ಅದ್ವೈತ........ಶಂಕರ
ಪೂರ್ಣಾ ನದಿಯ ಪ್ರದೇಶ. ಸಮೃದ್ಧವಾದ ಪ್ರಕೃತಿ, ನಯನ ಮನೋಹರವಾದ ಸುಂದರ ಸಮುದ್ರ.ಜ್ಞಾನಿಗಳ ಭೂಮಿ.ಇಂತಹ ಕ್ಷೇತ್ರದಲ್ಲಿ ಪ್ರಾಯಃ ಸನಾಧರ್ಮ ಅಧಃ ಪತನವಾಗಿರಬಹುದು.ಆದಕಾರಣ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತಿಳಿಸಿದಂತೆ "ಯದಾ ಯದಾ ಹಿ ಧರ್ಮಸ್ಯ ಜ್ಞಾನಿರ್ಭವತಿ ಭಾರತ|ಅಭ್ಯುತ್ಥಾನಾಂ ಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||" ಧರ್ಮದ ಅಧಃಪತನವಾದಂತಹ ಸಮಯದಲ್ಲಿ,ಧರ್ಮದ ಉದ್ಧಾರಕ್ಕಾಗಿ ನನ್ನನ್ನು ನಾನೇ ಸೃಷ್ಠಿ ಗೊಳಿಸಿಕೊಳ್ಳುತ್ತೇನೆ.ಆದಕಾರಣ ಈ ಭೂಮಿಯಲ್ಲಿ ಮಹಾತ್ಮರು ಜಗದ್ಗುರು ಸ್ಥಾನಕ್ಕೆ ತಲುಪಿದಂತಹ ವಿಷಯವನ್ನು ತಿಳಿಯಲು, ಪೂರ್ವ ಇತಿಹಾಸ ತಿಳಿದುಕೊಳ್ಳುವುದು ಅತ್ಯಗತ್ಯ.
ಆಚಾರ್ಯ ಪರಂಪರೆಯಲ್ಲಿ ಅದ್ವೈತ ಸಿದ್ಧಾಂತ-ಋಷಿ ಆತ್ರೇಯ, ಬ್ರಹ್ಮನಂದಿ, ದ್ರವಿಡಾಚಾರ್ಯ,ಪೃಥ್ವೀಧರ,ಭರ್ತೃ ಪ್ರಪಂಚ,ಭರ್ತೃಮಿತ್ರ,ಭರ್ತೃಹರಿ,ಬ್ರಹ್ಮದತ್ತ, ಸುಂದರಪಾಂಡ್ಯ, ಭಗವಾನ್ಉಪವರ್ಷ,ಗೌಡಪಾದ ಹಾಗೂ ಗೋವಿಂದ ಭಗವತ್ಪಾದರವರೆಗೆ ಬೆಳೆದು,ಉಳಿದು ಹಾಗೂ ಮುಂದುವರೆದಂತೆ ಕಂಡುಬರುತ್ತದೆ.ಮುಂದುವರೆದು ಆರ್ಯಾಂಬಾ ಮತ್ತು ಶಿವಗುರು ದಂಪತಿಯರ ಮಗನಾಗಿ ಜನ್ಮತಾಳಿದ "ಶಂಕರ"ಪರಶಿವನೇ ಭೂಲೋಕದಲ್ಲಿ ಜನ್ಮತಾಳಿದನೆಂದು ಹಲವಾರು ಗ್ರಂಥಗಳು,ಗುರುಪರಂಪರೆಯು ತಿಳಿಸುತ್ತಾ ಬಂದಿದೆ.ಇಂತಹ "ಶಂಕರ"ರು ಭೂಲೋಕಕ್ಕೇ ಬರುವ ಮೊದಲು ಸನಾತನ ಧರ್ಮದ ಸ್ಥಿತಿ ಹಾಗೂ ಗತಿ ಅಂದರೆ ಮಾರ್ಗ ಹೇಗಿತ್ತೆಂಬುದನ್ನು ತಿಳಿದುಕೊಳ್ಳುವುದೇ ಈ ಲೇಖನದ ಮುಖ್ಯ ಉದ್ದೇಶ. ತ್ರೇತಾಯುಗದಿಂದ ವೀಕ್ಷಿಸುತ್ತಾ ಬಂದರೆ ಮಂಥರೆಯಿಂದ ಪ್ರಚೋದಿತವಾದ ದಶರಥನ ಪ್ರೀತಿಯ ಪತ್ನಿಯಿಂದ ವಿಲಕ್ಷಣವನ್ನು ಕಂಡ ಸಾಕೇತನಗರದ ರಾಜಗದ್ದಿಗೆ ಹದಿನಾಲ್ಕು ವರ್ಷ "ಪಾದರಕ್ಷೆ" ಸಿಂಹಾಸನದಲ್ಲಿ ಕುಳಿತು ರಾಜ್ಯವಾಳಿದಂತೆ ಕಂಡುಬರುತ್ತದೆ.
