ದಾಸರಪದ (ಯ)
ಯದುಕುಲನಂದನನ ನೋಡುವ
ಯದುಕುಲನಂದನನ ನೋಡುವ ಬಾಲೆ ಲಲಿತಾಂಗಿ ||ಪ||
ಹದಿನಾಲ್ಕು ಜಗವ ಪೊರೆವ ನೀಲಮೇಘಾಂಗನ ||ಅ||
ಬಿಗಿದುಟ್ಟು ಕನಕಾಂಬರ ಕಾಂಚಿಯ ದಾಮನ| ನಗುಮುಖದ ಶ್ರೀಧರನ |
ಅಗಣಿತ ಗುಣನಿಧಿ| ಜಗವ ಮೋಹಿಪ ಕೃಷ್ಣನ ||೧||
ಸಣ್ಣ ಪೊಂಗೊಳಲೂದುತ|ಸಣ್ಣ ಸನ್ನೆ ಮಾಡುತ|
ಚಿಣ್ಣರ ಒಡಗೂಡುತ ಕುಣಿದು ಬಾಹೋ ಕೃಷ್ಣನ ||೨||
ಮಂದಹಾಸಮುಖಾಂಬುಜ| ಪೊಂದಿದಂಥ ಗಂಧ ಕಸ್ತೂರಿ ತಿಲಕ|
ಬಂದ ನಮ್ಮ ಪುರಂದರವಿಠಲ| ಇಂದಿರೇಶ ಯದುನಂದನನ ನೋಡುವ||೩||
ಯಮನೆಲ್ಲೊ ಕಾಣನೆಂದು
ಯಮನೆಲ್ಲೊ ಕಾಣನೆಂದು ಹೇಳಬೇಡ ||ಪ||
ಯಮನೇ ಶ್ರೀರಾಮನು ಸಂದೇಹ ಬೇಡ ||ಅ||
ನಂಬಿದ ವಿಭೀಷಣಗೆ ರಾಮನಾದ|
ನಂಬದಿದ್ದ ರಾವಣಗೆ ಯಮನಾದ ||೧||
ನಂಬಿದ ಅರ್ಜುನಗೆ ಬಂಟನಾದ |
ನಂಬದಿದ್ದ ಕೌರವಗೆ ಕಂಟಕನಾದ ||೨||
ನಂಬಿದ ಉಗ್ರಸೇನಗೆ ಮಿತ್ರನಾದ |
ನಂಬದಿದ್ದ ಕಂಸನಿಗೆ ಶತ್ರುವಾದ||೩||
ನಂಬಿದ ಬಾಲಕನಿಗೆ ಹರಿಯಾದ|
ನಂಬದಿದ್ದ ಅವನ ಪಿತಗೆ ಅರಿಯಾದ||೪|
ನಂಬಿದವರ ಸಲಹುವ ನಮ್ಮ ದೊರೆಯು|
ಅಂಬುಜಾಕ್ಷ ಪುರಂದರವಿಠಲರಾಯ ||೫||
ಯಶೋಧೆ ನಿನ್ನ ಕಂದಗೆ
ಯಶೋಧೆ ನಿನ್ನ ಕಂದಗೆ ಏಸು ರೂಪವೆ||ಪ||
ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ||ಅ||
ಹಸುಗಳ ಕರೆವಲ್ಲಿ ಹಲವು ರೂಪ ತೋರುವ|
ಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವ |
ಮೊಸರ ಕಡೆಯುವಲ್ಲಿ ಮುಂದೆತಾ ನಿಂತಿರುವ|
ಹಸನಾಗಿ ಮೋಸಮಾಡಿ ಬೆಣ್ಣೆಯ ಮೆಲುವ||೧||
ಒಬ್ಬರ ಮನೆಯಲ್ಲಿ ಮಲಗಿ ತಾನಿರುವ|
ಒಬ್ಬರ ಮನೆಯಲ್ಲಿ ಬೆಣ್ಣೆ ಕದ್ದು ಮೆಲುವ |
ಒಬ್ಬರಮನೆಯಲ್ಲಿ ರತಿಕ್ರೀಡೆಯಾಡುತಿರುವ|
