ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗೆಳೆಯರು

picture

ಅದೊಂದು ಹಳ್ಳಿಯ ತೋಟದಮನೆ.ಸುತ್ತಲೂ ಹುಲ್ಲುಗಾಡು.ಎಲ್ಲೆಡೆ ಮೇಯುತ್ತಿರುವ ದನ,ಕರು,ಕುರಿ,ಮೇಕೆಗಳು. ಅಲ್ಲೇ ಒಂದು ಮರದಡಿಯಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಮೇಕೆಯೊಂದು ತನಗೆ ಕೆಲವು ದಿನಗಳಿಗೆ ಬೇಕಾದದಷ್ಟು ಹುಲ್ಲನ್ನು ತನ್ನ ಬಳಿಯಲ್ಲೇ ಇಟ್ಟುಕೊಂಡು ಮಲಗಿತ್ತು. ಬೇರೆ ಮೇಕೆಗಳೂ ಸುತ್ತಲೂ ಮೇಯುತ್ತಾ ಮೇಯುತ್ತಾ ಆಸೆಯಿಂದ ಈ ಮೇಕೆ ಇಟ್ಟುಕೊಂಡಿದ್ದ ಹುಲ್ಲನ್ನೂ ತಿನ್ನಲು ಬಂದವು.ಆಗ ಆ ಬಡ ಮೇಕೆ " ಹೇ ದೂರ ಹೋಗಿ, ನನ್ನ ಅನಾರೋಗ್ಯದಿಂದ ನಾನು ಸಾಯುವುದಿಲ್ಲ ಆದರೆ ನಿಮ್ಮ ದುರಾಸೆಯಿಂದಂತೂ ಹೌದು,ಥೂ ತೊಲಗಿ ದೂರ" ಎಂದಿತು.

ನೀತಿ: ಅವಿವೇಕಿ ಗೆಳೆಯರು ಶತ್ರುಗಳಿಗಿಂತ ಅಪಾಯ


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025