ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬೆಕ್ಕಿಗೊಂದು ಹೆಸರು

picture

ವಿದೇಶದಿಂದ ವಲಸೆ/ವ್ಯಾಪಾರಕ್ಕೆ ಬಂದವರು ಚೀನಾದೇಶದ ರಾಜನಿಗೆ ಒಂದು ಬೆಕ್ಕನ್ನು ಉಡುಗೊರೆಯಾಗಿ ಕೊಟ್ಟರು.ನೋಡಲು ಮುದ್ದಾಗಿದ್ದ ಮರಿಯನ್ನು ರಾಜ ಸದಾ ತನ್ನೊಂದಿಗೇ ಇಟ್ಟುಕೊಂಡು ಇರುತ್ತಿದ್ದ.ಎಲ್ಲರೂ ಅದರ ಹೆಸರು ಏನು ಇಟ್ಟಿದ್ದೀರಿ? ಎಂದು ಕೇಳಲು,ತನ್ನ ಆಸ್ಥಾನದಲ್ಲಿ ಸಾರ್ವಜನಿಕರ ಸಭೆ ಸೇರಿಸಿ ಸಲಹೆ ಕೇಳಿದ.ಒಬ್ಬ ಹೇಳಿದ "ಹುಲಿ"ಎಂದೇಕೆ ಇಡಬಾರದು?" ಎನ್ನುವಷ್ಟರಲ್ಲಿ "ಹುಲಿ? ಇಲ್ಲ "ಡ್ರಾಗನ್" ಹೆಚ್ಚು ಸೂಕ್ತ ಅನ್ನಿಸುತ್ತದೆ ಏಕೆಂದರೆ ಡ್ರಾಗನ್ ಹಾರಲೂ ಬಲ್ಲದು" ಎಂದ ಒಬ್ಬ.ಅರೆ ಡ್ರಾಗನ್ ಗಿಂತ ಮೇಲೆ ಹಾರಬಲ್ಲದೂ ಹಾಗೂ ಬೆಕ್ಕಿನ ಹಾಗೇ ಬಣ್ಣವೂ ಇರುವ "ಮೇಘ" ಎಂಬುದೇ ಸರಿಯಾದ ಹೆಸರು ಎಂದನು ಇನ್ನೊಬ್ಬ.ಗಾಳಿ ಮೇಘವನ್ನೇ ತಳ್ಳಿಬಿಡುತ್ತದೆ ಆದ್ದರಿಂದ"ಗಾಳಿ"ಎನ್ನುವ ಹೆಸರೇ ಸೂಕ್ತ ಎಂದ ಮತ್ತೊಬ್ಬ."ಗೋಡೆ"ಗಾಳಿಯನ್ನೇ ತಡೆಯಬಲ್ಲದ್ದು ಆದ್ದರಿಂದ "ಕಲ್ಲಿನ ಗೋಡೆ"ಯೇ ಒಳ್ಳೆಯ ಹೆಸರು ಎಂದ ಮೊಗದೊಬ್ಬ."ಅದು ಸ್ವಲ್ಪ ಉದ್ದವೆನಿಸುತ್ತದೆ ಅಲ್ಲವೇ" ಎಂದು ರಾಜನು ಹೇಳುವಷ್ಟರಲ್ಲಿ ಮತ್ತೊಬ್ಬ "ಇಲಿ"ಎಂದು ಇಟ್ಟರೆ ಹೇಗೆ? ಇಲಿ ಗೋಡೆಯನ್ನೇ ಕೊರೆದು ಬಿಲ ಮಾಡುತ್ತದೆ,ಆದರಿಂದ ಅದು ಹುಲಿ,ಡ್ರಾಗನ್,ಮೋಡ,ಗಾಳಿ,ಗೋಡೆ ಎಲ್ಲಕ್ಕಿಂತ ಬಲಶಾಲಿ ಎಂದ."ಆದರೆ ಬೆಕ್ಕನ್ನು ಇಲಿ ಎಂದು ಕರೆಯಲು ಸಾಧ್ಯವೇ?ಅದು ಎಲ್ಲದಕ್ಕಿಂತ ಬಲಶಾಲಿ ಇರಬಹುದು ಆದರೆ ಬೆಕ್ಕು ಅದಕ್ಕಿಂತ ಹೆಚ್ಚು ಶಕ್ತಿಶಾಲಿ ಆದ್ದರಿಂದ ಬೆಕ್ಕನ್ನು ಬೆಕ್ಕು ಎಂದೇ ಕರೆಯಬೇಕು ಪ್ರಭು" ಎಂದ ಒಬ್ಬ ಬುದ್ಧಿವಂತ ಯುವಕ.ಕಡೆಗೆ ಹೆಸರೇ ಇಲ್ಲದೆ ರಾಜನ ಬಳಿ ತನ್ನ ಜೀವನವಿಡೀ ಕಾಲ ಕಳೆಯಿತು ಆ ಬೆಕ್ಕು!


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023