ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದೇವರೆಲ್ಲಿದ್ದಾನೆ ?

picture

ಅಣ್ಣ ತಮ್ಮಂದಿರಾದ ಶಾಮ ರಾಮ ಬಹಳ ತುಂಟ ಬಾಲಕರು . ಊರಲ್ಲೆಲ್ಲಾ ಇವರದ್ದೇ ದೂರು. ಏನಾದರೂ ಅನಾಹುತ ಮಾಡುವುದು ಓಡಿ ಮನೆ ಸೇರುವುದು. ತಾಯಿ ಈ ರಗಳೆಗೆ ರೋಸಿಹೋಗಿ ಒಬ್ಬ ಬ್ರಾಹ್ಮಣ ಗುರುವಿನ ಬಳಿಗೆ ವೇದ ಪಾಠಕ್ಕೆಂದು ಸೇರಿಸಿದಳು.ಮೊದಲ ದಿನ , ಮೊದಲ ಪ್ರಶ್ನೆ, ಅಣ್ಣ ರಾಮನಿಗೆ ಗುರು ಕೇಳಿದ " ದೇವರು ಎಲ್ಲಿದ್ದಾನೆ ? ಹೇಳು".......ಉತ್ತರ ಬರಲಿಲ್ಲ , ಗುರುಗಳು ಇನ್ನೂ ಸ್ವಲ್ಪ ರೇಗಿ ಕೇಳಿದರು "ದೇವರು ಎಲ್ಲಿದ್ದಾನೆ ? " ಊಹು, ಉತ್ತರವಿಲ್ಲ , ಗುರುಗಳು ಇನ್ನೂ ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಕೇಳಿದರು....ತಕ್ಷಣ ರಾಮ ಭಯದಿಂದ ಆ ಜಾಗದಿಂದ ತಪ್ಪಿಸಿಕೊಂಡು ಓಡಿ ಹೊರಗೆಬಂದು ತಮ್ಮನಾದ ಶಾಮನನ್ನೂ ಎಳೆದುಕೊಂಡು ಊರ ಹೊರಗೆ ಓಡಿದ.ತಮ್ಮ ಕೇಳಿದ " ಯಾಕಣ್ಣಾ ಹೀಗೆ ಹೆದರಿ ಓಡಿಬಂದದ್ದು ?" ಅದಕ್ಕೆ ರಾಮ"ನಾವು ಮತ್ತೆ ಪೀಕಲಾಟಕ್ಕೆ ಸಿಕ್ಕಿದ್ದೇವೆ".... " ಏನಂತೆ?"....... " ನೋಡು ದೇವರು ಕಳೆದು ಹೋಗಿದ್ದಾನಂತೆ ನಾವೇ ಅದಕ್ಕೆ ಕಾರಣ ಅಂತೆ ? ! ? ! " ಎಂದ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023