ದೊಂಬರಾಟವಯ್ಯ

ದೊಂಬರಾಟವೆಂದರೆ ಅಲ್ಲಲ್ಲಿ ಜನ ಸೇರುವೆಡೆಯಲ್ಲಿ ಭಿಕ್ಷೆಗಾಗಿ ಅನೇಕ ತರಹದ ಆಟಗಳನ್ನೂ, ಯಕ್ಷಿಣಿ ವಿದ್ಯೆಗಳನ್ನೂ ಪ್ರದರ್ಶಿಸುತ್ತಾ, ಸೇರಿದ ಜನರನ್ನು ರಂಜಿಸುವ ಕಲೆಯೆಂದು ಭಾರತೀಯರೆಲ್ಲರಿಗೂ ತಿಳಿದ ವಿಷಯ. ಈ ರೀತಿ ಕಲೆಗಳಲ್ಲಿ ಕೆಲವು, ಸಾಮಾನ್ಯರ ತರ್ಕಕ್ಕೆ, ಬುದ್ಧಿಗೆ ನಿಲುಕದ ವಿಚಿತ್ರವಾಗಿ,ಪ್ರಸಿದ್ಧವಾಗಿಉಳಿದುಕೊಂಡಿದೆ.
ಇವುಗಳಲ್ಲಿ ಅನೇಕಕಲೆಗಳು ನಶಿಸಿಹೋಗುತ್ತಿವೆ. ಅಂತಹ ಒಂದು ವಿದ್ಯೆ, "ಭಾರತೀಯ ಹಗ್ಗ ಏಣಿಯಾಟ" ಅಥವಾ "ಇಂಡಿಯನ್ ರೋಪ್ ಟ್ರಿಕ್". ಸುಮಾರು ಒಂದು ಶತಮಾನದ ಹಿಂದೆ, ಭಾರತದಲ್ಲಿ ಆಂಗ್ಲರ ಕಾಲದಲ್ಲಂತೂ ಈ ಕಲೆ ಅಂತರರಾಷ್ಟ್ರೀಯ ಖ್ಯಾತಿಯನ್ನೇ ಗಳಿಸಿತ್ತಂತೆ. ವಿದೇಶಗಳಲ್ಲಿ ಸಭೆ, ಸಮಾರಂಭಗಳಲ್ಲಿ ವಿಶೇಷ ಆಕರ್ಷಣೆಯಾಗಿ ಇದನ್ನು ಪ್ರದರ್ಶಿಸಲು ಕಲಾವಿದರನ್ನು ಅಲ್ಲಿಗೆ ಕರೆಸಿಕೊಳ್ಳಲಾಗುತ್ತಿತ್ತಂತೆ. ಇದರ ಬಗ್ಗೆ ವಾದ, ವಿವಾದಗಳೇನೇ ಇದ್ದರೂ ಇದು ಇಂದಿಗೆ ನಶಿಸಿಹೋಗಿರುವಕಲೆಯಾಗಿದೆ. ಇದನ್ನೊಂದು ಉಪಮೆಯಾಗಿ , ಕಥೆಯಾಗಿ ಇಲ್ಲಿ ಉಲ್ಲೇಖಿಸಲಾಗಿದೆ.
