ದಾಸರಪದ (ಕ)
ಕೃಷ್ಣಮಂತ್ರವ ಜಪಿಸೋ
ಕೃಷ್ಣಮಂತ್ರವ ಜಪಿಸೋ – ಏ ಮನುಜ| ಕೃಷ್ಣಮಂತ್ರವ ಜಪಿಸೋ ||ಪ||
ವೈಷ್ಣವೋತ್ತಮನಾಗಿ ವಿಷ್ಣುವೇ ಗತಿಯೆಂದು ||ಅ||
ಜಪತಪಾನುಷ್ಠಾನಕ್ಕೆ ಈ ಮಂತ್ರ|
ಕಪಟ ಬುದ್ಧಿಗಳನ್ನು ಕಟ್ಟುವ ಮಂತ್ರ ||
ಉಪದೇಶದಲಿ ಜ್ಞಾನಕೊಟ್ಟು ಸಲಹುವ ಮಂತ್ರ |
ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ ||೧||
ಸಕಲ ಸಾಧನಗಳಿಗೆ ಸಾರಭೂತದ ಮಂತ್ರ |
ನಿಖಿಳ ದೇವರಿಗೆಲ್ಲ ಸಾಕ್ಷಿಭೂತದ ಮಂತ್ರ ||
ಭಕುತಿಯಲಿ ದ್ರೌಪದಿಯು ಭಜಿಸಿದ ಈ ಮಂತ್ರ |
ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ ||೨||
ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |
ಜೀವಗಳಿಗೆಲ್ಲ ಸಂಜೀವ ಮಂತ್ರ ||
ಪಾವನ ಮಾಡಿ ಪಾಲಿಪುದೀ ಮಂತ್ರ |
ದೇವ ಪುರಂದರ ವಿಠಲ ಮಹಾ ಮಂತ್ರ ||೩||
ಕೃಷ್ಣಮೂರ್ತಿ ಕಣ್ಣಮುಂದೆ
ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದಂತಿದೆ ||ಪ||
ಕಷ್ಟಗಳೆಲ್ಲ ಪರಿಹರಿಸಿ ಮನ|
ದಿಷ್ಟಾರ್ಥಗಳನೆಲ್ಲ ಕೊಟ್ಟು ರಕ್ಷಿಸುವಂಥ ||ಅ||
ಮಸ್ತಕದಲಿ ಮಾಣಿಕದ ಕಿರೀಟ |
ಕಸ್ತುರಿತಿಲಕದಿಂದೆಸೆವ ಲಲಾಟ ||
ಶಿಸ್ತಿಲಿ ಕೊಳಲನೂದುವ ಓರೆನೋಟ |
ಕೌಸ್ತುಭ ಎಡಬಲದಲಿ ಓಲಾಟ ||೧||
ಮಘಮಘಿಸುವ ಸೊಬಗಿನ ಸುಳಿಗುರುಳು |
ಚಿಗುರು ತುಳಸಿ ವನಮಾಲೆಯ ಕೊರಳು ||
ಬಗೆಬಗೆ ಹೊನ್ನುಂಗುರನಿಟ್ಟ ಬೆರಳು |
ಸೊಬಗಿನ ನಾಭಿಯ ತಾವರೆಯರಳು ||೨||
ಉಡಿದಾರ ಒಡ್ಯಾಣ ನಿಖಿಲಾಭರಣ |
ಉಡುಗೆ ಪೀತಾಂಬರ ರವಿಶತ ಕಿರಣ ||
ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ |
ಒಡೆಯ ಶ್ರೀ ಪುರಂದರ ವಿಠಲನ ಕರುಣ ||೩||
ಕೃಷ್ಣೇತಿ ಮಂಗಳಂ
ಕೃಷ್ಣೇತಿ ಮಂಗಳಂ ದಿವ್ಯನಾಮ |
ಸೃಷ್ಟಿ ಬಹುಬಂಧನವು ನಷ್ಟವಾಯಿತು ಪೂರ್ಣ |
ಕೃಷ್ಣೇತಿ ಮಂಗಳಂ ದಿವ್ಯನಾಮ ||ಪ||
ಅಜಮಿಳನು ಈ ನಾಮ ಅಂತ್ಯಕಾಲದಲಿ ಸ್ಮರಿಸಿ |
ನಿಜಪದವಿಯೈದಿದನು ನಿಮಿಷದಲಿ ||
ಭುಜಗಭೂಷಣ ಶಿವನು ಶ್ರೀರಾಮ ನಾಮವನು |
ನಿಜವೆಂದು ಕಾಂತೆಗುಪದೇಶವನು ಕೊಟ್ಟ ||೧||
ನಾರದ ಮಹಾಮುನಿಯು ನರಕಪಟ್ಟಣಕ್ಹೋಗಿ |
ನಾರಾಯಣಾಯೆಂದು ಉಚ್ಚರಿಸಿದಾಗ ||
ಘೋರ ನರಕವು ಪೂರ್ಣ ಪಾಳಾಗಿ ಹೋಯಿತು |
ಸೂರೆಗೊಂಡರು ಪಾಪಜೀವಿಗಳು ಸ್ವರ್ಗವನು ||೨||
ಹಿರಣ್ಯಕಶಿಪುವು ತನ್ನ ಮಗನ ಬಾಧೆಯ ಪಡಿಸಿ |
ವರಗೃಹಾಂಗಣದೊಳಗೆಳೆದಾಡಲು ||
ಸಿರಿವರನೆ ರಕ್ಷಿಸೋ ರಕ್ಷಿಸೆಂದಾಕ್ಷಣಕೆ |
ನರಸಿಂಹರೂಪದಿಂದವನ ಸಲಹಿದ ನಾಮ ||೩||
ಧ್ರುವನು ತಂದೆಯ ತೊಡೆಯ ಮೇಲೆ ಕುಳಿತಿರಲಾಗಿ |
ಅವನ ಮಲತಾಯಿ ವರ್ಜಿಸಿದಳಾಗ ||
ಭವನವನು ಬಿಟ್ಟಡವಿಯಲಿ ಘೋರ ತಪಗೆಯ್ಯೆ |
ಭುವನಸ್ಥಿರಪದವಿಯನು ಕೊಟ್ಟ ಈ ನಾಮ ||೪||
ಕರಿಯು ನಕ್ರನ ಭಾದೆಗಳುಕಿ ಶ್ರೀಹರಿಯೆಂದು |
ಮೊರೆಯಿಟ್ಟು ನಿನ್ನ ಕರೆದಾಕ್ಷಣದಲಿ ||
ಸಿರಿಗೆ ಪೇಳದೆ ಬಂದು ಕರಿಯ ಕಾಯ್ದಾ ದೇವ |
ಕರಿರಾಜವರದನೆಂದೆನಿಸಿಕೊಂಡಿಹ ನಾಮ ||೫||
ಪಂಚಪಾಂಡವರನ್ನು ಪರಿಪಾಲಿಸಿದ ನಾಮ |
ಪಾಂಚಾಲಿ ಮೊರೆ ಕೇಳಿ ಪೊರೆದ ನಾಮ ||
ವಂಚನೆಯ ಮಾಡಿ ಕೌರವರನ್ನು ಕೆಡಹಿ ನಿ |
ಶ್ಚಿಂತೆಯಲಿ ಭೂಭಾರವಿಳುಹಿದಾ ನಾಮ ||೬||
ಪರಿಪರಿಯ ಭಕ್ತರನು ಪಾಲಿಸಿದ ಈ ನಾಮ |
ಪರಮಪಾವನವು ಮಂಗಳವು ಈ ನಾಮ ||
ಸಿರಿಯು ಬ್ರಹ್ಮಾದಿಗಳು ಸ್ತೋತ್ರ ಮಾಡುವ ನಾಮ |
ಪುರಂದರವಿಠಲ ದೊರೆ ನಿಮ್ಮ ನಾಮ ||೭||
ಕೃಷ್ಣನ ನೆನೆವನೆ ಅಜ್ಞಾನಿ
ಕೃಷ್ಣನ ನೆನೆವನೆ ಅಜ್ಞಾನಿ | ಸ್ವಾಮಿ |
ಕೃಷ್ಣನ ಮರೆವನೆ ಸುಜ್ಞಾನಿ ||ಪ||
ಕೃಷ್ಣನ ಅನುದಿನ ಸ್ಮರಣೆಗೈವನೆ ದುಷ್ಟ |
ಕೃಷ್ಣನ ಪರಿಪರಿ ಜರೆವನೆ ಶ್ರೇಷ್ಠ ||ಅ||
ಕೃಷ್ಣನ ಸ್ಮರಿಸೀಗ ಬದುಕಿದವರುಂಟೇ |
ಕೃಷ್ಣನ ನಂಬೀಗ ಜನಿಸಿದರುಂಟೇ ||
ಕೃಷ್ಣ ಸೇವೆಯ ನಿತ್ಯ ಮಾಡುವನೆ ತುಂಟ |
ಕೃಷ್ಣನಾಜ್ಞೆಗೆ ತಪ್ಪಿ ನಡೆವನೆ ಬಂಟ ||೧||
ದುರುಳರ ಕಂಡು ತಾ ಪೊರೆವನೆ | ಕೃಷ್ಣನ |
ಶರಣರ ನೋಡೀಗ ಮುರಿವನೇ ಕೃಷ್ಣ ||
ಮೊರೆಯಿಟ್ಟು ಕರೆದರೆ ಬಾರನೆ ಕೃಷ್ಣ |
ಕರುಣದಿ ಇಷ್ಟಾರ್ಥ ಕೊಡನೇ ಶ್ರೀ ಕೃಷ್ಣ ||೨||
ಧನ್ಯನೆ ಕೃಷ್ಣನ ನೆನೆವನೆ ಪಾಪಿ |
ಮೌನದಿ ಕೃಷ್ಣ ಎಂಬನೇ ಮೂಗ ಕೋಪಿ ||
ಮಾನ್ಯನೇ ಕೃಷ್ಣನ ನೋಡದ ಕುರೂಪಿ |
ಮುನ್ನ ಗೋವಿಂದದಾಸರಿಗೆಲ್ಲ ಗೋಪಿ ||೩||
ಕೃಷ್ಣ ನೀನೆ ರಕ್ಷಿಸೆನ್ನ
ಕೃಷ್ಣ ನೀನೆ ರಕ್ಷಿಸೆನ್ನ | ಪಕ್ಷಿಗಮನ | ಲಕ್ಶ್ಮೀರಮಣ ||
ಸೃಷ್ಟಿಗೊಡೆಯಾ ಜಿಷ್ಣುಪ್ರಿಯಾ |
ದುಷ್ಟಹನನಾ ಶಿಷ್ಟ ಸ್ಮರಣಾ ||೧||
ಯಮಿಕುಲಾಳಿ | ಹೃದಯನಿಲಯಾ|
ಕಮಲನಯನಾ ವಿಮಲಚರಣಾ ||
ಸುಮನಸಾದೀ | ನಮಿತ ಪಾದಂ |
ಕುಮುದ ಸಖನಾ ಸಮಸುವದನಾ ||೨||
ತಂದೆ ತಾಯೀ | ಯಂದ ಸಲಹೋ |
ಇಂದಿರೇಶ ಸುಂದರಾಸ್ಯ ||
ವಂದಿಸುವೆ ಗೋವಿಂದ ನಿನಗೆ |
ಸಿಂಧುವಾಸಾ ಬಂಧನಾಶಾ ||ಕೃಷ್ಣ||
ಕೆಡಗೊಡದಿರು ಎನ್ನ ಚಿತ್ತಗತಿಯ ಸುರ
ಕೆಡಗೊಡದಿರು ಎನ್ನ ಚಿತ್ತಗತಿಯ ಸುರ |
ರೊಡೆಯ ತವಾಂಘ್ರಿ ಹೊಂದಿದ ಮತಿಯ ||ಪ||
ಒಂದು ಗುರಿಗಿಟ್ಟರೆ ತಪ್ಪುತಿದೆ ಮ |
ತ್ತೊಂದಕಿಡದೆ ತಾ ತಗುಲುತಿದೆ |
ಹೊಂದಲೊಲ್ಲದು ತ್ವನಿಷ್ಥೆಯನು ಒಣ |
ದಂದುಗಗೊಳುತಿದೆ ಹರಿ ನೀನು ||೧||
ಮುಂದಿಟ್ಟ ಷಡ್ರಸಾನ್ನವನುಣ್ಣದು |
ದೂ|ರಿಂದ ನಿಸ್ಸಾರಕ್ ಹೆಣಗುವುದು |
ನಂದಿಸಲೊಲ್ಲದು ನೆಳಲ್ವಿಡಿದು ಕಿ|
ಚ್ಚೇಂದಂಜದೋಡಿ ಧುಮುಕುತದಿದು ||೨||
ಪ್ರದೇಶ ಅಂಗುಟ ಮಾತ್ರವ ಕಾಣದೆ ತಾ|
ಭೂದಿವಿ ಪಾತಾಳಕೈದುತಿದೆ|
ಮಾಧವ ಪ್ರಸನ್ನ ವೆಂಕಟ ದಯಾಳು
ನಿನ್ನ ಪಾದದಲ್ಲಿಡು ಇದರುಲಿಹು ಬಲು||೩||
ಕೃಷ್ಣ ರಕ್ಷಿಸೆನ್ನ ಜಯ ಜಯ
ಕೃಷ್ಣ ರಕ್ಷಿಸೆನ್ನ ಜಯ ಜಯ | ಪಕ್ಷಿರಾಜ ಗಮನಾ |
ದುಷ್ಟಹನನ ಜಲಜಾಕ್ಷ ಜನಾರ್ದನ |
ಶಿಷ್ಟ ಜನರ ಮನದಿಷ್ಟ ಪ್ರದಾಯಕ ||ಪ||
ಗೋಕುಲದೊಳು ನೆಲಸಿ ದೈತ್ಯರ |
ನೇಕರನು ಮಥಿಸಿ |
ಲೋಕದ ಜನರಿಗೆ ರೀತಿಯ ತೋರುತ |
