ಪಂಡಿತ

ಪಂಡಿತನೊಬ್ಬ ನದಿ ದಾಟಿ ಪಕ್ಕದ ಊರಿಗೆ ಪ್ರಯಾಣ ಮಾಡಲು ಹೊರಟಿದ್ದ. ದೋಣಿಯಲ್ಲಿ ಸಾಗುತ್ತಿರಲು ಕಾಲ ಕಳೆಯಲು ಅಂಬಿಗನನ್ನು ಮಾತನಾಡಿಸುತ್ತಿದ್ದ. ಹಾಗೇ ಮಾತಿಗೆ ಮಾತು ಬೆಳೆದು ಪಂಡಿತ ಆ ಅಂಬಿಗನನ್ನು ಕುರಿತು"ನಿನಗೆ ವ್ಯಾಕರಣ ಬರುತ್ತದೋ"ಎಂದು ಜಂಭದಿಂದ ಕೇಳಿದ.ಅದಕ್ಕುತ್ತರವಾಗಿ ಅಂಬಿಗ‘ಇಲ್ಲಾ ಸ್ವಾಮಿ’ಎಂದ. ಪಂಡಿತ ಮತ್ತೆ ಜಂಭದಿಂದ ನಕ್ಕು "ಹಾದಿದ್ದರೆ ನಿನ್ನ ಅರ್ಧ ಜನ್ಮ ಹಾಳು" ಅಂದ. ಸ್ವಲ್ಪ ಹೊತ್ತಿನ ಬಳಿಕ ಅಂಬಿಗ ಕೇಳಿದ"ಸ್ವಾಮಿ ನಿಮಗೆ ಈಜು ಬರುತ್ತೋ?" ಅದಕ್ಕೆ ಪಂಡಿತ "ಇಲ್ಲ"ಎಂದ."ಹಾಗಿದ್ದಲ್ಲಿ ನಿಮ್ಮ ಪೂರ್ತಿ ಜನ್ಮವೇ ನೀರುಪಾಲು, ಈಗ ದೋಣಿಯಲ್ಲಿ ಬಿರುಕು ಬಿಟ್ಟಿದೆ, ನೀರು ನುಗ್ಗುತ್ತಿದೆ!"ಎಂದ. ಕಡೆಗೆ ಅಂಬಿಗನೇ ಹಾಗೂ ಹೀಗೂ ಮುಳುಗುತ್ತಿದ್ದ ಪಂಡಿತನನ್ನು ದಡ ಸೇರಿಸಿ ಪ್ರಾಣ ಉಳಿಸಿದ.