ದಾಸರಪದ (ಅ)
ಅಕ್ಕೋರಂಗ ನೋಡೆ ಇಕ್ಕೋ ಕ್ರಷ್ಣನೋಡೆ
ಅಕ್ಕೋರಂಗ ನೋಡೆ ಇಕ್ಕೋ ಕ್ರಷ್ಣನೋಡೆ । ತಕ್ಕಥ್ಯೆ ಎಂದೀಗೆ ಸಿಕ್ಕಿದ ನಮ್ಮ ಕ್ಯೆಗೆ ।।ಪ।।
ಕುರುಳು ಕುಂತಳದಿಂದ ಕಸ್ತುರಿ ತಿಳುಕ ಚಂದ ।
ಪರಮ ಪುರುಷ ಬಂದ ನೇಲ ವರ್ಣ ನಂದ ।।೧।।
ಮೂಗುಳು ನಗೆಯ ಕಾಂತಿ ಚಂದ್ರನುದಯ ಭ್ರಾಂತಿ ।
ಸೊಗಸು ನೋಡಲೆ ಕಾಂತ ಸಳೆವ ಮನವ ಶಾಂತೆ ।।೨।।
ವಾರೋ ಬಾ ಗೋಪಾಲಕೃಷ್ಣವಿಠಲ ಚಾಲ । ತೋರುವ
ನೋಡ ಬಾಲೆ ಸೀರೋಣ ಬಾ ಸುಶೀಲೆ ।।೩।।
ಆಭಯ ಪ್ರಧಾನ ಮಾಡೂ ಇಭಗಿರಿವಾಸ
ಆಭಯ ಪ್ರಧಾನ ಮಾಡೂ ಇಭಗಿರಿವಾಸ ।।ಪ।।
ಮಂಗಳ ಮಹಿಮನೇ ರಂಗನಾತನೆ
ಕೃಷ್ಣಾ । ತುಂಗ ವಿಕ್ರಮ ನರಸಿಂಗ ಲಕ್ಸ್ಮೀಕಾಂತ ।।೧।।
ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ ।
ಶಕ್ತ ನೀನಿರುತಿರೆ ಮತ್ತಾರ ಚೇಡಲಿ ।।೨।।
ನಿನ್ನ ಕಿಂಕರಳಾಗಿ ನಿನ್ನ ಸೀವೆಯ ಮೂಳ್ವ ।
ಉನ್ನಂತ ಅಭಿಲಾಷಯನ್ನು ಸಲ್ಲಿಸು ದೇವ ।।೩।।
ಹಿಂದಿನ ಎಡಿರುಗಳೊಂದೊಂದರಲಿ
ಕಾಯ್ದೆ। ಇಂದು ಮುಂದೂ ಕಾಯೋ ಮಂದಹಾಸನ ಸ್ವಾಮಿ ।।೪।।
ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ ।
ಸಿರಿವರ ಗೊಪಾಲಕ್ಲಷ್ಣವಿಠಲ ಸ್ವಾಮಿ ।।೫।।
ಅಮ್ಮಾ ಬಾ ನಮ್ಮಮ್ಮನೆ ।।ಧ್ರುವ।।
ಅಮ್ಮಾ ಬಾ ನಮ್ಮಮ್ಮನೆ ಅಮ್ಮ ನೇಡಮ್ಮನೆ ।
ಬೊಮ್ಮನಾ ಪಡೆದ ಶ್ರೇ ಹರಿ ಪರಬ್ರಹ್ಮನೆ
ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ ।
ಓಡ್ಯಾಡಿ ಬಂದು ಅಂದಲಿವೆ ನಾ ತಮ್ಮನೆ ।।೧।।
ಬಯಸಿ ಬಂದೊಡೆ ನಾ ಕಾಯಬೇಕನ್ನನಾ।
ತಾಯಿ ತಂಧ್ಯೊಬ್ಬಳೆ ನೀನೆ ಸನಾತನಾ ।।೨।।
ಉಣಿಸೆ ನಾಮಮೃತ ದಣೆಸೆ ಮನೋರಥಾ ।
ದೀನಮಾಹಿಪತಿ ಜೀವ ಪ್ರಾಣಕ ಸನಾಥಾ ।।೩।।
ಅಂಬುಜಾಕ್ಷನ ಬಂಟ
ಅಂಬುಜಾಕ್ಷನ ಬಂಟ ನೆನೆವರಿಗೆ ನಂಟ|ನಿಂಬರಿಗೆ ನೆಲೆವಂತ ವರದ ಹನುಮಂತ ||ಪ||