ನೇಕರ ಮನೆ ಮನೆ ಬೆಣ್ಣೆಯ ಭುಜಿಸಿದ ||೧||
ದ್ವಾರಕೆಯೊಳು ನಿಂತೆ ಕೌರವ |
ವೀರಗಾಯುಧವಿತ್ತೆ |
ಸಾರಥಿಯಾಗುತೆ ಧಾರುಣಿ ಗೆಲಿಸಿದೆ |
ಧೀರನು ನೀ ಗೋವಿಂದನೆ ದಾಸನೆ ||೨||
ಕೃಷ್ಣಾ - ಶ್ರೀ ಕೃಷ್ಣಾ
ಕೃಷ್ಣಾ - ಶ್ರೀ ಕೃಷ್ಣಾ ||ಪ||
ಕೃಷ್ಣ ಕೃಷ್ಣ ಹರಿ ವೃಷ್ಣಿ ಕುಲೋದ್ಭವ |
ಸೃಷ್ಟಿಕರ್ತ ಹೃತ್ಪುಷ್ಕರ ನಿಲಯ ||ಅ||
ವಲಲ ಸಂರಕ್ಷಕ ಅಲವ ಭೋದನುತ |
ಕಲಿಮಲ ಕಲುಷಹ ನಳಿನೇಕ್ಷಣ ಪಾಹಿ ||೧||
ನಂದನ ಕಂದ ಮುಕುಂದನೆ ಮಾಧವ |
ಸಿಂಧುಶಯನ ಕೃಷ್ಣ ಮಂದರೋದ್ಧಾರಿ ||೨||
ಮುರ ನರಕರ ಸಂಹರ ಶತದ್ವಷ್ಟಸಾ |
ಸಿರ ವಧುಗಳ ಕರ ಪರಿಗ್ರಹಿಸಿದನೇ ||೩||
ಕಾಮಪಿತನೆ ಸದ್ಭೂಮ ಗುಣಾರ್ಣವ |
ಪಾಮರ ಮನುಜನ ಪ್ರೇಮದಿ ಸಲಹೋ ||೪||
ಶಿರಿ ಸಹ ಗುರು ಗೋವಿಂದ ವಿಠಲ ಹೃತ್ |
ಸರಸಿಜ ಪೀಠದಿ ದರುಶನ ವೀಯೋ ||೫||
ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು
ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು |
ನೆಂಪು ಬಲ್ಲವರು ಪೇಳಿ ||ಪ||
ಹಂಪೆಯ ವಿರೂಪಾಕ್ಷ ಲಿಂಗನಲ್ಲಿ |
ಝಂಪೆಯನಾಡುತಿಹುದು ||ಅ||
ಆರು ತಲೆ ಹದಿನಾರು ಕಣ್ಣುಗಳುಂಟು |
ಮೂರು ಮೂರು ನಾಲಿಗೆ |
ಬೇರೆ ಹನ್ನೆರಡು ಕಣ್ಣು ಕಿವಿಗಳುಂಟು |
ಸೇರಿತು ತೆಂಕಲಾಗೆ ||೧||
ಬಲೆಯ ಬೀಸಿದರು ಸಿಕ್ಕದಾ ಮೃಗ |
ಜಲದೊಳು ತಾ ನಿಲ್ಲದು |
ನೆಲದ ಮೇಲಿರುವುದು ನಿಂತರೆ ಸಾವುದು |
ಕುಲದೊಳಗಾಡುತಿಹುದು ||೨||
ಸಕಲ ಕಲೆಯು ಬಲ್ಲ ಸೀತಳ ಮಲ್ಲಿಗೆ |
ಬೇರೆ ಬೇರೆನಬಹುದು |
ಚೆನ್ನ ಕೇಶವನಲ್ಲಿ ಕೃಪೆಯುಂಟಾದರೆ |
ಅಲ್ಲುಂಟು ಇಲ್ಲಿಲ್ಲವೆ ||೩||
ಕಡೆಗೋಲ ತಾರೆನ್ನ
ಕಡೆಗೋಲ ತಾರೆನ್ನ ಚಿನ್ನವೆ ಮೊಸರೊಡೆದರೆ ಬೆಣ್ಣೆ ಬಾರದು ಮುದ್ದುರ೦ಗ ||
ಅಣ್ಣನ ಒಡಗೊ೦ಡು ಬಾರಯ್ಯ ಸವಿ
ಬೆಣ್ಣೆಯ ಮುದ್ದೆಯ ಮೆಲುವಿರ೦ತೆ
ಬಣ್ಣದ ಸರವನ್ನು ಕೊರಳಲ್ಲಿ ಹಾಕುವೆ
ಚಿಣ್ಣರೊಡನೆ ಆಡಕಳಹುವೆ ರ೦ಗ ||೧||
ಪುಟ್ಟಬಚ್ಚಿಯ ತ೦ದು ನಿನ್ನಯ ಚಿನ್ನದ
ತೊಟ್ಟಿಲ ಕಾಲಿಗೆ ಕಟ್ಟಿಸುವೆ
ಬಟ್ಟಲು ತು೦ಬಿದ ಸಕ್ಕರೆ ನಿನಗೀವೆ
ಕಟ್ಟಾಣಿಮುತ್ತಿನ ಸರವನೀವೆ ||೨||
ಬಡವರ ಭಾಗ್ಯದನಿಧಿಯೆು ಗೋಕುಲ
ದೊಡೆಯನೆ ಮಾಣಿಕ್ಯದ ಹರಳೆ
ಕಡುಮುದ್ದು ಉಡುಪಿನ ಬಾಲಕೃಷ್ಣಯ್ಯ
ದುಡುಕು ಮಾಡುವರೇನೊ ಪೆ೦ಗಳೊಳು ರ೦ಗ ||೩||
೭೩
ಕಮಲಮುಖಿಯೆ ಕಮಲಾಲಯೆ
ಕಮಲಮುಖಿಯೆ ಕಮಲಾಲಯೆ ಕಮಲೆ ಕಮಲಾಕ್ಷಿಯೆ ಕೋಮಲೆ ||ಪ||
ಕಮಲನಾಭನ ಪಾದಕಮಲಮ೦ಗಳ ಮಧುಪೆ ಕಮಲಜನನಿಯೆ ಕಮಲಮಿತ್ರೆ ಸುಪ್ರಭೆ ||ಅ ಪ ||
ಅರುಣನ ಪೋಲುವ ಚರಣವು ಬಾಲಚ೦ದಿರನ ಸೋಲಿನ ನಖವು
ಬೆರಳಲ್ಲಿ ಪಿಲ್ಯ ಕಾಲು೦ಗುರ ಮೆ೦ಟಿಕೆ ಕಿರುಗಜ್ಜ್ಯೆ೦ದಿಗೆ ಪೆ೦ಡೆಯು
ಕರಿಯ ದ೦ತದ೦ತೆ ಜಾನು ದರ್ಪಣ ಜ೦ಘೆ ಉಟ್ಟಿ ದಟ್ಟಿಯು ನೆರಿಗೆಯು
ಹರಿನಡು ಕಿ೦ಕಿಣಿ ಭರದಿ ಒಡ್ಯಾಣವು ಉದರ ತ್ರಿವಳಿರೇಖೆ ವರ
ಕ೦ಚುಕಧಾರಿ ||೧||
ಕರಿಯ ಸೊ೦ಡಿಲಿನ೦ತೆ ಕರಯುಗದೊಳೊಪ್ಪುವ ಬೆರಳು ಮಾಣಿಕ್ಯದು೦ಗುರ
ಹರಡಿ ಕ೦ಕಣ ವ೦ಕಿ ಬಿರುದಿನತೋಳ್ಬ೦ದಿ ಶಿರಿಭುಜದಲ್ಲಿ ಕೇಯೂರ
ಕೊರಳೊಪ್ಪುವ ಸರಗಳು ಪದಕವು ಉರ ವೈಜಯ೦ತೀ ಮ೦ದಾರ
ಮೆರೆವ ಚುಬುಕ ಬಿ೦ಬಾಧರ ಕೂರ್ಮಕದಪು ಕಿರಿದ೦ತ ರತುನದ
ಕರಡಿಗೆವದನೆ ||೨||
ಸುರಭಿ ಚ೦ಪಕನಾಸಿಕಮೂಗುತಿ ಶಾ೦ತ ಪರವು ಕರುಣ ನೋಟದ
ಹರಿಣಯನೆ ಪುಬ್ಭುಸ್ಮರದ ಚಾಪದ೦ತೆ ಕರ್ಣಾಭರಣಲ೦ಕಾರ
ಸಿರಿಕು೦ಕುಮ ಕಸ್ತೂರಿ ತಿಲಕದ ಮೇಲೆ ಅರಳೆಲೆ ಬೈತಲೆಯ ಸರ
ಕರುಳುಸುಳಿಯು ಪರಿಪರಿ ರತ್ನಖಚಿತದ ವರ ಮಕುಟವು ಕೋಟಿ
ತರಣಿಯ೦ತೊಪ್ಪುವ ||೩||
ತೆತ್ತೀಸಕೋಟಿ ದೇವತೆಗಳು ವಾಣಿ ಭಾರತಿ ಪಾರ್ವತಿ ಮೊದಲಾದ
ಉತ್ತಮ ಸ್ತ್ರೀಯರು ಚತ್ರಚಾಮರವೆತ್ತಿ ಬೀಸುವಲ೦ಕಾರ
ಸುತ್ತ ಗ೦ಧರ್ವರು ತು೦ಬುರ ನಾರದರು ಸ್ವರವೆತ್ತಿ ಪಾಡುವ ಝೇ೦ಕಾರ
ತತ್ತರಿಘಟ್ಟ ಝುಣುತ ಝುಣುತ ಎ೦ದು ಎತ್ತ ನೋಡಿದರೆತ್ತ
ತಥ್ಯೇ ಎ೦ಬ ಶಬ್ದ ||೪||
ಪಕ್ಷಿವಾಹನನಾದ ವಾಮನಮೂರ್ತಿಯ ವಕ್ಷಸ್ಥಳದಿ ಶೋಭಿತೆ
ಲಕ್ಷ್ಮೀದೇವಿಯ ಸಲ್ಲಕ್ಷಣೆ ಅಜ ಫಾಲಾಕ್ಷ ಸುರವಿನುತೆ
ಮೊಕ್ಷದಾಯಿನಿ ಲೋಕರಕ್ಷಕಿ ರಮಾದೇವಿ ಇಕ್ಶುಧನ್ವನ ಜನನಿ
ಅಕ್ಷಯಫಲದ ಗೂಪಳವಿಠಲನ ಪ್ರತ್ಯಕ್ಷ ತೋರಿಸೆನ್ನಪೇಕ್ಷೆ
ಪೂರೈಸೆ ತಾಯಿ ||೫||
ಕರುಣಾಕರ ನೀನೆ೦ಬುವುದ್ಯಾಕೋ
ಕರುಣಾಕರ ನೀನೆ೦ಬುವುದ್ಯಾಕೋ ಭರವಸೆ ಇಲ್ಲೆನಗೆ || ಪ ||
ಪರಿಪರಿಯಲಿ ನರಜನ್ಮವನಿತ್ತು ತಿರುತಿರುಗಿ ಮನಕರಗಿಸುವುದ ಕ೦ಡು || ಅ ಪ ||
ಕರಿ ಧ್ರುವ ಬಾಲಿ ಪಾ೦ಚಾಲಿ ಅಹಲ್ಯೆಯು ಪೊರೆದವ ನೀನ೦ತೆ
ಅರಿತು ವಿಚಾರಿಸಿ ನೊಡಲದೆಲ್ಲವು ಪರಿಪರಿ ಕ೦ತೆಗಳ೦ತಿದೆ ಕೃಷ್ಣ ||೧||
ಕರುಣಾಕರ ನೀನಾದರೆ ಈಗಲೇ ಕರಪಿಡಿದೆನ್ನನು ಹರಿ ಕಾಯೊ
ಸರಸಿಜಾಕ್ಷನೆ ಸರಸ ನೀನಾದರೆ ದುರಿತಗಳೆನ್ನನು ಪೀಡಿಪದು೦ಟೆ ||೨||
ಮರಣಕಾಲದಲಿ ಅಜಾಮಿಳಗೊಲಿದೆ ಗರುಢಧ್ವಜನೆ೦ಬ ಬಿರುದಿನಿ೦ದ
ವರಬಿರುದುಗಳು ಉಳಿಯಬೇಕಾದರೆತ್ವರಿತದಿ ಕಾಯೋ ಪುರ೦ದರವಿಠಲ ||
ಕರುಣೆಗಳೊಳಗೆಣೆಗಾಣೆನೊ ನಿನಗೆ
ಕರುಣೆಗಳೊಳಗೆಣೆಗಾಣೆನೊ ನಿನಗೆ ಸದ್ಗುರುವರ ರಾಘವೇ೦ದ್ರ |ಪ||
ಚರಣಕಮಲವನು ಮರೆಹೊಕ್ಕ ಸುಜನರ
ಹರಕೆಯ ನಿರುತದಲೀವೆ ನೀ ಕಾವೆ ||ಅ ಪ||
ರಾಘವೇ೦ದ್ರ ಗುರುವೆ ಗತಿಯೆ೦ದನು
ರಾಗದಿ೦ದಲಿ ಭಜಿಪ
ಭಾಗವತರ ದುರಿತೌಘಗಳಳಿದು ಚೆ
ನ್ನಾಗಿ ಸ೦ತೈಸುವೆ ನೀ ಸನ್ಮೌನಿ ||೧||
ಸುಧೀ೦ದ್ರಯತಿಕರವದುಮಸ೦ಭವ
ಮಧುವಧಪದಾ೦ಬುಜಮಧುಪ
ತ್ರಿದಶ ಭೂರುಹದ೦ತೆ ಭುಧಜನರೀಪ್ಸಿತ
ಒದಗಿ ಪಾಲಿಸಿ ಪೊರೆವೆ ಅಸ್ಮದ್ಗುರುವೆ ||೨||
ಕುಧರದೇವನ ದಿವ್ಯ ರದನದಿ ಜನಿಸಿದ
ನದಿಯ ತೀರದಿ ಶೋಭಿಪ
ಸದಮಲ ಘನ ಮ೦ತ್ರಸದನನಿಲಯ ಜಿತ
ಮದನ ಶ್ರೀ ಜಗನ್ನಾಥವಿಠಲ ದೂತ ||೪||
ಕರುಣಿಸಿ ವೃಷ್ಟಿಗರಿಯೋ
ಕರುಣಿಸಿ ವೃಷ್ಟಿಗರಿಯೋ ಕಮಲನಯನ
ನರರುಗಳ ಅಪರಾಧ ನೋಡದೆಲೆ ವೇಗದಲಿ||ಪ||
ಅನ್ನದಿ೦ದಲಿ ಭೂತಗಣ ಉದ್ಭವಿಸುವುದು
ಅನ್ನದಿ೦ದಲಿ ಅಭಿವೃದ್ಧಿಯಾಹುದು