"ಒಂದೂರಿನ ರಸ್ತೆ ಬದಿಯ ಮೈದಾನವೊಂದರಲ್ಲಿ ಕಿಕ್ಕಿರಿದ ಜನಸಂದಣಿ. ಜನರೆಲ್ಲಾ ದೊಂಬರಾಟದವನ ಮಾತಿನ ಮೋಡಿಗೆ ಬೆರಗಾಗಿ ನಿಂತಿದ್ದಾರೆ. ಉತ್ಸಾಹಿ ಯುವಕನೊಬ್ಬ ನೋಡಲು ಹೋದವನು ದೊಂಬರಾಟದವನ ಮಾತು ಕೇಳುತ್ತಾ, ಕೇಳುತ್ತಾ ಹಿಂದೆ ಹೋಗಿ ಮರದ ಮೇಲೆ ಹತ್ತಿ ನೋಡಿದರೆ ಚೆನ್ನಾಗಿ ಕಾಣಿಸಬಹುದೆಂದು ಮರಹತ್ತಿ ಕುಳಿತುಕೊಂಡು, ಆಟವನ್ನು ವೀಕ್ಷಿಸಲಾರಂಭಿಸುತ್ತಾನೆ. ಒಬ್ಬ ಪುಟ್ಟ ಹುಡುಗನೊಬ್ಬನನ್ನು ಸಹಾಯಕನಾಗಿ ಆಟದಲ್ಲಿ ಬಳಸಿಕೊಳ್ಳುತ್ತಿದ್ದ ದೊಂಬರಾಟದವನು ಆ ಹುಡುಗನನ್ನು ಕರೆದು, ಮಲಗಿಸಿ ಬಟ್ಟೆಯನ್ನು ಹೊದಿಸಿ ಮುಸುಕು ಹಾಕುತ್ತಾನೆ. ಆಮೇಲೆ ಪುಂಗಿಯನ್ನೂದಲಾರಂಭಿಸಿದಾಗ ಅಲ್ಲಿಯೇ ಸುರುಳಿ ಸುತ್ತಿಟ್ಟಿದ್ದ ದಪ್ಪನೆಯ ಹಗ್ಗವೊಂದು ಹಾವಿನಂತೆ ಮೇಲೇರಲಾರಂಭಿಸುತ್ತದೆ. ಇನ್ನೂ ಊದುತ್ತಾ, ಊದುತ್ತಾ ಮೇಲೆ ತೋರಿಸುತ್ತಾರೆ. ನೆರೆದ ಜನರೆಲ್ಲಾ ವಿಸ್ಮಯದಿಂದ ಮೇಲೆ ನೋಡುತ್ತಿರುವಂತೆಯೇ, ಹಗ್ಗದ ತುದಿಯು ಸಾಯಂ ಸಂಧ್ಯೆಯ ಬೆಳಕಿನಲ್ಲಿ ಆಗಸದಲ್ಲಿ ಕಣ್ಮರೆಯಾಗಿರುತ್ತದೆ. ಹಗ್ಗದ ಕೊನೆ ಎಲ್ಲಿ ಹೋಯಿತು ಎಂದು ವಿವರಿಸುತ್ತಾ ತನ್ನ ಮಾತಿನ ಮೋಡಿಯನ್ನು ಮುಂದುವರೆಸುತ್ತಾನೆ. ಆಮೇಲೆ ಮುಸುಕಿನೊಳಗೆ ಮಲಗಿದ್ದ ಹುಡುಗನ ಹೆಸರು ಕರೆದು ಎಬ್ಬಿಸಿ ಹಗ್ಗದ ಕೊನೆ ಎಲ್ಲಿಹೋಯಿತೆಂದು ನೋಡು ಎಂದು ಆಜ್ಞೆ ಮಾಡುತ್ತಾನೆ. ಹುಡುಗ ಕಣ್ಣುಜ್ಜಿಕೊಂಡು ಹಗ್ಗವನ್ನೇರಲಾರಂಭಿಸುತ್ತಾನೆ. ಅವನು ಏರುತ್ತಾ ಹೋಗುತ್ತಿದ್ದಂತೆಯೇ, ದೊಂಬರಾಟದವನು ಅವನೊಡನೆ ಮಾತನಾಡುತ್ತಲೇ ಇರುತ್ತಾನೆ. ಮೇಲೆ ಹೋದ ಹಾಗೆಯೇ ಅವನ ಧ್ವನಿ ಕ್ಷೀಣಿಸುತ್ತಾ ಕಡೆಗೆ ಕೇಳಿಸುವುದೇ ಇಲ್ಲ. ಹುಡುಗನೂ ಮೇಲೆ ಕಾಣದಷ್ಟು ದೂರ ಹೋಗಿರುತ್ತಾನೆ. ಅವನ ಮಾತೇ ಕೇಳದಿದ್ದಾಗ ದೊಂಬರಾಟದವನಿಗೆ ಕೋಪ ಬರುತ್ತದೆ. ಅವನು ಬಾಲಕನಿಗೆ ಹೀಗೆನ್ನುತ್ತಾನೆ,"
