ಸುಳಾದಿ (ಹ)
||ಅಟ್ಟತಾಳ||
ಹರಿಸರ್ವೋತ್ತುಮನೆಂಬ ಸ್ಥಿರವಾದ ಜ್ಞಾನವ | ಕರುಣಿಸು ಕರುಣಿಸು ಶೆರಗೊಡ್ಡಿ
ಬೇಡುವೆ | ದುರುಳ ದಾನವರಂತೆ ಪರಮೇಶ ಶಿವನೆಂದು | ಪೆರಧರ ಪರನೆಂದು
ನುಡಿಸದಿರೆಂದೆಂದು | ಸಿರಿಯರಸನ ಪೆದ್ದ ಪರಿಚರ್ಯವನು ಕೊಡು |
ಮರುಳೊಂದು ಬಯಸೇನು ಖೇಶ ಷಣ್ಮುಖಮಾತೆ | ಸಿರಿವರ ಅಭಿನವ ಪ್ರಾಣೇಶ
ವಿಠಲನ | ಚರಣವಾರಿಜ ಭೃಂಗೆ ದೀನ ದಯಾಪಾಂಗೆ ||
||ಆದಿತಾಳ||
ಹರಿಸರ್ವೋತ್ತಮನೆಂಬ ಸ್ಥಿರಜ್ಞಾನವಿರಲಮ್ಮ | ಮರುತ ಜೀವೋತ್ತಮನೆಂಬ
ಬುದ್ಧಿಯಿರಲಮ್ಮ | ಹರ ತಾರಕ ಗುರುವೆಂಬ ಮತಿಯಿರಲಮ್ಮ |
ಗುರು ಮಧ್ವಮತದಲ್ಲಿ ದೃಢ ಭಕ್ತಿಯಿರಲಮ್ಮ | ಸಿರಿಯರಸಭಿನವ ಪ್ರಾಣೇಶ
ವಿಠಲನ್ನ | ಹಿರಿಯ ಸೊಸೆಯೇ ನಿನ್ನ ಕರುಣವಿರಲಮ್ಮ ||
||ತ್ರಿವಿಡಿತಾಳ||
ಹುಟ್ಟಿದನು ವಾಸುದೇವ ನೆಂಬೊ ನಾಮದಲಿ | ಸೃಷ್ಟಿಗೆ ಮಧ್ವಮುನಿ
ಎನಿಸಿಕೊಂಡು | ಕುಟ್ಟಿದಾನದ್ವೈತಮತ ಕೋಲಾಹಲಮಾಡಿ | ವೈಷ್ಣವ ಮತವನು
ಉದ್ಧರಿಸೀ | ವಿಷ್ಣು ಸರ್ವೋತ್ತಮ ನಹುದೆಂದು ಸ್ಥಾಪಿಸಿ | ಶಿಷ್ಟರಿಗೆ ವೇದ ಸುಧೆಯ
ಗರೆದೂ | ವೈಷ್ಣವಾಚಾರ್ಯರ ಮತವಿಡಿದು ಬದುಕೋದು | ಪುಷ್ಟಿನಾಮ ವಿಜಯ
ವಿಠ್ಠಲಗೆ ಬಲು ಪ್ರೀತಿ ||
||ಆದಿತಾಳ||
ಹನುಮಾವತಾರಕೆ ಕಾಲಯಮ ಎನಿಸಿದಾ | ಮಣಿಮಾನಾಸುರನಾದಾ
ಭೀಮಾವತಾರಕ್ಕೆ | ಮುನಿ ಮಧ್ವರಾಯನಾಗೆ ಭಣಗು ಸಂಕರಾನಾದ |
ಜನಿಸಿದನು ವೈರವನ್ನು ಜನುಮ ಮೂರರಲ್ಲಿ ಬಿಡದೆ | ಅನಿಲ ದೇವನ ಕೂಡ
ಶೆಣಿಸಿ ಸಂಕಟ ಬಟ್ಟು | ಅನುವ ಕಾಣದಲೆ ತಮಸಿನಲ್ಲೀಗ ಬಳಲುತಿಪ್ಪಾ |
