ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕುಸ್ತಿ ಬರತ್ತಾ?(ಹಾಸ್ಯ)

picture

ತಿಮ್ಮ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಅದೇ ಸಮಯಕ್ಕೆ ಗುಂಡ ಪಕ್ಕದಲ್ಲಿ ಬಂದು ಕುಳಿತ.ಹೊಸ ಮುಖ ಪರಿಚಯ ಇಲ್ಲ ಇಬ್ಬರೂ ಮಾತನಾಡದೇ ಕುಡಿಯುತ್ತಾ ಕುಳಿತಿದ್ದರು.ಅಮಲು ಏರುತ್ತಿದ್ದಂತೆ ಆಗಿಂದಾಗ್ಗೆ ಅನುಮಾನವಾಗಿ ಒಬ್ಬರನ್ನೊಬ್ಬರು ಮುಖ ನೋಡಿಕೊಳ್ಳುತ್ತಿದ್ದರು.ಸ್ವಲ್ಪ ಸಮಯದ ನಂತರ ತಿಮ್ಮ ಕೇಳಿದ"ರೀ ನಿಮಗೆ ಕುಸ್ತಿ ಮಾಡಕ್ಕೆ ಬರತ್ತಾ? ಕರಾಟೆ ಕುಂಗ್ಫೂ ಬರತ್ತಾ?ಕಿಕ್ ಬಾಕ್ಸಿಂಗ್ ಬರತ್ತಾ?ನಿಮ್ ಹತ್ರ ಚಾಕೂ, ಚೂರಿ, ಪಿಸ್ತೂಲ್,ಸಿರಿಂಜ್ ಏನಾದ್ರೂ ಇದೆಯಾ?" ಎಲ್ಲಕ್ಕೂ ಗುಂಡ "ಇಲ್ಲ " ಅಂದ....."ಅದ್ಸರೀ ಅಲ್ಲಾ ಇದೆಲ್ಲಾ ಯಾಕೆ ಕೇಳ್ತಾ ಇದ್ದೀರಾ?" ಎಂದು ಪ್ರಶ್ನಿಸಿದ. ತಿಮ್ಮ "ಏನಿಲ್ಲಾ ಆವಾಗ್ಲಿಂದ ನನ್ನ ಸೀಸೆ ತಗೊಂಡು ಗುಂಡ್ ಏರಿಸ್ತಾ ಇದ್ದೀರಾ ಅದಕ್ಕೆ,ಖಾತ್ರಿ ಮಾಡ್ಕೋತಾ ಇದ್ದೆ"ಎಂದು ಗುಂಡನಿಗೊಂದು ಸರಿಯಾಗಿ ಗೂಸಾ ಕೊಟ್ಟ.ಗುಂಡನಿಗೆ ಎಲ್ಲಾ ಎರೆಡೆರಡು ಕಾಣುತ್ತಿದ್ದುದು ಗುದ್ದು ಬಿದ್ದಮೇಲೆ ನಾಲ್ಕಾಯಿತು.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023