ಹಗ್ಗದ ಕೊನೆ ಎಲ್ಲೆಂದು ಹೋಗಿ ನೋಡೆಂದರೆ ನೀನೂ ಮಾಯವಾದೆಯಾ? ಬೇಗ ಕೆಳಗೆ ಬಾ, ನನ್ನ ಸಹನೆಯನ್ನು ಪರೀಕ್ಷಿಸಬೇಡವೆಂದು ಕೂಗಿಹೇಳುತ್ತಲೇ ಜನರೆಲ್ಲಾ ದಿಗ್ಭ್ರಮೆಯಾಗಿ ಮೇಲೆ, ಕೆಳಗೆ ನೋಡುತ್ತಿರುವಂತೆಯೇ, ದೊಂಬರಾಟದವನು ಒಂದು ದೊಡ್ಡ ಕತ್ತಿಯನ್ನು ಹಿಡಿದುಕೊಂಡು ಹುಡುಗನನ್ನು ಹಿಂಬಾಲಿಸಿ ಹಗ್ಗವನ್ನೇರುತ್ತಾನೆ. ಸ್ವಲ್ಪ ಹೊತ್ತಿನ ನಂತರ ಅವನೂ ಅದೃಶ್ಯನಾಗುತ್ತಾನೆ. ಆಮೇಲೆ ಹುಡುಗನ ಆಕ್ರಂದನ, ಚೀರಾಟ ಕೇಳತೊಡಗುತ್ತದೆ. ಜನರೆಲ್ಲಾ ಭಯವಿಹ್ವಲರಾಗಿ ನೋಡುತ್ತಿರುವಂತೆಯೇ ರಕ್ತ ಸಿಕ್ತವಾದ ಹುಡುಗನ ಕೈ ಕಾಲುಗಳೆಲ್ಲಾ ಕೆಳಗೆ ಬೀಳಲಾರಂಭಿಸುತ್ತದೆ. ಕೊನೆಯಲ್ಲಿ ಹುಡುಗನ ದೇಹವೂ ಬೀಳುತ್ತದೆ. ಅಲ್ಲಿ ನೆರೆದ ಹೆಂಗಸರ ದುಃಖದ ಕಟ್ಟೆಯೊಡೆಯುತ್ತದೆ, ಅಷ್ಟು ಮುಗ್ಧ ಬಾಲಕ, ಈ ರೀತಿಯಲ್ಲಿ ದಾರುಣ ಹತ್ಯೆಗೀಡಾದನಲ್ಲ ಎಂದು ರೋಧಿಸುತ್ತಾರೆ. ಇನ್ನೂ ಕೆಲವರಿಗೆ ಕೋಪ ಉಕ್ಕುತ್ತದೆ, ಕೆಳಗೆ ಬಂದ ದೊಂಬರಾಟದವನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ದೊಂಬರಾಟದವನು ಅವರನ್ನೆಲ್ಲಾ ಸಮಾಧಾನ ಪಡಿಸುತ್ತಾ, ತನಗೆ ಕೋಪ ತಡೆಯಲಾರದೇ ಆ ರೀತಿ ಮಾಡಬೇಕಾಯಿತು, ಅದಕ್ಕೇನಾದರೂ ಪರಿಹಾರ ಹುಡುಕುವೆನೆಂದು ಹೇಳುತ್ತಾ ಹುಡುಗನ ಎಲ್ಲಾ ಅವಯವಗಳನ್ನೂ ಆಯ್ದು ಒಟ್ಟುಗೂಡಿಸಿ ಹುಡುಗ ಮಲಗಿದ ಜಾಗದಲ್ಲಿಯೇ ಇಟ್ಟು ಮೊದಲಿನಂತೆಯೇ ಹೊದಿಕೆಯಿಂದ ಮುಚ್ಚುತ್ತಾನೆ.