ಫಣಿನಾಮ ವಿಜಯ ವಿಠ್ಠಲ ಹನುಮನ ಮತದಂತೆ | ಮನುಜೋತ್ತಮ
ಕಡೆಮೊದಲು ಮನದಂತೆ ಫಲವೀವಾ ||
||ಮಟ್ಟತಾಳ||
ಹರಿ ಹೃನ್ಮಂದಿರಳೆ ಹರಿ ಚರಣಾರ್ಚಕಳೆ | ಅರಿಧರ ಗದ ಪದ್ಮ ಆಯುಧ ಆಭರಣ |
ವರ ಚಾಮರ ವ್ಯಜನ ಸತ್ತಿಗೆ | ಪರಿಯಾಂಕಾಂಬರ ಸದ್ಮಗಳಾಗಿ ಪ್ರಾಂತದಲ್ಲಿ ನೆಲೆಸಿ |
ನಿರುತದಿ ಶ್ರೀಹರಿಯ ಪರಿಚರ್ಯವ ಮಾಳ್ಪ | ಸಿರಿದೇವಿಯೆ ನಿನ್ನ
ಧನ್ಯತೆಗೆಣೆಗಾಣೆ | ಅರಿಧರ ಅಭಿನವ ಪ್ರಾಣೇಶವಿಠಲನ | ಚರಣದೂಳಿಗವಿತ್ತು
ಪರಿಪಾಲಿಸಮ್ಮ ||
||ತಾಳ ಝಂಪೆ||
ಹರಿಯೆ ಸರ್ವೋತ್ತಮ ಸಾಕಾರ ಸ್ವಾತಂತ್ರ | ಪರಿಪೂರ್ಣ ಆನಂದ ಗಿರಿರಾಜ
ಗೋವಿಂದ | ಹರಿಶಯನ ಹರಿವಾಹ ಹರಿಯಾಸ್ಯನರದೇಹ | ಹರಿಜಾತರಕ್ಷಕ
ಹರಿಜಾತ ಶಿಕ್ಷಕ | ಹರಿಕಾಲಿಮರ್ದನ ಧರಗೋವರ್ಧನ | ಹರಿಪದಧುನಿಪೆತ್ತತಿರಿ
ವಿಕ್ರಮ | ಸಿರಿವಿಧಿ ಭವಮುಖ ಸುರಕರಪೂಜಿತ | ಹರಿನಿಭಾಂಗನೆ ದೇವ
ಹರಿಜಾಧವ | ಕರುಣಾಸಾಗರ ನಿನ್ನ ಸ್ಮರಣೆ ಮಾತ್ರದಿ ಸಕಲ | ದುರಿತಪರಿಹಾರವು
ಸತ್ಯಸತ್ಯ | ಕರಿರಾಜ ದ್ರೌಪದಿ ಧರಿಸುರಜಾಮಿಳ | ತರಳ ಪ್ರಹ್ಲಾದ ಧ್ರುವರಿದಕೆ ಸಾಕ್ಷಿ
ಕರಕರಿಸಂಸಾರ ಶರಧಿಯೊಳಗೆ ಬಿದ್ದು | ವರಲುತ್ತಿರುವೆ ಭವತರಣಿದೇವ | ಕರುಣಿ
ನಿನ್ನಯ ಪಾದ ರಜಪೊಂದಿರುವೆನು | ಕರವ ಪಿಡಿವುದಯ್ಯ ಬರಮನಯ್ಯಾ |
ಶರಣಜನಮಂದಾರ ಮರುತಹೃನ್ಮಂದಿರ ಸಿರಿಯಭಿನವಪ್ರಾಣೇಶವಿಠಲ ಪಾಹಿ ||
||ತಾಳ ತ್ರಿವಿಡಿ||
ಹರಿಚರಗಿರಿಧರ ಹರಿಯಾಕ್ಷಸಂಹರ | ಹರಿಶಯನಾಸುರಕಾಲ ತರಳಪಾಲ |
ಹರಿಹಯಾವರಜನೆ ಪರಶುಧರನೆ ರಾಮ | ಹರಿವಂಶ ಪ್ರಖ್ಯಾತ ರಘುರಾಮನೆ |
ಹರಿಸುತಗೊಲಿದು ಗೀತಾಮೃತವುಣಿಸದೆ | ತಿರಿಪುರಾಸುರರಘ್ನ ಬುದ್ಧ ದೇವ |
