ಅಳಿಲು

ಸಿಂಹದ ಸ್ನೇಹ ಮಾಡಿದ ಒಂದು ಅಳಿಲು ತನ್ನ ಕಾಡಿನ ರಾಜನ ಮೇಲಿನ ಭಕ್ತಿಯಿಂದಾಗಿ ನಿಷ್ಟೆಯಿಂದ ಅದರ ಸೇವೆ ಮಾಡತೊಡಗಿತು.ಅದನ್ನು ಮೆಚ್ಚಿದ ಸಿಂಹವು "ಅಯ್ಯಾ ಅಳಿಲೇ, ಹೀಗೇ ನನ್ನ ಸೇವೆ ಮಾಡುತ್ತಿರು ನಿನಗೆ ನಿನ್ನ ನಿವೃತ್ತಿಯ ಹೊತ್ತಿಗೆ ಒಂದು ಚೀಲದಷ್ಟು ಬಾದಾಮಿಯನ್ನು ಕೊಡುವೆ" ಎಂದಿತು.ಅಳಿಲು ಬಾದಾಮಿಯ ಆಸೆಯಿಂದಿ ಆ ದಿನವನ್ನೇ ನೆನೆಯುತ್ತಾ, "ಆಹಾ ಮಿಕ್ಕ ಅಳಿಲುಗಳು ಜೀವನವಿಡೀ ಅಲೆದರೂ ಸಿಗದಷ್ಟು ಬಾದಾಮಿ ನನಗೆ ದೊರೆಯುತ್ತದೆ" ಎಂದು ಜಂಭದಿಂದ ಅಲೆದಾಡುತ್ತಾ ಇತ್ತು. ಹೀಗೇ ಎಡಬಿಡದೆ ನಿಷ್ಟೆಯಿಂದ ಗಜರಾಜನ ಸೇವೆ ಮಾಡುತ್ತಿರಲು ಒಂದು ಒಮ್ಮೆ ಆದಿನ ಬಂದೇ ಬಿಟ್ಟಿತು.ಅಳಿಲು ಇಳಿಯ ವಯಸ್ಸಿಗೆ ಬರಲು ಸಿಂಹವು ಅದಕ್ಕೆ ಒಂದು ಚೀಲ ಬಾದಾಮಿ ಕೊಟ್ಟು ಕಳಿಸಿತು.ಆದರೆ ಬಹುದಿನಗಳಿಂದ ಆಸೆ ಹೊತ್ತುಕೊಂಡಿದ್ದ ಅಳಿಲಿಗೆ ಅದನ್ನು ಕಂಡು ಬೇಸರವಾಯಿತು,ಏಕೆಂದರೆ ಅವನ್ನು ಕಡಿಯಲು ಅದರ ಬಾಯಿಯಲ್ಲಿ ಹಲ್ಲುಗಳೇ ಇಲ್ಲವಾಗಿದ್ದವು.