ಆಮೇಲೆ ಏನೋ ಮಂತ್ರವನ್ನು ಪಠಿಸಿದಂತೆ ಮಾಡಿ ಹುಡುಗನ ಹೆಸರನ್ನು ಕರೆದಾಗ, ಏನೂ ಆಗಿಯೇ ಇಲ್ಲವೆಂಬಂತೆ, ಹುಡುಗ ಹೊದಿಕೆಯೊಳಗಿಂದ ಎದ್ದು ಬರುತ್ತಾನೆ. ಜನಗಳ ಆನಂದಕ್ಕೆ ಪಾರವೇ ಇರುವುದಿಲ್ಲ. ಎಲ್ಲರೂ ಹಬ್ಬವನ್ನಾಚರಿಸುವಷ್ಟು ಸಂತೋಷಪಟ್ಟು ದೊಂಬರಾಟದವನಿಗೆ ಯಥೇಚ್ಚವಾಗಿ ಹಣವನ್ನು ಕೊಡುತ್ತಾ, ಮುಂದಿನ ಆಟಕ್ಕಾಗಿ ಕಾಯುತ್ತಿರುವುದಾಗಿ ಹೇಳಿ ಅಲ್ಲಿಂದ ಚದುರಿ ಮುನ್ನಡೆಯುತ್ತಾರೆ. ಮರದ ಮೇಲಿನಿಂದ ಆಟವನ್ನು ನೋಡುತ್ತಿದ್ದವನಿಗೆ ಎಲ್ಲವೂ ವಿಚಿತ್ರವಾಗಿ ತೋರುತ್ತದೆ ಅವನು ಕಂಡಂತೆ ಹುಡುಗ ಮೊದಲು ಮಲಗಿದ ಮೇಲೆ ಕಡೆಯಲ್ಲಿ ಏಳುವವರೆಗೂ ಮಧ್ಯೆ ಏನೂ ನಡೆಯಲೇ ಇಲ್ಲದೊಂಬರಾಟದವನು ಮಾತನಾಡುತ್ತಲೇ ಇದ್ದನೇ ಹೊರತು ಬೇರೇನೂ ಮಾಡಲಿಲ್ಲ, ಹಗ್ಗ ಹಾವಿನಂತೆ ಮೇಲೇರಲಿಲ್ಲ ಪುಟ್ಟಹುಡುಗ ಅದನ್ನುಹಿಡಿದುಕೊಂಡು ಮೇಲೆ ಹತ್ತಲೇ ಇಲ್ಲ, ದೊಂಬರಾಟದವನೂ ಬಾಲಕನನ್ನುಹಿಂಬಾಲಿಸಲಿಲ್ಲ, ಬಾಲಕನ ಹತ್ಯೆಯನ್ನೂ ಮಾಡಲಿಲ್ಲಎಲ್ಲಾ ಬರಿಯ ಮಾತಿನ ಆಟ, ಮಾತಿನಿಂದಲೇ ಜನರ ಮನಸ್ಸನ್ನು ವಶಪಡಿಸಿಕೊಂಡು ಎಲ್ಲವೂ ನಡೆದ ಹಾಗೆ ಭ್ರಮಿಸುವಂತೆ ಮಾಡಿದ್ದು. ಆದರೆ ಅವನ ಆಟಕ್ಕೆ ಒಂದು ಕ್ಷೇತ್ರದ ಮಿತಿಯಿದ್ದು, ಮರದ ಮೇಲಿನ ಜಾಗ ಆ ಮಿತಿಯನ್ನು ಮೀರಿತ್ತು.