ತುರಗವೇರಿ ಸರ್ವದುರುಳರ ಹರಿಸಿದ | ಧುರಧೀರಗಂಭೀರ ಕಲ್ಕಿದೇವ |
ಶರಣರಿಗೋಸುಗ ಹತ್ತಾವತಾರವ | ಧರಿಸಿದೆಯಭಿನವಪ್ರಾಣೇಶವಿಠಲ ||
||ತ್ರಿವಿಡಿತಾಳ||
ಹರಿಯ ಪಾದಕ್ಕೆರಗಿ ವರ ಪ್ರಹ್ಲಾದನು | ಎರಡೊಂದು ಮಾರ್ಗದಲ್ಲಿ ಕೃಷ್ಣನ
ಮೂರುತಿಯ | ಪರಿ ಪರಿಯಲ್ಲಿ ಭಜಿಸಿ ಧನ್ಯನಾಗುವೆನೆಂದು | ಸುರಮುನಿಗೆರಗಿ
ನಿಂದಿರಲಾಗಿ ನಾರದ | ಕರುಣದಿಂದಲಿ ಉತ್ತರವ ಪೇಳಿದನಾನೀ | ಧರೆಯೊಳು
ಜನಿಸುವ ವರವ ಪಡೆದು ಇಪ್ಪೆ | ಪರಮ ಭಾಗವತರ ವರ ಮಣಿಯೆ ನೀನು
ಧಾರುಣಿಯೊಳಗವತರಿಸಿ ಅಧಿಕವಾದ | ಮರುತ ಮತದೊಳಗೆ ಚರಿಸಿ ಕೃಷ್ಣನ
ಪೂಜೆ | ನಿರುತ ಬಿಡದೆ ಮಾಡಿ ಹರುಷಬಡೆಂದೆನಲು ಕರುಣ ವಾರಿಧಿ ನರಹರಿ
ವಿಜಯ ವಿಠಲನ್ನ | ಸ್ಮರಿಸಿ ಶೇಷಾಂಶ ಧರಿಸಿ ದೇಹವ ತಾಳ್ದಾ ||
||ಮಟ್ಟತಾಳ||
ಹರಿಯೆ ಗುಣಶೂನ್ಯ ಹರಿಯೆ ನಿರಾಕಾರ | ಹರಿಯು ಧೊರೆಯು ಅಲ್ಲ ಹರಿ
ಪರತಂತ್ರ | ಹರಿಯು ದುರ್ಬಲನು ಹರಿಗೆ ಎಂಟು ಗುಣ | ಹರಿಯು ತಾನೆಂದು
ತಾರತಮ್ಯವೆನದೆ | ಧರೆಯೆಲ್ಲ ಮಿಥ್ಯಾ ಪರಿ ಪರಿ ಕರ್ಮಗಳು | ಹರಿತಾನೇ ಪುಟ್ಟಿ
ಚರಿಸುವ ಲೀಲೆಯಲಿ | ನರ ನಾನಾ ಜನ್ಮ ಧರಿಸಿ ತೋರುವನೆಂದು | ದುರುಳ
ದುರ್ಮತದವರು ಸರಿ ಸರಿ ಬಂದಂತೆ | ವರಲಿ ಸಜ್ಜನರನ್ನು ತಿರಸ್ಕಾರವನೆ ಮಾಡಿ |
ತಿರುಗುತಿರೆ ಇತ್ತ ಸುರರು ಕಳವಳಿಸಿ | ಪರಮೇಷ್ಠಿಗೆ ಪೇಳೆ ಹರಿಗೆ ಬಿನ್ನೈಸಲು
ಮರುತ ದೇವನೆ ಅವತರಿಸಿದ ಹರುಷದಲ್ಲಿ | ಕರುಣಾಕರ ಮೂರ್ತಿ ವಿಜಯ
ವಿಠಲರೇಯ | ಪರನೆಂದು ಸಾರಿ ಧರೆಯೊಳಗೆ ಮೆರೆದಾ ||
||ಮಟ್ಟತಾಳ||