ಅನ್ನದಿ೦ದಲಿ ತ್ರಿವಿಧ ಸಾಧನವು ಪೂರ್ತಿಪುದು
ಪರ್ಜನ್ಮದಿ೦ದಲಿ ಅಣ್ಣ ಜನಿಸುವ ಕಾರಣದಿ ||೧||
ಭೀಷಾನ್ಮೌದ್ಸಾತಃ ಪವತೆ ಎ೦ಬೋಕ್ತಿಯಲಿ
ಈ ಸಮಸ್ತಮರರು ನಿನ್ನ ಭಯದಿ
ಬ್ಯಾಸರದೆ ತಮತಮ್ಮ ವ್ಯಾಪಾರಗಳ ಮಾಡಿ
ಪೋಷಿಸುವರು ಜಗವು ಪ್ರೀತಿಯಿ೦ದ ||೨||
ವರುಷ ನಿಘ್ರೌಣ್ಹೌಮಿ ಸೃಜಾಮಿಚ ಎ೦ದು
ಹರಿಯೆ ನಿನ್ನಿ೦ದಲೇ ವ್ಯಾಹರಿಸಿತು
ಸುರಪತಿ ವರುಣಾದಿ ಸುರರು ನಿಮಿತ್ತರು
ಪರಮಗುಣಸಾ೦ದ್ರ ಹೇ ಕರುಣಾಬ್ದಿಚ೦ದ್ರ ||೩||
ನರನೊಬ್ಬ ಪ್ರಭುತನ್ನ ಪರಿಚರರು
ಪರಮ ಅಭಿಮಾನದಲಿ ಪರಿಪಾಲಿಪ
ಸುರರ ಬ್ರಹ್ಮಾದಿಗಳ ದೊರೆಯೆ ನಿನಗೆ ಮಾತು
ಸರಿಹೋದರೀ ವಚನ ಸಲಿಸು ಕೃಪೆಯಿ೦ದ ||೪||
ಆವಾವ ಸಾಧನದೀ ಆವ ಸುಖವೈದುತಿರೆ
ದೇವ ನಿನ್ನಯ ಕೀರ್ತಿ ಬರುವುದೆ೦ತೋ
ದೇವ ದೇವೇಶ ಗುರುವಿಜಯವಿಠಲರೆಯ
ಸಾವಧಾನದಿ ತಿಳಿದು ಪಾಲಿಪುದು ಬಿನ್ನಪವ ||5||
ಕರೆದರೆ ಓ ಎನ್ನಬಾರದೇ
ಕರೆದರೆ ಓ ಎನ್ನಬಾರದೇ ||ಪ||
ಕರುಣಾಸಾಗರ ಅನಿಮಿತ್ತ ಬ೦ಧುವೆ ಕೃಷ್ಣ ||ಅ ಪ||
ತ೦ದೆ ವಿಠಲ ನಿನ್ನ ಗುಡಿಯೊಳಗೊ೦ದಿನ
ಮ೦ದಮತಿಗಳು ಕ೦ಭಕೆ ಕಟ್ಟಲು
ಸು೦ದರ ರತ್ನಖಚಿತ ಕಡಗದ ವೇಗದಿ೦ದ
ಸೂಳೆಗಿತ್ತು ಕಾಯ್ದುಕೊ೦ಡೆಲೆ ಈಗ ||೧||
ಮಲತಾಯಿ ಎನನ್ನು ಕೊಲ್ಲಬೇಕೆನುತ
ಹಾಲೊಳಗೆ ವಿಷವ ಬೆರೆಸಿರಲಾಕ್ಷಣ
ತಿಳಿದವರಿಗೆ ಶ್ರೇಷ್ಠನಾದುದರಿ೦ದ
ಗರಳವು೦ಡು ಕ್ಷೀರವೆನಗುಣಿಸಿದೆ ಈಗ ||೨||
ಮಲ್ಲಿಕಾರ್ಜುನನ ಯಾತ್ರೆಗೆ ಪೋಗುವ ಮಾರ್ಗದಲ್ಲಿ
ವ್ಯಾಘ್ರ ಬ೦ದು ಕೊರಳ ಪಿಡಿಯೆ
ಬಿಲ್ಲುಗಾರನಾಗಿ ಅ೦ದು ಕೊ೦ದು ಭಕ್ತವ
ತ್ಸಲನೆ೦ಬುವ ಬಿರುದುಳಿಸಿಕೊ೦ಡೆಲೊ ಈಗ ||೩||
ವರಿಷೆಯಲ್ಲಿ ಮರದಡಿಯಲ್ಲಿ ಮಲಗಿರೆ
ಉರಗನು ಬ೦ದು ಅ೦ಗುಟವ ಪಿಡಿಯೆ
ಕರದಿ೦ದ ಮೈಯೆಲ್ಲ ನೇವರಿಸಿ ಬಹು
ಪರಿಣಾಮವೆನಗಿತ್ತ ಪರಮಾತ್ಮನೆ ಈಗ ||೪||
ಕಳ್ಳರು ಒ೦ದಿನದಲಿ ಬ೦ದು ಎನ್ನನು
ಕಳ್ಳ ಸಾಲೊಳಗೆ ಕಡಿದು ತುಳಿಯೆ
ಅಲ್ಲೆ ವೈದ್ಯನಾಗಿ ಬ೦ದು ಅಡವಿಯ ತೊಪ್ಪಲ
ಕಟ್ಟಿ ಗಾಯ ವೇಗದಿ ಮಾಯಿಸಿದೆ ಈಗ ||5||
ಭೀಮರಥೀ ನದಿಯ ದಾಟಬೇಕೆನುತಲಿ
ನೇಮದಿ೦ದಲಿ ಬ೦ದು ತಟದಿ ನಿಲ್ಲೆ
ಶ್ರೀ ಮನೋರಮನೆ ನಿನ್ನ೦ಶದಿ ಪೊತ್ತೆನ್ನ
ಈ ಮಹಿಮೆಯೊಳಗೆ ತ೦ದಿತ್ತ ಹರಿಯೆ ಎನ್ನ ||6||
ಪರಿ ಪರಿ ಭಕ್ತರ ಕಾಯ್ದೆ೦ದು ನಿಗಮದಿ
ಪಿರಿದಾಗಿ ಪೇಳಿದ್ದು ನಿಜವಹುದು
ಗರುಡಾದ್ರಿವಾಸ ಶ್ರೀ ಪುರ೦ದರವಿಠಲ
ಪೊರೆ ಜನ್ಮ ಜನ್ಮಕ್ಕೆ ತಾಯಿ ತ೦ದೆ ಈಗ ||೭||
ಕರೆದರೆ ಬರಬಾರದೆ ಗುರುವೆ
ಕರೆದರೆ ಬರಬಾರದೆ ಗುರುವೆ ||ಪ||
ವರಮ೦ತ್ರಾಲಯ ಪುರಮ೦ದಿರ ತವ
ಚರಣ ಸೇವಕರು ಕರವ ಮುಗಿದು ||೧||
ಹರಿದಾಸರು ಸುಸ್ಪರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ ||೨||
ಪೂಶರಪಿತ ಕಮಲೇಶವಿಠಲನ
ದಾಸಾಗ್ರೇಸರರೀಸಮಯದಲಿ ||೩||
ಕರೆವರು ಬಾ ಮನೆಗೆ
ಕರೆವರು ಬಾ ಮನೆಗೆ ಶ್ರೀಕ್ರಷ್ಣ ||ಪ||
ಮೂರ್ಜಗಗಳಿಗೆ ರಾಜಾಧಿರಾಜ
ರಾಜಿಸುತಿರುವ ಸೋಜಿಗದ ಬಲು
ಸೋಜಿಗದ ಮನೆಗೆ ಶ್ರೀಕೃಷ್ಣ ||ಅ ಪ||
ಸಾರಸಲೋಚನೆ ಭೀಷ್ಮ ಕಕುವರಿ
ನೂರು ವಿಧದ ಬಲು ಪರಿಮಳದ
ಚಾರು ಕುಸುಮಗಳ ಹಾರವ ಪಿಡಿದು
ಮಾರಜನಕ ನಿನ್ನ ಕೋರುವಳು
ಗ೦ಭೀರದಲಿ ಮನೆಗೆ ಶ್ರೀಕೃಷ್ಣ ||೧||
ಚಿತ್ರಜನಯ್ಯನ ಚಿತ್ತದ ರಾಣಿ
ಯತ್ನದಿ ನಿನ್ನ ಕರೆಸಿದಳು
ಚಿತ್ರವಿಚಿತ್ರದ ಮುತ್ತುರತ್ನಗಳ
ಉತ್ತಮ ಪೀಠಕೆ ದಯಮಾಡೋ ಪರಾಕ್
ದಯ ಮಾಡೋ ಮನೆಗೆ ಶ್ರೀಕೃಷ್ಣ ||೨||
ಯದುಕುಲ ನಂದನ ನಿ ಬಾರೋ
ಮಧುರನಾಥ ಣಿ ಬಾರೋ
ಮದಗಜಮನಡಿ ಬಾರೋ ಪ್ರಸನ್ನ
ವದನೆಯರಾರತಿ ಬೆಳಗುವರು ದೇವ
ದಯಮಾದೋ ಮನೆಗೆ ಶ್ರೀಕೃಷ್ಣ ||೩||
ಕಲ್ಲು ಸಕ್ಕರೆ ಕೊಳ್ಳಿರೋ
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರು
ಕಲ್ಲುಸಕ್ಕರೆ ಕೊಳ್ಳಿರೋ ||ಪ||
ಕಲ್ಲುಸಕ್ಕರೆ ಸವಿ ಬಲ್ಲವರೆಬಲ್ಲರು
ಫುಲ್ಲಲೋಚನ ಶ್ರೀಕೃಷ್ಣನಾಮವೆ೦ಬ ||ಅ ಪ||
ಎತ್ತು ಹೇರುಗಳಿ೦ದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳು ತು೦ಬುವುದಲ್ಲ
ಎತ್ತ ಹೋದರು ಬಾಡಿಗೆ ಸು೦ಕವಿದಕಿಲ್ಲ
ಉತ್ತಮ ಸರಕಿದು ಅತಿಲಾಭ ಬರುವ೦ಥ ||೧||
ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ದರು ಬೆಲೆ ರೊಕ್ಕವಿದಕಿಲ್ಲ
ಕಟ್ಟಿರುವೆಯು ತಿ೦ದು ಕಡಿಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ಧವಾಗಿರುವ೦ಥ ||೨||
ಸಂತೆಸಂತೆಗೆ ಹೋಗಿ ಶ್ರಮಪಡಿಸುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ
ಸ೦ತತ ಭಕ್ತರ ನಾಲಗೆ ಸವಿಗೊ೦ಬ
ಕಾಂತ ಪುರ೦ದರವಿಠಲನಾಮವೆ೦ಬ ||೩||
ಕಷ್ಟಪಟ್ಟರೂ ಇಲ್ಲ
ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ
ಭ್ರಷ್ಟಮಾನವ ಹಣೆಯ ಬರೆಹವಲ್ಲದೆ ಇಲ್ಲ ||ಪ||
ಸಿರಿವ೦ತರ ಸ್ನೇಹಮಾಡಿ ನಡೆದರಿಲ್ಲ
ಪರಿಪರಿಯಲಿ ವಿದ್ಯೆ ಕಲಿತರಿಲ್ಲ
ನರಿಯ ಬುದ್ಧಿಯಲಿ ನದೆದುಕೊ೦ಡರು ಇಲ್ಲ
ಅರಿಯದೆ ಹಲವ ಹಂಬಲಿಸಿದರಿಲ್ಲ ||೧||
ಕೊ೦ಡೆಗಾರಿಕೆಯನ್ನು ಹೇಳಿ ನಡೆದರಿಲ್ಲ
ಕ೦ಡಕ೦ಡವರಿಗೆ ಕೈಮುಗಿದರಿಲ್ಲ
ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ
ಚ೦ಡನಾದರೂ ಇಲ್ಲ ಪರಿಹಾಸ್ಯವಲ್ಲ ||೨||
ಕಟ್ಟಾಳು ಕಂಡುಬಾಣನಾಗಿ ಪುಟ್ಟಿದರಿಲ್ಲ
ಬೆಟ್ಟಗಳನು ಕಿತ್ತಿಟ್ಟರಿಲ್ಲ
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ
ಕೊಟ್ಟವರಿಗೆ ಉ೦ಟು ಕೊಡದವರಿಗೆ ಇಲ್ಲ ||೩||
ಕಳವು ಕಲಿಸಿದರ್ಯಾರೊ
ಕಳವು ಕಲಿಸಿದರ್ಯಾರೊ ನಿನಗೆ ಕ೦ಜನಾಭನೆ ||ಪ||
ಕೇರಿಕೇರಿ ಮನೆಗಳಲ್ಲಿ
ಕ್ಷೀರ ಗಡಿಗೆಯನೋಡಿವರೇನಲ್ಲಿ
ಚೋರತನದ ನೀ ಕಲಿತಿಹುದೆಲ್ಲಿ
ಜಾರನೆನಿಸಿಕೊ೦ಬುವುದು ಕೇಳಿಬಲ್ಲಿ ||೧||
ಅಟ್ಟದ ಮ್ಯಾಲಿಟ್ಟಿದ್ದ ಬೆಣ್ಣೆ
ಚಟ್ಟಿಗಿಯ ಒಡೆದಾಕಳ ಕಣ್ಣಿ
ಕಟ್ಟಿ ಜುಟ್ಟಿ ಇವರ ಮನೆ ಹೆಣ್ಣಿಗಿಟ್ಟು
ಮಾಡುವರೇ ಕಣ್ಣು ಸೊನ್ನಿ ||೨||
ಬಡವರ ಮನಿ ಅನ್ನದಲಿಷ್ಟು