"ಗೋಸ್ವಾಮೀ ತುಳಸೀದಾಸ" ಕೃತಿ ’ಹನುಮಾನ್ ಚಾಲೀಸ"ದಲ್ಲಿ ತಿಳಿಸುವಂತೆ "ಹೇ ಹನುಮಂತನೇ" ನೀನು ನನಗೆ ಭರತನಂತೆ "ಭರತ ಸಮ ಭಾಈ" .ಆದಕಾರಣ ಭರತ ಮಹಾತ್ಮನಾದ. ರಾಜ್ಯ,ಕೋಶಾಧಿಗಳ ವ್ಯಾಮೋಹವಿಲ್ಲದೆ, ಹೆಸರೇ ತಿಳಿಸುವಂತೆ, ಭ-ರಥ, ಉತ್ತಮ ಮಾರ್ಗದಲ್ಲಿ ಮನೋರಥವಿರುವವನು.ಧರ್ಮಮಾರ್ಗರಥಿಯಾದ ರಾಜಾರಾಮನನ್ನು ಅರಣ್ಯದಲ್ಲಿ ಕಂಡುಹಿಡಿದು,ಧರ್ಮಮಾರ್ಗಾಚಾರಿಯ ಪಾದರಕ್ಷೆಯನ್ನು ಬೇಡಿ ತಂದು, ಸೂರ್ಯವಂಶವಾದ ಇಕ್ಷ್ವಾಕು ಮೊದಲಾದವರಿಂದ ಆಸೀನರಾಗಿದ್ದ ಸಿಂಹಾಸನದ ಮೇಲಿಟ್ಟು ತಾನೂ ಸಹ ಅಗ್ರಜ ರಾಮನಂತೆ ಮುನಿವೇಶಧಾರಿಯಾಗಿ ಸನಾತನ ಧರ್ಮವನ್ನು ಪುನಃ ಪ್ರತಿಷ್ಠಾಪಿಸಿದ. 86 ರಾಜರುಗಳಿಂದ ಮುಂದುವರೆದ ಸೂರ್ಯವಂಶ 56ನೇ ರಾಜನಾದ ಶ್ರೀರಾಮನು ರಾಜನಾದಂತಹ ಸಮಯದಲ್ಲಿ ಹಲವಾರು ವಿಧದಿಂದ ಆಧ್ಯಾತ್ಮಿಕ, ಆದಿದೈವಿಕ ಹಾಗೂ ಆದಿಭೌತಿಕ ತಾಪತ್ರಯಗಳನ್ನು ಅನುಭವಿಸಿ, ಮುಂದುವರೆದು ಯುಗಮುಗಿದು, ದ್ವಾಪರನಿಗೆ ಅಹ್ವಾನವಿತ್ತು,ತನ್ನ ಕೆಲಸವನ್ನು ಮುಕ್ತಾಯಗೊಳಿಸಿತು.
