ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

3 ವಿಗ್ರಹಗಳು

picture

ಭಾರತದಲ್ಲಿ ಹಿಂದಿನ ಕಾಲದಲ್ಲಿ ಋಷಿಮುನಿಗಳು ರಾಜರನ್ನು ಆಗಿಂದಾಗ್ಗೆ ಭೇಟಿ ಮಾಡುತ್ತಿದ್ದರು.ಸಲಹೆ ಸೂಚನೆಗಳನ್ನೂ ನೀಡುತ್ತಿದ್ದರು.ಹಾಗೆ ಮುನಿಯೊಬ್ಬನು ಬೇರೆಡೆ ಹಾದು ಹೋಗುವಾಗ ರಾಜನನ್ನು ನೋಡಲು ಅರಮನೆಗೆ ಬಂದನು.ಅಲ್ಲಿ ಯುವರಾಜನ ಭೇಟಿಯಾಯಿತು.ಯುವರಾಜನು ಪೂಜ್ಯ ಗುರುಗಳ ಸೇವೆಮಾಡಿ ಸಂಜೆ ವಿಹಾರಕ್ಕೆಂದು ಉದ್ಯಾನವನದಲ್ಲಿ ವಿಹರಿಸುತ್ತಿರಲು ಆ ಋಷಿಯು "ಯುವರಾಜಾ ನೋಡು, ನಿನಗಾಗಿ 3 ವಿಗ್ರಹಗಳನ್ನು ತಂದಿರುವೆ ನೀನು ಈಗ ಅದರಿಂದ ಒಂದು ಮುಖ್ಯ ವಿಷಯವನ್ನು ತಿಳಿಯಲು ಬೇಕಾದರೆ ಆ ಪ್ರತಿಮೆಯ ಕಿವಿಯಲ್ಲಿ ಈ ತಂತಿಯನ್ನು ತೂರಿಸು"ಎಂದು ಒಂದು ತಂತಿಯನ್ನು ಅವನ ಕೈಗಿಟ್ಟ. ಅದರಂತೆ ಯುವರಾಜ ಮೊದಲನೆಯ ವಿಗ್ರಹದ ಬಲ ಕಿವಿಯಲ್ಲಿ ತಂತಿಯನ್ನು ತೂರಿಸಿದ ತಂತಿಯು ಮತ್ತೊಂದು ಕಡೆಯ ಎದ ಕಿವಿಯಲ್ಲಿ ಹೊರಬಂದಿತು,ಎರಡನೆಯ ವಿಗ್ರಹದ ಬಲ ಕಿವಿಯಲ್ಲಿ ತಂತಿಯನ್ನು ತೂರಿಸಿದ ತಂತಿಯು ಅದರ ಬಾಕಿಯಿಂದ ಹೊರಕ್ಕೆ ಬಂದಿತು.ಇನ್ನು 3ನೆಯ ವಿಗ್ರಹದ ಕಿವಿಯಲ್ಲಿ ತಂತಿಯನ್ನು ತೂರಿಸಿದ, ತಂತಿಯು ಯಾವಕಡೆಯಿಂದಲೂ ಹೊರಬರಲಿಲ್ಲ. ಆಗ ಋಷಿ ಹೇಳಿದ "ಮಗೂ ಯುವರಾಜ, ಈ 3 ವಿಗ್ರಹಗಳೂ 3 ಮಾದರಿಯ ಜನರನ್ನು ಹೋಲುತ್ತದೆ. ಮೊದಲನೆಯ ಮಾದರಿಯ ಜನ ಒಂದು ಕಿವಿಯಲ್ಲಿ ಏನು ಹೇಳಿದರೂ ಮತ್ತೊಂದು ಕಿವಿಯಲ್ಲಿ ಬಿಟ್ಟು ಬಿಡುವವರು, ಎರಡನೆಯವರು ಏನು ಕೇಳಿದರೂ ಮತ್ತೊಬ್ಬರಿಗೆ ಹೇಳುವ ಅಭ್ಯಾಸ ಇರುವವರು.ಇನ್ನು ಕಡೇಯ ಮಾದರಿಯ ಜನರೇ ಉತ್ತಮರು, ಏಕೆಂದರೆ ತಾವು ಕೇಲಿದ್ದನ್ನು ತಮ್ಮಲ್ಲೇ ಇಟ್ಟು ಜ್ಞಾನವನ್ನು ಬೆಳೆಸಿಕೊಳ್ಳುವವರು.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025