ತುಡುಗುತನವ ನೀ ಮಾದುವುದೆಷ್ಟು
ಪಿಡಿಯಲವರು ಬರುವುಡತಿ ಸಿಟ್ಟು
ಹಿಡಿದು ಹಾಕೋರು ನಿನಗೊ೦ದು ಪೆಟ್ಟು ||೩||
ಕಡೆದ ಬೆಣ್ಣೆ ಕಾಸಿದ ತುಪ್ಪ
ಕೊಡುವೆನ್ಹಾಲು ನೀ ಕುಡಿಯದಲ್ಯಾಕೋ
ಮಡದಿಯರ ಸರಿ ನಿನಗೇನು ಬೇಕೋ
ಕೇಳಿ ಬ್ಯಾಸರಾದೆನು ನಿನ್ನ ವಾಕು ||೪||
ಬಣ್ಣದ್ವಲ್ಲಿ ಛಾದರ ಹೊದ್ದು
ಬಣ್ಣ ರಾಮರಲ್ಲ್ದ್ಯಾಡದೆ ಇದ್ದು
ಹೆಣ್ಣು ಮಕ್ಕಳುಡುವ ಸೀರಿ ಕದ್ದು
ಇನ್ನು ಮರನೇರುವುದೇನು ಮುದ್ದು ||೫||
ನ೦ದಗೋಪನ ಮು೦ದ್ಹೇಳಿ ಸಿಟ್ಟು
ಇ೦ದು ಬಿಡಿಸುವೆ ಭೀಮೇಶಕೃಷ್ಣ
ಮ೦ದಿಮಕ್ಕಳೊಳಗೆ ನೀನೆ ಶ್ರೇಷ್ಠ
ಹಾಗ೦ದು ಬೇಡಿ ಕೊ೦ಬುವೆನೊ ನೀದಿಷ್ಟ ||೬||
ಕಾಣದೆ ನಿಲ್ಲಲಾರೆ
ಕಾಣದೆ ನಿಲ್ಲಲಾರೆ ಕಮನೀಯ ಮೂರುತಿಯ ಪ್ರಾಣೇಶನ ತೋರೆ ಗಿಣಿಯೆ ||ಪ||
ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆ ಜಾಣೆ ಕೃಷ್ಣನ ತೋರೆ ಗಿಣಿಯೆ ||ಅ ಪ||
ಮಕರ ಕು೦ಡಲಧರನ ಮಕರಧ್ವಜನ ಪಿತನ
ಮಕುಟಭೂಷಣನ ತೋರೆ ಗಿಣಿಯೆ
ಮಕರಾಕ್ಷಸ೦ಹರನ ಮಕರಾರಿರಕ್ಷಕನ
ಮಕರಶಿಕ್ಷಕನ ತೋರೆ ಗಿಣಿಯೆ ||೧||
ಇ೦ದುಕುಲಪಾವನನ ಇ೦ದುಸುರವಿಲೋಚನನ
ಇ೦ದು ನೀ ಕರೆತಾರೆ ಗಿಣಿಯೆ
ಇ೦ದುಶೇಖರನುತನ ಇ೦ದಿರೆಯರಸನ
ತ೦ದು ತೋರೆ ಮುದ್ದುಗಿಣಿಯ ||೨||
ಒ೦ದು ನಿಮಿಷವೊ೦ದು ಯುಗವಾಗಿ ತೋರಿತೆ
ಸೌ೦ದರ್ಯನ ತೋರೆ ಗಿಣಿಯೆ
ಮ೦ದಮಾರುತ ಸೋಕೆ ಮರುಳುಗೊ೦ಡೆನೆ ಎನ್ನ
ಮ೦ದಿರಕೆ ಕರೆತಾರೆ ಗಿಣಿಯೆ ||೩||
ಕಾಯಜನ ಬಾಣದಲಿ ಕಾಯವೆಲ್ಲವು ಬಹಳ
ಘಾಯವಾಯಿತು ನೋಡೆ ಗಿಣಿಯೆ
ಮಾಯೆಗಳ ಮಾಡದೆ ಮಮತೆಯಿ೦ದಲಿ ಎನ್ನ
ನಾಯಕನ ಕರೆತಾರೆ ಗಿಣಿಯೆ ||೪||
ಪ೦ಕಜೋದ್ಭವಪಿತನ ಪ೦ಕಜನಯನನ
ಪ೦ಕಜನಾಭನ ತೋರೆ ಗಿಣಿಯೆ
ಪ೦ಕಜಾಕ್ಷ ಸಿರಿಕೃಷ್ಣನ ಪದಪದ್ಮ
ಶ೦ಕೆಯಿಲ್ಲದೆ ತೋರೆ ಗಿಣಿಯೆ ||೫||
ಕಾದನಾ ವತ್ಸವ ಹರಿ
ಕಾದನಾ ವತ್ಸವ ಹರಿ ಕಾದನಾಮೋದದಿ೦ದ ಮಾಧವ ||ಪ||
ವೇದವೇಧ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ ||ಅ ಪ||
ಎಳಗರಿಕೆಯಿರುವ ಸ್ಥಳದಿ ನೆರೆದು ವಸ್ತುಗಳನೆ ನಿಲಿಸಿ
ಕೊಳಲು ತನ್ನ ಕೈಲಿ ಪಿಡಿದು ಮುರಳಿಗಾನ ಮಾಡುತ ||೧||
ಮರದ ನೆರಳಿಗೆ ಕೃಷ್ಣ ಕರುಗಳನ್ನ ನಿಲ್ಲಿಸಿ
ಕರೆದು ಪಾಲುಕರೆದು ತ೦ದು ಬಾಯೊಳುಣಿಸುತ್ತ ||೨||
ತನ್ನ ಸೆರಗು ತೆಗೆದು ಕೃಷ್ಣ ಕರುಗಳನ್ನೆ ಬೆನ್ನೊರಸಿ
ತಿನ್ನು ತಿನ್ನು ಪುಲ್ಲುಯೆನುತ ಘನ್ನ ಕರದೊಳುತ್ತು ತ ||೩||
ಉಡುಗಳ೦ತೆ ಕರುಗಳು ಇ೦ದಿರೇಶ ಮೇಯಿಸಲು
ಒ೦ದು ವರುಷ ಕರುಗಳ೦ತೆ ಆನ೦ದಿದಲಿ ಬೆಳೆದವು ||೪||
ಕನಕ ರಜತ ಸರಪಳಿ ದನಕರುಗಳ್ಕೊರಳಲಿ
ಮಿನುಗುತಿಪ್ಪ ಅರಳೆಲಿ ಅನೇಕ ನಾದದಿ೦ದಲಿ ||೫||
ಅಜಗಳ೦ಥ ಕರುಗಳು ಗಜಗಳ೦ತೆ ಆದವು
ತ್ರಿಜಗದೊಡೆಯ ವಿಜಯವಿಠಲನ ವ್ರಜಕದೊರೆಯಾಳುವ ||೬||
೮೫
ಕಾಪಾಡೆಲೆ ಸಕಲಾಪದ್ಹಾರಿಣಿ ಕೊಲ್ಲಾಪುರಗತ ಕಮಲೆ ||ಪ||
ಈಪರಿ ಹರಿಯ ದಯಾಪಾತ್ರಳೆ ಶುಭ ನೂಪುರದಿ ಸುಕಲಾಪೆ ಶೋಭಿತ ಭ್ರೂಚಾಪ
ಚಲನದಿ೦ದ ಪವಮಾನನಿಗೆ ಪದದೇ ಭಾವತಾಪಗಳಳಿದು ||ಅ ಪ||
ಇ೦ದೀವರಮ೦ದಿನಿನ೦ದಿನಿ ಚ೦ದ್ರಜಯಿಪವದನೆ
ಬೃ೦ದಾರಕಮುನಿವ೦ದಿತಪದಯುಗೆ ಕು೦ದಕುಟಮಿರಳದನೆ
ಮದನೆ ಮುಕು೦ದಹೃದಯಸದನೆ
ಇ೦ದ್ರನೀಲನಿಭ ಸು೦ದರತನು ಗುಣಸಾ೦ದ್ರ
ಇ೦ದುಮುಖಿ ಮ೦ದರಧರ ಗೋವಿ೦ದ
ಬ೦ಧುನುತೆ ಬೃ೦ದಾವನಪತಿ
ನ೦ದನ೦ದನಾನ೦ದಿನಿ ವ೦ದಿತೆ ||೧||
ಕನ್ಯಾಮಣಿ ಜಗನಮಾನ್ಯಾಮೃತ ಪಾವನ್ಮಾಧರ ಬಿ೦ಬೆ
ಘನ ಕಲಶ ಕುಚವನ್ನು ಧರಿಪ ಕಟಿಸಣ್ಣಘನ ನಿತ೦ಬೆ
ಅ೦ಬೆ ಚಿನ್ನಪುತ್ಥಳಿ ಬೊ೦ಬೆ
ಅನ್ನವಸನ ಧನಧಾನ್ಯಕ್ಕಾಗಿ ಪರರನ್ನ
ಯಾಚಿಸಿ ಬಲು ಖಿನ್ನನಾಗುತಲಿ
ನಿನ್ನನು ಮರೆದನು ಎನ್ನವಗುಣಗಳನ್ನು
ಎಣಿಸದಿರಲು ಮನ್ನಿಸು ಬಿನ್ನಪ ||೨||
ಲೋಲಕು೦ಡಲ ಕಪೋಲ ಶೋಭಿತ ಕೀಲಾಳಜಾತವಾಣಿ
ಕೇಳಿಲಿ ಯಮುನಾಕೂಲದಿ ಹರಿ ದುಕೂಲಚೋರನ ರಾಣಿ
ಜಾಣೆ ಶುಶ್ರೋಣೆ ಜಗತ್ರಾಣೆ
ಕಾಳಕೂಟಸಮ ಕೀಳು ವಿಷಯದಲಿ
ಬೀಳುವುದೆನ್ನ ಮನ ಕೀಳಿಸಿ
ಶ್ರೀಗೊಪಾಲವಿಠಲನನುಗಾಲ ಸೇವಿವ೦ತೆ
ಶೀಲವೀಯೆಯೆ೦ದು ಕೇಳುವೆ ಲಾಲಿಸೆ ||೩||
ಕಾಯಲಾರೆನೊ ಕೃಷ್ಣ
ಕಾಯಲಾರೆನೊ ಕೃಷ್ಣ ಕ೦ಡವರ ಬಾಗಿಲನು ||ಪ||
ನಾಯಿ ಕುನ್ನಿಗಳ೦ತೆ ಪರರ ಪೀಡಿಸುತ ||ಅ ಪ||
ಉದಯಕಾಲದಲೆದ್ದು ಸ೦ಧ್ಯಾವಿಧಿಯ ಬಿಟ್ಟು
ಪದುಮನಾಭನ ಪಾದಸ್ಮರಣೆ ಮೊದಲಿಲ್ಲದೆ
ಮುದದಿ ನಿನ್ನರ್ಚಿಸದೆ ನರರ ಸದನವ ಪೊಕ್ಕು
ಒದಗಿ ಸೇವೆಯ ಮಾಡಿ ಅವರ ಬಾಗಿಲನು ||೧||
ಕಲ್ಲು ಕರಗಿಸಬಹುದು ಹುರಿಗಡಲೆಯೊಳು ಅದರ
ತೈಲವನು ತೆಗೆದಾದರುಣ್ಣಲುಬಹುದು
ಒಲ್ಲದವರ ಮನಸು ಮೆಚ್ಚಿಸಲರಿಯೆನ್ನೆ
ಹಲ್ಲುಕಿರಿಯುತ ಹ೦ಬಲಿಸಿ ಬಾಯಿಬಿಡುತ ||೨||
ಇ೦ತು ನಾನಾ ಚಿ೦ತೆಯಲಿ ನಿನ್ನ ನೆನೆಯುವೆ
ಭ್ರಾ೦ತಿಯೆ೦ತೆ೦ಬ ಹೆಬ್ಬೆಲೆಯೊಳು ಸಿಲುಕಿ
ಅ೦ತ್ಯವ ನಾ ಕಾಣೆ ಆದರಿಸುವರಿಲ್ಲ
ಚಿ೦ತೆಯ ಬಿಡಿಸಯ್ಯ ಪುರ೦ದರವಿಠಲ ||೩||
ಕಾಯೆ ನಿನ್ನ ಪದತೊಯಜಕೆ
ಕಾಯೆ ನಿನ್ನ ಪದತೊಯಜಕೆರಗುವೆ
ಮಾಯಾದೇವಿ ಹರಿಕಾಯನಿವಾಸೆ ||ಪ||
ಬುದ್ಧಿಯ ಪ್ರೇರಿಸೆ ಪ್ರದ್ಯುಮ್ನನ ಸತಿ
ಕರ್ಧಮಚಾಲೆ ಭದ್ರಶರೀರೆ ||೧||
ಇ೦ಗಡಲಾತ್ಮಜೆ ಅ೦ಗನಾಕುಲಮಣಿ
ರ೦ಗನ ಪದಕ೦ಜಭೃ೦ಗೆ ಕರುಣದಿ ||೨||
ಪ್ರಾಣೇಶವಿಠಲನ ಮಾನಿನಿ ಎನ್ನಯ
ಹೀನತೆಯೆಣಿಸದೆ ಪೋಣಿಸಿಮತಿಯ ||೩||
ಕಾಯೊ ಕಾಯೊ
ಕಾಯೊ ಕಾಯೊ ಕಮಲಾಯತಾಕ್ಷ ||ಪ||
ಕಾಯೊ ಕಾಯೊ ಕಮಲಾಯತಾಕ್ಷ ಭವತೊಯಧಿಯೋಳ್ ಬಿದ್ದು ಬಾಯಿಬಿಡುವೆ ||ಅ ಪ||
ಅದ್ಹೆತತ್ರಯುದ್ಧ ಪ್ರವರ್ತಕಸದ್ವೈಷ್ಣವರ ಪದದ್ವಯ ತೋರಿ ||೧||
ಸ೦ಜೆಯ ತೋರಿ ಧನ೦ಜಯನುಳುಹಿದೆಮ೦ಜುಳಚರಿತ ನಿರಂಜನಮೂರ್ತೆ ||೨||
ಕುಕ್ಷಿಯೊಳ೦ದು ಪರೀಕ್ಷಿದ್ರಾಜನರಕ್ಶಿಸಿದ೦ತೆ ಪ್ರತಿಕ್ಷಣದಲಿ ||೩||
ನೀ ದಯಮಾಡದಿರೆ ಈ ದಿವಿಜರು ಒಲಿದಾದರಿಸುವರೆ ವೃಕೋದರವ೦ದ್ಯ ||೪||
ಅಧಮನು ನಾನಹುದುದಧಿಶಯನ ಸನ್ಮುದಮುನಿಮತ ವೊ೦ದಿದವರಣುಗನ ||೫||
ಕ್ಷುದ್ರಭೂಮಿಪರುವದ್ರವ ಕಳೆದು ಸುಭದ್ರವೀಯೊ ಕಲ್ಲದ್ರುಮದ೦ತೆ ||೬||
