ಲೋಕದ ಡೊಂಕ

ಒಬ್ಬ ರಾಜನು ದೊಡ್ಡದಾದ ತನ್ನ ಸಾಮ್ರಾಜ್ಯವನ್ನು ನೋಡಲು ರಥವನ್ನೇರಿ ಹೊರಟ.ಊರುಗಳೆಲ್ಲಾ ಸುತ್ತಿ ಬಂದ ನಂತರ ಸಭೆ ಕರೆದ "ರಾಜ್ಯದ ಹಾದಿ ಬಹು ಕೆಟ್ಟದಾಗಿದೆ ಅಲ್ಲಿ ನನಗೆ ನಡೆಯಲು ಸಾಧ್ಯವಿಲ್ಲ,ಅದಕ್ಕಾಗಿ ಎಲ್ಲಾ ರಸ್ತೆಗೂ ಚರ್ಮದ ಕಂಬಳಿ ಹಾಸಿಬಿಡಿ"ಎಂದು ಆಜ್ಞೆ ಮಾಡಿದ.ಅಷ್ಟು ದೊಡ್ಡ ಊರಿನ ಎಲ್ಲಾ ದಾರಿಗೂ ಚರ್ಮವನ್ನು ಒದಗಿಸಲು ಅದೆಷ್ಟು ಪ್ರಾಣಿಗಳು ಬೇಕು? ಅವುಗಳ ಹತ್ಯೆ ಆಗಬೇಕು? ಎಂದು ಜಾಣತನದಿಂದ ಚಿಂತಿಸಿದ ಬುದ್ಧಿವಂತನು" ಸ್ವಾಮೀ ತಾವೇ ಏಕೆ ಒಂದು ಮೆತ್ತನೆಯ ಚರ್ಮದ ಪಾದರಕ್ಷೆಯನ್ನು ಮಾಡಿಸಿಕೊಳ್ಳಬಾರದು?"ಎಂದು ಕೇಳಿದ.ಅವನ ಸಲಹೆ ಎಲ್ಲರಿಗೂ ಹಿಡಿಸಿತು.ರಾಜನೂ ಒಪ್ಪಿದ.ಮೆಚ್ಚಿ ಉಡುಗೊರೆಯಿತ್ತ.
ನೀತಿ: ಪ್ರಪಂಚವನ್ನು ಬದಲಾಯಿಸುವ ಮೊದಲು ನಮ್ಮನ್ನು ನಾವೇ ಏಕೆ ಬದಲಾಯಿಸಿಕೊಳ್ಳಬಾರದು?