಕರೆವೋದು ನೂರೆಂಟೆಮ್ಮೆ| ಉಂಬೊ ಉಡುವೊ ಪ್ರಾಯವ ಬಿಟ್ಟು||
ನಿನ್ನಾಣೆ ಬರಲಾರೆನೊ| ಯಮನೆ| ಎನ್ನಾಣೆ ಬರಲಾರೆನೊ ||೩||
ದಡ್ಡಂತೊಕ್ಕರು ದೂತರು ಕೋಪದಿ| ಕಡ್ಡಾಯ ಮಾಡಿ ಕರೆಯಲು ಅವನ|
ಬಡ್ಡಿ ಫಣಿವರ ಬರಲೇ ಇಲ್ಲ| ದೊಡ್ಡವರು ಬಂದರಲ್ಲ| ಇನ್ನು ಮೂರು| ಚಿಕ್ಕವರು ಬಂದರಲ್ಲ ||೪||
ದೊಡ್ಡ ತಲೆ ಯಮನ ದೂತರು| ಗಡ್ಡದ ದೂತರು ಓಡಿಬಂದರು |
ದೊಡ್ಡ ನಾಯಿಗಳ ಟೊಂಕಕೆ ಬಿಗಿದು| ಚಿಕ್ಕನಾಯಿಗಳ ಎಡ ಕೈಯಲಿ ಕೊಂಡು|
ಬತ್ತೀಸಾಯುಧ ಮೈಯಲಿ ಧರಿಸಿ|| ದೊಡ್ಡ ಈಟಿಯವರೊ| ಇನ್ನು ಮೂರು| ಚಿಕ್ಕ | ಈಟಿಯವರೊ ||೫||
ಕತ್ತಲು ಎಂಬೊಂದು ಮುನ್ನೂರು ಮೂವತ್ತೆರಡು ಗಾವುದ ಗೇಣಿಗೆ ಒಂದು|
ಉಕ್ಕಿನ ಧ್ವಜಗಳು ಅದರಲಿ ನೆಗ್ಗಿನ ಮುಳ್ಳು||
ನಡೆಯಲಾರೆ ನಾನು| ಯಮನೆ| ತಡೆಯಲಾರೆ ನಾನು ||೬||
ಕಾಶೀತೀರ್ಥವ ಬೇಡದೆ ಇವನು| ಶುಂಠಿ ಬೆಲ್ಲವ ಬೇಡಿದನಿವನು| ಕಾಲಕಂಟಕರು ಸೀಸವ ಕಾಸಿ|| ಹೊಯಿದರು ಬಾಯೊಳಗೆ| ಅವನಿಗೆ| ಹೊಯಿದರು ಬಾಯೊಳಗೆ ||೭||
ಏನೇನು ಪಾಪವ ಮಾಡಿದನಿವನು| ಏನೇನು ಕರ್ಮವ ಮಾಡಿದನಿವನು|
ಅಕ್ಕ ತಂಗೇರ ಒದ್ದವನಿವನು| ತಾಯಿ ತಂದೆಗಳ ಬಯ್ದವನಿವನು| ದಾರಿಗೆ ಮುಳ್ಳು ಹಾಕಿದನಿವನು|
ಹರಿದಿವಸದಲ್ಲಿ ಉಂಡವನಿವನು| ನರಕಕ್ಕೆ ನೂಕಿರೊ| ಕುಂಭೀ| ಪಾಕಕ್ಕೆ ನೂಕಿರೊ ||೮||
ಹಿಂದೆ ಮಾಡಿದವರಿಗೆ ಹೀಗೆ ಇಷ್ಟು ತೆರವಾಯಿತು| ಮುಂದೆ ಜನರು ತಿಳಿದು ಬದುಕಿರಿ|
ಶ್ರೀಗುರುಪುರಂದರವಿಠಲರಾಯರ|| ಸ್ಮರಣೆಯ ಮಾಡಿರೊ| ಜನರು| ಧರ್ಮವ ಮಾಡಿರೊ||