ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಓಟ

picture

ಆಫ್ರಿಕಾ ದೇಶದಲ್ಲಿ ಆಗ ಬಿಳಿಯರು ಆಳುತ್ತಿದ್ದ ಕಾಲ.ಇಬ್ಬರು ಕರಿಯರು "ಬಿಳಿಯರಿಗೆ ಮಾತ್ರ" ಎನ್ನುವ ಸ್ಥಳದಲ್ಲಿ ಭೇಟಿಯಾದರು ಒಬ್ಬನಿಗೆ ಅಲ್ಲಿ ಕೆಲಸ ಮಾಡಲು ಅನುಮತಿ ಇತ್ತು, ಮತ್ತೊಬ್ಬನಿಗೆ ಅದಿರಲಿಲ್ಲ.ಸಿಕ್ಕಿಬಿದ್ದರೆ ಜೈಲು! ಅದೇ ವೇಳೆಗೆ ಒಬ್ಬ ಪೋಲೀಸ್ ಅವರ ಬಳಿಗೇ ಬರುವುದನ್ನು ಕಂಡು ಕೆಲಸ ಮಾಡಲು ಅನುಮತಿ ಇದ್ದ ಕರಿಯ ಮತ್ತೊಬ್ಬನಿಗೆ ನೀನು ಓಡು ನಾನು ಹಿಂದೆಯೇ ಬರುವೆ ಎಂದ.ಇಬ್ಬರೂ ಓಡತೊಡಗಿದರು.ಪೋಲೀಸ್ ಇನ್ನೂ ಯುವಕ ಹಾಗೂ ಗಟ್ಟಿ ಆಳಾದ್ದರಿಂದ ಹಿಂದೆ ಓಡುತ್ತಿದ್ದವನನ್ನು ಹಿಡಿದ."ತೋರಿಸು ನಿನ್ನ ಪೆರ್ಮಿಟ್ " ಅಂದ. ಜೇಬುಗಳೆಲ್ಲಾ ತಡಕಾಡಿ ತಡಮಾಡಿ ಪರ್ಮಿಟ್ ತೋರಿಸಿದ ಆ ಕರಿಯ.ಅಷ್ಟರಲ್ಲಿ ಪರ್ಮಿಟ್ ಇಲ್ಲದವ ಕೈಗೆ ಸಿಗದಷ್ಟು ದೂರ ಓಡಿದ್ದ."ಪರ್ಮಿಟ್ ಇದ್ದರೂ ನೀನು ಏಕೆ ಓಡಿದೆ" ಎಂದು ಪೋಲೀಸ್ ಪ್ರಶ್ನಿಸಿದ."ಡಾಕ್ಟರ್ ನನಗೆ ದಿನಾ ನಾಲ್ಕು ಮೈಲಿ ಓಡಲು ಹೇಳಿದ್ದಾರೆ" ಅಂದ."ಹಾಗಾದರೆ ನಿನ್ನ ಗೆಳೆಯ ಏಕೆ ಓಡುತ್ತಿದ್ದ?"ಪೋಲೀಸ್ ಮತ್ತೆ ಪ್ರಶ್ನಿಸಿದ."ಆತನಿಗೂ ಡಾಕ್ಟರ್ ಓಡಲು ಸಲಹೆ ನೀಡಿದ್ದಾರೆ"ಎಂದ.ಅದಕ್ಕೆ ಪೋಲೀಸ್ "ನನ್ನನ್ನು ಅಷ್ಟು ಪೆದ್ದನೆಂದು ತಿಳಿದಿರುವೆಯಾ, ನೀವು ಆರೋಗ್ಯಕ್ಕಾಗಿ ಓಡುತ್ತಿದ್ದರೆ ನಾನು ಹಿಂಬಾಲಿಸಿದರೂ ನಿಲ್ಲದೆ ಏಕೆ ಓಡಿದಿರಿ?"ಎಂದ ಅದಕ್ಕೆ ಆ ಜಾಣ ಕರಿಯ"ಅರೆ ನಿಮಗೂ ಡಾಕ್ಟರ್ ಓಡಲು ಹೇಳಿರಬಹುದೇನೋ ಅಂತ ತಿಳಿದು ಹಾಗೆ ಮಾಡಿದ್ವಿ"ಎಂದು ತಪ್ಪಿಸಿಕೊಂಡು ಹೊರಟೇಬಿಟ್ಟ.


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023