ಒಬ್ಬರ ಮನೆಯಲ್ಲಿ ಪುಟಿ ಚೆಂಡನಾಡುವ||೨||
ಹಿಂದೆತಾನಿಂದಿರುವ ಮುಂದೆ ಹೋಗುತ್ತಿರುವ |
ಇಂದು ಮುಖಿಯರ ಕೂಡೆ ಸರಸವಾಡುತಿರುವ|
ಬಂದು ನೋಡೆ ಯಶೋಧೆ ಬಣ್ಣದ ಮಾತಲ್ಲ |
ನಂದಗೋಪನ ಕಂದ ಪುರಂದರ ವಿಠಲ ||೩||
ಯಾಕೆ ನಿರ್ದಯನಾದೆಯೋ
ಯಾಕೆ ನಿರ್ದಯನಾದೆಯೋ ಹರಿಯೆ ||ಪ||
ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ||ಅ ಪ||
ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದ ಆವ ನಿನಗೆ
ಬಂಗಾರವೆಷ್ಟು ಕೊಟ್ಟನು ಪೇಳೂ ಹರಿಯೆ ||೧||
ಸಿರಿದೇವಿಗೆ ಹೇಳದೆ ಸೆರಗುಸಂವರಿಸದೆ
ಗರುಡನ ಮೇಲೆ ಗಮನವಾಗದೆ
ಭರದಿಂದ ನೀ ಬಂದು ಕರಿಯನುದ್ದರಿಸಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ||೨||
ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೇ
ಭಜನೆಗವರೇ ಹಿತರೆ ನಾ ನಿನಗೆ ಅನ್ಯನೆ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ ||೩||
ಯಮದೂತರಿನ್ನೇನು ಮಾಡುವರು
ಯಮದೂತರಿನ್ನೇನು ಮಾಡುವರು ಪೇಳೋ | ರಮೆಯರಸನೆ ನಿನ್ನ ಅರಕೆಯುಳ್ಳವರಿಗೆ || ಪ||
ಮಂಡಲದೊಳೊಬ್ಬ ಜಾರ ಸ್ತ್ರೀಯಳು ತನ್ನ | ಗಂಡನರಿಕೆಯಿಂದ ವ್ಯಭಿಚಾರಗೈಯೆ |
ಮಂಡಲಪತಿಯು ಶೋಧಿಸಿ ಹಿಡಿದೆಳೆತಂದು | ಬಂಡು ಮಾಡಲು ಬೆದರುವಳೆ ಕೇಳೆಲೋ ಹರಿ ||೧||
ಕಳವಿನ ಒಡವೆಯ ಒಡೆಯಗೆ ಪಾಲೀವ | ಕಳ್ಳಬಂಟ ಕನ್ನ ಕೊರೆಯುತ್ತಿರೆ |
ಕಳವು ಮಾಡಿದನೆಂದು ಹಿಡಿದೆಳೆತಂದರೆ ತಂಅವಾರನೇನು ಮಾಡುವನು ಕೇಳೆಲೋ ಹರಿ||೨||
ಮನವಚನದಲಿ ಮಾಡಿದ ಪುಣ್ಯ ಪಾಪಗಳ | ನಿನಗರ್ಪಿಸುವೆ ಕಾಲಕಾಲದಲಿ |
ಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವ | ಎನಗೊಬ್ಬರೇನು ಮಾಡುವರು ಕೇಳೆಲೋ ಹರಿ ||೩||
ಯಲ್ಲಾಮ್ಮನಲ್ಲವೆ ಸಿರಿದೇವಿ ಎಲ್ಲಾರಮ್ಮನಲ್ಲವೆ
ಯಲ್ಲಾಮ್ಮನಲ್ಲವೆ ಸಿರಿದೇವಿ ಎಲ್ಲಾರಮ್ಮನಲ್ಲವೆ || ಪ ||
ಬಲ್ಲಿದರಾಗಿಪ್ಪ ಬೊಮ್ಮಾದಿಗಳಿಗೆ ||ಅ ಪ ||
ಆಲದೆಲೆಯ ಮೇಲೆ ತನ್ನ ಪುರುಷನಂದು | ಕಾಲವರಿತು ಪವಡಿಸಲು ||
ವಾಲಗವನು ಮಾಡಿ ಕೊಂಡಾಡಿ ಜೀವರ | ಮೂಲ ಕರ್ಮಂಗಳ ತೀರುವಂತೆ ಮಾಡಿದ ||೧||
ಅಮೋಘ ವೀರ್ಯ ಗರ್ಭದಿ ಧರಿಸಿ ತಾ | ಬೊಮ್ಮಾಂಡವನೆ ಪೆತ್ತ ಲೋಕಮಾತಾ ||
ಸಮನಸರಿಗೆ ಕಡೆಗಣ್ಣ ನೋಟದಿ | ಆ ಮಹಾ ಪದವಿಯ ಕೊಡುವ ಭಾಗ್ಯವಂತೆ ||೨||
ಎರಡೋಂದು ಗುಣದಲ್ಲಿ ಪ್ರವಿಷ್ಠಳಾಗಿ ಜೀವರ ಯೋಗ್ಯತೆಯಂತೆ ಪಾಲಿಸುತಿಪ್ಪಳು ||
ಪರಮ ಪುರುಷ ನಮ್ಮ ವಿಜಯ ವಿಠಲನ್ನ | ಕರಣದಿಂದಲಿ ಅನಂತ ಕಲ್ಪಕೆ ನಿತ್ಯ||೩||
ಯಮನೇ ದುರಿತೋಪ ಶಮನೇ
ಯಮನೇ ದುರಿತೋಪ ಶಮನೇ ||ಪ||
ಕರ್ಮ ಪರಿಹರಿಸಲು ಖಳದಮನೆ ದಯವಂತೆ ||ಅ||
ಶರಣೆಂಬೆ ತನ ಪಾದಾಂಬುರುಹ ಯುಗಳಿಗೆ ದಿವಾ| ಕರತನಯೆ ಸಪ್ತಸಾಗರ ಭೇಧಿನೀ |
ಹರಿತೋಷ ಲಾಭ ಸುಂದರಿ ಸುಭೆಗೆ ನಿನ್ನ ಸಂ|ದರುಶನಕೆ ಬಂದೆ ಭಕ್ತರ ಪಾಲಿಪುದು ಜನನಿ||೧||
ಮಕರಾದಿ ಮಾಸದಲಿ ವಿಖನಸಾವರ್ತ ದೇ|ಶಕೆ ಬಂದು ವಿಜ್ಞಾನಭಕುತಿಯಿಂದಾ|
ತ್ರಿಕರಣ ಶುದ್ಧಿಯಲಿ ಸಕೃತಸ್ನಾನವ ಗೈಯೆ| ಸಕಲಸುಖವಿತ್ತು ದೇವಕೀ ಸುತನ ತೋರಿಸುವೆ ||೨||
ಕನಕಗರ್ಭಾವೆನಿಪ ದೇಶದಲಿ ಸ|ಜ್ಜನರ ಪಾಲಿಪೆನೆಂಬ ಅನುರಾಗದಿ ಪ್ರಣವ ಪಾದ್ಯಗೆ
ವಿಮಲ ಮುನಿಯಂತೆ ನಿರುತ ಕುಂ|ಭಿಣಿಯೊಳಗೆ ಸರಸ್ವತಿ ದ್ಯುನದಿಯಂದದಿ ಮೆರೆದೆ||೩||
ಜಮದಗ್ನಿ ಮುಖ್ಯಸಂಯಮಿಗಳನುದಿನದಿ ಆ|ಶ್ರಮವ ತ್ರಿವೇಣಿ ಸಂಗಮದಿ ರಚಿಸಿ|