ಹರಸೂರಿಗೆ ಬಂದು ದಾಸಗೃಹದಿ ನಿಂತು | ಗುರುಗಳ ಸೇವಿಸುತ ಓದು ಬರಹ
ಕಲಿತು | ಸರಸ್ವತಿಯನು ಒಲಿಸಿ ನ್ಯಾಯವಾದಿ ಎನಿಸಿ | ಕಾರ್ಯಕುಶಲನೆನಿಸಿ
ಭರದಿ ಧನವ ಗಳಿಸಿ | ಭರತಖಂಡ ಚರಿಸಿ ಸರ್ವತೀರ್ಥಕ್ಷೇತ್ರ |
ಹರಕಾಶಿ ಮುಖ್ಯ ರಾಮೇಶ್ವರ ಯಾತ್ರೆ | ತಿರುಪತಿ ಶ್ರೀ ಉಡುಪಿ
ಯಾತ್ರೆಗಳನು ಮುಗಿಸಿ | ತಿರುಗಿ ಬಂದು ಪುರಕೆ ಗುರುಗಳ ಸನಿಹದಲಿ |
ಶಿರಿವರ ಅಭಿನವ ಪ್ರಾಣೇಶ ವಿಠಲನ | ಕರುಣದಿಂದಿರುತಿರ್ದ
ಹನುಮಂತರಾಯ ||
||ತ್ರಿವಿಡಿತಾಳ||
ಹರಿದಾಸ ಕೋಸಗಿ ಗುರು ಜಗನ್ನಾಥರ | ಚರಣ ಕಮಲಗಳನು ಸೇವಿಸಿ |
ಹರಿಯಾಂಕಿತ ಸುಂದರವಿಠಲನೆಂದು | ಗುರುತು ಪಡೆದು ಹರಿದಾಸನೆನಿಸಿ |
ಹರಿ ವಾಯು ಗುರುಗಳ ತುತಿಗಳ ರಚಿಸುತ್ತಾ | ಹರುಷದಿ ತುತಿಸಿ | ಭಜಿಸಿ
ನರ್ತಿಸಿ | ವರದೇಂದ್ರ ಹರಿದಾಸ ಸಾಹಿತ್ಯ ಮಂಡಲ | ಶರಧಿ ನಾವಿಕನಾಗಿ
ಶ್ರಮವಹಿಸಿ | ಭರದಿಂದ ಸಾಹಿತ್ಯ ಅಣಿಮುತ್ತು ತೆಗೆಯುತ್ತ |
ಧರಿಸುರ ಸುಜನಕೆ ಹರುಷಗರೆದೆ | ಹರಿನಾಮ ಅಭಿನವ ಪ್ರಾಣೇಶ
ವಿಠಲನ ಕರುಣದಿಂ ಹರಿದಾಸ ಚರಿತೆ ಪಸರಿಸಿದೆ ||
||ತ್ರಿವಿಡಿತಾಳ||
ಹರಿದಾಸಸಾಹಿತ್ಯ ವಾಙ್ಮಯ ಬೆಳಸಿದ | ಕರ್ನಾಟಕ ಮಾತೆಯ ಅಚ್ಚು ಮೆಚ್ಚಿನ
ಪುತ್ರ | ದರಹಸಿತಾನಂದ ಭರಿತ ವಕ್ತ್ರ | ಸರಸ ಕವನಗಳ ಪದ್ಯ ಸುಳಾದಿಗಳ |
ಸರಸಯಮಕ ಪ್ರಾಸ ಬಂಧುರ ಪದಗಳ | ಚರಿತೆಯುಗಾಭೋಗ ಕನ್ನಡ ಸಾಂಗತ್ಯ |
ವಿರಚಿಸಿ ಸುಜನಕೆ ಹರುಷವಗರೆದ | ಗುರುವರ ನಿಮ್ಮಯ ಉಪಕಾರ ಸುಜನರು |
ಮರೆಯರು ಮರೆಯರು ಕರುಣಾರ್ಣವ | ಶಿರಿವರ ಅಭಿನವ ಪ್ರಾಣೇಶ ವಿಠಲನ |