ದ್ವಾಪರನಿಂದ ಪ್ರಾರಂಭವಾದ ಯುಗ ಮೊದಲಿನಿಂದಲೂ ಅಧರ್ಮಮಾರ್ಗದಲ್ಲೇ ನಡೆಯುತ್ತಾ,,,,ಕಾಲಕಾಲಕ್ಕೆ ನೀತಿಮಾರ್ಗಾಚಾರಿಗಳ ವಚನಾದಿ, ಧರ್ಮಶಾಸ್ತ್ರಗ್ರಂಥಗಳ ಮಾರ್ಗದರ್ಶನದಿಂದ ಸರಿಯಾದಂತೆ ಗೋಚರಿಸುತ್ತಾ, ಶ್ರೀಕೃಷ್ಣನೆಂಬ ಧೀರಲಲಿತ ನಾಯಕನ ಸೂತ್ರದಲ್ಲಿ ಬಂದಾಗ ಪುನಃ ಧರ್ಮಸ್ಥಾಪನೆಗಾಗಿ 16 ಅಕ್ಷೋಹಿಣೀ ಸೇನೆಯ ಮಾರಣ ಹೋಮವಾಗಿ, ಸಮಗ್ರ ಕುರುಕ್ಷೇತ್ರ ನೆತ್ತರಿನಲ್ಲಿ ವೀರಗಾಥೆಯನ್ನು ಶಾಂತರಸದಲ್ಲಿ ಹರಡಿತು. ಅಂತಹ ದ್ವಾಪರಯುಗದ ಆದಿಯಿಂದಲೂ ಆಚಾರ್ಯ ಗೋವಿಂದ ಭಗವತ್ಪಾದರು ಧ್ಯಾನದಲ್ಲಿ ಕುಳಿತು ನಂತರದ ಯುಗವಾದ "ಕಲಿಯುಗ"ದಲ್ಲಿ ಮಹಾಪುರುಷನ ಬರುವಿಕೆಗಾಗಿ ನಿರೀಕ್ಷಿಸುತ್ತಿದ್ದರು.ಅಂತಹ ಮಹಾಪುರುಷನಿಗೆ ಮಾರ್ಗದರ್ಶನ ನೀಡಲು ವಿದ್ವತ್ ಅತ್ಯಗತ್ಯವೆಂದು, ಅದಕ್ಕೆ ಧ್ಯಾನವೊಂದೇ ಮುಖ್ಯ ಮಾರ್ಗವೆಂದು ಚಿಂತಿಸಿ ಶಂಕರರ ಬರುವಿಕೆಗೆ ಅತ್ಯುತ್ತಮ ವಿದ್ವತ್ ಗಣದ ವೇದಿಕೆಯನ್ನು ನಿರ್ಮಾಣ ಮಾಡಿಕೊಂಡಿದ್ದರು.
ಅಂತಹ ಸುಭದ್ರ ತಳಹದಿಯಿಂದ ಕೂಡಿದ ಆಚಾರ್ಯ ಪರಂಪರೆಯ ಪೀಠ, ಬೌದ್ಧಮತದಿಂದ ಅನ್ಯಮಾರ್ಗವನ್ನು ಕಂಡ ಧರ್ಮದ ಪುನರುಜ್ಜೀವನಕ್ಕಾಗಿ ಶಂಕರರಿಂದ ರಾರಾಜಿಸಿತು. "ಶ್ರೀ ಮೇಧಾ ದಕ್ಷೀಣಾಮೂರ್ತಿ" ಸ್ತೋತ್ರದಲ್ಲಿ ತಿಳಿಸುವಂತೆ ಪರಂಪರೆಯಿಂದ ಬ್ರಹ್ಮಜ್ಞಾನವರಸುತ್ತಾ ಬಂದಂತಹ ವಿದ್ಯಾರ್ಥಿಗಳು ಶಂಕರರನ್ನು ಆಚಾರ್ಯ ಪೀಠದಲ್ಲಿ ಕಂಡು ಸಾಕ್ಷಾತ್ಕಾರವನ್ನು ಪಡೆದರೆಂದು ತಿಳಿದು ಬರುತ್ತದೆ. "ವೃದ್ಧಾಃ ಶಿಷ್ಯಾಃ ಗುರುರ್ಯುವಾ"
ಅಂತಹ ಆಚಾರ್ಯರು ಮೌನದಿಂದ ಬ್ರಹ್ಮತತ್ವವನ್ನು ವ್ಯಾಖ್ಯಾನಿಸಿ, ಆನಂದ ಸ್ವರೂಪವಾದ ಚಿನ್ಮುದ್ರೆಯ ಮಹತ್ವವನ್ನು ತಿಳಿಸಿ,ಜನನ ಮರಣ ಹಾಗೂ ದುಃಖದ ನಿವೃತ್ತಿ ಮಾರ್ಗಕ್ಕೆ ಶಾಂತಿಮುಖ್ಯವೆಂದೂ ಅದು ಮೌನದಿಂದ ಸಾಧ್ಯವೆಂದು ನಿರೂಪಿಸಿ, ಜಗದ್ಗುರು ಆಚಾರ್ಯಸ್ಥಾನಕ್ಕೆ ಅರ್ಹತೆಯನ್ನು ಸಂಪಾದಿಸಿ ಸನಾತನ ಧರ್ಮವನ್ನು ಸುದೃಡಗೊಳಿಸಿ ಧರ್ಮಧ್ವಜವನ್ನು ಆರ್ಯಾವರ್ತದಲ್ಲಿ ಬೇರೂರುವಂತೆ ಮಾಡಿದರು.
ಅಂತಹ ಆಚಾರ್ಯ ಪರಂಪರೆಗೆ ಮಣಿಯಲೆನ್ನ ಶಿರವು.
ಮೇಲಿನ ಶಂಕರಾಚಾರ್ಯರ ಸುಂದರ ಚಿತ್ರ www.totalbhakti.com ನ ಕೃಪೆ