ತಮ ತಮ್ಮೊಳಗೆ ರಮಣಾರಮಣ ದಾಮೋದರನ | ಸುಮಹಿಮೆಗಳನು ಪೊಗಳುತಮಿತ ಮೋದದಲಿಹರು ||೪||
ಪಿಂಗಳಾಧಿಷ್ಟತೆ ಶುಭಾಂಗಿ ಸುಮನವಿತ್ತು | ಕಂಗೊಳಿಸು ಎನ್ನಂತರಂಗದಲಿ ತುಂಬ ಸುಮಹಿಮ ಜಗನ್ನಾಥವಿಠ್ಠಲನ ಸುಗು|ಣಂಗಳ ತುತಿಪುದಕೆಮಂಗಳ ಮತಿಯನೀಯೇ ||೫||
ಯಂತ್ರ ದೊರಕಿತು ಎನಗೆ
ಯಂತ್ರ ದೊರಕಿತು ಎನಗೆ|ಯಂತ್ರ ದೊರಕಿತು ||ಪ||
ಯಂತ್ರವಾಹಕ ನಾರಾಯಣನ ಅಂತರಂಗದಿ ನೆನೆಉವಂಥ ||ಅ||
ಆಸೆಯಿಂದ ಮುಳುಗೋದಲ್ಲ ಕ್ಲೇಶಬಟ್ಟು ತಿರುಗೋದಲ್ಲ|
ವಾಸುದೇವ ಕೃಷ್ಣನೆಂಬ ಶಾಶ್ವತವಾದ ದಿವ್ಯನಾಮ ||೧||
ಹಾಸಬಹುದು ಹೊಡೆಯಬಹುದು ಸೂಸಿ ಒದಲ ತುಂಬಬಹುದು |
ದಾಸರನ್ನು ಬಿಡದೆ ಪೊರೆವ ಶ್ರೀಶನೆಂಬ ದಿವ್ಯನಾಮ||೨||
ಒಂದು ಬಾರಿ ಸ್ಮರಿಸಿದರೆ ಇಂದು ಕೋಟಿ ಯಜ್ಞಫಲವು|
ಇಂದಿರೇಶ ಪುರಂದರ ವಿಠವನೆಂಬ ದಿವ್ಯನಾಮ||೩||
ಯದುಕುಲನಂದನನ ನೋಡುವ
ಯದುಕುಲನಂದನನ ನೋಡುವ ಬಾಲೆ ಲಲಿತಾಂಗಿ ||ಪ||
ಹದಿನಾಲ್ಕು ಜಗವ ಪೊರೆವ ನೀಲಮೇಘಾಂಗನ ||ಅ||
ಬಿಗಿದುಟ್ಟು ಕನಕಾಂಬರ ಕಾಂಚಿಯ ದಾಮನ| ನಗುಮುಖದ ಶ್ರೀಧರನ |
ಅಗಣಿತ ಗುಣನಿಧಿ| ಜಗವ ಮೋಹಿಪ ಕೃಷ್ಣನ ||೧||
ಸಣ್ಣ ಪೊಂಗೊಳಲೂದುತ|ಸಣ್ಣ ಸನ್ನೆ ಮಾಡುತ|
ಚಿಣ್ಣರ ಒಡಗೂಡುತ ಕುಣಿದು ಬಾಹೋ ಕೃಷ್ಣನ ||೨||
ಮಂದಹಾಸಮುಖಾಂಬುಜ| ಪೊಂದಿದಂಥ ಗಂಧ ಕಸ್ತೂರಿ ತಿಲಕ|
ಬಂದ ನಮ್ಮ ಪುರಂದರವಿಠಲ| ಇಂದಿರೇಶ ಯದುನಂದನನ ನೋಡುವ||೩||
ಯಮನೆಲ್ಲೊ ಕಾಣನೆಂದು
ಯಮನೆಲ್ಲೊ ಕಾಣನೆಂದು ಹೇಳಬೇಡ ||ಪ||
ಯಮನೇ ಶ್ರೀರಾಮನು ಸಂದೇಹ ಬೇಡ ||ಅ||
ನಂಬಿದ ವಿಭೀಷಣಗೆ ರಾಮನಾದ|
ನಂಬದಿದ್ದ ರಾವಣಗೆ ಯಮನಾದ ||೧||
ನಂಬಿದ ಅರ್ಜುನಗೆ ಬಂಟನಾದ |
ನಂಬದಿದ್ದ ಕೌರವಗೆ ಕಂಟಕನಾದ ||೨||
