ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹಗಲು - ಕನಸು (ಹಾಸ್ಯ)

picture

ಬಡ ರೈತನೊಬ್ಬ ಬೇಸಿಗೆಯಲ್ಲಿ ಕೆಲಸವಿಲ್ಲದೆ, ತಿನ್ನಲು ಅನ್ನವಿಲ್ಲದೆ ಅವರಿವರ ಮನೆಯಮುಂದೆ ಕೈಚಾಚಿ ಬೇಡುತ್ತಾ ಪಾಲಿಗೆ ಬಂದದನ್ನು ತಿಂದು ಕಾಲ ಕಳೆಯುತ್ತಿದ್ದ.ಒಮ್ಮೆ ಆತನಿಗೆ ಮೊಸರು ತಿನ್ನುವ ಆಸೆಯಾಯಿತು ಭಿಕ್ಷೆ ಬೇಡುವಾಗ ಕೇಳಿಕೊಂಡ ಆದರೆ ಪುಟ್ಟ ಮಡಿಕೆಯಲ್ಲಿ ಸ್ವಲ್ಪವೇ ಹಾಲು ದಕ್ಕಿತು, ಅದಕ್ಕೆ ಚಿಟಿಕೆ ಹುಳಿ ಹಿಂಡಿ ಒಂದು ಮರದ ಬಳಿ ಕಿಳಿತು ಹಾಲು ಮೊಸರು ಆಗುವುದನ್ನೇ ವಿಶ್ರಾಂತಿ ಪಡೆಯುತ್ತಾ ಹಾಗೇ ಕಾಯುತ್ತಾ, ದಣಿದ ದೇಹಕ್ಕೆ ಕೂಡಲೇ ನಿದ್ರೆ ಬಂದಿತು.ಆಳವಾದ ನಿದ್ರೆ ..............ಹಾಲು ಹೆಪ್ಪಾಗಿ ಮೊಸರಾಯಿತು,ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಕಡೆದೂ ಕಡೆದೂ ಹೆಚ್ಚುಹೆಚ್ಚು ಬೆಣ್ಣೆ ತೆಗೆದ,ಬೆಣ್ಣೆಯಿಂದ ತುಪ್ಪ,ತುಪ್ಪಮಾರಿ ನಾಲ್ಕಾರು ಮೊಟ್ಟೆ ತಂದ ಮೊಟ್ಟೆ ಮರಿಯಾಯಿತು, ಮರಿ ದೊಡ್ಡದಾಗಿ ಮತ್ತೆ ಮೊಟ್ಟೆಗಳಿಟ್ಟಿತು ಹತ್ತು, ನೂರು ಸಾವಿರ ಕೋಳಿಗಳು! ಎಲ್ಲವನ್ನೂ ಮಾರಿ ಚಿನ್ನ ಖರೀದಿಸಿದ,ಚಿನ್ನವನ್ನು ರಾಜನಿಗೆ ಒಂದಕ್ಕೆ ಎರಡರಷ್ಟು ಬೆಲೆಗೆ ಮಾರಿದ,ಮನೆ ಕೊಂಡುಕೊಂಡ ಸರಿ ಸುಂದರ ಮಡದಿಯೂ ಬಂದಳು ಮತ್ತಿನ್ನೇನು ಗಂಡು ಮಗುವೂ ಆಯಿತು.ಮಗ ಬೆಳೆದ,ತುಂಟ ಮಗನ ಚೇಷ್ಟ ನೋಡಲಾರದೆ ತನ್ನಂತೆ ಬುದ್ಧಿವಂತ ವ್ಯಾಪಾರಿಯನ್ನಾಗಿ ಮಾಡಬೇಗೆಂಬ ಆಸೆ ಮಗನನ್ನು ಕುರಿತು ಬುದ್ಧಿ ಹೇಳಿದ,ಬೈದ ಕಡೆಗೆ ಬೆತ್ತದಿಂದ ಫಟಾರ್ ಫಟಾರ್ ಎಂದು ಬಾರಿಸತೊಡಗಿದ, ಕೂಡಲೇ ಪಕ್ಕದಲ್ಲಿದ್ದ ಮಡಿಕೆಗೆ ಕೋಲಿನಿಂದ ಫ್ಹಳಾರ್ ಎಂದು ಹೊಡೆದ, ಕನಸೂ ಮುಗಿದಿತ್ತು ಮಡಿಕೆಯೂ ಚೂರಾಯಿತು ಹಾಲು ಮಣ್ಪಾಲಾಯಿತು.


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023