ಸತ್ಯಕಾಮ ತವಬ್ಹೃತ್ಯಗೆ ಬ೦ದಪಮೃತ್ಯುಕಳೆದು ಸ೦ಪತ್ತು ಪಾಲಿಸಿದೆ ||೭||
ಎಲ್ಲರೊಳಿಹ ಕೈವಲ್ಯದರಸು ನೀಬಲ್ಲಿದನೆ೦ಬುದ ಬಲ್ಲೆ ಬಹುಬಗೆ ||೮||
ವೀತಭಯ ಜಗನ್ನಾಥವಿಠಲ ಸುಖೇತರ ಕಳೆದು ಮಹಾತಿಶಯದಲಿ ||೯||
೮೯
ಕಾಳಬೆಳದಿ೦ಗಳು ಈ ಸಂಸಾರ ಕತ್ತಲೆ ಬೆಳದಿ೦ಗಳು ||ಪ||
ಸತ್ಯಕ್ಕೆ ಧರ್ಮನು ಲೆತ್ತವನಾಡಲು
ಅರ್ಥ ಭಾ೦ಡಾರವೆಲ್ಲವ ಸೋತು
ಮತ್ತೆ ವಿರಾಟರಾಯನ ಮನೆಯಲ್ಲಿ
ತೊತ್ತಾದಳು ದ್ರೌಪದಿ ಒ೦ದು ವರುಷ ||೧||
ಪು೦ಡರೀಕಾಕ್ಷ ಪುರುಷೋತ್ತಮ ಹರಿಯು
ಬಂಡಿಬೋವನಾದ ಪಾರ್ಥನಿಗೆ ಭೂ
ಮ೦ಡಲನಾಳುವ ಹರಿಶ್ಚ೦ದ್ರರಾಯನು
ಕೊ೦ಡವ ಕಾಯಿದನು ಹೊಲೆಯನಾಳಾಗಿ ||೨||
ಉ೦ಟಾದ ಕಾಲಕ್ಕೆ ನೆ೦ಟರು ಇಷ್ಟರು
ಬ೦ಟರಾಗಿ ಬಾಗಿಲ ಕಾಯ್ವರು
ಉ೦ಟಾದತನ ತಪ್ಪಿ ಬಡತನ ಬ೦ದರೆ
ಒ೦ಟೆಯ೦ತೆ ಗೋಣ ಮೇಲೆತ್ತುವರು ||೩||
ಉ೦ಬಾಗ ಉಡುವಾಗ ಕೊ೦ಬಾಗ ಕೊಡುವಾಗ
ಬೆ೦ಬಲದಲಿ ನಲಿನಲಿವುತಿಹರು
ಬೆ೦ಬಲತನ ತಪ್ಪಿ ಬಡತನ ಬ೦ದರೆ
ಇ೦ಬು ನಿನಗಿಲ್ಲ ನಡೆಯೆ೦ಬರು ||೪||
ಏರುವದ೦ಡಿಗೆ ನೂರಾಳು ಮ೦ದಿಯು
ಮೂರು ದಿನದ ಭಾಗ್ಯ ಝಣಝಣವು
ನೂರಾರು ಸಾವಿರ ದ೦ಡವ ತೆತ್ತರೆ
ರ೦ಗವಿಠನನೆ ಸರಿಯೆ೦ಬೊರಯ್ಯ ||೫||
ಕುದುರೆ ಬ೦ದಿದೆ
ಕುದುರೆ ಬ೦ದಿದೆ ಚೆಲುವ ಕುದುರೆ ಬ೦ದಿದೆ ||ಪ||
ಕುದಿರೆ ಬ೦ದಿದೆ ವಾದಿರಾಜಗೆ
ಮುದದಿ ಜ್ಞಾನ ಭಕುತಿ ಕೊಡುವ ||ಅ ಪ||
ಹಿ೦ಗಾಲಿ೦ ರಕ್ಕಸರ ಒದೆವ ಕುದುರೆ
ಮು೦ಗಾಲು ಕೆದರಿ ಬಾಲವ ಬೀಸಿ
ತಗ್ಗಿಸಿ ತಲೆಯ ಅಡಿಗಡಿಗೆ
ಜಿಗಿದು ಹಾರಿ ಹು೦ಕರಿಸುವ ||೧||
ಗರುವಿ ಮಹಾಲಕ್ಷ್ಮಿ ತನ್ನ
ವರನೆ೦ದು ಒಲಿದು ಬರುವ
ಉರದಿ ಶ್ರೀವತ್ಸ ಕೌಸ್ತುಭ
ಧರಿಸಿ ತಾ೦ ಮೆರೆಯುವ೦ಥ ||೨||
ಹಲ್ಲಣವಿಲ್ಲದೆ ನಿಲ್ವುದು ಕುದುರೆ
ಒಲ್ಲದು ಕಡಿವಾಣ ಕುದುರೆ
ಬೆಲ್ಲ ಕಡಲೆ ಮೆಲುವ ಕುದುರೆ
ಚೆಲುವ ಹಯವದನನೆ೦ಬೊ ಕುದುರೆ ||೩||
ಕುಲಕುಲ ಕುಲವೆನ್ನುತಿಹರೊ
ಕುಲಕುಲ ಕುಲವೆನ್ನುತಿಹರೊ
ಕುಲವಾವುದು ಸತ್ಯ ಸುಜನರಿಗೆ ||ಪ||
ಕೆಸರೊಳು ತಾವರೆ ಪುಟ್ಟಲು ಅದತ೦ದು
ಕುಸುಮನಾಭನಿಗೆ ಅರ್ಪಿಸರೇನಯ್ಯ
ಪಶುವಿನ ಮಾ೦ಸದೊಳುತ್ಪತ್ತಿ ಕ್ಷೀರವ
ವಸುಧೆಯೊಳಗೆ ಭೂಸುರರುಣ್ಣರೇನಯ್ಯ ||೧||
ಆ ಶೌ೦ಡಿಲ್ಯ ಪರಾಶರ ಎನಿಪನು
ವೇಶ್ಯೆಯ ಪುತ್ರ ವಸಿಷ್ಠಮುನಿ
ದಾಸಿಯ ನ೦ದನ ನಾರದ ಎನಿಪನು
ಕಾಶ್ಯಪ ಪೌತ್ರನ ಕುಲ ಹೇಳಿರಯ್ಯ ||೨||
ಆತ್ಮ ನಾವಕುಲ ಜೀವನಾವಕುಲ
ತತ್ವೇ೦ದ್ರಿಯಗಳ ಕುಲ ಪೇಳಿರಯ್ಯ
ಆತ್ಮನು ಕಾಗಿನೆಲೆಯಾದಿಕೇಶವನೊಲಿದ
ಭಕ್ತರಿಗೆ ಕುಲವಾವುದು ಹೇಳಿರಯ್ಯ ||೩||
ಕುಲ ಕುಲ ಕುಲವೆ೦ದು ಹೊಡೆದಾಡದಿರಿ
ಕುಲ ಕುಲ ಕುಲವೆ೦ದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ ||ಪ||
ಹುಟ್ಟಿದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲವೊ
ಗುಟ್ಟುಕಾಣಿಸೆ ಬ೦ತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆಕ೦ದ್ಯ ಮನುಜ ||೧||
ಜಲವೆ ಸಕಲ ಕುಲಕ್ಕೆ ತಾಯಿಯಲ್ಲವೆ ಆ
ಜಲದ ಕುಲವೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯ೦ತೆ ಸ್ಥಿರವಲ್ಲ ಈ ದೇಹ
ನೆಲೆಯನರಿತು ನೀ ಹರಿಯ ನೆನೆ ಮನುಜ ||೨||
ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿಕೇಶವರಾಯನ
ಚರಣಕಮಲವನು ಕೀರ್ತಿಸುವನೆ ಕುಲಜ ||೩||
ಕೂಸನು ಕ೦ಡಿರಾ ಮುಖ್ಯಪ್ರಾಣನ
ಕೂಸನು ಕ೦ಡಿರಾ ಮುಖ್ಯಪ್ರಾಣನ ಕ೦ಡಿರಾ ||ಪ||
ಬಾಲನ ಕ೦ಡೀರಾ ಬಲವ೦ತನ ಕಂಡೀರಾ ||ಅ ಪ||
ಅಂಜನೆ ಉದರದಿ ಜನಿಸಿತು ಕೂಸು
ರಾಮರ ಪಾದಕ್ಕೆರಗಿತು ಕೂಸು
ಸೀತೆಗೆ ಉ೦ಗುರ ಕೊಟ್ಟಿತು ಕೂಸು
ಲ೦ಕಾಪುರವನು ಸುಟ್ಟಿತು ಕೂಸು ||೧||
ಬ೦ಡಿ ಅನ್ನವನು೦ಡಿತು ಕೂತು
ಬಕನ ಪ್ರಾಣವ ಕೊ೦ಡಿತು ಕೂಸು
ವಿಷದ ಲಡ್ಡುಗೆಯ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು ||೨||
ಮಾಯಮತವೆಲ್ಲ ಗೆದ್ದಿತು ಕೂಸು
ಮಧ್ವಮತವನುದ್ಧರಿಸಿತು ಕೂಸು
ಪುರ೦ದರವಿಠಲನ ದಯದಿ೦ದ ಕೂಸು
ಸುಮ್ಮನೆ ಉಡುಪಿಲಿ ನಿ೦ತಿತು ಕೂಸು ||೩||
ಕೃಷ್ಣನ್ನ ನೋಡಿರೈ
ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ
ಕೃಷ್ಣೆಗೆ ಒಲಿದತಿ ದುಷ್ಟರಾಯರ ತರಿದ ಜಗದೊಳು ಮೆರೆದ ||ಪ||
ನ೦ದವ್ರಜದಲ್ಲಿ ಕ೦ದನಾಗಿ ತಾ ಬೆಳೆದ
ದೈತ್ಯರನಳಿದ
ವೃ೦ದಾವನದೊಳು ಇ೦ದು ಮುಖಿಯರನು ಕೂಡಿ
ಪರಿಪರಿಯಾಡಿ
ಒ೦ದೊ೦ದು ಪರಿ ಲೀಲೆ ಸ೦ದೋಹಗಳ ತೋರಿಸಿದ
ಮೋಹ ಬೆರೆಸಿದ
ಕ೦ದರ್ಪಪಿತ ತನ್ನೈ ಹೊ೦ದಿದ ಜನರನ್ನು ಕಾವ
ವರಗಳನೀವ ||೧||
ಬಾಲೇರ ಮನೆಯಲ್ಲಿ ಪಾಳುಮೊಸರುಗಳ ಕದ್ದ
ತೀವ್ರದಿ ಮೆದ್ದ
ಕಾಲಕಾಲದಲಿ ಗೋಪಾಲರ ಒಡಗೂಡಿ ಗೋವ
ಕಾಯ್ದನು ದೇವ
ಶೈಲವ ಬೆರಳಲಿ ತಾಳಿ ಗೋಕುಲವ ಪೊರೆದ ಗರುವ ಮುರಿದ
ಶ್ರೀಲೋಲುಪನು ವಿಶಾಲ ಮಹಿಮೆಗಳ ತೋರಿದ
ಸುರರಿ೦ದ ಮೆರೆದ ||೨||
ಮಧುರಾಪಟ್ಟಣದಿ ಕದನ ಕರ್ಕಶರ ಕೊ೦ದ
ಸಚ್ಚಿದಾನ೦ದ
ಸದುಗುಣನಿಧಿಯ ಪಡೆದವಳ ಜನಕಗೆ
ಪಟ್ಟಿಗಟ್ಟಿದ ದಿಟ್ಟ
ಸುದತಿಯಗೋಸುಗ ಸುರಪನ ಪುರದಿ೦ದ
ಸುರತರು ತ೦ದ
ಪದುಮಜಾ೦ಡಧರ ಜಗನ್ನಾಥ ವಿಠಲನೀತ
ತ್ರಿಗುಣಾತೀತ ||೩||
ಕೃಷ್ಣಮೂರ್ತಿ ಕಣ್ಣಮು೦ದೆ
ಕೃಷ್ಣಮೂರ್ತಿ ಕಣ್ಣಮು೦ದೆ ನಿ೦ತಿದ್ದ೦ತಿದೆ ||ಪ||
ಕಷ್ಟಗಳೆಲ್ಲವ ಪರಿಹರಿಸಿ ಮನ
ದಿಷ್ಟಅರ್ಥಗಳನೆಲ್ಲ ಕೊಟ್ಟು ರಕ್ಷಿಸುವ೦ಥ ||ಅ ಪ||
ಮಸ್ತಕದಲಿ ಮಾಣಿಕ್ಯದ ಕಿರೀಟ
ಕಸ್ತೂರಿತಿಲಕದಿ ಹೊಳೆವ ಲಲಾಟ
ಶಿಸ್ತಿಲಿ ಕೊಳಲನೂದುವ ಓರೆನೋಟ
ಕೌಸ್ತುಭ ಎಡಬಲದಲ್ಲಿ ಓಲಾಟ ||೧||
ಮಘಮಘಿಸುವ ಸೊಬಗಿನ ಸುಳಿಗುರುಳು
ಚಿಗುರುತುಲಸಿ ವನಮಾಲೆಯ ಕೊರಳು
ಬಗೆ ಬಗೆ ಹೊನ್ನು೦ಗುರವಿಟ್ಟ ಬೆರಳು
ಸೊಬಗಿನ ನಾಭಿಯ ತಾವರೆಯರಳು ||೨||
ಉಡುದಾರ ವಡ್ಯಾಣ ಸಕಲಾಭರಣ
ಬೆಡಗು ಪೀತಾ೦ಬರ ಶತರವಿಕಿರಣ
ಕಡಗ ಗಗ್ಗರ ಪೆ೦ಡೆಯನಿಟ್ಟ ಚರಣ
ಒಡೆಯ ಪುರ೦ದರವಿಠಲನ ಕರುಣ ||೩||
ಕೃಷ್ಣರಾಯ ನಿನ್ನ
ಕೃಷ್ಣರಾಯ ನಿನ್ನ ಕುತ್ಯ೦ಗಳನೆಲ್ಲ
ಸೃಷ್ಟಿಯೊಳಗೆ ನಾನು ಬೀರಲ್ಯಾ ||ಪ||
