ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗಣಿತ ಪಂಡಿತ

picture

 ಒಮ್ಮೆ ಶ್ರೀಮಂತ ಜಿಪುಣ ವ್ಯಾಪಾರಿ ಒಬ್ಬ ಗಣಿತ ಪಂಡಿತನನ್ನು ಕೆಲಸಕ್ಕೆ ಇಟ್ಟುಕೊಂಡ.ತನ್ನ ಹಣ ದ್ವಿಗುಣವಗುವ ಬಗ್ಗೆ ಒಂದು ಸೂತ್ರವನ್ನು ಕಂಡುಹಿಡಿಯಲು ಪಂಡಿತನಿಗೆ ಒತ್ತಾಯ ಮಾಡಿದ.ಅದರಂತೆ ಆತ ಸೂತ್ರ ಕಂಡಿಯೂ ಹಿಡಿದ. ಸ್ವಲ್ಪ ದಿನ ಕಳೆಯಲು ವ್ಯಾಪಾರಿ ಬೇರೆ ಊರಿಗೆ ಹೋಗಿ ಬರುವುದಾಗಿಯೂ,ಅಲ್ಲಿಯವರೆಗೂ ತನ್ನ ವ್ಯಾಪಾರ ನೋಡಿಕೊಳ್ಳಲೂ ಹಾಗೂ ಹೊಸ ಸೂತ್ರವನ್ನು ಅಲವಡಿಸಲೂ ಹೇಳಿದ. ದೂರದೂರಿಗೆ ಹೊರಟ. ತಿರುಗಿ ಬರಲು ತನ್ನ ವ್ಯಾಪಾರ ದೀವಾಳಿ ಆಗಿ ಹೋಗಿತ್ತು ಖಾತೆಯಲ್ಲಿ ಹಣವೇ ಇಲ್ಲವಾಗಿತ್ತು.ಆತನಿಗೆ ಸಿಟ್ಟು ಬಂದಿತು.ಪಂಡಿತ ಹಣವನ್ನು ಊರಿನವರಿಗೆಲ್ಲಾ ದಾನ ಮಾಡಿಬಿಟ್ಟಿದ್ದ.ಪರೋಪಕಾರದಿಂದ ನಿನ್ನ ಉದ್ಧಾರ ಎಂದು ಉಪದೇಶ ಮಾಡಿದ.ಶ್ರೀಮಂತ ಕೋಪದಿಂದ ಆತನನ್ನು ಕೆಲಸದಿಂದ ಅಟ್ಟಿದ. ಶ್ರಿಮಂತನಿಗೆ ಸ್ವಲ್ಪ ಸಮಯದ ನಂತರ ತೀರಾ ಬಡತನ ಆವರಿಸಿತು. ಮುಂದಿನ ದಾರಿ ಕಾಣದೆ ಬೇಸರದಿಂದ ದಾರಿಯಲ್ಲಿ ನಡೆದು ಹೋಗುತ್ತಿದ್ದ.ಆತನನ್ನು ಕಂಡು ಜನ ಅನುಕಂಪದಿಂದ ವಿಚಾರಿಸಿದರು,ಮನೆಗೆ ಕರೆದರು,ಹಣ್ಣು ಆಹಾರ ಕೊಟ್ಟರು.ನೀನು ಒಬ್ಬ ನಿಪುಣ ವ್ಯಾಪಾರಿ ನಮ್ಮೂರಿಗೆ ಕೆಲವು ವ್ಯಾಪಾರಿಗಳ ಅವಶ್ಯವಿದೆ ನಿನ್ನಲ್ಲಿ ಆ ಕಲೆ ಇದೆ,ನೀನೇ ಏಕೆ ಮಾಡಬಾರದು? ನಾವು ನಿನಗೆ ಸಹಾಯ ಮಾಡುತ್ತೇವೆ ಎಂದು ಪ್ರೋತ್ಸಾಹಿಸಿದರು.ಅದರಂತೆ ಮುಂದೆ ಮೊದಲಿಗಿಂತಲೂ ದೊಡ್ದ ವ್ಯಾಪಾರಿ ಎನಿಸಿದ.ಜನರ ಬೆಂಬಲ ಮತ್ತಷ್ಟು ಪುಷ್ಟಿ ಕೊಟ್ಟಿತು.ಪಂಡಿತನ ಜಾಣ್ಮೆ ಅರಿತು ಅವನನ್ನು ಮತ್ತೆ ಕೆಲಸಕ್ಕೆ ಕರೆದ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023