ನಂಬಿದ ಉಗ್ರಸೇನಗೆ ಮಿತ್ರನಾದ |
ನಂಬದಿದ್ದ ಕಂಸನಿಗೆ ಶತ್ರುವಾದ||೩||
ನಂಬಿದ ಬಾಲಕನಿಗೆ ಹರಿಯಾದ|
ನಂಬದಿದ್ದ ಅವನ ಪಿತಗೆ ಅರಿಯಾದ||೪|
ನಂಬಿದವರ ಸಲಹುವ ನಮ್ಮ ದೊರೆಯು|
ಅಂಬುಜಾಕ್ಷ ಪುರಂದರವಿಠಲರಾಯ ||೫||
ಯಶೋಧೆ ನಿನ್ನ ಕಂದಗೆ
ಯಶೋಧೆ ನಿನ್ನ ಕಂದಗೆ ಏಸು ರೂಪವೆ||ಪ||
ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ||ಅ||
ಹಸುಗಳ ಕರೆವಲ್ಲಿ ಹಲವು ರೂಪ ತೋರುವ|
ಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವ |
ಮೊಸರ ಕಡೆಯುವಲ್ಲಿ ಮುಂದೆತಾ ನಿಂತಿರುವ|
ಹಸನಾಗಿ ಮೋಸಮಾಡಿ ಬೆಣ್ಣೆಯ ಮೆಲುವ||೧||
ಒಬ್ಬರ ಮನೆಯಲ್ಲಿ ಮಲಗಿ ತಾನಿರುವ|
ಒಬ್ಬರ ಮನೆಯಲ್ಲಿ ಬೆಣ್ಣೆ ಕದ್ದು ಮೆಲುವ |
ಒಬ್ಬರಮನೆಯಲ್ಲಿ ರತಿಕ್ರೀಡೆಯಾಡುತಿರುವ|
ಒಬ್ಬರ ಮನೆಯಲ್ಲಿ ಪುಟಿ ಚೆಂಡನಾಡುವ||೨||
ಹಿಂದೆತಾನಿಂದಿರುವ ಮುಂದೆ ಹೋಗುತ್ತಿರುವ |
ಇಂದು ಮುಖಿಯರ ಕೂಡೆ ಸರಸವಾಡುತಿರುವ|
ಬಂದು ನೋಡೆ ಯಶೋಧೆ ಬಣ್ಣದ ಮಾತಲ್ಲ |
ನಂದಗೋಪನ ಕಂದ ಪುರಂದರ ವಿಠಲ ||೩||
ಯತಿಕುಲ ಶಿರೋರನ್ನ - ಪತಿತ ಜನ ಪಾವನ್ನ
ಯತಿಕುಲ ಶಿರೋರನ್ನ - ಪತಿತ ಜನ ಪಾವನ್ನ |
ಮತಿ ವಿಕಳ ನಾದೆನ್ನ - ಉದ್ಧರಿಸೋ ರನ್ನ||ಪ||
ಸರಿದ್ಯಮುನೆ ಕೂಲಸ್ಥ - ವರ ಪರಾಶರ ಭವನೆ| ವಿರಚಿಸುತ ಬಹುಗ್ರಂಥ - ತೋರ್ದೆ ಸತ್ಪಂಥ |
ವರಕುವರ ಶುಕಮುನಿಗೆ - ಒರೆದು ಶ್ರೀ ಭಾಗವತ | ಶರನ ಜನ ಭವ ಜನಿತ - ದುಃಖಗಳಹರ್ತಾ||೧||
ಗೋವುಗಳುದ್ಗೀಥ - ಗೋವಿಂದಾಂ ಪತಿ ಖ್ಯಾತ | ಪಾದಿನಾಮದ ಹರ್ತ - ಲೋಕಕರ್ತಾ|
ನೋವಿಲ್ಲದವನೆ ಗುರು - ಗೋವಿಂದ ವಿಠಲ ಹರಿ | ಭಾವದಲಿ ತವರೂಪ - ಕೋರ್ವೆ ಬಹುರೂಪ ||೨||