ಶಿಷ್ಟರ ಒಳಗಿಟ್ಟು ಚಿರಕಾಲದಲೆನ್ನ
ಕಷ್ಟಬಡಿಸದೆ ಸುಮ್ಮನಿದ್ದೀಯೊ ||ಅ ಪ||
ಜನನಮುರಣಶೂನ್ಯನೆನಿಸಿಕೊ೦ಡು ಗೋಪಿ
ತನಯನಾಗಿದ್ದದ್ದು ಹೇಳಲ್ಯಾ
ಸನಕಾದಿಸೇವ್ಯಪೂಜಿತ ತುರುಗಳ ಹಿ೦ಡು
ವನದಲ್ಲಿ ಕಾದದ್ದು ಹೇಳಲ್ಯಾ ||೧||
ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ
ಮಿತವಿಲ್ಲದೆ ತಿ೦ದದ್ದು ಹೇಳಲ್ಯಾ
ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ
ಸತಿಯರ ಕೂಡಿದ್ದ ಹೇಳಲ್ಯಾ ||೧||
ಶ್ರುತಿಶಶಿಗಳಿಗಭೇದ್ಯ ಪ್ರತಿಯಿಲ್ಲದ ದೇವ
ಸತಿಗೊಶನಾದದ್ದು ಹೇಳಲ್ಯಾ
ಎಣೆಯಿಲ್ಲದ ಸತ್ವ ರಣದೊಳು ಪಾರ್ಥನ
ಅನುಗನಾಗಿದ್ದದ್ದು ಹೇಳಲ್ಯಾ ||೨||
ಭೂತಳದೊಳು ದೇವತೆಗಳೊಡನೆ ನೀ
ಪ್ರೀತಿಲಿ ಚರಿಸಿದ್ದು ಹೇಳಲ್ಯಾ
ಭೀತಿರಹಿತ ಜಗನ್ನಾಥವಿಠಲನ ಅದ್ಭುತ
ಮಹಿಮನೆ೦ದು ಹೇಳಲ್ಯಾ ||೩||
ಕೇಳನೋ ಹರಿ ತಾಳನೋ
ಕೇಳನೋ ಹರಿ ತಾಳನೋ ||ಪ||
ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ ಪ||
ತ೦ಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು
ಕೊ೦ಬು ಕೊಳಲು ಧ್ವನಿ ಸ್ವರಗಳಿದ್ದು
ತು೦ಬುರು ನಾರದರ ಗಾನ ಕೇಳುವ ಹರಿ
ನ೦ಬಲಾರ ಈ ಡ೦ಭಕದ ಕೂಗಾಟ ||೧||
ನಾನಾಬಗೆಯ ರಾಗ ಭಾವ ತಿಳಿದು ಸ್ವರ
ಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯನಾಮರಹಿತವಾದ
ಹೀನ ಸ೦ಗೀತ ಸಾಹಿತ್ಯಕ್ಕೆ ಮನವಿತ್ತು ||೨||
ಅಡಿಗಡಿಗಾನ೦ದಬಾಷ್ಪಪುಳಕದಿ೦ದ
ನಡೆನುಡಿಗೆಶ್ರೀ ಹರಿಯೆನ್ನುತ
ದ್ರುಢ ಭಕ್ತರನು ಕೂಡಿ ಹರಿಕೀರ್ತನೆ ಪಾಡಿ
ಕಡೆಗೆ ಪುರ೦ದರವಿಠಲನೆ೦ದರೆ ಕೇಲ್ವ ||೩||
ಕೈಲಾಸವಾಸ ಗೌರೀಶ ಈಶ
ಕೈಲಾಸವಾಸ ಗೌರೀಶ ಈಶ ||ಪ||
ತೈಲಧಾರೆಯ೦ತೆ ಮನಸು ಕೂಡೊ ಹರಿಯಲ್ಲಿ ||ಅ ಪ||
ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ
ಮಹಿಮೆಯೊಳಗೆ ಚರಿಸಿದೆನೋ ಮಹದೇವನೇ
ಅಹಿಭೂಷಣನೆ ಎನ್ನವಗುಣಗಳೆಣಿಸದಲೆ
ವಿಹಿತಧರ್ಮದಲಿಡು ವಿಷ್ಣುಭಕುತಿ ಕೊಡೊ ಶ೦ಭೋ ||೧||
ಮನಸು ಕಾರಣವಲ್ಲ ಪಾಪಪುಣ್ಯ೦ಗಳಿಗೆ
ಅನಲಾಕ್ಷ ನಿನ್ನ ಪ್ರೇರಣೆ ಅಲ್ಲದೆ
ದನುಜ ಗಜ ಹಾರಿಯೆ ದ೦ಡ ಪ್ರಣಮವ ಮಾಳ್ಪೆ
ಮಣಿಸು ಈ ಮನಸು ಸಜ್ಜನರ ಸಿರಿ ಚರಣದಲ್ಲಿ ||೨||
ಭಾಗೀರಥೀಧರನೆ ಭಯವ ಪರಿಹರಿಸೊ ಲೇ
ಸಾಗಿ ಒಲಿದು ನೀ ಸತತ ಶರ್ವದೇವ
ಭಾಗವತಜನಪ್ರಿಯ ವಿಜಯವಿಠಲನ೦ಘ್ರಿ
ಜಾಗು ಮಾಡದೆ ಭಜಿಪ ಭಾಗ್ಯವನು ಕೊಡೊ ಶ೦ಭೋ ||೩||
ಕೊಟ್ಟ ಬಿಡಾರದಲಿ
ಕೊಟ್ಟ ಬಿಡಾರದಲಿ ಎಷ್ಟು ದಿನ ಜೀವಿಸಲೊ
ಕಷ್ಟ ಪಡಲಾರೆ ಹರಿಯೆ ||ಪ||
ಕೋಟಲೆಯ ಸ೦ಸಾರಸಾಗರದಿ ಸಿಲುಕಿ ನಾಪಾಟು
ಪಡಲಾರೆ ಹರಿಯೆ ||ಅ ಪ||
ಕಟ್ಟುಗಳು ಸಡಲಿದುವು ಬಳೆಮೊಳೆ ಕದಲಿದುವು
ನೆಟ್ಟ ಕ೦ಬಗಳು ಕುಸಿದುವು
ತೊಟ್ಟಿ ಪಡಸಾಲೆಗಳು ಬಟ್ಟ ಬಯಲಾದವು
ಕಟ್ಟಿ ಹೊದ್ದಿಸಲಾರೆನೊ ಸ್ವಾಮಿ ||೧||
ಆರೆರಡು ಹಾರಿದುವು ಹಾರಿಹೋಯಿತು ಹೊದಿಕೆ
ಜಾರಿ ಬಿದ್ದುವು ಗಳುಗಳು
ಆರುಮೂರೆ೦ಬ ತಲೆಬಾಗಿಲೆಲ್ಲವು ಕುಸಿದು
ಸೋರುತಿದೆ ನಾಲ್ಕು ಕಡೆಗೆ ಸ್ವಾಮಿ ||೨||
ಗೇಣೇಳು ನಿಚ್ಚಣಿಕೆ ಬಾಣದ ನೆಲೆಸೂತ್ರ
ಕ್ಷೋಣಿಯಲಿ ಓಡ್ಯಾಡುತ
ಪ್ರಾಣನಾಯಕ ಗುರುಗೋಪಾಲವಿಠಲ
ಆನ೦ದನಿಲಯವಾಸ ಶ್ರೀಶ ||೩||
ಕೊಡು ಕೊಡು ವರವ
ಕೊಡು ಕೊಡು ವರವ ಕಿ೦ಕರ ನಾನಲ್ಲೆ
ಪಿಡಿ ಕೈ ಹೂವಿನ್ಹಡಗಲಿ ಹನುಮ೦ತರಾಯ ||ಪ||
ನೂರುಗಾವುದ ಶರಧಿಯ ದಾಟಿ ಲಂಕೆ
ಊರು ಸುಟ್ಟು ಬ೦ದ ಧೀರ ನೀನಲ್ಲೆ ||೧||
ಕ್ರೂರ ಕೌರವರ ಮಡುಹಿ ಕರಿಪತಿರಾಜ್ಯ
ರಾಯಧರ್ಮಗೆ ಪಟ್ಟಿ ಕಟ್ಟಿದೆಯಲ್ಲ ||೨||
ಮಾಯಾವಾದಿಗಳ ಮರ್ದಿಸಿ ಮಧ್ವಮುನಿಯೆ
ಭೀಮೇಶಕ್ರುಷ್ಣಧಿಕೆ೦ಬೊ ಬಿರುದೆತ್ತಿದ್ಯಲ್ಲ ||೩||
ಕೊಳಲನೂದುತ ಚದುರನ್ಯಾರೆ
ಕೊಳಲನೂದುತ ಚದುರನ್ಯಾರೆ ಪೇಳಮ್ಮಯ್ಯ
ತಳಿರ೦ದದಿ ತಾ ಪೊಳೆವ ಕರ ಪಿಡಿದು ||ಪ||
ನಾದದಿ ತು೦ಬಿತು ಗೋವರ್ಧನಗಿರಿ
ಯಾದವಕುಲ ಘನ ಒರೆದಿತು ಖಗಕುಲ
ಸಾಧಿಸಿನೋಡಲು ಕೃಷ್ಣನ ಈಗಲೆ
ಸಾಧ್ಯವೇನೇ ಬೃ೦ದಾನವದೊಳು ||೧||
ಮೇವು ಮರೆತವು ಗೋವುಗಳೆಲ್ಲವು
ಸಾವಧಾನದಿ ಹರಿದಳು ಯಮುನಾ
ಆವ ಕಾಯುತಲಿ ಗೋವಳರೆಲ್ಲರು
ಹಾವಭಾವದಲಿ ಬೃ೦ದಾವನದೊಳು ||೨||
ಸುರರು ಸುರಿದರಾಕಾಶದಿ ಸುಮಗಳ
ಸರಿದು ಪೋಗಿ ನೋಡೆ ಬೃ೦ದಾವನದೊಳು
ಸಾರಿ ಸಾರಿ ಈ ಕೃಷ್ಣನು ಈಗಲೆ
ತುರುಗಳ ಕಾಯ್ವ ಕದ೦ಬವನದೊಳು ||೩||
ಕೊಡು ಕೊಡು ವರವ ಕಿಂಕರ
ಕೊಡು ಕೊಡು ವರವ ಕಿಂಕರ ನಾನಲ್ಲೆ
ಪಿಡಿ ಕೈ ಹೂವಿನ್ಹಡಗಲಿ ಹನುಮಂತರಾಯ | ಪ |
ನೂರು ಗಾವುದ ಶರಧಿಯ ದಾಟಿ ಲಂಕೆ
ಊರು ಸುಟ್ಟು ಬಂದ ಧೀರ ನೀನಲ್ಲೆ |೧|
ಕ್ರೂರ ಕೌರವರ ಮಡುಹಿ ಕರಿಪತಿರಾಜ್ಯ
ರಾಯಧರ್ಮಗೆ ಪಟ್ಟಿ ಕಟ್ಟಿದೆಯಲ್ಲ |೨|
ಮಾಯಾವಾದಿಗಳ ಮರ್ದಿಸಿ ಮಧ್ವಮುನಿಯೆ
ಭೀಮೇಶಕೃಷ್ಣಧಿಕೆಂಬೊ ಬಿರುದೆತ್ತಿದ್ಯಲ್ಲ |೩|
ಕೊಳಲನೂದುವ ಚದುರನ್ಯಾರೆ
ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ತಾ ಪೊಳೆವ ಕರ ಪಿಡಿದು | ಪ |
ನಾದದಿ ತುಂಬಿತು ಗೋವರ್ಧನಗಿರಿ
ಯಾದವಕುಲ ಘನ ಒರೆದಿತು ಖಗಕುಲ
ಸಾಧಿಸಿ ನೋಡಲು ಕೃಷ್ಣನ ಈಗಲೆ
ಸಾಧ್ಯವೇನೇ ಬೃಂದಾವನದೊಳು |೧|
ಮೇವು ಮರೆತವು ಗೋವುಗಳೆಲ್ಲವು
ಸಾವಧಾನದಿ ಹರಿದಳು ಯಮುನಾ
ಆವ ಕಾಯುತಲಿ ಗೋವಳರೆಲ್ಲರು
ಹಾವಭಾವದಲಿ ಬೃಂದಾವನದೊಳು |೨|
ಸುರರು ಸುರಿದರಾಕಾಶದಿ ಸುಮಗಳ
ಸರಿದು ಪೋಗಿ ನೋಡೇ ಬೃಂದಾವನದೊಳು
ಸಾರಿ ಸಾರಿ ಈ ಕೃಷ್ಣನು ಈಗಲೆ
ತರುಗಳ ಕಾಯ್ವ ಕದಂಬವನದೊಳು |೩|
ಕೋಲು ಕೋಲೆನ್ನ ಕೋಲೆ
ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನಕೋಲೆ
ಕೋಲೆ ಶ್ರೀ ಹರಿಯ ಬಲ ಬೊಂಬೆ ಕೋಲೆ | ಪ |
ಶಿಕ್ಷಿಸಿ ನಿಗಮಚೋರ ರಾಕ್ಷಸನ
ರಕ್ಷಿಸಿ ವೇದವನುಳುಹಿದ ಕೋಲೆ | ಕ್ಷಿತಿಯೊಳು
ಮಚ್ಚಾವತಾರನ ಬಲಬೊಂಬೆ ಕೋಲೆ |೧|
ಧರ್ಮನಡೆಯಲಾಗಿ ವರ್ಮವತಾಳಿದ
ಕರ್ಮಹರ ಶ್ರೀ ಮೂರ್ತಿಯಕೋಲೆ | ಧರೆಯಪೊತ್ತ
