ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಳ್ಳ ಸಾಧು

picture

ರಾಜ ಕೃಷ್ಣದೇವರಾಯನ ರಾಜ್ಯದಲ್ಲಿ ಒಮ್ಮೆ ಸಾಧು ಒಬ್ಬನು ಬಂದು ದೇವರ ಗುಡಿ ಸೇರಿಕೊಂಡು ಜನರಿಗೆ ತಾನು ತನ್ನ ಮಂತ್ರಶಕ್ತಿಯಿಂದ ಪಾಪಗಳನ್ನು ಕಳೆಯಬಲ್ಲೆ, ನೋವುಗಳನ್ನು ನೀಗಿಸಬಲ್ಲೆ, ರೋಗ ರುಜಿನಗಳನ್ನು ವಾಸಿಮಾಡಬಲ್ಲೆ, ಕಷ್ಟಗಳನ್ನು ನಿವಾರಿಸಬಲ್ಲೆ ಎಂದೆಲ್ಲಾ ಹೇಳಿ ಅವರಿಂದ ಹೆಚ್ಚು ಹೆಚ್ಚು ಹಣ ಧಾನ್ಯ, ಉಡುಗೊರೆಗಳನ್ನು ಪಡೆಯಲು ಆರಂಭಿಸಿದ.ತೆನ್ನಾಲಿ ರಾಮನಿಗೆ ಈತನ ಮೇಲೆ ಸಂಶಯ ಮೂಡಿತು. ಆತನೂ ಗುಡಿಗೆ ತೆರಳಿ ತನಗೂ ಏನೋ ತೊಂದರೆ ಇದೆ ಎನ್ನುವಂತೆ ಆ ಸಾಧುವಿನ ಪಕ್ಕದಲ್ಲೇ ಕುಳಿತ. ಆದರೆ ಸಾಧು ಮತ್ತೆ ಮತ್ತೆ ಮಂತ್ರಗಳನ್ನೇ ಜಪಿಸುತ್ತಿದ್ದ. ಈತನು ಅಸಲಿ ಸಾಧುವಲ್ಲ ಎಂದು ತಿಳಿದ ಕೂಡಲೇ ಅವನ ಮುಂದೆ ಬಂದು ತಲೆ ಬಾಗಿ ನಮಸ್ಕರಿಸುವ ಹಾಗೆ ಬಗ್ಗಿ ಸಾಧುವುನ ಗಡ್ಡದ ಒಂದು ಕೂದಲನ್ನು ಕಿತ್ತು ಕೂಡಲೇ ಅಲ್ಲಿಂದ ಹೊರಗೆ ಓಡತೊಡಗಿದ.ಓಡುತ್ತಾ ಓಡುತ್ತಾ "ಹಾ! ಸಿಕ್ಕಿತು ಸಿಕ್ಕಿತು ಸ್ವರ್ಗಕ್ಕೆ ಹೋಗಲು ಬೀಗದ ಕೈ ಸಿಕ್ಕಿತು ಎಂದು ಕೂಗಿದ". ಜನರೆಲ್ಲಾ ವಿಷಯವೇನೆಂದು ತಿಳಿಯಲು ಅವನನ್ನು ಹಿಂಬಾಲಿಸಿದರು. ನಂತರ ನೂರಾರು ಜನ ಗುಡಿಯ ಕಡೆ ಧಾವಿಸಿ ಬಂದರು. ಇನ್ನು ಸಾಧು ತನ್ನ ಮುಂದಿನ ಗತಿ ಊಹಿಸಿ ತನ್ನ ಕಾಲುಗಳಿಗೆ ಬುದ್ಧಿ ಹೇಳಿದನು.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025