ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಿಲಾಡಿ ! ಮಹಾ ಕಿಲಾಡಿ !(ಹಾಸ್ಯ)

picture

ಒಬ್ಬ ಕಳ್ಳ ಊರಿಂದೂರಿಗೆ ಪ್ರಯಾಣ ಮಾಡುತ್ತಾ ತನ್ನ ಕೆಲಸ ಸಾಧಿಸಿಕೊಳ್ಳುತ್ತಿದ್ದ. ಒಮ್ಮೆ ಆತ ತಿಮ್ಮನಹಳ್ಳಿ ಎನ್ನುವ ಹಳ್ಳಿಗೆ ಬಂದ. ಹೆಸರಿಗೆ ತಕ್ಕ ಹಾಗೆ ಊರಿನಲ್ಲಿ ಬಹಳಷ್ಟು ತಿಮ್ಮಂದಿರು ಇರುತ್ತಾರೆ, ಅವರನ್ನು ಚೆನ್ನಾಗಿ ಮೋಸ ಮಾಡಿ ಇಲ್ಲಿಂದಲೂ ಪರಾರಿಯಾಗಬಹುದು ಎಂದು ಯೋಜನೆ ಹಾಕಿ ನಡೆದ.ಆ ಕೂಡಲೇ ಆತನಿಗೆ ಒಬ್ಬ ಡೊಳ್ಳು ಹೊಟ್ಟೆಯ ಪುರೋಹಿತ ತನ್ನ ಅಂಗಳದ ಉಯ್ಯಾಲೆಯಲ್ಲಿ ವಿಶ್ರಮಿಸುತ್ತಾ ಕುಳಿತಿರುವುದು ಕಾಣಿಸಿತು.ಆತನ ಬಳಿಗೆ ಓಡಿ ಹೋಗಿ"ಸ್ವಾಮೀ ನಿಮ್ಮ ಮುಖದಲ್ಲಿ ಏನು ಖಳೆ ಇದೆ"ಎಂದ.ಅದಕ್ಕೆ ಆ ಪುರೋಹಿತ ತನ್ನ ಮನೆಯ ಬಾಗಿಲಕಡೆಗೆ ನೋಡುತ್ತಾ "ಲೇ ಒಂದ್ ಮೂರು ಸೇರು ಅಕ್ಕಿ ತಾರೇ" ಎಂದು ಕೂಗಿದ. ಕಳ್ಳ ಅಷ್ಟಕ್ಕೆ ಸುಮ್ಮನಾಗಲಿಲ್ಲ " ಸ್ವಾಮೀ, ನಿಮ್ಮ ಮುಖದಲ್ಲಿ ಖಳೆಮಾತ್ರವಲ್ಲ ನೀವು ಮಹಾ ದಯಾಳು,ಕರುನಾಳು"ಎಂದ. ತಕ್ಷಣ ಪುರೋಹಿತ "ಲೇ ಹತ್ತು ಸೇರು ಅಕ್ಕಿ ತಾ,ಹಾಗೇ ಹಣ್ಣು ಕಾಯಿಯನ್ನೂ ತಾ" ಎಂದ. ಕಳ್ಳನ ಸಂತೋಷಕ್ಕೆ ಪಾರವೆ ಇಲ್ಲದಂತಾಯ್ತು, ‘ಇಷ್ಟೊಂದು ಸುಲಭವಾಗಿ ಈ ಊರಿನವರನ್ನು ಮೋಸಮಾಡಬಹುದೂ!ಇನ್ನು ನಾನು ಧಿಡೀರ್ ಶ್ರೀಮಂತನೇ ಆಗುವೆ’ ಅಂದುಕೊಂಡ. "ಸ್ವಾಮೀ ನಿಮ್ಮಂತಹವರು ಇರೋದ್ಲಿಂದ್ಲೇ ಮಳೆ-ಬೆಳೆ ಊರಿಗೆ ತುಂಬಿ ಹರಿಯುವ ಹೊಳೆ......"ಎಂದು ಪಟ್ಟಿ ಸುತ್ತಿದ. ಪುರೋಹಿತ ಈಗ ಮತ್ತೂ ಜೋರಾಗಿ "ಹಾಗೇ ಒಂದೆರೆಡು ಒಳ್ಳೆ ಪಂಚೆ,ವಸ್ತ್ರ,ನೂರು ರೂಪಾಯಿ ಎಲ್ಲಾ ತಾ"ಎಂದ. ಕಳ್ಳನಿಗೆ ಅನುಮಾನ ಶುರುವಾಯ್ತು "ಅಲ್ಲಾ ಸ್ವಾಮೀ ನೀವು ಆವಾಗ್ಗಿನಿಂದ ಅಕ್ಕಿ ತಾ, ವಸ್ತ್ರ ತಾ, ಹಣ್ಣು ತಾ ಅಂತಿದ್ದೀರಿ ಆದರೆ ಒಳಗಿನಿಂದ ಏನೂ ಬರ್ತಾನೇ ಇಲ್ಲವಲ್ಲಾ?" ಎಂದು ಕೇಳಿದ.ಅದಕ್ಕೆ ಉತ್ತರವಾಗಿ ಆ ಪುರೋಹಿತ "ಅರೇ ಬರೇ ಹೊಗಳಿಕೆಯಿಂದ ನನಗೇನು ಲಾಭ ಮುಂದಕ್ಕೆ ಹೋಗು"ಎಂದ. ಅದಕ್ಕೆ ಉತ್ತರವಾಗಿ ಕಳ್ಳ "ನಾನು ನಿಮ್ಮನ್ನು ಸಂತೋಷ ಪಡಿಸಲಿಲ್ಲವೇ" ಅನ್ನಲು "ನಾನೂ ನಿನ್ನನ್ನು ಸಂತೋಷ ಪಡಿಸಿದ್ದೀನಿ,ಬರೀ ಮಾತಿನ ಹೊಗಳಿಗೆಗೆ,ಬರೀ ಮಾತಿನ ಬಹುಮಾನ !" ಎಂದ ಪುರೋಹಿತ. ನಂತರ ತಿಮ್ಮನಹಳ್ಳಿಯಲ್ಲಿ ಮತ್ತಾರನ್ನೂ ಮಾತಾಡಿಸುವ ಗೋಜಿಗೇ ಹೋಗದೆ ಮುಂದಿನ ಊರಿನ ಕಡೆ ಹೆಜ್ಜೆ ಹಾಕಿದ ಆ ಕಳ್ಳ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025