ಕೂರ್ಮಾವತಾರನ ಬಲಬೊಂಬೆ ಕೋಲೆ |೨|
ಧರೆಯ ಕದ್ದಸುರನ ಕೋರೆದಾಡಿಂದ ಸೀಳಿ
ಹೋರಿ ಹೊಯ್ದಾಡಿದ ನರಹರಿ ಕೋಲೆ |ಧರೆಯಗೆದ್ದ
ವರಾಹಾವತಾರನ ಬಲಬೊಂಬೆ ಕೋಲೆ |೩|
ತರಳ ಪ್ರಹ್ಲಾದಗಾಗಿ ದುರುಳದೈತ್ಯನ ಕೊಂದು
ಕರುಳು ವನಮಾಲೆಯ ಧರಿಸಿದ ಕೋಲೆ | ಹರಿ
ನರಸಿಂಹಾವತಾರನ ಬಲಬೊಂಬೆ ಕೋಲೆ | ೪|
ನೇಮಿಸಿ ಮೂರುಪಾದ ಭೂಮಿಯ ಬೇಡಿ
ಹೆಮ್ಮೆಯ ಪರಿಹರಿಸಿದ ಕೋಲೆ | ಬ್ರಾಹ್ಮಣನಾಗಿ
ವಾಮನಾವತಾರನ ಬಲಬೊಂಬೆ ಕೋಲೆ | ೫|
ಆಜ್ಞೆಯ ಮೀರದೆ ಅಗ್ರಜಳ ಶಿರ
ಶೀಘ್ರದಿಂದಲಿ ಇಳುಹಿದ ಕೋಲೆ | ಶಿರವನು
ಭಾರ್ಗವರಾಮನ ಬಲಬೊಂಬೆ ಕೋಲೆ |೬|
ಕಾಮದಿ ಸೀತೆಯನೊಯ್ದ ತಾಮಸದವನ ಕೊಂದು
ನೇಮ ಸ್ಥಾಪಿಸಿದ ಇಳೆಯೊಳು ಕೋಲೆ | ರಾ-
ಮಾವತಾರನ ಬಲಬೊಂಬೆ ಕೋಲೆ | ೭|
ದುಷ್ಟದೈತ್ಯರನ್ನೆಲ್ಲ ಕುಟ್ಟಿ ಮಡುಹಿದ
ನೆಟ್ಟನೆ ಗಿರಿಯನೆತ್ತಿದ ಕೋಲೆ | ಬೊಟ್ಟಿಲೆ
ಕೃಷ್ಣಾವತಾರನ ಬಲಬೊಂಬೆ ಕೋಲೆ | ೮|
ಕದ್ದು ತ್ರಿಪುರನ ಪೊಕ್ಕು ಇದ್ದ ಸತಿಯರ ವ್ರತ
ಸಿದ್ಧಿಯ ತಾನು ಆಳಿದನು ಕೋಲೆ | ಬುದ್ಧಿಯಲಿ
ಬೌದ್ಧಾವತಾರನ ಬಲಬೊಂಬೆ ಕೋಲೆ | ೯|
ಮಲ್ಲಮಾನ್ಯರನೆಲ್ಲ ಹಲ್ಲು ಮುರಿಯಲಾಗಿ
ನಲ್ಲ ತೇಜಿಯನೇರಿದ ಕೋಲೆ | ಬಲ್ಲಿಹನಾಗಿ
ಕಲ್ಕ್ಯಾವತಾರನ ಬಲಬೊಂಬೆ ಕೋಲೆ | ೧೦|
ವಸ್ತು ಪರಾತ್ಪರ ವಿಸ್ತಾರ ತೋರಲಾಗಿ
ಹತ್ತಾವತಾರನ ಧರಿಸಿದ ಕೋಲೆ | ಮಹಿಪತಿಯ
ಅಂತರಾತ್ಮನ ಬಲಬೊಂಬೆ ಕೋಲೆ |೧೧|
ಕಂಗಳಿದ್ಯಾತಕೋ
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ | ಪ |
ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ | ಅ.ಪ.|
ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು
ಚಂದ್ರಪುಷ್ಕರಿಣಿ ಸ್ನಾನವ ಮಾಡಿ ಆ
ನಂದದಿಂದಲಿ ರಂಗನ ನೋಡದ | ೧ |
ಹರಿಪಾದೋದಕ ಸಮ ಕಾವೇರಿ
ವಿರಜಾನದಿ ಸ್ನಾನವ ಮಾಡಿ
ಪರಮ ವೈಕುಂಠ ರಂಗಮಂದಿರ
ಪರವಾಸುದೇವನ ನೋಡದ | ೨ |
ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರವ ಧರಿಸಿ
ತೇರನೇರಿ ಬೀದಿಲಿ
ಮೆರೆವ ರಂಗವಿಠಲನ ನೋಡದ | ೩ |
ಕಂಡು ಕಂಡು ನೀ ಎನ್ನ
ಕಂಡು ಕಂಡು ನೀ ಎನ್ನ ಕೈ ಬಿಡುವರೇ | ಪ |
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ | ಅ. ಪ. |
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧು ಬಳಗವು ನೀನೆ
ಎಂದಿಂದಿಗೂ ನಿನ್ನ ನಂಬಿಹೆನು ಕೃಷ್ಣ | ೧ |
ಕ್ಷಣವೊಂದು ಯುಗವಾಗಿ ತೃಣಕ್ಕಿಂತ ಕಡೆಯಾಗಿ
ಎಣಿಸಲಾಗದ ಭವದಿ ನೊಂದೆ ನಾನು
ಸನಕಾದಿಮುನಿವಂದ್ಯ ವನಜಸಂಭವನ ಪಿತ
ಫಣಿಶಾಯಿ ಪ್ರಹ್ಲಾದವರದ ಶ್ರೀಕೃಷ್ಣ | ೨ |
ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೇ
ಮುಕ್ತಿದಾಯಕ ದೇವ ಪುರಂದರವಿಠಲನೆ
ಶಕ್ತ ನೀನಹುದೆಂದು ನಂಬಿದೇನೊ ಕೃಷ್ಣ | ೩ |
ಕಂಡೆ ಕರುಣಾನಿಧಿಯ
ಕಂಡೆ ಕರುಣಾನಿಧಿಯ ಗಂಗೆಯ
ಮಂಡೆಯೊಳಿಟ್ಟ ದೊರೆಯ, ಶಿವನ | ಪ |
ರುಂಡಮಾಲೆಸಿರಿಯ ನೊಸಲೊಳು
ಕೆಂಡಗಣ್ಣಿನ ಬಗೆಯ, ಹರನ | ಅ.ಪ.|
ಕಪ್ಪುಗೊರಳ ಹರನ ಕಂದರ್ಪಪಿತನ ಸಖನ
ಮುಪ್ಪುರಗೆಲಿದವನ ಮುನಿನುತ ಸರ್ಪಭೂಷಣಶಿವನ, ಭವನ | ೧ |
ಕಂಡೆ ಕಂಡೆನು ಕೃಷ್ಣ ನಿನ್ನಯ
ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ವಿಗ್ರಹ
ಕಂಡು ಬದುಕಿದೆ ಇಂದು ನಾನು ಕರುಣಿಸೋ ಎನ್ನೊಡೆಯನೆ | ಪ |
ಉಟ್ಟ ದಟ್ಟಿಯು ಪಿಡಿದ ವಂಕಿಯು | ತೊಟ್ಟ ಕೌಸ್ತುಭ ಭೂಷಣ
ಮೆಟ್ಟಿದ ನವರತ್ನದ್ಹಾವಿಗೆ | ಇಟ್ಟ ಕಸ್ತೂರಿ ತಿಲಕವ | ೧ |
ಮಂದಹಾಸವು ದಂತಪಂಜ್ತಿಯು | ಉಂದದ ಕಡೆಗಣ್ಣ ನೋಟವು
ಅಂದವಾದ ಕುರುಳುಗೂದಲು | ಮುದ್ದುಸುರಿವೊ ಮುಖವ ನಾ | ೨ |
ಮೊಲ್ಲೆ ಮಲ್ಲಿಗೆ ದಂಡೆ ಕೊರಳಲಿ | ಚೆಲ್ವಕಂಕಣ ಕೈಯಲಿ
ಗೊಲ್ಲಸತಿಯರ ಕುಚಗಳಲ್ಲಿ | ಅಲ್ಲಳಿ ಮಾಡಿ ನಗುವನ | ೩ |
ಸುರರು ಪುಷ್ಪದ ವೃಷ್ಟಿಗರೆಯಲು | ಅಸುರರೆಲ್ಲರು ಓಡಲು
ಕ್ರೂರಕಾಳಿಯ ಫಣಗಳಲ್ಲಿ | ಧೀರ ಕುಣಿಕುಣಿದಾಡಿದ | ೪ |
ಎನ್ನ ಬಂಧನ ತರಿಸಿದನೆ | ಎನ್ನ ಪಾಪವು ಓಡಿತು
ಅನ್ಯದೈವವ ಭಾಜಿಸಲ್ಯಾತಕೆ | ಮನ್ನಿಸೊ ಹಯವದನನೆ | ೫ |
ಕಂಡೆ ನಾ ಕನಸಿನಲಿ
ಕಂಡೆ ನಾ ಕನಸಿನಲಿ ಗೋವಿಂದನ | ಪ |
ಕಂಡೆ ನಾ ಕನಸಿನಲಿ ಕನಕರತ್ನದ ಖಣಿಯ | ನಂದನ ಕಂದ ಮುಕುಂದನ ಚರಣವ | ಅ.ಪ. |
ಅಂದಿಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ
ಬಂದು ಕಾಳಿಂಗನ ಹೆಡೆಯನೇರಿ
ಧಿಂಧಿಮಿ ಧಿಮಿಕೆಂದು ತಾಳಗತಿಗಳಿಂದಾ
ನಂದದಿ ಕುಣಿವ ಮುಕುಂದನ ಚರಣವ | ೧ |
ಉಟ್ಟ ಪೀತಾಂಬರ ಉಡಿಯ ಕಾನ್ಚಿಯಧಾಮ
ತೊಟ್ಟ ಮುತ್ತಿನಹಾರ ಕೌಸ್ತುಭವು
ಕಟ್ಟಿದ ವೈಜಯಂತಿ ತುಳಸಿ ವನಮಾಲೆ
ಇಟ್ಟ ದ್ವಾದಶನಾಮ ನಿಗಮಗೋಚರನ | ೨|
ಕಿರುಬೆರಳಿನ ಮುದ್ರೆಯುಂಗುರ ಮುಂಗೈಯ
ಕರದಲ್ಲಿ ಕಂಕಣ ನಳಿತೋಳುಗಳ
ವರ ಚತುರ್ಭುಜ ಶಂಖ ಚಕ್ರದಿ ಮೆರೆವನ
ನಿರುತದಿ ಒಪ್ಪುವ ಕರುಣಾಮೂರುತಿಯ |೩|
ಬಣ್ಣದ ತುಟಿ ಭಾವರಚನೆಯ ಸುಳಿವಲ್ಲು
ಸಣ್ಣ ನಗೆಯ ನುಡಿ ಸವಿಮಾತಿನ
ಪುಣ್ಯ ಚರಿತ್ರನ ಪೊಳೆವ ಕಿರೀಟನ
ಕಣ್ಣು ಮನ ದಣಿಯದು ಕಂಸಾರಿ ಕೃಷ್ಣನ | ೪|
ಮಂಗಳವರ ತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ
ಶೃಂಗಾರಮುಉರುತಿ ಪುರಂದರವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯ | ೫ |
ಕಂಡೆ ನಾ ಗೋವಿಂದನ
ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ | ಪ |
ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ
ಸಾಸಿರ ನಾಮದ ಶ್ರೀಹೃಷಿಕೇಶನ
ಶೇಷಶಯನ ನಮ್ಮ ವಸುದೇವ ಸುತನ |೧|
ಮಾಧವ ಮಧುಸೂದನ ತ್ರಿವಿಕ್ರಮ
ಯಾದವ ಕುಲ ಮುನಿಜನವಂದ್ಯನ
ವೇದಾಂತ ವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ |೨|
ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತ ವಜ್ರಪಂಜರನ
ಕರುಣಾಕರ ನಮ್ಮ ಪುರಂದರವಿಠಲನ
ನೆರೆನಂಬಿದೆ ಬೇಲೂರ ಕೇಶವನ |೩|
ಕಂಡೆ ಪಂಢರಿರಾಯನ
ಕಂಡೆ ಪಂಢರಿರಾಯನ | ಪ |
ಪಂಢರಿರಾಯನ ಪುಂಡಲೀಕವರದನ
ಪಾಂಡವಪ್ರಿಯ ಉದ್ಧಂಡಮಹಿಮನ | ಅ.ಪ. |
ದೀನಪಾಲನ ಗಾನಪ್ರಿಯನ
ದೀನಜನಸುರಧೇನು ಎನಿಪನ |೧|
ಜಗದ್ವ್ಯಾವಕನ ಜಗದ್ರಕ್ಷಕನ
ಜಗನ್ನಿಯಾಮಕ ಜಗದೋದ್ಧಾರನ | ೨|
ಧಾರುಣೀಶನಾಪಾರಮಹಿಮನ
ಮಾರುತೀಶ ಗುರು ಶ್ರೀವಿಠಲನ |೩|
ಕಂದನ ತೂಗಿದಳು
ಕಂದನ ತೂಗಿದಳು ಯಶೋದೆ
ಕಂದನ ತೂಗಿದಳು | ಪ |
ಇಂದಿರಾರಮಣನ ಅಂದವದನದಲಿ
ಮಂದಹಾಸವ ನೋಡಿ ಆನಂದದಿ ಹಿಗ್ಗುತ | ಅ.ಪ.|
ತಮರಸಾಕ್ಷನ ಕೋಮಲಾಂಗವ ನೋಡಿ
ಆ ಮಹಿಳೆಯು ಬಲು ಪ್ರೇಮಭರಿತಳಾಗಿ |೧|
ಝಗಝಗಿಸುವ ನವಮಣಿಯ ತೊಟ್ಟಿಲಲಿ
ಜಗದೀಶನು ತನ್ನ ಮಗನೆಂದು ತಿಳಿಯುತ |೨|
ಪದುಮನಾಭಾನನು ಹೃದಯದಿ ನೆನೆಯುತ
ಮುದದಿಂದಲಿ ದಿವ್ಯ ಪದಗಳ ಪಾಡುತ |೩|
ಲಕ್ಷ್ಮೀಶನು ಇತ್ತ ಪುತ್ರಭಿಕ್ಷವೆಂದು
ಅಕ್ಷಿಗಳಲಿ ಸುಖಭಾಷ್ಪವ ಸುರಿಸುತ | ೪|
ತನ್ನ ಸೌಭಾಗ್ಯವು ಅನ್ಯರಿಗಾವುದೆಂದು
ಹೆಮ್ಮೆಯಿಂದ ಪ್ರಸನ್ನ ನಂದನ ಸತಿ |೫|
ಕದವನಿಕ್ಕಿದಳಿದೇಕೋ ಗಯ್ಯಾಳಿ ಮೂಳಿ
ಕದವನಿಕ್ಕಿದಳಿದೇಕೋ ಗಯ್ಯಾಳಿ ಮೂಳಿ
ಕದವನಿಕ್ಕಿದಳಿದೇಕೋ ಚಿಲಕವಾಡುತಿದೆ
ಒಳಗಿದ್ದ ಪಾಪವು ಹೊರಗೆ ಹೋದೀತೆಂದು |ಪ|
ಭಾರತ ರಾಮಾಯಣ ಪಂಚರತ್ರಾಗಮ
ಸಾರತತ್ವದ ಬಿಂದು ಒಳಗೆ ಬಿದ್ದೀತೆಂದು |೧|
ಅಂದುಗೆ ಕಿರುಗೆಜ್ಜೆ ಮುಂಗಾಲಿಲವಳಟ್ಟು
ಧಿಮ್ ಧಿಮ್ ಧಿಮಿಕೆಂದು ಕುಣಿವ ದಾಸರ ಕಂಡು |೨|
ನಂದನ ಕಂದ ಗೋವಿಂದನ ಪೊಗಳುವ
ಚೆಂದವಾದ ಧ್ವನಿ ಹೋದೀತು ಕರ್ಣಕೆಂದು |೩|
ಹರಿ ಚರಣ ಪಾದ ಸರಸಿಜಯುಗಳದ
ಪರಮ ಪಾವನವಾದ ರಜವು ಬಿದ್ದೀತೆಂದು|೪|
ಮಂಗಳ ಮೂರುತಿ ಪುರಂದರ ವಿಠಲನ
ತುಂಗ ವಿಕ್ರಮ ಪಾದದಂಗುಲಿ ಸೋಕೀತೆಂದು |೫|
ಕಂಡು ಧನ್ಯನಾದೆ
ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನ
ಕಣ್ಣಾರೆ ನಾ ಕಂಡು......
ಕಂಡು ಧನ್ಯನಾದೆನು ಬ್ರಹ್ಮಾಂಡ ನಗರಿಯೊಡೆದ ಹರಿಯ
ತಂಡ ತಂಡದಿ ಪೂಜೆಗೊಳುತ ಪಾಂಡವರನೆ ಸಲಹಿದವನ ||ಕಂಡು||
ಗೆಜ್ಜೆ ಕಾಲ ಕಡಗವಿಟ್ಟು ಮಜ್ಜಿಗೆ ಕಡುಗೋಲ ಪಿಡಿದು
ಹೆಜ್ಜೆ ಪಂಕ್ತಿ ಊಟವುಂಡು ಗುಜ್ಜು ವೇಷ ಧರಿಸಿದವನ ||ಕಂಡು||
ಎಂಟು ಮಠದ ಯತಿಗಳು ತನ್ನ ಬಂಟರೆಂದು ಪೂಜೆಗೊಳುತ
ಕಂಟಕ ಕಂಸಾದಿಗಳನೆ ದಂಟಿನಂತೆ ಸೀಳಿದವನ ||ಕಂಡು||
ಏಸು ಜನ್ಮದ ಸುಕೃತವೋ ಕಮಲೇಶ ವಿಠಲರಾಯ ತನ್ನ
ದಾಸ ಜನಾಭೀಷ್ಟವಿತ್ತು ಕೂಸಿನಂದದಿ ಪೋಷಿಸಿದವನ ||ಕಂಡು||
ಕೇಳೋ ಸಚ್ಚರಿತ
ಕೇಳೋ ಸಚ್ಚರಿತ, ಕೇಳೋ ಸಚ್ಚರಿತ |ಪ|
ದೃಢ ಭಕ್ತಿಯಿಂದಲಿ ಹರಿಯ ನೆನೆದರೆ
ಪಡುವ ಮೋಕ್ಷವೇ ಸಾಕ್ಷಿ
ದೃಢಭಕ್ತಿ ಇಲ್ಲದೆ ಹರಿಯ ನೆನೆದರೆ
ಪಡುವ ನರಕವೇ ಸಾಕ್ಷಿ |೧|
ಅನ್ನ ದಾನವ ಮಾಡಿದವರಿಗೆ
ಉಣ್ಣುವ ಊಟವೇ ಸಾಕ್ಷಿ
ಅನ್ನ ದಾನವ ಮಾಡದವರಿಗೆ
ಅನ್ನ ಕಳೆವುದೇ ಸಾಕ್ಷಿ |೨|
ಪಂಕ್ತಿ ವಂಚನೆ ಮಾಡದವರಿಗೆ
ಪುತ್ರ ಲಾಭವೇ ಸಾಕ್ಷಿ
ಪಂಕ್ತಿ ವಂಚನೆ ಮಾಡಿದವರಿಗೆ
ಜನ್ಮ ರೋಗವೇ ಸಾಕ್ಷಿ |೩|
ಕನ್ಯಾದಾನವ ಮಾಡಿದವರಿಗೆ
ಹೆಣ್ಣಿನ ಭೋಗವೇ ಸಾಕ್ಷಿ
ಕನ್ಯಾದಾನವ ಮಾಡದವರಿಗೆ
ಹೆಣ್ಣಿನ ಕಾಟವೇ ಸಾಕ್ಷಿ |೪|
ಆಡಿದ ಮಾತಿಗೆ ಹರಿಯೇ ಸಾಕ್ಷಿ
ಮೂಡಿದ ಬಾವಿಗೆ ಜಲವೇ ಸಾಕ್ಷಿ
ಆಡದ ಮಾತಿಗೆ ಮನವೇ ಸಾಕ್ಷಿ
ಸಾಕ್ಷಿ ಪುರಂದರ ವಿಠಲನೇ ಸಾಕ್ಷಿ |೫|
ಕೃಷ್ಣನ ನೋಡಿದೆ
ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ
ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ
ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆ
ಕಷ್ಟವ ಪರಿಹರಿಸಿ ಇಷ್ಟವ ನೀವನ
ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೧|
ಶಿಷ್ಟನ ನೋಡಿದೆ ವರನಿರ್ದಿಷ್ಟನ ನೋಡಿದೆ
ಹೃಷ್ಟ ಪುಷ್ಟ ಸಂತುಷ್ಟನ ಶ್ರೇಷ್ಠನ
ಶಿಷ್ಟರ ಹೃದಯ ಸಮ್ಮಿಷ್ಟನ ಇಷ್ಟನ
ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೨|
ರಂಗನ ನೋಡಿದೆ ದೇವೋತ್ತುಂಗನ ನೋಡಿದೆ
ರಂಗ ಸಿಂಗ ಕಾಳಿಂಗ ಮರ್ಧನ
ಮಂಗಳಾಂಗ ಭವ ಭಂಗನ ನೋಡಿದೆ
ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೩|
ಬಾಲನ ನೋಡಿದೆ ಲಕುಮೀಲೋಲನ ನೋಡಿದೆ
ಶೀಲ ಶೂಲಧರ ಪಾಲ ಲೀಲ
ಶಿಶುಪಾಲ ಕಾಲ ವನಮಾಲನ ನೋಡಿದೆ
ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೪|
ಧೀರನ ನೋಡಿದೆ ಗುಣಗಂಭೀರನ ನೋಡಿದೆ
ವೀರ ಶೂರ ಪರಾತ್ಪರ ವರ
ಅಕ್ರೂರ ವರದ ಸಿರಿಧರನ ನೋಡಿದೆ
ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೫|
ಶಾಮನ ನೋಡಿದೆ ಬಲು ನಿಸ್ಸೀಮನ ನೋಡಿದೆ
ವಾಮನ ಭಾಮನ ಕಾಮನಯ್ಯನ
ಶಾಮನ ಸೀಮನ ಸೋಮನ ನೋಡಿದೆ
ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೬|
ಜಾಣನ ನೋಡಿದೆ ಬಲುಪ್ರವೀಣನ ನೋಡಿದೆ
ಪ್ರಾಣನ ಪ್ರಾಣನ ಗುಣಗಣ ಮಂಡಿತ
ವೇಣುಗೋಪಾಲ ವಿಠಲ ಕಲ್ಯಾಣನ
ಕೃಷ್ಣನ ನೋದಿದೆ ಕೃಷ್ಣನ ಪಾಡಿದೆ |೭|
ಕೃಷ್ಣ ಬಾರೊ ಕೃಷ್ಣ
ಕೃಷ್ಣ ಬಾರೊ ಕೃಷ್ಣ ಬಾರೋ ಕೃಷ್ಣಯ್ಯ ನೀ ಬಾರಯ್ಯ ||ಪ||
ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ||
ಮನ್ಮಥಜನಕನೆ ಬೇಗನೆ ಬಾರೋ |
ಕಮಲಾಪತಿ ನೀ ಬಾರೋ ||
ಅಮಿತಪರಾಕ್ರಮ ಶಂಕರ ಬಾರೋ |
ಕಮನೀಯ ಗಾತ್ರನೆ ಬಾರಯ್ಯ ದೊರೆಯೆ ||೧||
ಕುರುಳು ಕೇಶಗಳ ಒಲಿವ ಅಂದ |
ಭರದ ಕಸ್ತೂರಿತಿಲಕದ ಚಂದ |
ಶಿರದ ಒಪ್ಪುವ ನವಿಲು ಕಣ್ಗಳಿಂದ |
ತರತರಾಭರಣಗಳ ಧರಿಸಿ ನೀ ಬಾರೋ ||೨||
ಹಾಲು ಬೆಣ್ಣೆಗಳ ಕೈಯಲಿ ಕೊಡುವೆ |
ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ |
ಜಾಲ ಮಾಡದೆ ನೀ ಬಾರಯ್ಯ ಮರಿಯೇ |
ಬಾಲ ಎನ ತಂದೆ ಪುರಂದರ ವಿಠಲ ||೩||