ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮುದ್ದು

picture

ರವಿ ಒಬ್ಬ ಒಳ್ಳೆಯ ಹುಡುಗ.ಎಲ್ಲರಿಗೂ ಆತನನ್ನು ಕಂಡರೆ ಬಹಳ ಪ್ರೀತಿ.ಆತನನ್ನು ಅತಿ ಮುದ್ದು ಮಾಡಿ ಆತನಿಗೆ ಸ್ವಲ್ಪವೂ ನೋವಾಗದಂತೆ ಜಾಗರೂಕತೆಯಿಂದ ಕಾಣುತ್ತಿದ್ದರು.ಕೇಳುವ ಮೊದಲೇ ಆತನಿಗೆ ಎಲ್ಲಾ ವಸ್ತುಗಳು ಸಿಗುತ್ತಿದ್ದವು.ಅತಿ ಮುದ್ದಿನಿಂದಾಗಿ ಅವನು ಚಿಕ್ಕಪುಟ್ಟ ಕಾರಣಕ್ಕೆ ಅಳುವುದು,ಸಣ್ಣ ವಿಶಯಕ್ಕೆ ಬೇಸರ ಮಾಡಿಕೊಳ್ಳುವುದು, ತನ್ನ ಪಾದರಕ್ಷೆಯಲ್ಲಿ ಚಿಕ್ಕ ಕಲ್ಲು ನುಸುಳಿದರೆ ಪ್ರಾಣವೆ ಹೋದಂತೆ ಆಡುವುದು ಹಾಗೂ ಬಿಸಿಲು ನೆತ್ತಿಗೆ ಒಂದು ನಿಮಿಷ ತಾಕಿದರೆ ಸಾಕು ತಲೆ ಸುತ್ತಿ ಬೀಳುತ್ತಿದ್ದ.ಹೀಗೆಯೇ ಆತ ಅತಿ ನಾಜೂಕು ಆಗಿಹೋದ. ಒಮ್ಮೆ ದಾರಿಯಲ್ಲಿ ನಡೆದು ಹೋಗುವಾಗ ಒಬ್ಬ ತಾಯಿ ತನ್ನ ಮಗುವಿಗೆ "ಸಾಕು ಅತ್ತಿದ್ದು ಏಳೊ, ನೀನೇನು ಅಳುಬುರುಕ ರವೀನಾ? ಏನೂ ಆಗಿಲ್ಲ ಏಳು,ಸುಮ್ಮನೆ ತರಚಿದೆ ಅಷ್ಟೆ ರಕ್ತ ಕೂಡಾ ಬರಲಿಲ್ಲ ಸಾಕು ನಿನ್ನ ನಾಟಕ ನಡಿ"ಎನ್ನುತ್ತಿದ್ದಳು.ಅದನ್ನು ಕೇಳಿ ರವಿಗೆ ಬಹಳ ಬೇಸರವಾಯಿತು. ತನ್ನ ಶಾಲೆಗೆ ಬಂದಾಗ ತನ್ನ ಟೀಚರ್ ಬಳಿ ಹೇಳಿಕೊಂಡ.ಸಂಜೆ ಮನೆಗೆ ಬಂದೊಡನೆಯೆ ತಂದೆಯ ಬಳಿಯೂ ಹೇಳಿಕೊಂಡ ಇಬ್ಬರೂ ಒಂದೇ ಉಪಾಯ ಹೇಳಿಕೊಟ್ಟರು.ಮರುದಿನದಿಂದಲೇ ಅಳವಡಿಸಿಕೊಂಡ.ಮುಂದಕ್ಕೆ ಅಳುಬುರುಕನಾಗದೆ ಸ್ವಶಕ್ತಿ ಅರಿತು ಧೈರ್ಯದಿಂದ ಬಾಳಿದ. ಉಪಾಯ ಇದಾಗಿತ್ತು "ದಿನಕ್ಕೆ ಒಂದು ಮಿಠಾಯಿ ಕಡಿಮೆ ತಿನ್ನು,ದಿನಕ್ಕೆ ಐದು ನಿಮಿಷ ಹೆಚ್ಚಿಗೆ ಓದು, ಅಳುವ ಮೊದಲು ಒಂದರಿಂದ-ಹತ್ತು ಎಣಿಸು" ಇದೇ ಅವನರಿತ ಪಾಠ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023