ಚರಣ ಸರಸಿಜಭೃಂಗ ದೀನದಯಾಪಾಂಗ ||
||ಧೃವತಾಳ||
ಹರಿದಾಸ ಹರಿಪದ ಹರಸೂರಯಾಮೀರ | ಹರಿದಾಸ ಕುಲರತ್ನ
ಪ್ರಾಣೇಶದಾಸಾರ್ಯ | ವರಪುತ್ರ ಸುಚರಿತ್ರ ಧರಿನಾಥ ದಾಸ ಛಾತ್ರ | ವರದೇಂದ್ರ
ಯತಿಗಳ ಚರಣಾರ್ಚಕ | ಅರಿಷಡ್ ವರ್ಗವಿರಾಮ ಗುರುಭಕ್ತಿ ನಿಸ್ಸೀಮ |
ಹರಿದಾಸ ಪ್ರಾಣೇಶ ಚರಣಾಬ್ಜ ಮಧುಕರ | ಹರಿದಾಸ ರಾಘವ ಮನಮಂದಿರ |
ನರಹರಿ ಅಭಿನವ ಪ್ರಾಣೇಶ ವಿಠಲನ | ಚರಣದೊಲುಮೆಯ ಗಳಿಸಿ ಮೆರೆದ
ದಾಸಾರ್ಯ ||
||ತ್ರಿವಿಡಿತಾಳ||
ಹಿರಿಯರಪ್ಪಣೆಯಂತೆ ಮಾನವಿರಾಯರ | ಚರಣ ಕಮಲಗಳ ಯಜಿಸಿ ಭಜಿಸಿ |
ಹರುಷದಿಂದೆರಡಾರು ವತ್ಸರ ಪರ್ಯಂತ ಗುರುಗಳ ಸೇವಿಸಿ ಒಲುಮೆಗಳಿಸಿ |
ಮರುತಾಗಮಗಳ ಸರ್ವಮೂಲಗಳ | ಹರಿಭಾಗವತಗಳ ಧರ್ಮಗಳಾ |
ಹರುಷದಿಂ ಪಠಿಸುತ ಮರ್ಮಗಳರಿಯುತ | ಗುರುಗಳ ಕರುಣದಿ ವಿಜ್ಞಾನಿ
ಎನಿಸುತ | ಧರೆಯೊಳು ವಿಭವದಿ ಮೆರೆದ ಧೀರಾ | ಗುರುಗಳಣತಿಯಂತೆ ಮರಳಿ
ಪುರಕೆ ಬಂದು | ಹಿರಿಯರಿಂದ ಹರಿದಾಸ್ಯ ಪಡೆದು | ಹರಿಯಾಂಕಿತ ಗುರು
ಪ್ರಾಣೇಶ ವಿಠಲನೆಂದು ಹರಿದಾಸ ಹರಿವಿಷ್ಟರದಿ ರಾಜಿಸಿ | ಸರಸ ಕವನಗಳ
ವಿರಚಿಸಿ | ಹರಿವಾಯು ಗುರುಗಳ ತುತಿಸಿ ಭಜಿಸಿ ನರ್ತಿಸಿ | ಗುರು ವರದೇಂದ್ರರ
ಚರಣ ಸುಮಾರ್ಚಿಸಿ | ದರುಶನ ಪಡೆದ ಶ್ರೀ ಗುರುಸೇವಕನೆ ಹರಿನಾಮಾ
ಅಭಿನವ ಪ್ರಾಣೇಶ ವಿಠಲನ | ಚರಣಾರಾಧಕ ಗುರು ಪ್ರಾಣೇಶಾರ್ಯ ||
||ಧೃವತಾಳ||
ಹರಿದಾಸ ಚತುಷ್ಟಯ ಪುರುಷ ತೃತೀಯರಾದ | ತುರುಪಾಲ ದಾಸರ ಚರಿತೆ
ತಿಳಿದಷ್ಟು ಬರೆಯುವೆ | ಶಿರಿ ಹರಿ ಮರುತರ ದಯದಿಂದ | ಗುರು ವರದೇಂದ್ರರ
