ಗಣಿತ ಪಂಡಿತ

ಒಮ್ಮೆ ಶ್ರೀಮಂತ ಜಿಪುಣ ವ್ಯಾಪಾರಿ ಒಬ್ಬ ಗಣಿತ ಪಂಡಿತನನ್ನು ಕೆಲಸಕ್ಕೆ ಇಟ್ಟುಕೊಂಡ.ತನ್ನ ಹಣ ದ್ವಿಗುಣವಗುವ ಬಗ್ಗೆ ಒಂದು ಸೂತ್ರವನ್ನು ಕಂಡುಹಿಡಿಯಲು ಪಂಡಿತನಿಗೆ ಒತ್ತಾಯ ಮಾಡಿದ.ಅದರಂತೆ ಆತ ಸೂತ್ರ ಕಂಡಿಯೂ ಹಿಡಿದ. ಸ್ವಲ್ಪ ದಿನ ಕಳೆಯಲು ವ್ಯಾಪಾರಿ ಬೇರೆ ಊರಿಗೆ ಹೋಗಿ ಬರುವುದಾಗಿಯೂ,ಅಲ್ಲಿಯವರೆಗೂ ತನ್ನ ವ್ಯಾಪಾರ ನೋಡಿಕೊಳ್ಳಲೂ ಹಾಗೂ ಹೊಸ ಸೂತ್ರವನ್ನು ಅಲವಡಿಸಲೂ ಹೇಳಿದ. ದೂರದೂರಿಗೆ ಹೊರಟ. ತಿರುಗಿ ಬರಲು ತನ್ನ ವ್ಯಾಪಾರ ದೀವಾಳಿ ಆಗಿ ಹೋಗಿತ್ತು ಖಾತೆಯಲ್ಲಿ ಹಣವೇ ಇಲ್ಲವಾಗಿತ್ತು.ಆತನಿಗೆ ಸಿಟ್ಟು ಬಂದಿತು.ಪಂಡಿತ ಹಣವನ್ನು ಊರಿನವರಿಗೆಲ್ಲಾ ದಾನ ಮಾಡಿಬಿಟ್ಟಿದ್ದ.ಪರೋಪಕಾರದಿಂದ ನಿನ್ನ ಉದ್ಧಾರ ಎಂದು ಉಪದೇಶ ಮಾಡಿದ.ಶ್ರೀಮಂತ ಕೋಪದಿಂದ ಆತನನ್ನು ಕೆಲಸದಿಂದ ಅಟ್ಟಿದ. ಶ್ರಿಮಂತನಿಗೆ ಸ್ವಲ್ಪ ಸಮಯದ ನಂತರ ತೀರಾ ಬಡತನ ಆವರಿಸಿತು. ಮುಂದಿನ ದಾರಿ ಕಾಣದೆ ಬೇಸರದಿಂದ ದಾರಿಯಲ್ಲಿ ನಡೆದು ಹೋಗುತ್ತಿದ್ದ.ಆತನನ್ನು ಕಂಡು ಜನ ಅನುಕಂಪದಿಂದ ವಿಚಾರಿಸಿದರು,ಮನೆಗೆ ಕರೆದರು,ಹಣ್ಣು ಆಹಾರ ಕೊಟ್ಟರು.ನೀನು ಒಬ್ಬ ನಿಪುಣ ವ್ಯಾಪಾರಿ ನಮ್ಮೂರಿಗೆ ಕೆಲವು ವ್ಯಾಪಾರಿಗಳ ಅವಶ್ಯವಿದೆ ನಿನ್ನಲ್ಲಿ ಆ ಕಲೆ ಇದೆ,ನೀನೇ ಏಕೆ ಮಾಡಬಾರದು? ನಾವು ನಿನಗೆ ಸಹಾಯ ಮಾಡುತ್ತೇವೆ ಎಂದು ಪ್ರೋತ್ಸಾಹಿಸಿದರು.ಅದರಂತೆ ಮುಂದೆ ಮೊದಲಿಗಿಂತಲೂ ದೊಡ್ದ ವ್ಯಾಪಾರಿ ಎನಿಸಿದ.ಜನರ ಬೆಂಬಲ ಮತ್ತಷ್ಟು ಪುಷ್ಟಿ ಕೊಟ್ಟಿತು.ಪಂಡಿತನ ಜಾಣ್ಮೆ ಅರಿತು ಅವನನ್ನು ಮತ್ತೆ ಕೆಲಸಕ್ಕೆ ಕರೆದ.