ಸುಳಾದಿ (ದ)
||ತ್ರಿವಿಡಿತಾಳ||
ದಳ ಅಷ್ಟ ಉಳ್ಳ ರಕ್ತಾಂಬುಜದ ಮಧ್ಯ | ಪೊಳೆವ ಕರ್ಣಿಕೆಯಲ್ಲಿ ಶೋಭಿಸುವ |
ಮೂಲೇಶನ ಪಾದ ಪಂಕಜದಲಿ ನಿಂದು | ಸಲೆ ಭಕುತಿಯಿಂದ ಭಜಿಸುವ ನಿನ್ನ
ಚರಣ | ಮೂಲದಲ್ಲಿ ಜೀವ ಆಶ್ರಯಿಸಿ ಯಿಪ್ಪನಾಗಿ | ಸ್ಥಳವ ಸೇರಿಪ ಭಾರ
ನಿನ್ನದಯ್ಯಾ | ಒಲ್ಲೆನೆಂದರೆ ಬಿಡದು ಭಕುತರ ಅಭಿಮಾನ | ಒಲಿದು ಪಾಲಿಸಬೇಕು
ಘನ ಮಹಿಮಾ | ಖಳದರ್ಪ ಭಂಜನ ಗುರು ವಿಜಯ ವಿಠ್ಠಲರೇಯ | ಒಲಿವ
ನಿನ್ನಯ ಕೃಪೆಗೆ ವಿಮಲ ಚರಿತ ||
||ಆದಿತಾಳ||
ದರುಶನ ಗ್ರಂಥವರಚಿಸಿ ಸುಜನರ ಪಾಲಿಸಿ | ಮರುತ ಮತದ ಬಿರುದೆತ್ತಿದ
ಮಹಾಯತಿ | ಸರಿಗಾಣೆ ನಿಮಗೆಲ್ಲಿ ವರ್ಣಿಸಲೆನ್ನಳವೆ | ದುರುಳರ ಗಂಟಲ ಗಾಣ
ವಿದ್ಯಾ ಪ್ರವೀಣ | ನೆರೆ ನಂಬಿದವರಿಗೆಲ್ಲ ಮನೋವ್ಯಥೆಗಳ ಬಿಡಿಸಿ | ವರ ಸುಭಕುತಿ
ಜ್ಞಾನ ವಿರಕ್ತಿ ಮಾರ್ಗವ ತೋರಿಸಿ | ಪೊರೆವ ತತ್ವದ ವನಧಿ ಪೊಡವಿಯೊಳಗೆ |
ಸುರ ನರೋರಗಾದಿಗೆ ಗುರುವೆ ಪರಮ ಗುರುವೆ | ಸರಸ ಸದ್ಗುಣ ಸಾಂದ್ರ ವಿಜಯ
ವಿಠಲರೇಯನ | ಚರಣವ ನಂಬಿದ ಪ್ರಧಾನ ವಾಯುದೇವಾ ||
||ಧೃವತಾಳ||
ದುರ್ಗಾ ದುರ್ಗೆಯ ಮಹ ದುಷ್ಟ ಜನ ಸಂಹಾರೆ | ದುರ್ಗಾಂತರ್ಗತ ದುರ್ಗೆ
ದುರ್ಲಭೆ ಸುಲಭೆ | ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ ಭರ್ಗಾದಿಗಳಿಗೆಲ್ಲ
ಗುಣಿಸಿದರೂ | ಸ್ವರ್ಗಭೂಮಿ ಪಾತಾಳ ಸಮಸ್ತ ವ್ಯಾಪುತದೇವಿ | ವರ್ಗಕ್ಕೆ ಮೀರಿದ
ಬಲು ಸುಂದರೀ | ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ | ದುರ್ಗತಿ ಹಾರೆ
ನಾನು ಪೇಳುವದೇನು | ದುರ್ಗಂಧವಾಗಿದೆ ಸಂಸ್ಕೃತಿ ನೋಡಿದರೆ ನಿರ್ಗಮ ನಾ
ಕಾಣೆನಮ್ಮ ಮಂಗಳಾಂಗೆ | ದುರ್ಗೆ ಹೇ ದುರ್ಗೆ | ಮಹಾ ದುರ್ಗೆ ಭೂ ದುರ್ಗೆ
ವಿಷ್ಣು | ದುರ್ಗೆ ದುರ್ಜಯೆ ದುರ್ದಷೆ ಶಕ್ತಿ | ದುರ್ಗ ಕಾನನ ಗಹನ ಪರ್ವತ
