ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗಾಂಪರ ಗುರು(ಹಾಸ್ಯ)

picture

ಗಾಂಪರ ಗುರುಗಳು ಶಿಷ್ಯರನ್ನೂ ಕರೆದುಕೊಂಡು ಒಮ್ಮೆ ದೂರದೂರಿಗೆ ಎತ್ತಿನಗಾಡಿಯಲ್ಲಿ ಪ್ರಯಾಣ ಹೊರಟಿದ್ದರು.ಆಯಾಸವಾಗಿದ್ದ ಗುರುಗಳು ಅಲುಗಾಡುವ ಗಾಡಿಯಲ್ಲಿ ಹಾಗೇ ತೂಕಡಿಸುತ್ತಿದ್ದರು,ಆಗ ಅವರ ತಲೆಯ ಮೇಲಿನ ರುಮಾಲು ಗಾಳಿಗೆ ಹಾರಿ ಹೋಯಿತು.
ಆದರೆ ಗುರುಗಳ ಅಪ್ಪಣೆಯಿಲ್ಲದೆ ಶಿಷ್ಯರು ಎಂದೂ ಏನೂ ಮಾಡುವಹಾಗಿರಲಿಲ್ಲ. ಶಿಷ್ಯರು ಸುಮ್ಮನಿದ್ದರು.ಗುರುಗಳು ತುಸು ಹೊತ್ತಿನ ಬಳಿಕ ಎದ್ದು ನೋಡಲು ರುಮಾಲು ಕಾಣದೆ ಶಿಷ್ಯರಿಗೆ ಬೈದರು.ಇನ್ನು ಮುಂದೆ ಏನೇ ಬಿದ್ದರೂ ತೆಗೆದು ಗಾಡಿಯಲ್ಲಿ ಹಾಕಿ ಎಂದು ಹೇಳಿ ಮತ್ತೆ ತೂಕಡಿಸತೊಡಗಿದರು. ನಂತರ ಎತ್ತುಗಳು ಹಾದಿಯಲ್ಲೇ ಸಗಣಿ ಹಾಕಿದವು, ಶಿಷ್ಯರು ತಕ್ಷಣ ಅದನ್ನು ಬಾಚಿ ಗಾಡಿಯಲ್ಲಿ ಹಾಕಿದರು, ವಾಸನೆ ತಡೆಯಲಾಗುವುದೇ? ಗುರುಗಳು ಎದ್ದು ರೇಗಿದರು, ಇನ್ನು ಮುಂದೆ ಹೀಗಾಗದಿರಲು ಒಂದು ಕಾಗದದ ಮೇಲೆ ಒಂದು ಪಟ್ಟಿ ಬರೆದು,ಇವು ಬಿದ್ದರೆ ಮಾತ್ರ ತೆಗೆಯಬೇಕು ಬೇರೇನೂ ಕೂಡದು ಎಂದರು.ಸ್ವಲ್ಪ ಹೊತ್ತಿನ ಬಳಿಕ ಹಳ್ಳಿ ದಾರಿಯ ಹಳ್ಳ ಕೊಳ್ಳ ದಾಟಿ ಹೋಗುತ್ತಿರಲು ಗುರುಗಳು ಗಾಡಿಯಿಂದ ಜಾರಿ ಬಿದ್ದರು,ಕೂಡಲೇ "ಅಯ್ಯಯ್ಯೋ ನನ್ನನು ಎತ್ತ್ರೋ ಎಂದು ಗೋಗರೆದರು" ಅದಕ್ಕೆ ಗಾಂಪ ಶಿಷ್ಯರು "ಗುರುಗಳೇ ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇಲ್ಲವೆಲ್ಲಾ" ಎಂದರು, ಅಯ್ಯೋ ಆಪಟ್ಟಿ ಕೊಡಿ ಎಂದು ಕಸಿದುಕೊಂಡು ತಮ್ಮ ಹೆಸರನ್ನೂ ಸೇರಿಸುವ ವರೆಗೂ ಶಿಷ್ಯರು ಅವರನ್ನು ಮುಟ್ಟಲೇ ಇಲ್ಲ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025