ಪರಮಾನುಗ್ರಹದಿಂದ | ವರದೇಶದಾಸರ ಕರುಣದಿಂದ | ಮುರಹರನಾಜ್ಞದಿ ಕರಿ
ಕಂಧರಿಯೊಳು | ಪುರ ದಧಿಶಿಲೆಯಲ್ಲಿ ಪುಟ್ಟಿ | ಪೆರೆ ಶುಕ್ಲನಂತೆ ಬೆಳೆದ ಭಾಗಣ್ಣನು |
ದುರುಳ ಭಾಗದೇಯಾರು ಚರಚರಾಸ್ತಿ ಯನಪ | ಹರಿಸಿ ದೂಡಲು ಬಂದು
ಸಂಕಾಪುರದಿ | ಮರುತದೇವನ ಆಶ್ರಯದಲ್ಲಿ ನೆಲೆಸಿಹ | ಶಿರಿವರ ಅಭಿನವ
ಪ್ರಾಣೇಶ ವಿಠಲನ ದಯದಿ ||
||ಅಟ್ಟತಾಳ||
ಹರಿದಾಸರು ನಿತ್ಯ ಹರಿ ಮತ ದರ್ಶನ | ಪ್ರಮೇಯ ಪ್ರಮಾಣ ವಾಕ್ಯಗಳೆಲ್ಲವ |
ಸರಸವಾದ ಕನ್ನಡ ನುಡಿಯಲ್ಲಿ ಪದ್ಯ | ವರ ಸುಳಾದಿಗಳಿಂದ ಅರುಹುತ ಸಂತತ |
ಪರಮ ಭಾಗವತ ಧರ್ಮವ ಬೀರುತ್ತ | ಹರಿದಾಸ್ಯ ಪಥವನ್ನು ತೋರುತ್ತ ಸಾರುತ್ತ |
ಹರಿಕಥಾ ರಸ ಸುಧೆ ಸುರಿಸಿ ಭೂಸುರ ಪಾ | ಮರ ಜನರಿಗೆ ಗೈದ
ಉಪಕಾರಾಕ್ಕೆಣೆಗಾಣೆ | ಭರತ ಖಂಡವನೆಲ್ಲಾ ಚರಿಸಿ ಅನತರನು | ದ್ಧರಿಸಿದ
ಕರುಣಾಳು ಗೋಪಾಲದಾಸರೇ | ಶರಣೆಂಬೆ ಶರಣೆಂಬೆ ನಿಮ್ಮಯ ಚರಣಕ್ಕೆ |
ತುರುಪಾಲದಾಸರ ಹರಿಕಥಾಸಮಯದಿ ಪರಿಸರದೇವನು ತರುಚರ ರೂಪದಿ |
ವರರೌಪ್ಯ ಪೀಠದಿ ಶೋಭಿಪ ನಿತ್ಯದಿ | ಧರಿಸುರ ರೈಜಿಯರೊಮ್ಮೆ ಕಂಡಿರುವರು |
ತಿರಲಿಂಗ ದೇಶದ ಮಾಯಿಯ ಜೈಸಿದ | ನರತುತಿ ಮಾಡದಿರಿ ಎಂದುಹೇಳಿ ಕಳಿಸಿದ |
ಗುರುಗಳ ವಿಜಯರ ಚರಣಾರಾಧನೆಯಿಂದ ಉರಗ ಪರ್ವತದಲ್ಲಿ ಧರಿನಾಥರಿಗೆ
ತಮ್ಮ | ಶರಕರಿ ವತ್ಸರ ಆಯುಷ್ಯವೆರೆದರು | ಪರಮ ಸುತ್ಯಾಗಕ್ಕೆ ಕರ್ಣ ತಲೆ
ಬಾಗಿದ | ತುರುಪಾಲದಾಸರ ಚರಿತೆಗೆ ನಮೋ ನಮೋ | ತುರುಪಾಲಾಭಿನವ
ಪ್ರಾಣೇಶ ವಿಠಲನ ಚರಣ ಕಿಂಕರನೆನಿಸಿ ಮೆರೆದ ಗುರುದೇವ ||
||ಆದಿತಾಳ||