ಘೋರ ಸರ್ಪ ಗರ್ಗರ ಶಬ್ಧ ವ್ಯಾಘ್ರ ಕರಡಿ ಮೃತ್ಯು | ವರ್ಗ ಭೂತ ಪ್ರೇತ ಪೈಶಾಚಿ
ಮೊದಲಾದ | ದುರ್ಗಣ ಸಂಕಟ ಪ್ರಾಪ್ತವಾಗೆ | ದುರ್ಗಾ ದುರ್ಗೆ ಎಂದು ಉಚ್ಛ
ಸ್ವರದಿಂದ | ನಿರ್ಗಳಿತನಾಗಿ ಒಮ್ಮೆ ಕೂಗಿದರೂ | ಸ್ವರ್ಗಾಪವರ್ಗದಲ್ಲಿ
ಹರಿಯೊಡನೆ ಇದ್ದರು | ಸುರ್ಗಣ ಜಯ ಜಯವೆಂದು ಪೊಗಳುತಿರೆ ಕರ್ಗಳಿಂದಲಿ
ಎತ್ತಿ ಸಾಕುವ ಸಾಕ್ಷಿ ಭೂತೆ ನೀರ್ಗುಡಿದಂತೆ ಲೋಕಲೀಲೆ ನಿನಗೆ | ಸ್ವರ್ಗಂಗಾ
ಜನಕ ನಮ್ಮ ವಿಜಯ ವಿಠಲನಂಘ್ರೀ | ದುರ್ಗಾಶ್ರಯ ಮಾಡಿ ಬದುಕುವಂತೆ
ಮಾಡು ||
||ಧೃವತಾಳ||
ದುರ್ಮತವನು ನೆಚ್ಚಿ ಕರ್ಮಕ್ಕೆ ಬೀಳದಿರು | ನಿರ್ಮಾಣವನು ವೇದವ್ಯಾಸದೇವನು
ದುಷ್ಕರ್ಮಿಗಳಿಗೆ ನಿತ್ಯ ತಮವಾಗಲಿಬೇಕೆಂದು | ಪೇರ್ಮೆಯಿಂದಲಿ ರಚಿಸಿ ತಾಮಸ
ಪುರಾಣ | ದುರ್ಮತಿಗಳಿಗೆ ರುಚಿಕರವೆನಿಸಿದರು | ಧರ್ಮ ಸಾಧನವೆಂದು ಮಾಯಿ
ಮತವ ಭಜಿಸೆ | ಧರ್ಮರಾಯ ಅವರ ಚರ್ಮವ ಸುಲಿವನು | ದುರ್ಮನುಷಿ
ನಾಮ ವಿಜಯ ವಿಠ್ಠಲಗೆ ಈ | ಕರ್ಮವೊಪ್ಪಿಸಸಲ್ಲಾ ವಿಬುಧರ ಮತವಂತಾ ||
||ಜತೆ||
ದಾಸ್ಯತನದ ರುಚಿ ಶಾಶ್ವತ ಕರುಣಿಸು |
ಮೇಷಾಭಿನವ ಪ್ರಾಣೇಶವಿಠಲನ ದಾಸ ||
||ಧೃವತಾಳ||
ದುರಿತಕದಳಿ ವನದ್ವಿರದಿ ಮಂತಿಪ್ಪನು | ಪರಮತ ಶರಧಿಗೆ ಕರಿರಾಜನೆನಿಸುವ |
ಮರುತ ಮತಾಂಬುಧಿ ಪರಿಪೂರ್ಣ ಹಿಮಕರ | ಧರಣಿದೇವರ ಸೇವೆ | ಹರುಷದಿ
ಕೊಳ್ಳುತವರು | ದ್ಧರಿಸುವ ಕರುಣಾಳು ಗುರುರಾಜ ಪವಿತೇಜ | ಸುರರಾಜನಂತೆ
ಭೂ| ಸುರ ಗಢಣದಿ ಮೆರೆವ | ಕರಿ ಚರ್ಮಾಂಬರ ಪ್ರೀತ ವರದೇಂದ್ರನೆ | ನಿರುತ
ಸದ್ಧರ್ಮ ಮರ್ಮವರಹುವ ಯತಿನಾಥ | ಭರಿತ ಸದ್ಭಕ್ತಿಯಿಂದ ಸ್ಮರಿಸುವ
||ಜತೆ||
ದುರ್ಗೆ ಹಾ ಹೇ ಹೊ ಹಾ ದುರ್ಗೆ ಮಂಗಳ ದುರ್ಗೆ |
ದುರ್ಗತಿ ಕೊಡದಿರು ವಿಜಯ ವಿಠಲನ ಪ್ರೀಯೇ ||
||ಆದಿತಾಳ||
ದಾಸರ ಮಾತಿನ ಮರ್ಮವನರಿಯುತ | ಭೂಸುರರೈಜಿಯ ರಾಮಾಚಾರ್ಯರು |