ಜಲಧಿಯನು ದಂಟ ಚಾನಕಿಗೆ ತಲೆವಾಗಿ ನೇ । ನಲಿದಕ್ಷಯ ನಿಶಾಟಾದ್ಯರರಿದೆ ಸತಿ ರಫು ।
ಕುಲೆಂದ್ರನಂ ಕಂಡು ಅಸಹಾಯದಿ । ಹಲವು ಸಾಹಸ ಮಾಡಿದಖಿಳ ಕಪಿನಾಥ ।।೧।।
ಕಿರ್ಮೀರ ಬಕ ಹಿಡಿಮಬಕ ಕೀಚಕಾದಿ ಖಳ । ದುರ್ಮತಿ ಕದಳಿವನಕೆ ಮತ್ತ ಕರಿಯೆ ।
ನಿರ್ಮಳಾನನೆ ದ್ರೌಪದಿಯ ಭಂಗಪಡಿಸಿದ ಕು । ಕರ್ಮಿ ಕೌರವರಿಗಶನೆಯೆ ।।೨।।
ಶ್ರೀ ಬಾದರಾಯಣಾಜ್ಞದಿ ತತ್ವಸರಾರ್ಥ । ನೀ ಬೋಧಿಸಿದೆ ನಿಜ ವ್ಯೆಷ್ಣವ ಜನಕೆ ।
ಈ ಭುವಿಗೆ ಕಶ್ಮಲ ಕುವಾದಿಗಳ ಗೆದ್ದಬ್ಜ । ನಾಭಿ ಪ್ರಸನ್ನವೆಂಕಟೀಶಗರ್ಪಿಸಿದೆ ।।೩।।
ಅವನೆ ಧನ್ಯನೆಲಾ ಜಗದೊಳು
ಅವನೆ ಧನ್ಯನೆಲಾ ಜಗದೊಳು । ಇವನೇ ಮಾನ್ಯನೆಲಾ ।।ಪ।।
ಆವ ಪರಿಯಲಿಂದಾದರು ತನ್ನಯ । ಭಾವ ಶುದ್ಧಿಯಲಿ ಭಗವತ್ವರನಾದವನೆ ಧನ್ಯ ।।೧।।
ಆತ್ಮೀಂತರ ಸಂಸ್ಕ್ರತಿಯೊಳಿದ್ದು ।ಸ್ವಾತ್ಮಲಾಭ ಸಿದ್ದಿಯ ಸಾಧಿಸಿಕೊಂಡವನೆ ।।೨।।
ಶ್ರೀದವಿಠಲನ ಸಾಕ್ಷಾತ್ಕಾರಿಸಿ । ಸಾಧು ಸೇವ್ಯ ಚೆತ್ಸುಖವಯವಾದುದವನೇ ಧನ್ಯನೆಲಾ ।।೩।।
ಅಗಚೆ ನೆನ್ನೊಗತನಕೆ ಜಗ ನಗುವುದೇ
ಅಗಚೆ ನೆನ್ನೊಗತನಕೆ ಜಗ ನಗುವುದೇ ।
ನಗರಾಜ ಮನೆಯ ಹೊಗಿಸಿದನೆ ಅಕಟಕಟ ।।ಪ।।
ಹೊಟ್ಟೆಗಿಲ್ಲದೆ ಹೋಗಿ ಹಾಲಾಹಾಲವನುಂಡ । ತೊಟ್ಟ ತೊಗಲುಡುಗೆ ತಳೆಯೋಡು
ಕೈಯ । ಸುಟ್ಟ ಸುಡಗಾಡ ಮನೆ ಅಖಿಲ ಭೊತೇಶ ಬಲು । ಸಿಟ್ಟಿನವನಂಗಸಂಗ ಬಯಸಬಹುದೆ ।।೧।।
ಆರುಮೊಗದವನೊಬ್ಬ ಆರ್ಥಜನು ಮೂಲೆಪಾಲು । ಕಾರಿ ಕಡುಮುನಿದು ಕಂಡರೆ ಸೀರರು ।
ಊರಿಗುಪಕಾರಿ ಒಡಲಹರಕ ಗಜಮುಖನು । ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ ।।೨।।
ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ । ಭುವನಬದೊಳಗಾವಲ್ಲಿ ಕಾಣೆನಿನ್ನು ।
ಕವಿಜನಗಳೇನೆಂದು ಬಣ್ಣೆಸಿದರೊ ತಿಳಿಯೆ । ಭವದೂರ ಶ್ರೀದವಿಠಲರಾಯ ಬಲ್ಲ ।।೩।।
ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ
ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ ।
ಅಂಬುಜ ಅಡಿಗಳಿಗೆ ಎರಗಿದೆ ಅಮ್ಮ ।।ಪ।।
ಕಾರ್ತಿಕೇಯನ ಮಾತೆ ಕಾತ್ಯಾಯಿನೀ ದೇವಿ ।
ಅತಿದಯದಿ ಪಾಲಿಸೆನ್ನ ಕಲುಷ ಪರಿಹರಿಸೇ ।೧।
ಗಜಮುಖನಯೆ ನೀ ಗಿರಿರಾಜ ಆತ್ಮಜೆ ।
ವಜ್ರಿ ಮನ್ನಥನುತೆ ಭಜಕಗೇ ಶುಭದೆ ।।೨।।
ಉದಕಜಾಸನ ಪಿತ ಪ್ರಸನ್ನ ಶ್ರೀನಿವಾಸನ ।
ಭಕ್ತಾಗ್ರಣೇ ಸದಾಶಿವನ ಅರ್ಧಾಂಗಿ ನಮೋ ।।೩।।
ಆಭಯ ಪ್ರಧಾನ ಮಾಡೂ ಇಭಗಿರಿವಾಸ
ಆಭಯ ಪ್ರಧಾನ ಮಾಡೂ ಇಭಗಿರಿವಾಸ ।।ಪ।।
ಮಂಗಳ ಮಹಿಮನೇ ರಂಗನಾತನೆ
ಕೃಷ್ಣಾ । ತುಂಗ ವಿಕ್ರಮ ನರಸಿಂಗ ಲಕ್ಸ್ಮೀಕಾಂತ ।।೧।।
ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ ।
ಶಕ್ತ ನೀನಿರುತಿರೆ ಮತ್ತಾರ ಚೇಡಲಿ ।।೨।।
ನಿನ್ನ ಕಿಂಕರಳಾಗಿ ನಿನ್ನ ಸೀವೆಯ ಮೂಳ್ವ ।
ಉನ್ನಂತ ಅಭಿಲಾಷಯನ್ನು ಸಲ್ಲಿಸು ದೇವ ।।೩।।
ಹಿಂದಿನ ಎಡಿರುಗಳೊಂದೊಂದರಲಿ
ಕಾಯ್ದೆ। ಇಂದು ಮುಂದೂ ಕಾಯೋ ಮಂದಹಾಸನ ಸ್ವಾಮಿ ।।೪।।
ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ ।
ಸಿರಿವರ ಗೊಪಾಲಕ್ಲಷ್ಣವಿಠಲ ಸ್ವಾಮಿ ।।೫।।
ಅಕ್ಕೋರಂಗ ನೋಡೆ ಇಕ್ಕೋ ಕ್ರಷ್ಣನೋಡೆ
ಅಕ್ಕೋರಂಗ ನೋಡೆ ಇಕ್ಕೋ ಕ್ರಷ್ಣನೋಡೆ । ತಕ್ಕಥ್ಯೆ ಎಂದೀಗೆ ಸಿಕ್ಕಿದ ನಮ್ಮ ಕ್ಯೆಗೆ ।।ಪ।।
ಕುರುಳು ಕುಂತಳದಿಂದ ಕಸ್ತುರಿ ತಿಳುಕ ಚಂದ ।
ಪರಮ ಪುರುಷ ಬಂದ ನೇಲ ವರ್ಣ ನಂದ ।।೧।।
ಮೂಗುಳು ನಗೆಯ ಕಾಂತಿ ಚಂದ್ರನುದಯ ಭ್ರಾಂತಿ ।
ಸೊಗಸು ನೋಡಲೆ ಕಾಂತ ಸಳೆವ ಮನವ ಶಾಂತೆ ।।೨।।
ವಾರೋ ಬಾ ಗೋಪಾಲಕೃಷ್ಣಎಠಲ ಚಾಲ । ತೋರುವ
ನೋಡ ಬಾಲೆ ಸೀರೋಣ ಬಾ ಸುಶೀಲೆ ।।೩।।
ಅಮ್ಮಾ ಬಾ ನಮ್ಮಮ್ಮನೆ ।।ಧ್ರುವ।।
ಅಮ್ಮಾ ಬಾ ನಮ್ಮಮ್ಮನೆ ಅಮ್ಮ ನೇಡಮ್ಮನೆ ।
ಬೊಮ್ಮನಾ ಪಡೆದ ಶ್ರೇ ಹರಿ ಪರಬ್ರಹ್ಮನೆ
ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ ।
ಓಡ್ಯಾಡಿ ಬಂದು ಅಂದಲಿವೆ ನಾ ತಮ್ಮನೆ ।।೧।।
ಬಯಸಿ ಬಂದೊಡೆ ನಾ ಕಾಯಬೇಕನ್ನನಾ।
ತಾಯಿ ತಂಧ್ಯೊಬ್ಬಳೆ ನೀನೆ ಸನಾತನಾ ।।೨।।
ಉಣಿಸೆ ನಾಮಮೃತ ದಣೆಸೆ ಮನೋರಥಾ ।
ದೀನಮಾಹಿಪತಿ ಜೀವ ಪ್ರಾಣಕ ಸನಾಥಾ ।।೩।।
ಅಂಬುಜಾಕ್ಷನ ಬಂಟ
ಅಂಬುಜಾಕ್ಷನ ಬಂಟ ನೆನೆವರಿಗೆ ನಂಟ|ನಿಂಬರಿಗೆ ನೆಲೆವಂತ ವರದ ಹನುಮಂತ ||ಪ||
ಜಲಧಿಯನು ದಂಟ ಚಾನಕಿಗೆ ತಲೆವಾಗಿ ನೇ । ನಲಿದಕ್ಷಯ ನಿಶಾಟಾದ್ಯರರಿದೆ ಸತಿ ರಫು ।
ಕುಲೆಂದ್ರನಂ ಕಂಡು ಅಸಹಾಯದಿ । ಹಲವು ಸಾಹಸ ಮಾಡಿದಖಿಳ ಕಪಿನಾಥ ।।೧।।
ಕಿರ್ಮೀರ ಬಕ ಹಿಡಿಮಬಕ ಕೀಚಕಾದಿ ಖಳ । ದುರ್ಮತಿ ಕದಳಿವನಕೆ ಮತ್ತ ಕರಿಯೆ ।
ನಿರ್ಮಳಾನನೆ ದ್ರೌಪದಿಯ ಭಂಗಪಡಿಸಿದ ಕು । ಕರ್ಮಿ ಕೌರವರಿಗಶನೆಯೆ ।।೨।।
ಶ್ರೀ ಬಾದರಾಯಣಾಜ್ಞದಿ ತತ್ವಸರಾರ್ಥ । ನೀ ಬೋಧಿಸಿದೆ ನಿಜ ವ್ಯೆಷ್ಣವ ಜನಕೆ ।
ಈ ಭುವಿಗೆ ಕಶ್ಮಲ ಕುವಾದಿಗಳ ಗೆದ್ದಬ್ಜ । ನಾಭಿ ಪ್ರಸನ್ನವೆಂಕಟೀಶಗರ್ಪಿಸಿದೆ ।।೩।।
ಅಂಚಾನೆ ತನಯ
ಅಂಚಾನೆ ತನಯ ಧ । ನಂಚಾಯನಗ್ರಜ । ಕಂಜಾಕ್ಷ ಶ್ರೀ ಮದ್ಜ । ಸಂಜಯವಂತಾ ।।೧।।
ಮಾರುತಿ ನಿನ್ನಯ । ಕೀರುತಿ ಜಗದೊಳು । ಬೀರುತಿದ ಕೊ ನಾ । ಸಾರುತೀ ನೀಗಾ ।।೨।।
ರಾವಣಾನುಜ ಸು । ಗ್ರೀವಾ ವಿಪ್ರಜಾನಂತೆ । ಕಾಯೋ । ದೇವೇಂದ್ರ ಪಾಲಾ ।।೩।।
ಪ್ರಸ್ತುತ ಬಿನ್ನಪ । ವಿಸ್ತರಿಪ ಕೃತಿ ಸ । ಮಸ್ತರೂ ಕೇಳಲಿ । ಆಸ್ಥೀಯಲಿಂದಾ ।।೪।।
ಪ್ರಾಣೇಶ ವಿಠ್ಠಲಾ ಪ್ರೀ । ತಾನಾಗಬೇಕೀದಕೆ । ಹೇನ ವಿಷಯಗಳಾ । ನಾನೊಲ್ಲೆ ದೇವ ।।೫।।
ಅಗಚೆ ನೆನ್ನೊಗತನಕೆ ಜಗ ನಗುವುದೇ
ಅಗಚೆ ನೆನ್ನೊಗತನಕೆ ಜಗ ನಗುವುದೇ ।
ನಗರಾಜ ಮನೆಯ ಹೊಗಿಸಿದನೆ ಅಕಟಕಟ ।।ಪ।।
ಹೊಟ್ಟೆಗಿಲ್ಲದೆ ಹೋಗಿ ಹಾಲಾಹಾಲವನುಂಡ । ತೊಟ್ಟ ತೊಗಲುಡುಗೆ ತಳೆಯೋಡು