ಹರಿ ಸರ್ವೋತ್ತಮಾ ವಾಯು ಜೀವೊತ್ತಮಾ | ಸಿರಿ ವಿಧಿ ಭವ ಮುಖ್ಯ ಸುರರೆಲ್ಲಾ
ದಾಸರು | ಸಿರಿ ವಿಧಿ ಶಿವರೆಲ್ಲಾ ಹರಿಯಾಧೀನರು | ಸರ್ವ ಸುರರು
ತಾರತಮ್ಯದಿಂದೂನರು | ತಾರತಮ್ಯ ಪಂಚ ಭೇಧವು ಸತ್ಯವು ಮರುತ ಮತದ
ಸಿದ್ಧಾಂತವು ನಿತ್ಯದಿ | ಪರತತ್ವವನ್ನು ಬೀರುತ ಸಾರುತ | ಧರೆಯೊಳು ಹರಿಮತ
ಧ್ವಜವನು ಮೆರೆಸಿದ | ಗುರುವರ ವಿಜಯರೆ ಕರುಣಿಗಳರಸರೆ | ಹರಿ ಅಭಿನವ
ಪ್ರಾಣೇಶ ವಿಠಲನ ಕರುಣಾಪಾತ್ರನೆ ಸುಚರಿತ್ರ ಸುಪವಿತ್ರ ||
||ಜತೆ||
ಹರಿಯ ವಿಹಾರಕ್ಕೆ ಆವಾಸನೆನಿಸುವಿ |
ಗುರುವಿಜಯ ವಿಠ್ಠಲನ್ನ ಸುಪ್ರೀತ ಘನದೂತ ||
||ಆದಿತಾಳ||
ಹರಿದು ಎಂತನ್ನರಿಯದ ನರರಿಗೆ | ಶರಣ ಜನರಿಗೆ ಬಲು ಮರಳು ಕಾಣೋ
ಪಾಂಡುರಂಗಾ | ವರ ಇಟ್ಟಂಗಿ ಮೇಲೆ ಸ್ಥಿರವಾಗಿ ನಿಂದಾ | ಸಿರಿಧರ ಪತಿ
ವಿಜಯವಿಠಲಾ |ಗುರು ಪುರಂದರನ ಪ್ರೀಯಾ ||
||ಧೃವತಾಳ||
ಹರಿದಾಸವಂಶದಲ್ಲಿ ಧರೆಸುರಜನುಮವ | ಧರಿಸಿ ಬಂದೆನು ನಾನು
ಮುರಮರ್ದನ | ಸರಸಿಜಾಸನಕುಲಾಚರಣೆ ತೊರೆದು ಹಾಳು | ಹರಟೆಯೊಳ್
ದಿನಕಳೆದೆ ಪರಶುಧರನೆ | ಅರಿಯಾರುಜನರಿಂದ ಎರಡಾರುಮದದಿಂದ |
ಪರಿಪರಿ ಬಳಲುವೆ ಕರುಣಾ ಸಿಂಧು | ನಿರುತ ನಿಮ್ಮಯ ನಾಮ ಸ್ಮರಿಸುವ ದಾಸರ |
ಜರೆದು ಮತ್ಸರಿಸುವೆ ಗರುವದಿಂದ ಧರಣಿ | ತರುಣಿಮೇಣ್ ಪುರುಟ
ಚಿಂತನೆಯಲ್ಲಿ | ಉರುತರ ದುಃಖಾಗ್ನಿ ಶರಧಿಭವದಿ ಸಿಲುಕಿ | ಒರುಲುತ
ತೊಳಲುವೆ ನರಕಾಂತಕ | ಪೊರೆವರನ್ಯರ ಕಾಣೆ ಶರಣು ಬಂದಿರುವೆನು |
ಪರಿಪಾಲಿಸು ಜೀಯಾ ಮರುತನೊಡೆಯ | ಉರಗತಲ್ಪ ಭಿನವಪ್ರಾಣೇಶವಿಠಲ
ತವ | ಚರಣಕಿಂಕರನೆನಿಸು ತುರುಪಾಲ ಸಿರಿಲೋಲ ||