ಕಾಷಾಯಾಂಬರ ಧರಿಸುತ ಬಿಂಬೋ | ಪಾಸನೆ ಗೈದಪರೋಕ್ಷವ ಪಡೆದರು |
ದಾಸರ ಸಂಗಡ ನರ್ತಿಸಿ ನಲಿದರು | ವಾಸುದೇವ ವಿಠ್ಠಲನ ಭಜಿಸಿದರು |
ವಾಸುದೇವ ಹರಿ ರೂಪವ ಕಂಡರು | ತೋಷದಿ ನಲಿದರು ತೃಪ್ತಿಯ ಪಡೆಯುತ |
ಪಾಶಮಂಥ ಧರ ದೇವನ ಕಾಣಲು ದಾಸರು ಹೊರಟರು ಉಡುಪಿಯ ಯಾತ್ರೆಗೆ |
ದೋಷ ಮಂಡಗದ್ದಿ ತಸ್ಕರ ಭೀಮನು ಆ ಸುಯಾತ್ರಿಕರ ಸುಲಿಯಲು ಬರೆ |
ಪ್ರಾಣೇಶನ ದಯದಿಂದ ರಕ್ಷಿಸಿ ವುಳುಹಿದ | ಶೇಷಾನುಜ ಗೋಪಾಲ
ಮೂರ್ತಿಯನು | ತೋಷದಿ ವಂದಿಸಿ ಸೇವೆಯ ಸಲ್ಲಿಸಿ | ದೇಶಿಕರಷ್ಟರ ದರ್ಶನ
ಪಡೆಯುತ | ರಾಶಿ ಜಲದ ಸ್ನಾನ ಪೂರೈಸುತ | ವಾಸುದೇವ ಪುರ ಯಾತ್ರೆಯ
ಗೈಯುತ | ಭಾಸುರ ಚರಿತರು ಮರಳುತ ಬಂದರು | ದೇಶಿಕ ವರ ಮಂತ್ರಾಲಯ
ಪ್ರಭುಗಳ | ಮೀಸಲಪ್ಪಣೆಯ ಮೇರೆಗೆ ಗೌಡನ ವಾಸಕೆ ಬಂದರು | ಲಕ್ಷ
ಭೋಜನದ ಆಸೆ ಸಲ್ಲಿಸಿದರು ತೋಷವಗರೆದರು ಶೇಷಗಿರೀಷನ ಕಂಡು
ತುತಿಸಿದರು | ವಾಸಕೆ ತಿರುಗುತರೆಲ್ಲರ ಕರೆಸುತ ಆ ಸಮೀರಮತ ಮರ್ಮವ
ತಿಳಿಸುತ | ಕಾಶ್ಯಪ ಚಿತ್ರಾ ಮಕರಾಷ್ಟಮಿ ಪರ | ವಾಸರ ಮಂದದಿ ಲಯವನು
ಚಿಂತಿಸಿ | ವಾಸುದೇವ ಮುರ ಮರ್ದನ ಕಳುಹಿದ | ಕಾ ಶಕಟನ್ನೇರುತ ನಡೆದರು |
ಭೂಸುರ ಜನಗಣ ಜಯ ಘೋಷದವರ | ವಾಸವ ನಗರದ ದುಂದುಭಿ ಸುಸ್ವರ |
ಆ ಸುಗಂಧ ಬೀರುವ ಸುಮ ವರ್ಷದಿ | ದಾಸರ ಮೇಳದ ಭಜನೆ ನರ್ತನದಿ |
ಶ್ರೀಶಾಭಿನವ ಪ್ರಾಣೇಶವಿಠಲನ ಪುರಕೆ ||
||ಆದಿತಾಳ||
ದೊಡ್ಡವರನು ಕಂಡು ದ್ವೇಷಿಸುವೆನು ನಾನು | ಮಡ್ಡ ತನದಿ ಮತ್ತಿಸುವೆ ಸಮರನು |
ದಡ್ಡರನೋಡ್ಯಪಹಾಸಗೈಯುವೆನು | ಹೆಡ್ಡನಾಗಿ ಮದ ಜಂಭದಲನುದಿನ |
ದೊಡ್ಡವರನುನಿಂದಿಸುತಾಮಯವನು | ಗುಡ್ಡದ ನೂರ್ಮಡಿಗಳಿಸಿರುವೆನು ನಾನು |
ಕಡ್ಡಿಯಂದದಿ ಮಾಡು ಕ್ರವ್ಯಾದ ತಮಭಾನು | ವಿಡ್ಡೂರಗಳ ಕಳೆದು ರಕ್ಷಿಸು
ಸುರಧೇನು | ಅಢ್ಯಭಿನವ ಪ್ರಾಣೇಶ ವಿಠ್ಠಲ ಪಾಹಿ ||