ಕೈಯ । ಸುಟ್ಟ ಸುಡಗಾಡ ಮನೆ ಅಖಿಲ ಭೊತೇಶ ಬಲು । ಸಿಟ್ಟಿನವನಂಗಸಂಗ ಬಯಸಬಹುದೆ ।।೧।।
ಆರುಮೊಗದವನೊಬ್ಬ ಆರ್ಥಜನು ಮೂಲೆಪಾಲು । ಕಾರಿ ಕಡುಮುನಿದು ಕಂಡರೆ ಸೀರರು ।
ಊರಿಗುಪಕಾರಿ ಒಡಲಹರಕ ಗಜಮುಖನು । ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ ।।೨।।
ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ । ಭುವನಬದೊಳಗಾವಲ್ಲಿ ಕಾಣೆನಿನ್ನು ।
ಕವಿಜನಗಳೇನೆಂದು ಬಣ್ಣೆಸಿದರೊ ತಿಳಿಯೆ । ಭವದೂರ ಶ್ರೀದವಿಠಲರಾಯ ಬಲ್ಲ ।।೩।।
ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ
ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ ।
ಅಂಬುಜ ಅಡಿಗಳಿಗೆ ಎರಗಿದೆ ಅಮ್ಮ ।।ಪ।।
ಕಾರ್ತಿಕೇಯನ ಮಾತೆ ಕಾತ್ಯಾಯಿನೀ ದೇವಿ ।
ಅತಿದಯದಿ ಪಾಲಿಸೆನ್ನ ಕಲುಷ ಪರಿಹರಿಸೇ ।೧।
ಗಜಮುಖನಯೆ ನೀ ಗಿರಿರಾಜ ಆತ್ಮಜೆ ।
ವಜ್ರಿ ಮನ್ನಥನುತೆ ಭಜಕಗೇ ಶುಭದೆ ।।೨।।
ಉದಕಜಾಸನ ಪಿತ ಪ್ರಸನ್ನ ಶ್ರೀನಿವಾಸನ ।
ಭಕ್ತಾಗ್ರಣೇ ಸದಾಶಿವನ ಅರ್ಧಾಂಗಿ ನಮೋ ।।೩।।
ಅಜ್ಞಾನಿಗಳ ಕೂಡೆ ರಾಗ: ಮೋಹನ
ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೇ ಲೇಸು |ಪ|
ಉಂಬುಡುವುದಕ್ಕಿರುವ ಅರಸನೋಲಗಕ್ಕಿಂತ
ತುಂಬಿದೂರೊಳಗೆ ತಿರಿದುಂಬುವುದೆ ಲೇಸು
ಹಂಬಲಿಸಿ ಹಾಳು ಹರಟೆ ಹೊಡೆವುದಕ್ಕಿಂತ
ನಂಬಿ ಹರಿದಾಸರೊಳಾಡುವುದೆ ಲೇಸು |೧|
ಒಡನೆ ಹಂಗಿಸುವವನ ಪಾಲೋಗರಕ್ಕಿಂತ
ಕುಡಿನೀರ ಕುಡಿದುಕೊಂಡಿಹುದೆ ಲೇಸು
ಬಿಡದೆ ಬಡಿದಾಡುವರ ನೆರೆಯಲಿಹುದಕ್ಕಿಂತ
ಅಡವಿಯೊಳಗಜ್ಞಾತವಾಸವೆ ಲೇಸು |೨|
ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ
ಹಸನಾದ ಹಾಳು ಗುಡಿಯೇ ಲೇಸು
ಬಿಸಜಾಕ್ಷ ಪುರಂದರವಿಠಲನ ನೆನೆನೆನೆದು
ವಸುಧೆಯೊಳು ಚಿರಕಾಲವಿರುವುದೆ ಲೇಸು |೩|