ಆದುದರಿಂದಲೇ ಜನರವಿಸ್ಮಯಗೊಳ್ಳುವಿಕೆ, ಅಳು, ಸಂತೋಷ, ಮುಂತಾದ ಎಲ್ಲಾ ಭಾವನೆಗಳೂ ಅವನಿಗೆ ವಿಚಿತ್ರದಂತೆ ತೋರುತ್ತಿತ್ತು ಏನೂ ನಡೆಯದಿರುವಾಗ ಏಕಿಂತಹ ಭಾವನೆಗಳ ತಾಕಲಾಟ ಎನಿಸಿ ನಿರ್ಲಿಪ್ತನಾಗಿದ್ದ ಸಾಕ್ಷಿ ಸ್ವರೂಪನಾಗಿ!! ವಿಶ್ವದ ಎಲ್ಲಾ ಆಗುಹೋಗುಗಳ ನಡುವೆ, ಎಲ್ಲವನ್ನೂ ನೋಡುತ್ತಲೇ ಏನೂ ಆಗುತ್ತಿಲ್ಲವೆಂಬಂತೆಶಾಂತಿಯುತವಾಗಿರುವವ್ಯಕ್ತಿಗಳಿರಬಹುದೇ? ಈ ಪ್ರಶ್ನೆಯ ಹಿಂದೆಯೇ ಎಲ್ಲ ಜನರನ್ನೂ ಮರುಳು ಮಾಡಿದ ದೊಂಬರಾಟದವನ ತರಹ ವಿಶ್ವದ ಎಲ್ಲರೂಸಾಮೂಹಿಕ ಸನ್ನಿಯಲ್ಲಿದ್ದಾರೆಯೇ? ಇಲ್ಲಿ ದೊಂಬರಾಟದವನು ದೇವರೇ ಅಲ್ಲವೇ!!!... ಇದು ನಿಜವಾದರೆ ಅವನ ಆಟದ ಕ್ಷೇತ್ರದ ಮಿತಿಯೇನು? ಇದಕ್ಕೆ ಉತ್ತರ ಭಗವದ್ಗೀತೆಯಲ್ಲಿದೆ. ಕ್ಷೇತ್ರ ಕ್ಷೇತ್ರಜ್ಞ ಯೋಗದಂತೆ ಕ್ಷೇತ್ರ ಯಾವುದೆಂದು ಸಂಕ್ಷೇಪವಾಗಿ ಹೇಳಬೇಕೆಂದರೆ ದೇಹ, ಮನಸ್ಸು, ಅಹಂಕಾರಬುದ್ಧಿಮುಂತಾದವುಗಳೇ.
ಇಲ್ಲಿಇರುವತನಕಭವಬಂಧನದಲ್ಲಿತೊಳಲಾಡಲೇ ಬೇಕುಅದನ್ನು ಮೀರಿ ಹೋದರೆ ಮಾತ್ರ ಕಾಣಸಿಗುವುದು ಕ್ಷೇತ್ರಜ್ಞ ಅಥವಾ ಭಗವಂತ ಮಾತ್ರ. ಮೀರಿ ಹೋಗಲು ಇರುವ ದಾರಿಗಳೇ ಹಲವಾರು ಯೋಗ ಮಾರ್ಗಗಳುಅದುಸಾಧ್ಯವಾಗುವ ತನಕಜನ್ಮಜನ್ಮಾಂತರಗಳವರೆಗೂ"ಭವ ಬಂಧನ" ತಪ್ಪಿದ್ದಲ್ಲ. ಕನ್ನಡದ ಪ್ರಸಿದ್ಧ ಗೀತೆಯೊಂದರ ಬದಲಾದಸಾಲುಗಳುನೆನಪಿಗೆಬರುತ್ತದಲ್ಲವೇ? "ಬ್ರಹ್ಮಾಂಡವೇಆ ದೇವನಾಡುವ ದೊಂಬರಾಟವಯ್ಯ.